ಜೂನ್ 16 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday
ಕರ್ನಾಟಕ ರಾಜ್ಯದಲ್ಲಿ ಒಂದಾದ ನಂತರ ಒಂದೊಂದು ರಜೆಗಳು ಬರುತ್ತಿದ್ದು, ಅದರಲ್ಲೂ ಈಗಷ್ಟೇ ಶುರು ಆಗಿರುವ ಶಾಲೆ & ಕಾಲೇಜುಗಳು ಮತ್ತೆ ರಜೆ ಘೋಷಣೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೊಸ ಬ್ಯಾಗ್ & ಹೊಸ ಸೈಕಲ್ ಜೊತೆ ಹೊಸ ಪುಸ್ತಕ ತೆಗೆದುಕೊಂಡು ಶಾಲೆಗೆ ಮತ್ತು ಕಾಲೇಜುಗಳಿಗೆ ಹೋಗಲು ಸಿದ್ಧವಾಗಿದ್ದ ವಿದ್ಯಾರ್ಥಿಗಳಿಗೆ ರಜೆಯ ಮಜ ಮತ್ತಷ್ಟು ದಿನಗಳ ಕಾಲ ಮುಂದುವರಿಯುವ ಮುನ್ಸೂಚನೆ ಇದೀಗ ಸಿಕ್ಕಿದೆ. ಹೀಗಿದ್ದಾಗಲೇ, ಜೂನ್ 16 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಕನ್ನಡ ನಾಡಲ್ಲಿ ಏನೇನೋ ನಡೆಯುತ್ತಿದೆ, ಮೊನ್ನೆ ಮೊನ್ನೆ ಆರ್ಸಿಬಿ ಕಾಲ್ತುಳಿತ ಘಟನೆ ಸಂಚಲನ ಸೃಷ್ಟಿಸಿ ಹೊರಗೆ ಹೋಗುವುದೇ ಕಷ್ಟ ಎನ್ನುವಂತೆ ಚಿಂತೆ ಮಾಡುವ ಪರಿಸ್ಥಿತಿ ತಂದಿತ್ತು. ಆ ನಂತರ ಪರಿಸ್ಥಿತಿ ತಣ್ಣಗಾಗಿತ್ತು, ಅಲ್ಲದೆ ಈ ಸಮಯದಲ್ಲೇ ಕರ್ನಾಟಕ ಬಂದ್ ಅಥವಾ ಬೆಂಗಳೂರು ಬಂದ್ ಆಗುತ್ತಾ? ಎಂಬ ಪ್ರಶ್ನೆ ಮೂಡಿ ಶಾಲೆ & ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಸಿಗಬಹುದಾ ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ಕೂಡ ರಜೆ ಬಗ್ಗೆ ನಡೆದಿತ್ತು. ಆದರೆ ಇದೀಗ ದಿಢೀರ್, ಜೂನ್ 16 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಕರ್ನಾಟಕದಲ್ಲಿ ಶಾಲೆಗಳು ಶುರುವಾಗಿ ಕೇವಲ 14 ದಿನ ಕಳೆದಿದೆ ಅಷ್ಟೇ, ಆದರೆ ಮತ್ತೆ ಶಾಲೆಗಳಿಗೆ ರಜೆ ಘೋಷಿಸುವ ಸ್ಥಿತಿ ಇದೀಗ ಎದುರಾಗಿದೆ. ಮೊದಲೇ ಹೇಳಿದಂತೆ ಹೊಸ ಬ್ಯಾಗ್ & ಹೊಸ ಸೈಕಲ್ ಜೊತೆಗೆ ಹೊಸ ಪುಸ್ತಕ ತೆಗೆದುಕೊಂಡು ಶಾಲೆಗೆ ಮತ್ತು ಕಾಲೇಜುಗಳಿಗೆ ಹೋಗಲು ಸಿದ್ಧವಾಗಿದ್ದ ಕನ್ನಡ ನಾಡಿನ ವಿದ್ಯಾರ್ಥಿಗಳಿಗೆ ರಜೆಯ ಮಜ ಮತ್ತಷ್ಟು ದಿನಗಳ ಕಾಲ ಮುಂದುವರಿಯುವ ಮುನ್ಸೂಚನೆ ಇದೀಗ ಸಿಕ್ಕಿದೆ. ಹಾಗಾದ್ರೆ, ಜೂನ್ 16 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಯಾಕೆ? ಮುಂದೆ ಓದಿ.
ಯೆಸ್, ಕರ್ನಾಟಕ ರಾಜ್ಯದಲ್ಲಿ ಇದೀಗ ಮುಂಗಾರು ಮಳೆ ಅಬ್ಬರ ಜೋರು ಜೋರಾಗಿದೆ. ಮುಂಗಾರು ಮಳೆಯ ಅಬ್ಬರ ಕಂಡು ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಹೀಗಿದ್ದಾಗಲೇ ಸೋಮವಾರ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಭರ್ಜರಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಭಾಗಶಃ ಇಡೀ ಕರ್ನಾಟಕ ಅಂದ್ರೆ ಕನ್ನಡ ನಾಡಿನ ಅಷ್ಟೂ ಜಿಲ್ಲೆಗಳಲ್ಲೂ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಇದೇ ಕಾರಣಕ್ಕೆ ಜೂನ್ 16 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಬಹುದು? ಮಾಹಿತಿಗೆ ಮುಂದೆ ಓದಿ...
ಈ ಜಿಲ್ಲೆಗಳಲ್ಲಿ ಶಾಲಾ & ಕಾಲೇಜುಗಳಿಗೆ ರಜೆ?
ಕರ್ನಾಟಕದ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆಗಳು ಸೇರಿದಂತೆ ಮೈಸೂರು & ಮಂಡ್ಯ ಭಾಗದಲ್ಲೂ ಜೂನ್ 16 ಸೋಮವಾರ ಭಾರಿ ಭರ್ಜರಿ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಮೈಸೂರು, ಮಂಡ್ಯ, ಕೊಡಗು & ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಜೂನ್ 16 ಸೋಮವಾರ ಬೆಂಗಳೂರು ಸೇರಿದಂತೆ ಬೆಳಗಾವಿ, ಧಾರವಾಡ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲೂ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಜನರು ಕೂಡ ಭಾರಿ ಮಳೆಗೆ ಸಿದ್ಧರಾಗಿದ್ದು, ಜೂನ್ 16 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆಯೂ ದಟ್ಟವಾಗಿದೆ. ರಜೆ ಬಗ್ಗೆ ಜೂನ್ 15 ಭಾನುವಾರ ಸ್ಪಷ್ಟ ಘೋಷಣೆ ಸಿಗುವ ಸಾಧ್ಯತೆ ಇದೆ.
ಭರ್ಜರಿಯಾಗಿ ಸುರಿಯುತ್ತಿರುವ ಮಳೆರಾಯ!
ಮಳೆ.. ಮಳೆ.. ಮಳೆ... ಎಲ್ಲೆಲ್ಲೂ ಮಳೆಯ ಅಬ್ಬರ & ಆರ್ಭಟ ಭಾರಿ ಹೆಚ್ಚಾಗಿದೆ. ಮಲೆನಾಡು ಭಾಗ ಮಾತ್ರವಲ್ಲ, ಕರ್ನಾಟಕ ರಾಜ್ಯದ ಕರಾವಳಿ & ಅರೆ ಮಲೆನಾಡು ಸೇರಿದಂತೆ ಬಯಲು ಸೀಮೆ ಭಾಗದಲ್ಲೂ ಭಾರಿ ಭರ್ಜರಿಯಾಗಿಯೇ ಮಳೆ ಸುರಿಯುತ್ತಿದೆ. ಅದರಲ್ಲೂ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಸುತ್ತಮುತ್ತ ಇರುವ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುವುದು ಗ್ಯಾರಂಟಿ ಆಗಿದೆ. ಇದರ ಜೊತೆಗೆ ಕರಾವಳಿ ಜಿಲ್ಲೆಗಳಲ್ಲಿ ಕೂಡ ಮಳೆ ಅಬ್ಬರ ಹೆಚ್ಚಾಗಿದ್ದು, ದಕ್ಷಿಣ ಕನ್ನಡ, ಉಡುಪಿ & ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಹೀಗಿದ್ದಾಗಲೇ, ಹಲವು ಜಿಲ್ಲೆಗಳಲ್ಲಿ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ ಇನ್ನಷ್ಟು ದಿನಗಳ ಕಾಲ ರಜೆ ಸಿಕ್ಕಂತೆ ಆಗಿದೆ.












Click it and Unblock the Notifications