School Holiday: ದಸರಾ ರಜೆ, ಅಕ್ಟೋಬರ್ 10 ಶುಕ್ರವಾರ ತನಕ ಶಾಲಾ & ಕಾಲೇಜುಗಳ ರಜೆ ವಿಸ್ತರಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ರಜೆ.. ರಜೆ.. ರಜೆ.. ಹೀಗೆ ಕರ್ನಾಟಕದಲ್ಲಿ 2025 ಆರಂಭದಲ್ಲೇ ಶಾಲಾ & ಕಾಲೇಜುಗಳಿಗೆ ಭಾರಿ ರಜೆ ಘೋಷಣೆ ಮಾಡಿದ್ದರು. ನಂತರ ಶ್ರಾವಣ ಮಾಸ ಶುರುವಾಗಿ ಸಾಲು, ಸಾಲಾಗಿ ಹಬ್ಬಗಳು ಬಂದಿದ್ದ ಕಾರಣಕ್ಕೆ ಶಾಲಾ & ಕಾಲೇಜುಗಳಿಗೆ ಸಾಲು & ಸಾಲು ರಜೆ ಸಿಕ್ಕಿವೆ. ಅದರಲ್ಲೂ ದಸರಾ ರಜೆ ಅಂತಾ ಸುದೀರ್ಘ ಬರೋಬ್ಬರಿ 18 ದಿನಗಳ ಕಾಲ ರಜೆ ಎಂಜಾಯ್ ಮಾಡುತ್ತಿದ್ದಾರೆ ಕರ್ನಾಟಕದ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು, ಪುಟಾಣಿ ಮಕ್ಕಳು. ಹೀಗಿದ್ದಾಗಲೇ, ದಸರಾ ರಜೆ, ಅಕ್ಟೋಬರ್ 10 ಶುಕ್ರವಾರ ತನಕ ಶಾಲಾ & ಕಾಲೇಜುಗಳ ರಜೆ ವಿಸ್ತರಣೆ ಸಾಧ್ಯತೆ...
ಹೌದು, ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಈಗ ತಾನೆ ಇನ್ನೂ ಪರೀಕ್ಷೆಗಳನ್ನು ಮುಗಿಸಿ ಒಂದಷ್ಟು ರಿಲ್ಯಾಕ್ಸ್ ಮಾಡುತ್ತಿದ್ದರು. ಹೀಗಾಗಿ ದಸರಾ ರಜೆಯು ಸಿಕ್ಕಿದೆ ಬಿಡು ಅಂತಾ ಅಜ್ಜಿ & ತಾತನ ಊರುಗಳಿಗೆ ಹೋಗಿರುವ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಲಕ್ಷಾಂತರ. ಅಲ್ಲದೇ, ಸಿಕ್ಕಾಪಟ್ಟೆ ದಿನ ರಜೆ ಇದೆ ಅಂತಾ ಸಖತ್ ಖುಷಿ ಖುಷಿಯಾಗೂ ಇದ್ದಾರೆ ಕರ್ನಾಟಕದ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು. ಹೀಗೆ ಇದ್ದಾಗ ಅಕ್ಟೋಬರ್ 2 ಗುರುವಾರ ಗಾಂಧಿ ಜಯಂತಿಗೆ ಮಕ್ಕಳನ್ನು ಶಾಲಾ & ಕಾಲೇಜುಗಳಿಗೆ ಬರಲು ಹೇಳಿದ್ದರು ಶಿಕ್ಷರು. ಇದೆಲ್ಲವನ್ನೂ ಮೀರಿ ಇದೀಗ ದಿಢೀರ್, ದಸರಾ ರಜೆ, ಅಕ್ಟೋಬರ್ 10 ಶುಕ್ರವಾರ ತನಕ ಶಾಲಾ & ಕಾಲೇಜುಗಳ ರಜೆ ವಿಸ್ತರಣೆ ಸಾಧ್ಯತೆ...

ಅಕ್ಟೋಬರ್ 10 ಶುಕ್ರವಾರ ತನಕ ರಜೆ?
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಈ ಸುದ್ದಿಯನ್ನ ಕೇಳಿದ ತಕ್ಷಣ ವಿದ್ಯಾರ್ಥಿಗಳು ಭಾರಿ ಖುಷಿ ಪಡುತ್ತಾರೆ. ಹಾಗೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ ಅಂತಾ, ವಿದ್ಯಾರ್ಥಿಗಳು & ಮಕ್ಕಳು ಕುಣಿದಾಡುತ್ತಾರೆ. ಇದೇ ರೀತಿ 2025 ಆಗಸ್ಟ್ ತಿಂಗಳಲ್ಲಿ ಪದೇ ಪದೇ ರಜೆ ಘೋಷಣೆ ಆಗ್ತಾ ಇತ್ತು. ಅಲ್ಲದೆ ಸೆಪ್ಟಂಬರ್ ತಿಂಗಳಲ್ಲೂ ಭಾರಿ ರಜೆಗಳು ಸಿಕ್ಕಿವೆ. ಈ ನಡುವೆ ದಸರಾ ರಜೆಯ ಖುಷಿ ಕೂಡ ಸಿಕ್ಕಿದ್ದು, ಸಂಭ್ರಮದಲ್ಲಿ ಇರುವಾಗಲೇ ಅಕ್ಟೋಬರ್ ತಿಂಗಳ ರಜೆಯ ಬಗ್ಗೆ ಕೂಡ ಮತ್ತೊಂದು ಬಂಪರ್ ಸುದ್ದಿ ಓಡಾಡುತ್ತಿದೆ!
ಶಾಲಾ & ಕಾಲೇಜುಗಳ ರಜೆ ವಿಸ್ತರಣೆ ಬಗ್ಗೆ...
ಅಷ್ಟಕ್ಕೂ ಇದೀಗ ದಸರಾ ರಜೆ ಅಕ್ಟೋಬರ್ 10 ಶುಕ್ರವಾರ ತನಕ ಶಾಲಾ & ಕಾಲೇಜುಗಳ ರಜೆ ವಿಸ್ತರಣೆ ಸಾಧ್ಯತೆ ದಟ್ಟವಾಗಿದೆ ಎಂಬ ಸುದ್ದಿ ಹಬ್ಬಿದೆ. ಯಾಕಂದ್ರೆ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದ್ದು, ಇದೀಗ ಭಾರಿ ಮಳೆಯ ಕಾರಣಕ್ಕೆ ಹಲವು ಜಿಲ್ಲೆಗಳಲ್ಲಿ ಮತ್ತೆ ಅವಾಂತರ ಸೃಷ್ಟಿಯಾಗುವ ಆತಂಕ ಎದ್ದಿದೆ. ಇನ್ನು ಅಕ್ಟೋಬರ್ 06 ಸೋಮವಾರದ ನಂತರ ಮಳೆ ಆರ್ಭಟ ಮತ್ತಷ್ಟು ಜಾಸ್ತಿಯಾಗುವ ಆತಂಕ ಇದೆ. ಹೀಗಾಗಿ ದಸರಾ ರಜೆ ಅಕ್ಟೋಬರ್ 10 ಶುಕ್ರವಾರ ತನಕ ವಿಸ್ತರಣೆ ಆಗುತ್ತಾ? ಎಂಬ ಅನುಮಾನವೂ ಮೂಡಿದೆ. ಹೀಗಿದ್ದರೂ ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಇದೇ ಕಾರಣಕ್ಕೆ ಅಕ್ಟೋಬರ್ 06 ಸಂಜೆಯ ತನಕ ಕಾದು ನೋಡಬೇಕಿದೆ.
ಮಳೆ ಕಾರಣಕ್ಕೆ ದಸರಾ ರಜೆ ವಿಸ್ತರಣೆ?
ಮಳೆ.. ಮಳೆ.. ಯಾಕಪ್ಪಾ ಈ ರೀತಿ ಮಳೆ ಸುರಿಯುತ್ತಿದೆ? ಅಂತಾನೇ ಕನ್ನಡಿಗರು ಈಗ ಭಾರಿ ಮಳೆಯ ಬಗ್ಗೆ ಬೇಸರ ಹೊರ ಹಾಕುವಂತೆ ಆಗಿದೆ. ಒಂದು ಕಡೆ ಮಳೆ ಬರದೇ ಬರ ಎದುರಾದ ಸಮಯದಲ್ಲಿ ನೀರಿಗೆ ಸಮಸ್ಯೆ ಉಂಟಾಗಿತ್ತು. ಆದರೆ ಈಗ ಭಾರಿ ಮಳೆ ಕಾರಣಕ್ಕೆ ಸಿಕ್ಕಾಪಟ್ಟೆ ಸಮಸ್ಯೆ ಸೃಷ್ಟಿಯಾಗಿ ರೈತರ ಬೆಳೆ ನಷ್ಟವಾಗುತ್ತಿದೆ. ಮುಂಗಾರು ಮಳೆ ಸಮಯ ಮುಗಿದು ಹೋಗುತ್ತಿದ್ದರೂ ಮಳೆ ಅಬ್ಬರವು ಕಡಿಮೆ ಆಗಿಲ್ಲ. ಮುಂದಿನ ಒಂದು ವಾರ ಅಂದ್ರೆ 7 ದಿನಗಳ ಕಾಲ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಗ್ಯಾರಂಟಿ ಆಗಿದೆ. ಅದರಲ್ಲೂ ಮಳೆರಾಯ ಈ ರೀತಿ ಸುರಿಯುತ್ತಿರುವ ರೀತಿ ನೋಡಿದರೆ ಸಿಕ್ಕಾಪಟ್ಟೆ ಟೆನ್ಷನ್ ಆಗಿದ್ದಾರೆ ಕನ್ನಡ ನಾಡಿನ ಜನರು. ಇಂತಹ ಸಮಯದಲ್ಲೇ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಮಳೆ ಕಾರಣಕ್ಕೆ ದಸರಾ ರಜೆ ಅಕ್ಟೋಬರ್ 10 ಶುಕ್ರವಾರ ತನಕ ವಿಸ್ತರಣೆ ಆಗುವ ಸಾಧ್ಯತೆ ಕೂಡ ಇದೀಗ ದಟ್ಟವಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications