ರಾಜ್ಯಪಾಲ ವಾಲ ಅವರ ವಿಮಾನಯಾನ ಖರ್ಚು ವೆಚ್ಚ ಮಾಹಿತಿ ಬಹಿರಂಗ
ಬೆಂಗಳೂರು, ಸೆ. 11: ಗುಜರಾತ್ ಮೂಲದ ವಜುಭಾಯಿ ವಾಲಾ ಅವರು ಕಳೆದ ಇಪ್ಪತ್ತೇ ತಿಂಗಳಲ್ಲಿ ವಿಮಾನದಲ್ಲಿ ಸಂಚರಿಸಲು ಖರ್ಚು ಮಾಡಿದ ವೆಚ್ಚವನ್ನು ನೋಡಿದರೆ ಎಲ್ಲರ ಹುಬ್ಬೇರುತ್ತದೆ.
20 ತಿಂಗಳಿನಲ್ಲಿ ವಿಶೇಷ ವಿಮಾನ ಸಂಚಾರಕ್ಕೆ ಬರೊಬ್ಬರಿ 2.89 ಕೋಟಿ ರು ವೆಚ್ಚ ಮಾಡಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆ ಮೂಲಕ ತಿಳಿದು ಬಂದಿದೆ. ಈ ಮಾಹಿತಿ ಪಡೆಯಲು ಕಾರ್ಯಕರ್ತರೊಬ್ಬರು ಒಂದು ವರ್ಷಕಾಲ ಶ್ರಮಿಸಿದ್ದು ಬೆಳಕಿಗೆ ಬಂದಿದೆ.[ವಜುಭಾಯಿ ಅವರ ಪರಿಚಯ ಇಲ್ಲಿದೆ]
ಕರ್ನಾಟಕದಲ್ಲಿ ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಸುಮಾರು 6 ವರ್ಷಗಳಲ್ಲಿ ವಿಮಾನಯಾನಕ್ಕೆ ಕೇವಲ 60.95 ಲಕ್ಷ ರು ಮಾತ್ರ ಖರ್ಚು ಮಾಡಿದ್ದರು. [ರಾಜ್ಯಪಾಲರು ಹಿಂದಿಯಲ್ಲೇಕೆ ಭಾಷಣ ಮಾಡಬೇಕು?]
ಆದರೆ, 2014ರ ಸೆಪ್ಟೆಂಬರ್ ನಲ್ಲಿ ಕರ್ನಾಟಕಕ್ಕೆ ಕಾಲಿಟ್ಟ ಗುಜರಾತ್ ಮೂಲದ ವಿ.ಆರ್. ವಾಲಾ ಅವರು ಇಲ್ಲಿ ತನಕ ವಿಶೇಷ ವಿಮಾನ ಸೌಲಭ್ಯ ಬಳಸಿ 2.89 ಕೋಟಿ ರೂ. ವೆಚ್ಚ ಮಾಡಿದ್ದಾರೆ ಎಂದು ಅರ್ ಟಿಐ ಅರ್ಜಿ ಮೂಲಕ ತಿಳಿದು ಬಂದಿದೆ.

ವಿವಿಧ ಕಾರ್ಯ೯ಕ್ರಮಗಳಲ್ಲಿ ಭಾಗವಹಿಸಲು ಖಾಸಗಿ ಹೆಲಿಕಾಪ್ಟರ್ ಮತ್ತು ವಿಶೇಷ ವಿಮಾನಗಳನ್ನೇ ಹೆಚ್ಚಾಗಿ ಬಳಕೆ ಮಾಡಿರುವುದು ಸಿಬ್ಬ೦ದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ನೀಡಿರುವ ಮಾಹಿತಿಯಿ೦ದ ತಿಳಿದುಬ೦ದಿದೆ. ಹುಬ್ಬಳ್ಳಿ, ಧಾರವಾಡ, ಹ೦ಪಿ, ಬೆಳಗಾವಿ, ತೋರಣಗಲ್ ಸೇರಿ ದೂರದ ಊರುಗಳಿಗೆ ಹೆಚ್ಚಾಗಿ ವಿಶೇಷ ವಿಮಾನ ಅಥವಾ ಖಾಸಗಿ ಹೆಲಿಕಾಪ್ಟರ್ ಗಳನ್ನೇ ಬಳಕೆ ಮಾಡಿದ್ದಾರೆ. [ರಾಷ್ಟ್ರಗೀತೆ ವೇಳೆ ವೇದಿಕೆ ಬಿಟ್ಟಿಳಿದ ರಾಜ್ಯಪಾಲರು]
ವಿಮಾನ ಹಾರಾಟವಷ್ಟೇ ಅಲ್ಲದೆ ಇತರೆ ಖಚು೯ಗಳಲ್ಲಿಯೂ ರಾಜಭವನದಲ್ಲಿ ದು೦ದುವೆಚ್ಚವಾಗುತ್ತಿದ್ದು, ಅದನ್ನು ತಿಳಿಯಲು ಸಾವ೯ಜನಿಕರಿಗೆ ಸ೦ವಿಧಾನದತ್ತವಾಗಿ ದೊರಕಿರುವ ಮಾಹಿತಿ ಹಕ್ಕು ಕಾಯ್ದೆ ಮೂಲಕ ಅವಕಾಶ ನೀಡಬೇಕು ಎ೦ದು ಮಾಹಿತಿ ಹಕ್ಕು ಕಾಯ೯ಕತ೯ ಟಿ. ನರಸಿ೦ಹಮೂತಿ೯ ಅಭೀಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಪಡೆದ ಮಾಹಿತಿಯಂತೆ 77 ವರ್ಷ ವಯಸ್ಸಿನ ರಾಜ್ಯಪಾಲ ವಾಲಾ ಅವರು ನೆಲೆಸಿರುವ ರಾಜಭವನ ಕಟ್ಟಡ ದುರಸ್ತಿಗಾಗಿ 2.4 ಕೋಟಿ ರು ಖರ್ಚು ಮಾಡಲಾಗಿದೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications