ದೊಡ್ಡಬಳ್ಳಾಪುರದಲ್ಲಿ 5 ಕೋಟಿ ಮೌಲ್ಯದ ರಕ್ತ ಚಂದನ ವಶ
ಬೆಂಗಳೂರು, ಅಕ್ಟೋಬರ್ 12 : ದೊಡ್ಡಬಳ್ಳಾಪುರ ತಾಲೂಕಿನ ಕಾಡನೂರು ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು 5 ಕೋಟಿ ರೂ. ಮೌಲ್ಯದ ರಕ್ತಚಂದನವನ್ನು ವಶಪಡಿಸಿಕೊಂಡಿದ್ದಾರೆ. ರಕ್ತಚಂದನ ಕಳ್ಳ ಸಾಗಣೆಯ ಹಲವಾರು ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಚಿತ್ತೂರಿನ
ಸ್ಪೆಷಲ್
ಟಾಸ್ಕ್
ಫೋರ್ಸ್
ಭಾನುವಾರ
ರಾತ್ರಿ
ಈ
ಕಾರ್ಯಾಚರಣೆ
ನಡೆಸಿದೆ.
ಬಂಧಿತ
ಆರೋಪಿಯನ್ನು
ಮೊಹಮ್ಮದ್
ಅಲ್ತಾಫ್
ಹುಸೈನ್
(36)
ಎಂದು
ಗುರುತಿಸಲಾಗಿದೆ.
ರಕ್ತ
ಚಂದನ
ಸಾಗಣೆ
ಮಾಡಲಾಗುತ್ತಿದೆ
ಎಂಬ
ಖಚಿತ
ಮಾಹಿತಿ
ಮೇರೆಗೆ
ದಾಳಿ
ನಡೆಸಲಾಗಿದೆ.
[ರಕ್ತ
ಚಂದನ
ಮಾಫಿಯ
ಜೊತೆ
ನಟಿ
ನಂಟು,
ನಾಪತ್ತೆ!]
ಪೊಲೀಸರು ನೀಡಿರುವ ಮಾಹಿತಿಯಂತೆ ಮೊಹಮ್ಮದ್ ಹುಸೈನ್ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಮದನಪಲ್ಲಿಯ ನಿವಾಸಿಯಾದ ಮೊಹಮ್ಮದ್ ರಕ್ತ ಚಂದನ ಕಳ್ಳಸಾಗಣೆ ಮಾಡಿದ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ನಡುವೆ ರಕ್ತ ಚಂದನ ಕಳ್ಳಸಾಗಣೆ ನಡೆಯುತ್ತಿದ್ದು, ಮೊಹಮ್ಮದ್ ಹುಸೈನ್ 2010ರಿಂದಲೂ ಇದರಲ್ಲಿ ತೊಡಗಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. [ಆಂಧ್ರ -ತಮಿಳುನಾಡು ಸಂಬಂಧಕ್ಕೆ ಬೆಂಕಿ ಹಚ್ಚಿದ ರಕ್ತ ಚಂದನ]
ದೊಡ್ಡಬಳ್ಳಾಪುರದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡ ರಕ್ತಚಂದನವನ್ನು ಆಂಧ್ರಪ್ರದೇಶದ ಕಾಡಿನಿಂದ ತರಲಾಗಿತ್ತು. ಮುನ್ನಾ ಎಂಬುವವರ ಗೋಡಾನ್ನಲ್ಲಿ ಸಂಗ್ರಹಣೆ ಮಾಡಲಾಗಿತ್ತು. ಗೋಡಾನ್ನಲ್ಲಿ ಸಿಕ್ಕಿ ಸುಮಾರು 3 ಟನ್ ರಕ್ತಚಂದನವ ಮೌಲ್ಯ ಮಾರುಕಟ್ಟೆಯಲ್ಲಿ 5 ಕೋಟಿ ರೂ.ಗಳು.
ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಚಿತ್ತೂರು ಬಳಿ ಇಬ್ಬರನ್ನು ಬಂಧಿಸಲಾಗಿದೆ. ಇವರು ತಮಿಳುನಾಡು ಮೂಲದವರಾಗಿದ್ದು, ಹಲವಾರು ವರ್ಷಗಳಿಂದ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದರು. ಬಂಧಿತರ ವಿಚಾರಣೆ ನಡೆಯುತ್ತಿದೆ.