ರವಿ ಬೆಳಗೆರೆ ಬರಹ ಎಷ್ಟು ಪವರ್ಫುಲ್ ಎಂದರೆ ಪಾಖಂಡಿಗಳನ್ನೂ ಹೀರೋ ಆಗಿಸುವಷ್ಟು
ಬಳ್ಳಾರಿಯಲ್ಲಿ ಹುಟ್ಟಿದ ಹುಡುಗ ಕರ್ನಾಟಕದ ಮನೆ ಮಾತಾಗುವುದಕ್ಕೆ ಮುಂಚೆ ಬಳ್ಳಾರಿಯಲ್ಲಿ ಹಿಸ್ಟ್ರಿ ಮೇಷ್ಟ್ರಾಗಿ ಕೆಲಸ ಮಾಡುತ್ತಿರುತ್ತಾರೆ. 1984ರಲ್ಲಿ ಬೆಂಗಳೂರಿಗೆ ಬಂದಾಗ ಇಲ್ಲಿ ಅವರನ್ನ ಅಪ್ಪಿ ಆಶ್ರಯ ನೀಡುವರಾರೂ ಇರಲಿಲ್ಲ. ಹೀಗಾಗಿ ಬಳ್ಳಾರಿ ದಿನಗಳಲ್ಲಿ ರೂಮ್ ಬಾಯ್ , ರೆಸೆಪ್ಟಿವ್ನಿಸ್ಟ್ , ಪೇಪರ್ ಬಾಯ್ , ಮಿಲ್ಕ್ ಸೆಲ್ಲರ್ , ಮೆಡಿಕಲ್ ರೆಪ್ , ಗೇಟ್ ಕೀಪರ್ ಹೀಗೆ ಹತ್ತಾರು ಕಡಿಮೆ ಹಣವನ್ನ ನೀಡುವ ಕೆಲಸವನ್ನ ಮಾಡುತ್ತಾರೆ.
ನಿಧಾನವಾಗಿ ಪ್ರಿಂಟಿಂಗ್ ಪ್ರೆಸ್ ತೆಗೆಯುತ್ತಾರೆ. ಬರವಣಿಗೆ ಕೈ ಹಿಡಿಯುತ್ತೆ .ಹಾಯ್ ಬೆಂಗಳೂರು ಎನ್ನುವ ಪತ್ರಿಕೆಯನ್ನ ಕೂಡ ತೆರೆಯುತ್ತಾರೆ. ಅದು ಹಲವಾರು ವರ್ಷ ಅತಿ ಹೆಚ್ಚು ಮಾರಾಟವಾದ ಪತ್ರಿಕೆ ಎನ್ನುವ ಹೆಗ್ಗಳಿಕೆ ಕೂಡ ಗಳಿಸಿಕೊಳ್ಳುತ್ತದೆ ಟಿವಿ , ಸಿನಿಮಾ ಕ್ಷೇತ್ರಗಳಲ್ಲೂ ಕೈ ಆಡಿಸಿ ಸೈ ಎನ್ನಿಸಿಕೊಳ್ಳುತ್ತಾರೆ.
ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ಪ್ರಾರ್ಥನ ಎನ್ನುವ ಶಾಲೆ ತೆರೆಯುತ್ತಾರೆ , ಅದು ಕೂಡ ಪ್ರಸಿದ್ಧವಾಗಿದೆ. ಇಂತಹ ರವಿ ಇವತ್ತು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 62 ಖಂಡಿತ ಸಾಯುವ ವಯಸ್ಸಲ್ಲ . ಹುಟ್ಟು ಸಾವು ಎರಡೂ ನಮ್ಮ ಕೈಯಲಿಲ್ಲ. ಮಧ್ಯದಲ್ಲಿನ ಒಂದಷ್ಟು ದಿನ ಹೇಗೆ ಬದುಕಬೇಕು , ಯಾವುದು ಸರಿ , ಯಾವುದು ತಪ್ಪು ಎನ್ನುವ ಸಣ್ಣ ವಿವೇಚನೆಯಷ್ಟೇ ನಮ್ಮ ಕೈಲಿರುವುದು.

ಹೀಗಾಗಿ ನೆನಪಿಡಿ ನಾವು ಮಾಡುವ ತಪ್ಪುಗಳನ್ನ ದೇವರು, ಜನ, ಎಲ್ಲರೂ ಕ್ಷಮಿಸಿ ಬಿಡಬಹದು. ಆದರೆ, ನಮ್ಮ ನರಮಂಡಳವಿದೆಯಲ್ಲ ಅದು ಮಾತ್ರ ಎಂದೂ ಕ್ಷಮಿಸುವುದಿಲ್ಲ. ಇರಲಿ ಅದು ನನ್ನ ಹೈಸ್ಕೂಲ್ ದಿನಗಳು , ಪ್ರಥಮ ಬಾರಿಗೆ ರವಿ ಬೆಳೆಗೆರೆಯವರ ಪುಸ್ತಕ 'ಪಾಪಿಗಳ ಲೋಕದಲ್ಲಿ' ಸಿಕ್ಕಿತ್ತು. ಓದಿದೆ.
ಆ ಪುಸ್ತಕ ಓದಿ ಅವರ ಬರಹದ ಶೈಲಿಯ ಅಭಿಮಾನಿ ಆಗಿದ್ದೆ. ರವಿಯಂತವರ ಬರಹ ಎಷ್ಟು ಪವರ್ಫುಲ್ ಎಂದರೆ ಆ ಪಾಖಂಡಿಗಳನ್ನ ಕೂಡ ಹೀರೋ ಆಗಿಸುವಷ್ಟು. ಅದು ಅವರ ಬರಹದ ತಾಕತ್ತು. ಓದಿದ ನಂತರ ಬೇರೆ ಆಯಾಮದಲ್ಲಿ ಚಿಂತಿಸದೆ' ಸರಿ ತಪ್ಪುಗಳ ಹುಡುಕಲು ಹೋಗದ ಓದುಗರು ಹೌದೌದು ಎಂದು ತಲೆ ಆಡಿಸುವಷ್ಟು ಪ್ರಬಲ. ಇಂತಹ ವಿಶೇಷ ಬರಹದ ಶಕ್ತಿಯ ಬಳೆಕೆ ಬದುಕನ್ನ ಭದ್ರವಾಗಿ ಕಟ್ಟಿಕೊಳ್ಳುವುದಕ್ಕೆ ಬಳಸಿದರು.
ಇವತ್ತು ಕೂಡ ನಮ್ಮ ಕನ್ನಡ ಪತ್ರಿಕಾವಲಯದಲ್ಲಿ ಒಂದಷ್ಟು ಜನ ಅಳತೆಗೆ ಮೀರಿದ ಹಣದ ಒಡೆಯರಾಗಿದ್ದಾರೆ. ಅಕ್ಷರದ ಬಳಕೆ ಅಡ್ಡಾದಿಡ್ಡಿಯಾದಾಗ ಅದು ಸಂಪತ್ತನ್ನ ಕೂಡ ಸೃಷ್ಟಿಸಬಲ್ಲದು. ಸತ್ತ ನಂತರ ನಮ್ಮ ಸಮಾಜಕ್ಕೆ ಎಲ್ಲರೂ ಸಂತರು. ವ್ಯಕ್ತಿಯೇ ಇಲ್ಲದ ಮೇಲೆ ಅವರ ಬಗ್ಗೆ ಕೆಟ್ಟ ಮಾತನಾಡಬಾರದು ಎನ್ನುತ್ತಾರೆ.
ಹೌದು , ನನಗೂ ರವಿಯವರ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯವಿಲ್ಲ. ಸಮಾಜಕ್ಕೆ ಆದರ್ಶವಾಗಿ ನಿಲ್ಲಬಹುದಾದ ಒಂದು ಸುಂದರ ಅವಕಾಶವನ್ನ ಕಳೆದುಕೊಂಡರಲ್ಲ ಎನ್ನುವ ನೋವಿದೆ ಅಷ್ಟೇ. ಒಂದು ಕಾಲದಲ್ಲಿ ಅವರ ಬರಹದ ಅಭಿಮಾನಿಯಾಗಿದ್ದೆ. ಈ ವ್ಯಕ್ತಿಯ ಬದುಕು -ಬವಣೆ- ಸಾಧನೆ ಇಗ್ನೋರ್ ಮಾಡುವಂತಹದು ಅಲ್ಲವೇ ಅಲ್ಲ. ಹೀಗಾಗಿ ವ್ಯಕ್ತಿ ವಿಶೇಷದಲ್ಲಿ ಇಂದು ಅವರೇ ಇದ್ದಾರೆ.
ನಿನ್ನೆ ಬೇರೊಬ್ಬ ವಿಶೇಷ ವ್ಯಕ್ತಿಯ ಬಗ್ಗೆ ತಯಾರಿ ಮಾಡಿಕೊಂಡಿದ್ದೆ . ಆದರೇನು ಬದುಕು ಅಂದರೆ ಇಷ್ಟೇ ಅಲ್ವಾ ? ಯಾವಾಗ ಬೇಕಾದರೂ ಬದಲಾಗುತ್ತೆ. 'ಇದ್ದಾರೆ' ಎನ್ನುವುದು ಕ್ಷಣ ಮಾತ್ರದಲ್ಲಿ 'ಇದ್ದ ' ಅಥವಾ 'ಇದ್ದರು' ಎಂದು ಬದಲಾಗಿ ಹೋಗುತ್ತದೆ.
ಇದ್ದಾಗ ನಾವು ಸಾಧಿಸುವ ಹಗೆ , ಕೋಪತಾಪಗಳು ಅವಶ್ಯಕವೇ? ಎನ್ನುವ ಪ್ರಶ್ನೆ ಪ್ರತಿಯೊಂದು ಸಾವು ಕೂಡ ನನ್ನಲ್ಲಿ ಹುಟ್ಟುಹಾಕುತ್ತದೆ. ರವಿಯವರ ಸಾವು ಕೂಡ ಅದೇ ಪ್ರಶ್ನೆಯನ್ನ ಪುರಾವರ್ತಿಸಿದೆ. ರವಿಯರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಓಂ ಶಾಂತಿ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications