Ration Card: ಪಡಿತರ ಚೀಟಿ ಪಡೆದ ಅನರ್ಹರಿಂದ ₹1.89 ಕೋಟಿ ದಂಡ ವಸೂಲಿ, ರದ್ದಾದ ಕಾರ್ಡುಗಳೆಷ್ಟು?
ಬೆಳಗಾವಿ, ಆಗಸ್ಟ್ 23: ರಾಜ್ಯಾದ್ಯಂತ ಅಕ್ರಮವಾಗಿ ರೇಷನ್ ಕಾರ್ಡ್ ಪಡೆಯುತ್ತಿರುವವರ ಪತ್ತೆ ಮಾಡುವ ಅಭಿಯಾನವನ್ನು ಸರ್ಕಾರ ಮುಂದುವರೆಸಿದೆ. ಇದರ ಭಾಗವಾಗಿ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾಡಳಿತವು ಅರ್ಹತೆ ಇಲ್ಲದಿದ್ದರೂ ನಕಲಿ ದಾಖಲಾತಿ ಮುಖೇನ ಪಡಿತರ ಚೀಟಿ ಹೊಂದಿದವರ ವಿರುದ್ಧ ಸಮರ ಸಾರಿದೆ. ಅಲ್ಲದೇ ಆರು ತಿಂಗಳಿಂದ ಪಡಿತರ ಪಡೆಯದವರ ಕಾರ್ಡ್ ರದ್ದುಗೊಳಿಸುವ ಮೂಲಕ ಶಿಸ್ತು ಕ್ರಮ ಜರುಗಿಸಿದೆ.
ಹೌದು, ನಕಲಿ ದಾಖಲೆ ನೀಡಿ ಆದ್ಯತಾ ಪಡಿತರ ಚೀಟಿ ಪಡೆದವರಿಂದ ಜಿಲ್ಲಾಡಳಿತ ಬರೋಬ್ಬರಿ 1.89 ಕೋಟಿ ರೂಪಾಯಿ ಹಣವನ್ನು ದಂಡವಾಗಿ ಪಡೆದುಕೊಂಡಿದೆ. ಈ ಮೂಲಕ ನಕಲಿ ದಾಖಲಿ, ಅರ್ಹತೆ ಇಲ್ಲದಿದ್ದರೂ ರೇಷನ್ ಕಾರ್ಡ್ ಪಡೆದವರಿಗೆ ಸೂಕ್ತ ಎಚ್ಚರಿಕೆ ಸಂದೇಶ ರವಾನಿಸಿದೆ.

ಇನ್ನೂ ಕಳೆದ ಆರು ತಿಂಗಳಿನಿಂದ ಕಾರ್ಡ್ ಹೊಂದಿದ್ದು, ಪಡಿತರ ಅಕ್ಕಿ, ಗೋಧಿ ಪಡೆಯದೇ ಇದ್ದ ಸುಮಾರು 20000 ಕಾರ್ಡ್ಗಳನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಈ ಕುರಿತು ಸ್ವತಃ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.
45000ಕ್ಕೂ ಹೆಚ್ಚು ಕಾರ್ಡ್ ಪರಿವರ್ತನೆ
ಈ ರೇಷನ್ ಪಡೆಯದೇ ಕಾರ್ಡ್ ರದ್ದಗೊಳಿಸಿದ ಪೈಕಿ 19000ಕ್ಕೂ ಹೆಚ್ಚು ನಕಲಿ ದಾಖಲೆ ಸೃಷ್ಟಿಸಿ ಆದ್ಯತಾ ಪಡಿತರ ಚೀಟಿ ಪಡೆದು ವಂಚಿಸಿದ್ದವರಿದ್ದಾರೆ. ಅವರಿಂದ 1,89 ರೂ.ದಂಡ ವಸೂಲಿ ಮಾಡಲಾಗಿದೆ. ಇನ್ನೂ ರದ್ದಾಗಿದ್ದರಲ್ಲಿ ರೇಷನ್ ಪಡೆಯದ 558 ಅಂತ್ಯೋದಯ ಕಾರ್ಡುಗಳು ಇವೆ ಎಂದು ಜಿಲ್ಲಾಡಳಿತ ಅಂಕಿ ಅಂಶ ನೀಡಿದೆ. ಇನ್ನೂ ಸರ್ಕಾರಿ ನೌಕರರು ಮತ್ತು ಅರ್ಹತೆ ಇಲ್ಲದ ಒಟ್ಟು 45000ಕ್ಕೂ ಹೆಚ್ಚು ಆದ್ಯತಾ ರೇಷನ್ ಕಾರ್ಡ್ಗಳನ್ನು 'ಆದ್ಯತೇತರ' ಎಂದು ಪರಿವರ್ತನೆ ಮಾಡಲಾಗಿದೆ ಎಂದರು.

ಬಿಪಿಎಲ್ ಕಾರ್ಡ್ ಪಡೆಯಲು ಇರುವ ಅರ್ಹತೆಗಳೇನು?
ಯಾವ ಕುಟುಂಬದ ವರಮಾನ ವಾರ್ಷಿಕವಾಗಿ 1.20ಲಕ್ಷಕ್ಕಿಂತ ಕಡಿಮೆ ವರಮಾನ ಹೊಂದಿರುತ್ತದೆಯೋ ಅಂತಹ ಬಡವರು ಬಿಪಿಎಲ್ ಕಾರ್ಡ್ ಹೊಂದಲು ಅವಕಾಶ ಇರುತ್ತದೆ. ಅಲ್ಲದೇ ಮೂರು ಹೆಕ್ಟರ್ಗಿಂತ ಕಡಿಮೆ ಒಣ, ನೀರಾವರಿ ಜಮೀನು ಹೊಂದಿಲ್ಲದವರು ಅರ್ಹರು ಎಂದು ಪರಿಣಿಸಲಾಗುತ್ತದೆ.
ಇದರೊಂದಿಗೆ ವಾಣಿಜ್ಯ ಅಥವಾ ಸ್ವಂತ ಬಳಕೆಯ ನಾಲ್ಕು ಚಕ್ರದ ವಾಹನ ಇರಬಾರದು. ನಗರ ಅಥವಾ ಪಟ್ಟಣಗಳಲ್ಲಿ 1000 ಚದರ ಅಡಿಯಲ್ಲಿ ಸ್ವಂತ ಮನೆ ಇರುವವರಿಗೆ ಕಾರ್ಡ್ ಪಡೆಯಲು ಅನರ್ಹರಾಗುತ್ತಾರೆ. ಇನ್ನೂ ಸರ್ಕಾರಿ, ಅನುದಾನಿ ಸಂಸ್ಥೆಗಳಲ್ಲಿ ಖಾಯಂ ಆಗಿ ಕೆಲಸ ಮಾಡುವ ಕುಟುಂಬಗಳು ಅನರ್ಹವಾಗಿರುತ್ತವೆ ಎಂಬ ನಿಯಮ ಇದೆ. ಅರ್ಹತೆ ಇಲ್ಲದೇ ನಕಲಿ ದಾಖಲಾತಿ ಆಧಾರದಲ್ಲಿ ಪಡಿತರ ಪಡೆದವರ ವಿರುದ್ಧ 'ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ' ನಿರ್ದೇಶನ ಮೇರೆಗೆ ಜಿಲ್ಲಾಡಳಿತ ಅಭಿಯಾನ ನಡೆಸಿತ್ತು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications