ಹಾವೇರಿ: ಅಂಧನ ಕೈ ಹಿಡಿದು ಸಾರ್ಥಕತೆ ಮೆರೆದ ಯುವತಿ
ನವಲಗುಂದದ ಅಂಧ ಯುವಕ ಜಗದೀಶ್ ನನ್ನು ವರಿಸಿದ ರಾಣೆಬೆನ್ನೂರು ತಾಲೂಕಿನ ಯುವತಿ ನಂದಾ. ಅಂಧ ಯುವಕನಿಗೆ ಹೊಸ ಬಾಳು ಇತ್ತು ಮಾದರಿಯಾದ ಯುವತಿ. ಮದುವೆಗೆ ಎರಡೂ ಕುಟುಂಬಗಳ ಸಮ್ಮತಿ. ಹಾವೇರಿ ನಗರದ ಹರಸೂರು ಬಣ್ಣದ ಮಠದ ಆವರಣದಲ್ಲಿ ಮದುವೆ.
ಹಾವೇರಿ, ಜೂನ್ 19: ಆತ ಎರಡೂ ಕಣ್ಣುಗಳು ಕಾಣದಿರೋ ಅಂಧನಾಗಿದ್ದರೂ, ಆತನ ಬಾಳಿಗೆ ಬೆಳಕು ನೀಡುವ ನಿಟ್ಟಿನಲ್ಲಿ ಯುವತಿಯೊಬ್ಬಳು ಆತನ ಕೈ ಹಿಡಿಯುವ ಮೂಲಕ ಮಾದರಿಯಾಗಿದ್ದಾಳೆ.
ತಾನು ಎಸ್ಎಸ್ಎಲ್ಸಿ ವರೆಗೆ ಓದಿದ್ದರೂ ಅಂಧ ಯುವಕನನ್ನು ಮದುವೆಯಾಗಿರುವುದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಯುವತಿ ನಂದಾ. ಆ ಅದೃಷ್ಟವಂತ ಯುವಕ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಲಕುಸುಗಲ್ ಗ್ರಾಮದ ಜಗದೀಶ್.

ಪ್ರತಿಭಾವಂತನಾದ ಜಗದೀಶ್ ಸಮಾಜಶಾಸ್ತ್ರ ವಿಷಯದಲ್ಲಿ ಎಂಎ ಪದವೀಧರ. ದೃಷ್ಟಿ ವೈಕಲ್ಯ ಆತನ ಓದಿಗೆ ಎಂದೂ ಅಡ್ಡಿಯಾಗಲಿಲ್ಲ. ತರಗತಿಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದ ಜಗದೀಶನಿಗೆ ದೃಷ್ಟಿ ಇಲ್ಲದಿದ್ದರೂ ಮನಸ್ಸಿನ ದೃಷ್ಟಿಗೆ ಮಂಕು ಬಡಿದಿಲ್ಲ. ಇಂಥ ಜಗದೀಶನ ಕೈ ಹಿಡಿಯುವ ಮೂಲಕ ಮಾದರಿಯಾಗಿರುವ ನಂದಾಳ ನಿರ್ಧಾರ ಎಲ್ಲರ ಪ್ರಶೆಂಸೆಗೆ ಕಾರಣವಾಗಿದೆ.
ಇಂಥ ಅಪರೂಪದ ಜೋಡಿಗೆ ಗುರುವಾರ ವಿವಾಹ ಬಂಧನ ಏರ್ಪಟ್ಟಿದ್ದು, ಹಾವೇರಿ ನಗರದ ಹರಸೂರು ಬಣ್ಣದ ಮಠದ ಆವರಣದಲ್ಲಿ. ಹುಟ್ಟು ಕುರುಡನಾಗಿರುವ ಜಗದೀಶನ ಇಬ್ಬರು ಸಹೋದರಿಯರಿಗೆ ಆಗಲೇ ವಿವಾಹ ಆಗಿತ್ತು. ಆದರೆ, ದೃಷ್ಟಿ ಇಲ್ಲದ ಜಗದೀಶನಿಗೆ ಮದುವೆ ಕನಸಾಗಿಯೇ ಉಳಿದಿತ್ತು. ಆದರೆ, ನಂದಾ ಆತನ ಬಾಳಲ್ಲಿ ಬೆಳಕಾಗಿ ಬಂದಿದ್ದಾರೆ. ಪರಸ್ಪರ ಎರಡೂ ಕುಟುಂಬಗಳ ಒಪ್ಪಿಗೆ ಮೇರಗೆ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ.

ಹಿಂದೂ ಸಂಪ್ರದಾಯದಂತೆ ಇಬ್ಬರಿಗೂ ಬಾಸಿಂಗ ಕಟ್ಟಿಕೊಂಡು ಹಾರ ಬದಲಾಯಿಸಿಕೊಂಡ ನೂತನ ಜೋಡಿ, ಅಂತಿಮವಾಗಿ ತಾಳಿ ಕಟ್ಟುವ ಮೂಲಕ ನಂದಾ ಜಗದೀಶನ ಬಾಳಲ್ಲಿ ಪ್ರವೇಶ ಮಾಡಿದಳು. ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಾರು ಬಂದುಗಳು ಹಾಗೂ ಸ್ನೇಹಿತರು ನೂತನ ದಂಪತಿಗೆ ಹರಿಸಿದರು.
-
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ












Click it and Unblock the Notifications