ಹಾವೇರಿ ರೈತ ಸಮಾವೇಶದಲ್ಲಿ ರಾಹುಲ್ ಹೇಳಿದ್ದೇನು?
ಹಾವೇರಿ, ಅಕ್ಟೋಬರ್ 10 : 'ಪ್ರಧಾನಿ ನರೇಂದ್ರ ಮೋದಿ ಸದಾ ಉದ್ಯಮಿಗಳ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಬಡವರ, ರೈತರ ಜೊತೆ ಅವರು ಫೋಟೊ ತೆಗೆಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಸೂಟ್ ಬೂಟ್ ನಾಯಕರಲ್ಲ, ಅವರು ರೈತರ ಮನದಾಳವನ್ನು ಅರ್ಥಮಾಡಿಕೊಳ್ಳಬಲ್ಲ ನಾಯಕರು' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.
ಹಾವೇರಿಯ
ಗುಡಗೂರಿನಲ್ಲಿ
ಶನಿವಾರ
ರೈತರ
ಸಮಾವೇಶ
ಉದ್ದೇಶಿಸಿ
ಮಾತನಾಡಿದ
ರಾಹುಲ್
ಗಾಂಧಿ
ಅವರು,
ಪ್ರಧಾನಿ
ನರೇಂದ್ರ
ಮೋದಿ
ಮತ್ತು
ಕೇಂದ್ರ
ಸರ್ಕಾರದ
ವಿರುದ್ಧ
ವಾಗ್ದಾಳಿ
ನಡೆಸಿದರು.
ಕೇಂದ್ರ
ಸರ್ಕಾರ
ಕರ್ನಾಟಕದ
ವಿಚಾರದಲ್ಲಿ
ತಾರತಮ್ಯ
ಧೋರಣೆ
ಅನುಸರಿಸುತ್ತಿದೆ
ಎಂದು
ಆರೋಪಿಸಿದರು.
[ರೈತರಿಗೆ
ವಿಶೇಷ
ಪ್ಯಾಕೇಜ್
ಘೋಷಿಸಿದ
ಸಿದ್ದರಾಮಯ್ಯ]
'ಪ್ರಧಾನಿ ಮೋದಿ ವಿದೇಶ ಪ್ರವಾಸ ಹೋಗುತ್ತಾರೆ. ಅವರು ದೇಶದ ರೈತರ ಕಷ್ಟಗಳನ್ನು ಬಗೆಹರಿಸಲು ಪ್ರಯತ್ನ ನಡೆಸುವುದಿಲ್ಲ. ವಿದೇಶಗಳಲ್ಲಿ ಅನಿವಾಸಿ ಭಾರತೀಯರ ಮುಂದೆ ಮನದಾಳದ ಮಾತುಗಳನ್ನು ಆಡುವ ಮೋದಿ, ದೇಶದ ರೈತರ ಜೊತೆ ಮನ್ ಕಿ ಬಾತ್ (ರೆಡಿಯೋ) ಮೂಲಕ ಮಾತನಾಡುತ್ತಾರೆ' ಎಂದು ವ್ಯಂಗ್ಯವಾಡಿದರು.[ರಾಹುಲ್ ಹಾವೇರಿ ಭೇಟಿಯ ಕ್ಷಣ-ಕ್ಷಣದ ಮಾಹಿತಿ]
ಸಿದ್ದರಾಮಯ್ಯ ರೈತ ನಾಯಕರು : 'ಮೋದಿ ಸದಾ ಉದ್ಯಮಿಗಳ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಬಡವರ, ರೈತರ ಜೊತೆ ಅವರು ಫೋಟೊ ತೆಗೆಸಿಕೊಳ್ಳುವುದಿಲ್ಲ. ಆದರೆ, ಸಿದ್ದರಾಮಯ್ಯ ಅವರು ಸೂಟ್ ಬೂಟ್ ನಾಯಕರಲ್ಲ, ಅವರು ರೈತರ ಮನದಾಳವನ್ನು ಅರ್ಥಮಾಡಿಕೊಳ್ಳಬಲ್ಲ ನಾಯಕ' ಎಂದು ರಾಹುಲ್ ಬಣ್ಣಿಸಿದರು. [ರಾಹುಲ್ ಕರ್ನಾಟಕ ಭೇಟಿ ಚಿತ್ರಗಳು]
ಕೇಂದ್ರದಿಂದ ಮಲತಾಯಿ ಧೋರಣೆ : 'ಕೇಂದ್ರ ಸರ್ಕಾರದ ಕರ್ನಾಟಕ ರಾಜ್ಯದ ವಿಚಾರದಲ್ಲಿ ಮಲತಾಯಿ ದೋರಣೆ ತೋರಿಸುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ರಾಜ್ಯದ ರೈತರನ್ನು ಅವರು ಭಾರತದ ರೈತರಂತೆ ಕಾಣುತ್ತಿಲ್ಲ' ಎಂದು ದೂರಿದರು.
'ದೇಶಾದ್ಯಂತ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಹೋರಾಟ ನಡೆಸುತ್ತಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರೈತರಿಗಾಗಿ ಹಲವು ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ' ಎಂದು ರಾಹುಲ್ ಗಾಂಧಿ ಹೇಳಿದರು.