ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಳವಾಡದಲ್ಲಿ ರಾಹುಲ್ ರಿಂದ ಮೋದಿ ಮೌನದ 'ಗುಣಗಾನ'!
ವಿಜಯಪುರ, ಫೆಬ್ರವರಿ 25 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿಜಯಪುರದಲ್ಲಿ ಕಾರ್ಯಕರ್ತರ ಜೊತೆ ಸಂವಾದ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಮೂರು ದಿನಗಳ ಕರ್ನಾಟಕ ಪ್ರವಾಸದಲ್ಲಿದ್ದಾರೆ.
ಚಿತ್ರಗಳು : ವಿಜಯಪುರದಲ್ಲಿ ರಾಹುಲ್ ಪ್ರವಾಸ
ಮುಳವಾಡದ ಮಲ್ಲಿಕಾರ್ಜುನ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯುತ್ತಿದೆ. ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮುಂತಾದವರು ಉಪಸ್ಥಿತರಿದ್ದಾರೆ.
Newest FirstOldest First
ದೇಶದಲ್ಲಿ ರೈತರ, ಬಡವರ ಹಣ ಉದ್ಯಮಿಗಳ ಹಣ ಶ್ರೀಮಂತರ ಪಾಲಾಗುತ್ತಿದೆ. ಆದರೂ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ
ನುಡಿದಂತೆ ನಡೆಯಿರಿ ಎಂದು ಮೋದಿ ಅವರನ್ನು ವ್ಯಂಗ್ಯವಾಡಿದ ರಾಹುಲ್ ಗಾಂಧಿ, ಉದ್ಯೋಗ ಸೃಷ್ಟಿ ಮಾಡಿ ಎಂದು ಆಗ್ರಹಿಸಿದರು.
ನಾನು ನಿಮ್ಮ ಸೇವಕ ಎಂದು ಹೇಳುವ ಮೋದಿ. ನೀರವ್ ಮೋದಿ ದೇಶದ ಹಣವನ್ನು ತೆಗೆದುಕೊಂಡು ಹೋದಾಗ ಏನು ಮಾಡುತ್ತಿದ್ದರು.
ನರೇಂದ್ರ ಮೋದಿ ಅವರ ಕೃಪೆಯಿಂದ ಹಲವು ಜನರು ಕಪ್ಪು ಹಣವನ್ನು ಬಿಳಿ ಮಾಡಿಕೊಂಡರು. ನೋಟು ನಿಷೇಧದಿಂದ ಅವರಿಗೆ ಸಹಾಯಕವಾಯಿತು.
ನೀರಾವರಿಗೆ ಬಿಜೆಪಿ ಸರ್ಕಾರಕ್ಕಿಂತ ಹೆಚ್ಚಿನ ಅನುದಾನವನ್ನು ನಾವು ನೀಡಿದ್ದೇವೆ. ಕೇಂದ್ರ ಸರ್ಕಾರಕ್ಕಿಂತ ಶೇ 3ರಷ್ಟು ಹೆಚ್ಚಿನ ಅನುದಾನ ನೀಡಿದ್ದೇವೆ.
ಆದಿವಾಸಿಗಳ, ದಲಿತರ ಪರವಾಗಿ ಕರ್ನಾಟಕ ಸರ್ಕಾರವಿದೆ. ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ನೀಡಿದ್ದಕ್ಕಿಂತ ಹೆಚ್ಚಿನ ಹಣವನ್ನು ಕರ್ನಾಟಕ ಸರ್ಕಾರ ನೀಡಿ, ಅವರ ಅಭಿವೃದ್ಧಿಗೆ ನೆರವಾಗಿದೆ.
ನರೇಂದ್ರ ಮೋದಿ ಅವರೇ ಸ್ಪಷ್ಟವಾಗಿ ಹೇಳಿ, ದೇಶದಲ್ಲಿ ಕಷ್ಟ ಪಟ್ಟು ಕೆಲಸ ಮಾಡುವ ರೈತರ ಸಾಲವನ್ನು ನೀವು ಮನ್ನಾ ಮಾಡುವಿರಾ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
Advertisement
ಬಸವಣ್ಣ ಅವರು ಕಾಯಕವೇ ಕೈಲಾಸ ಎಂದು ಹೇಳಿದ್ದರು. ಇಲ್ಲಿನ ರೈತರು ಈ ವಚನದ ಅನುಸಾರವೇ ಕಷ್ಟಪಟ್ಟು ಬೆಳೆ ಬೆಳೆಯುತ್ತಿದ್ದಾರೆ.
ಕರ್ನಾಟಕ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತಿದೆ. ಎಲ್ಲರಿಗೂ ಅವಕಾಶಗಳು ಸಿಗುವಂತೆ ಮಾಡಲಾಗಿದೆ ಎಂದರು.
ಮುಳವಾಡದಲ್ಲಿ ಬೃಹತ್ ಸಮಾವೇಶ
Thousands of Farmers gathered at Chikkapadasalagi, Jamkhandi to hear @INCIndia President Shri Rahul Gandhi address them. #NavaKarnatakaNirmana #JanaAashirwadaYatre pic.twitter.com/EkRKSxXSbw
— Karnataka Congress (@INCKarnataka) February 25, 2018
ಬಸವಣ್ಣ ಅವರ ತತ್ವ ಮತ್ತು ಕಾಂಗ್ರೆಸ್ ಪಕ್ಷದ ತತ್ವ ಒಂದೇ ಆಗಿದೆ. ಎಲ್ಲಿರಿಗೂ ಸಮಪಾಲು, ಸಮಬಾಳು ಎಂಬ ತತ್ವದಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.
ಎಲ್ಲರಿಗೂ ಶರಣು ಶರಣಾರ್ಥಿ ಎಂದು ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಬಸವಣ್ಣ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದರು.
Advertisement
Comments
rahul gandhi vijayapura karnataka karnataka assembly elections 2018 district news ರಾಹುಲ್ ಗಾಂಧಿ ವಿಜಯಪುರ ಕರ್ನಾಟಕ ಕರ್ನಾಟಕ ವಿಧಾನಸಭೆ ಚುನಾವಣೆ 2018 ಜಿಲ್ಲಾಸುದ್ದಿ
English summary
AICC president Rahul Gandhi address election campaign rally in Muluvada, Vijayapura Karnataka. Rahul Gandhi in Karnataka as a part of his Three days tour.