ಫೆ.7ರಿಂದ ಕೋಲಾರದಲ್ಲಿ ಪುರಂದರದಾಸರ ಆರಾಧನೆ
ಕೋಲಾರ,ಫೆಬ್ರವರಿ,06: ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಆರಾಧನೆಯನ್ನು ಫೆಬ್ರವರಿ 7ರಿಂದ 9ರವರೆಗೆ ಮೂರು ದಿನಗಳ ಕಾಲ ಕೋಲಾರದ ಮುಳುಬಾಗಿಲಿನ ವೀರಭದ್ರ ನಗರದಲ್ಲಿರುವ ಶ್ರೀ ಪಾಂಡುರಂಗ ವಿಠಲನ ಸನ್ನಿಧಿಯಲ್ಲಿ ನಡೆಯಲಿದೆ.
ಪುರಂದರ ದಾಸರ ಆರಾಧನೆಯು ಶ್ರೀ ಪುರಂದರ ಆರಾಧನಾ ಸಮಿತಿ ಟ್ರಸ್ಟ್ ರವರ ಸಹಯೋಗದಲ್ಲಿ ನಡೆಯುತ್ತಿದ್ದು, ಫೆಬ್ರವರಿ 7ರಿಂದ ಆರಂಭವಾಗುವ ಈ ಆರಾಧನೆ 43ನೇ ಆರಾಧನೆಯಾಗಿದೆ. ಫೆಬ್ರವರಿ 8 ಪುಷ್ಯ ಬಹುಳ ಅಮಾವಾಸ್ಯೆಯಿದ್ದು ಆರಾಧನೆಯು ದೇಶ ವಿದೇಶಗಳಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯಕರ್ತರು ತಿಳಿಸಿದರು.[ದಾಸಸಾಹಿತ್ಯ ಮಾಹಿತಿ ಬೆರಳ ತುದಿಯಲ್ಲೇ ಲಭ್ಯ]

ಪುರಂದರದಾಸರ ಆರಾಧನೆಯ ಕಾರ್ಯಕ್ರಮಗಳು:
* ಮೂರು ದಿನ ಬೆಳಗ್ಗೆ 9 ರಿಂದ ರಾತ್ರಿ 10ರ ವರೆಗೂ ನಾಡಿನ ಹಿರಿಯ ಕಿರಿಯ ಕಲಾವಿದರಿಂದ ದಾಸರ ಗಾಯನ ಕಾರ್ಯಕ್ರಮ
* ಮುಖ್ಯ ಆರಾಧನೆ ಪ್ರತಿದಿನ ಬೆಳಿಗ್ಗೆ ಮಂಗಳವಾದ್ಯದಿಂದ ಪ್ರಾರಂಭವಾಗಿ ಸರ್ವೋತ್ತಮ ದಾಸರ ನೇತೃತ್ವದಲ್ಲಿ ಊಂಛವೃತ್ತಿ ,ದೇವಸ್ಥಾನದ ಸುತ್ತಲೂ ಭಜನೆಯೊಂದಿಗೆ ತಾಳ ತಂಬೂರಿ ಜೊತೆಯಲ್ಲಿ ಪ್ರದಕ್ಷಿಣೆ
* ಗಾನಕಲಾಭೂಷಣ ವಿ. ಆರ್ ಕೆ ಪದ್ಮನಾಭರವರ ನೇತೃತ್ವದಲ್ಲಿ ಶ್ರೀ ಪುರಂದರದಾಸರ ನವರತ್ನಮಾಲಿಕೆ - ಗೋಷ್ಠಿಗಾಯನ
* ಬಂದ ಅತಿಥಿಗಳಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ. [Exclusive : ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ]
ಪುರಂದರದಾಸರ ಬಗ್ಗೆ ಕೆಲವು ಮಾಹಿತಿ
ಪುರಂದರದಾಸರು ದಾಸ ಸಾಹಿತ್ಯದ ದಿಗ್ಗಜರು. ಇವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದು ಕರೆಯುತ್ತಾರೆ. ಇವರು 1484ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕ್ಷೇಮಪುರದಲ್ಲಿ ಜನಿಸಿದರು. ಕೆಲವು ವಿದ್ವಾಂಸರ ಪ್ರಕಾರ ಕರ್ನಾಟಕದ ಪುರಂದರಘಟ್ಟದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಇವರ ಮೊದಲ ಹೆಸರು ಶ್ರೀನಿವಾಸ ನಾಯಕ. ಪುರಂದರದಾಸರು ಮರಣವನ್ನಪ್ಪಿದ್ದು 1564, ಹಂಪಿಯಲ್ಲಿ. ಕನ್ನಡ ಹಾಗೂ ಸಂಸ್ಕೃತದಲ್ಲಿ ದಾಸ ಸಾಹಿತ್ಯ ರಚನೆ ಮಾಡಿದ ಇವರು ದಾಸಸಾಹಿತ್ಯದ ಪ್ರಸಿದ್ದಿಗೆ ಕಾರಣಕರ್ತರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications