Live

PM Modi in Davanagere Live: ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ಗರ್ಜನೆ

ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಬಿಸಿ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ನಾಯಕರು ಕರ್ನಾಟಕದತ್ತ ಪದೇ ಪದೇ ಪ್ರಯಾಣವನ್ನು ಬೆಳೆಸಿದ್ದಾರೆ. ಹಲವಾರು ಭರವಸೆ ನೀಡುವ ಮೂಲಕ ಹಾಗೂ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಕೇಂದ್ರ ನಾಯಕರು ಮತದಾರರನ್ನು ಸೆಳೆಯುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಶತಾಯಗತಾಯ ಮತ್ತೆ ಅಧಿಕಾರ ಪಡೆಯಲು ಪಣ ತೊಟ್ಟಿರುವ ಬಿಜೆಪಿ ಕೇಂದ್ರ ನಾಯಕರನ್ನು ಬರಮಾಡಿಕೊಳ್ಳುವ ಮೂಲಕ ಪ್ರಚಾರದ ಬಲವನ್ನು ಹೆಚ್ಚಿಸುತ್ತಿದೆ.

ಕಳೆದ ಬಾರಿ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಈವರೆಗೆ ಆರು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದು ಇಂದು ಏಳನೇ ಬಾರಿ ಆಗಮಿಸುತ್ತಿದ್ದಾರೆ. ಇಂದು (ಮಾರ್ಚ್ 25) ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಚಾಲನೆ ನೀಡುವರು.

narendra modi in karnataka

ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುವ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ವಿಜ್ಞಾನ ಕಾಲೇಜು ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಬೆಂಗಳೂರಿನ ಕೆಆರ್‌ಪುರಂ-ವೈಟ್‌ಫೀಲ್ದ್ ನಡುವೆ ಮೆಟ್ರೋ ರೈಲು ಸೇವೆಯನ್ನು ಉದ್ಘಾಟಿಸಲಿದ್ದಾರೆ. ಇಲ್ಲಿಂದ ದಾವಣಗೆರೆ ತೆರಳ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಇದಾದ ಬಳಿಕ ಶಿವಮೊಗ್ಗ ತೆರಳಿ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸಂಜೆ 5.15ಕ್ಕೆ ದೆಹಲಿಗೆ ನಿರ್ಗಮಿಸಲಿದ್ದಾರೆ. ಮೋದಿ ಭೇಟಿ ಬೆನ್ನಲ್ಲೆ ಬೆಣ್ಣೆ ನಗರಿ ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಕೇಸರಿಮಯವಾಗಿದೆ.

Mar 25, 2023, 5:21 pm IST

ಏಪ್ರಿಲ್‌ನಲ್ಲಿ ಮತ್ತೆ ಮೋದಿ ಕರ್ನಾಟಕಕ್ಕೆ ಭೇಟಿ

ದಾವಣಗೆರೆಯ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಮೋದಿ, 'ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮತ್ತೆ ಕರ್ನಾಟಕಕ್ಕೆ ಬರುತ್ತೇನೆ. ವಿಶ್ವ ಹುಲಿ ದಿನದ ಪ್ರಯುಕ್ತ ಕರ್ನಾಟಕದ ಹುಲಿಗಳ ಮಧ್ಯೆ ಇರಲು ಬರುತ್ತೇನೆ. ಜತೆಗೆ, ನಿಮ್ಮ ದರ್ಶನಕ್ಕಾಗಿ ನಾನು ಬರುತ್ತೇನೆ. ನಿಮ್ಮ ಆಶೀರ್ವಾದವೇ ನಮಗೆ ಶಕ್ತಿ, ಹೊಸ ಶಕ್ತಿ, ಹೊಸ ಹುಮ್ಮಸ್ಸು ದೊರೆಯುತ್ತದೆ' ಎಂದರು.
Mar 25, 2023, 5:18 pm IST

'ವಿಶ್ವ ಭೂಪಟದಲ್ಲಿ ಹಿಂದೂಸ್ಥಾನದ ಬಗ್ಗೆ ಜೈಕಾರ' ಮೋದಿ

'ವಿಶ್ವ ಭೂಪಟದಲ್ಲಿ ಹಿಂದೂಸ್ಥಾನದ ಬಗ್ಗೆ ಜೈ ಕಾರ ಕೇಳಿಬರುತ್ತದೆ. ಜಾಗತಿಕ ಮಟ್ಟದಲ್ಲಿ ನಮ್ಮ ಗೌರವ ಹೆಚ್ಚಿದೆ. ಮೋದಿ ಕಾರಣವಲ್ಲ, ನಿಮ್ಮ ಒಂದು ವೋಟ್‌ನಿಂದ. ಅದರಿಂದ ನಾವು ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದ್ದೇವೆ. ನಿಮ್ಮ ಮತದ ತಾಕತ್ತು ತೋರಿಸುವ ಕಾಲ ಬಂದಿದೆ.ಪ್ರಪಂಚದಾದ್ಯಂತ ಭಾರತಕ್ಕೆ ಜೈಕಾರ ಹಾಕುತ್ತಿದ್ದಾರೆ. ಇದು ಕೇವಲ ಮೋದಿಯ ಕಾರಣಕ್ಕೆ ಅಲ್ಲ. ನೀವೆಲ್ಲರೂ ವೋಟ್ ನೀಡಿದ ಕಾರಣಕ್ಕೆ ಜಗತ್ತಿನಲ್ಲಿ ಭಾರತದ ಪರ ಜೈಕಾರ ಮೊಳಗುತ್ತಿದೆ. ಇದು ಕರ್ನಾಟದಲ್ಲೂ ನಿಮ್ಮಿಂದ ಸಾಧ್ಯ ಆಗಬೇಕು' ಎಂದರು.
Mar 25, 2023, 5:17 pm IST

ಮಹಾಸಂಗಮ ಸಮಾವೇಶದಲ್ಲಿ ಮೋದಿ ಭರವಸೆ

'ಇಡೀ ವಿಶ್ವ ಭಾರತದೆಡೆ ನೋಡಿದರೆ, ಇಡೀ ಭಾರತ ಕರ್ನಾಟಕದ ಕಡೆ ನೋಡುತ್ತದೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಕೋವಿಡ್ ನಡುವೆಯೂ ಕರ್ನಾಟಕ ವಿದೇಶಿ ನೇರ ಹೂಡಿಕೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಅದಕ್ಕೆ ಮುಖ್ಯಮಂತ್ರಿ & ಅವರ ಸಚಿವ ಸಂಪುಟಕ್ಕೆ ಅಭಿನಂದನೆ ಕೋರುತ್ತೇನೆ. ದೇಶಾದ್ಯಂತ 7 ಟೆಕ್ಸ್ ಟೈಲ್ಸ್ ಹಬ್ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ಒಂದು ದಾವಣಗೆರೆಯಲ್ಲಿ ಇದೆ. ಇದು ಹಲವು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಿದೆ. ಈ ಮೂಲಕ ಯುವಕರಿಗೆ ಉದ್ಯೋಗದ ಅವಕಾಶ ದೊರಕುತ್ತಿದೆ' ಎಂದರು.
Mar 25, 2023, 5:16 pm IST

'ರಾಜ್ಯದಲ್ಲಿ ಸದೃಢ ಸರ್ಕಾರ ಬೇಕು' ಮೋದಿ

ದಾವಣಗೆರೆಯ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಮೋದಿ, 'ಲಂಬಾಣಿ ತಾಂಡಗಳಿಗೆ ಹಕ್ಕು ಪತ್ರ ನೀಡಿದ್ದೇವೆ. ದಲಿತರು, ಆದಿವಾಸಿಗಳು, ವಂಚಿತರನ್ನು ಕಡೆಗಣಿಸಿಲ್ಲ. ಕರ್ನಾಟದಲ್ಲಿ ಅವಕಾಶವಾದಿ ಸಮ್ಮಿಶ್ರ ಸರ್ಕಾರದಿಂದ ನಷ್ಟವಾಗಿದೆ. ಇಲ್ಲಿ ಬಹುಮತದ ಬಿಜೆಪಿ ಸರ್ಕಾರ ಬೇಕು. ಬಹುಮತ ಸಿಗದಿದ್ದರೆ, ರಾಜ್ಯಕ್ಕೆ ಅನುಕೂಲವಿಲ್ಲ. ಸದೃಢ ಸರ್ಕಾರ ಬೇಕು' ಎಂದು ಹೇಳಿದರು.
Mar 25, 2023, 5:13 pm IST

ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಮೋದಿ ವಾಗ್ದಾಳಿ

'ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳಿದ್ದಾಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ತಲುಪಲೇ ಇಲ್ಲ. ನಮ್ಮ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ತಲುಪುವಂತೆ ಆಯಿತು' ಎಂದು ಮೋದಿ ಹೇಳಿದರು.
Mar 25, 2023, 4:56 pm IST

ಡಬಲ್ ಎಂಜಿನ್ ಸರ್ಕಾರ ಕೊಂಡಾಡಿದ ಮೋದಿ

'ನಾನು ಬೆಂಗಳೂರಿನಲ್ಲಿ ವೈಟ್ ಫೀಲ್ಡ್ ಮೆಟ್ರೋ, ತುಮಕೂರಿನಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿ, ಐಐಟಿ ಧಾರವಾಡ ಕ್ಯಾಂಪಸ್, ಜಲ ಜೀವನ್ ಮೀಷನ್ ಲೋಕಾರ್ಪಣೆ ಆಗಿದೆ. ಇದು ದಿನ-ರಾತ್ರಿ ಕೆಲಸ ಮಾಡುವ ಡಬಲ್ ಎಂಜಿನ್ ಸರ್ಕಾರ' ಎಂದು ಮೋದಿ ಹೇಳಿದರು.
Mar 25, 2023, 4:43 pm IST

ಮಹಾಸಂಗಮ ಸಮಾವೇಶದಲ್ಲಿ ಮೋದಿ ಕಹಳೆ

'ಲಂಬಾಣಿ ತಾಂಡಗಳಿಗೆ ಹಕ್ಕು ಪತ್ರ ನೀಡಿದ್ದೇವೆ. ದಲಿತರು, ಆದಿವಾಸಿಗಳು, ವಂಚಿತರನ್ನು ಕಡೆಗಣಿಸಿಲ್ಲ. ಕರ್ನಾಟದಲ್ಲಿ ಅವಕಾಶವಾದಿ ಸಮ್ಮಿಶ್ರ ಸರ್ಕಾರದಿಂದ ನಷ್ಟವಾಗಿದೆ. ಇಲ್ಲಿ ಬಹುಮತದ ಬಿಜೆಪಿ ಸರ್ಕಾರ ಬೇಕು. ಬಹುಮತ ಸಿಗದಿದ್ದರೆ, ರಾಜ್ಯಕ್ಕೆ ಅನುಕೂಲವಿಲ್ಲ. ಸದೃಢ ಸರ್ಕಾರ ಬೇಕು' ಎಂದು ಪ್ರಧಾನಿ ಹೇಳಿದರು.
Mar 25, 2023, 4:39 pm IST

ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ಗರ್ಜನೆ

ದಾವಣಗೆರೆಯ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಮೋದಿ, 'ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ರೀತಿ ನೋಡುತ್ತಿದೆ. ಕಾಂಗ್ರೆಸ್ ದೆಹಲಿ ನಾಯಕರ ಜೇಬು ತುಂಬಿಸುತ್ತಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಹಣ ಕೂಡಿಡುವ ತಿಜೋರಿಯಾಗಿದೆ. ಕಾಂಗ್ರೆಸ್ ಜನರಿಗೆ ಸುಳ್ಳು ಹೇಳಿ ನಂಬಿಸುತ್ತಿದೆ. ಅವರು ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ಮಾಡಿಲ್ಲ. ಕಾಂಗ್ರೆಸ್‌ನವರು ಮೋದಿ ಸಮಾದಿ ಕಟ್ಟೋದರಲ್ಲಿ ಸಂಕಲ್ಪ ಮಾಡಿದ್ದಾರೆ. ಆದರೆ ಕರ್ನಾಟಕ ಜನರು ಬಿಜೆಪಿ ಉಳಿಸಲು ನೋಡುತ್ತಿದ್ದಾರೆ. ಇಂತಹ ಕಾಂಗ್ರೆಸ್ ನಮಗೆ ಬೇಕೆ' ಎಂದು ನೆರೆದವರನ್ನು ಮೋದಿ ಪ್ರಶ್ನೆ ಮಾಡಿದರು. 'ಕರ್ನಾಟಕ ಸೇವೆಗೆ ನಾನು ಬದ್ಧನಾಗಿದ್ದೇನೆ. ಕರ್ನಾಟಕದ ಅಭಿವೃದ್ಧಿಗಾಗಿ ಬಿಜೆಪಿಗೆ ಬಹುಮತ ನೀಡುವ ಕಾಲ ಬಂದಿದೆ' ಎಂದರು.
Mar 25, 2023, 4:26 pm IST

ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಪಾಳಮೋಕ್ಷ- ಮೋದಿ ವಾಗ್ದಾಳಿ

ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಪಾಳಮೋಕ್ಷ ವಿಚಾರ ಪ್ರಸ್ತಾಪಿಸಿ ಸಿದ್ದರಾಮಯ್ಯ ವಿರುದ್ಧ ಗುಡುಗಿದರು. 'ಯಾರೂ ಸಣ್ಣವರಲ್ಲ.. ಯಾರೂ ದೊಡ್ಡವರಲ್ಲ.. ನಮಗೆ ಎಲ್ಲರೂ ಒಂದೇ. ಕರ್ನಾಟಕದ ಪ್ರತಿಯೊಬ್ಬ ಸಹೋದರರು ಸಹೋದರರು ಇದ್ದಂತೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ನನ್ನ ಮಿತ್ರ ಹಾಗೂ ನನ್ನ ಮಿತ್ರನಿದ್ದಂತೆ. ರಾತ್ರಿ ಹಗಲು ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ' ಎಂದರು.
Mar 25, 2023, 4:17 pm IST

ಖರ್ಗೆಗೆ ಪರೋಕ್ಷವಾಗಿ ಪಂಚ್‌ ಕೊಟ್ಟ ಮೋದಿ

ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಮೋದಿ, ಖರ್ಗೆಗೆ ಪರೋಕ್ಷವಾಗಿ ಪಂಚ್‌ ಕೊಟ್ಟರು. ಎಐಸಿಸಿ ಅಧ್ಯಕ್ಷ ಅವರ ತವರು ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ಮಾಡಿದರು.
Mar 25, 2023, 4:14 pm IST

ಕನ್ನಡದಲ್ಲಿ ಬಾಷಣ ಆರಂಭಿಸಿದ ಮೋದಿ

ದಾವಣಗೆರೆ ಮಹಾಸಂಗಮ ಸಮಾವೇಶದಲ್ಲಿ ಕನ್ನಡದಲ್ಲಿ ಬಾಷಣ ಆರಂಭಿಸಿದ ಮೋದಿ 'ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು. ಕರ್ನಾಟಕದ ನನ್ನ ಸಮಸ್ತ ಬಿಜೆಪಿ ಕಾರ್ಯಕರ್ತರಿಗೆ ನಮಸ್ಕಾರಗಳು. ಪ್ರತೀ ಬಾರಿ ನಿಮ್ಮ ಆಶೀರ್ವಾದ ಹೆಚ್ಚಾಗುತ್ತಲೇ ಇದೆ. ಇದು ನನ್ನ ಸೌಭಾಗ್ಯವಾಗಿದೆ. ನಿಮ್ಮ ಆಶೀರ್ವಾದ ನನಗೆ ಬಹಳಷ್ಟು ಶಕ್ತಿ ನೀಡುತ್ತದೆ' ಎಂದು ಹೇಳುವ ಮೂಲಕ ನೆರೆದವರ ಗಮನ ಸೆಳೆದರು.
Mar 25, 2023, 4:09 pm IST

ವಿಜಯಸಂಕಲ್ಪ ಸಮಾರೋಪದಲ್ಲಿ ಕಾಂಗ್ರೆಸ್‌ಗೆ ಕೌಂಟರ್ ಕೊಟ್ಟ ಸಿಎಂ

ದಲಿತರ ಹಾಸ್ಟರ್ ಸಂಖ್ಯೆ ಹೆಚ್ಚು ಮಾಡಿದ್ದಾರೆ. ಬಿಜೆಪಿ ಸರ್ಕಾರ ರೈತರ ಪರವಾಗಿರುವ ಸರ್ಕಾರವಾಗಿದೆ. ಕಳಸಾ ಬಂಡೂರಿಯಲ್ಲಿ ನಮಗೆ ಜಯ ಸಿಕ್ಕಿದೆ. ಮನೆ ಮನೆಗೆ ನೀರು ಕೊಡುತ್ತಿದ್ದಾರೆ. ಕಾಂಗ್ರೆಸ್‌ ಕಾಲದಲ್ಲಿ ಆಗದ್ದನ್ನು ಮೋದಿ ಕಡಿಮೆ ಸಮಯದಲ್ಲಿ ಮಾಡಿದ್ದಾರೆ. ಮೋದಿ ಅವರ ಕೈಯನ್ನು ಬಲಪಡಿಸಿ. ಮುಂದಿನ ಚುನಾವಣೆಯಲ್ಲಿ ಮತ್ತೆ ಕಮಲ ಅರಳುವಂತೆ ಮಾಡಿ ಎಂದು ಮನವಿ ಮಾಡಿದರು.
Mar 25, 2023, 4:01 pm IST

ವಿಜಯಸಂಕಲ್ಪ ಸಮಾರೋಪದಲ್ಲಿ ಮೋದಿಯನ್ನು ಹೊಗಳಿ ಕೊಂಡಾಡಿದ ಸಿಎಂ

ವಿಜಯಸಂಕಲ್ಪ ಸಮಾರೋಪದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದರು. 'ಯಾರೂ ನಂಬಲಾಗದ ಸಂಖ್ಯೆಯಲ್ಲಿ ನೀವು ಸೇರಿದ್ದೀರಿ. ಬಿಜೆಪಿಯ ಸುನಾಮಿ ಎಬ್ಬಿಸಿದ್ದೀರಿ. ಮೋದಿ ಅವರನ್ನು ಸುಮ್ಮನೆ ದೇಶದ ನಾಯಕ ಎನ್ನುತ್ತಿಲ್ಲ. ದೇಶ ವಿದೇಶದಲ್ಲಿ ಮೋದಿ ಅವರನ್ನು ಹೊಗಳಿ ಕೊಂಡಾಡುತ್ತಾರೆ. ವಿದೇಶಕ್ಕೆ ಹೋಗಿ ಪ್ರಜಾಪ್ರಭುತ್ವವನ್ನು ಅವಹೇಳನ ಮಾಡುತ್ತಾರೆ. ದೇಶದ ಬಗ್ಗೆ ಅವಹೇಳನ ಮಾಡುವಂತ ಆಡಳಿತ ನಾಡಿಗೆ ಬೇಡ.ರಾಜ್ಯದ್ರೋ ದೇಶದ್ರೋಹದ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ' ಎಂದರು.
Mar 25, 2023, 3:57 pm IST

ವಿಜಯಸಂಪಕಲ್ಪ ಸಮಾರೋಪದಲ್ಲಿ ಬಿಎಸ್‌ವೈ ಮಾತು

ವಿಜಯಸಂಪಕಲ್ಪ ಸಮಾರೋಪದಲ್ಲಿ ಭಾಗವಹಿಸಿದ ಬಿಎಸ್‌ ಯಡಿಯೂರಪ್ಪ ಅವರು, 'ಚುನಾವಣೆ ಗೆಲ್ಲುವರೆಗೂ ನಾನು ಮನೆಯಲ್ಲಿ ಕೂಡುವುದಿಲ್ಲ. ಮಿಶ್ರಮಿಸುವುದಿಲ್ಲ. ನಾನು ಮನೆಯಲ್ಲಿ ಕೂರುವುದಿಲ್ಲ ಓಡಾಡುತ್ತೇನೆ. ನಾನು ಮಾತ್ರವಲ್ಲ ಚುನಾವಣೆಯಲ್ಲಿ ಗೆಲ್ಲುವರೆಗೂ ಯಾರೂ ವಿಶ್ರಮಿಸುವುದಿಲ್ಲ' ಎಂದು ಹೇಳಿದರು.
Mar 25, 2023, 3:43 pm IST

ಮೋದಿಗೆ ಶಾಲು ಹೊದಿಸಿ ಪೇಟ ಧರಿಸಿ ಸನ್ಮಾನ

ದಾವಣಗೆರೆ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತಿ. ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಮೋದಿ ಅವರಿಗೆ ಮಾಲಾರ್ಪಣೆ ಮಾಡಿ, ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟಿಲ್ ಅವರು ಶಾಲು ಹೊದಿಸಿದರು. ಮೋದಿ ಪೇಟ ಧರಿಸಲಾಯಿತು. ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಜಯದ ಸಂಕೇತವಾಗಿ ಗದೆಯನ್ನು ಕೊಟ್ಟು ಸನ್ಮಾನಿಸಿದರು.
Mar 25, 2023, 3:34 pm IST

ಎಲ್ಲೆಡೆ ಬಿಜೆಪಿ ಪರ ಅಲೆ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ರಾಜ್ಯದೆಲ್ಲೆಡೆ ಸಂಚರಿಸಿದೆ. ಎಲ್ಲೆಡೆ ಬಿಜೆಪಿ ಪರ ಅಲೆ ಕಂಡು ಬಂದಿದೆ. ಉತ್ಸಾಹವೂ ಹೆಚ್ಚಾಗಿದೆ. ದಾವಣಗೆರೆಯಲ್ಲಿ ಮಹಾಸಂಗಮಕ್ಕೆ ಸೇರಿರುವ ಜನಸ್ತೋಮವೇ ಇದಕ್ಕೆ ಸಾಕ್ಷಿ ಎಂದು ಯಡಿಯೂರಪ್ಪ ಹೇಳಿದರು.
Mar 25, 2023, 3:33 pm IST

ಸ್ಪಷ್ಟ ಬಹುಮತ ಬರುತ್ತೆ: ಯಡಿಯೂರಪ್ಪ ಭವಿಷ್ಯ

ಜಿಎಂಐಟಿಯಲ್ಲಿ ಮಾಧ್ಯಮದರ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 140 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಆಶೀರ್ವಾದದಿಂದ ಇದು ಸಾಧ್ಯವಾಗಲಿದೆ. ಕೆಲವರು ನಾವೇ ಮುಖ್ಯಮಂತ್ರಿಯಾಗುತ್ತೇವೆ ಎಂಬ ಭ್ರಮೆಯಲಿದ್ದಾರೆ. ಇದು ತಿರುಕನ ಕನಸು. ಅದು ನನಸಾಗುವುದಿಲ್ಲ ಎಂದು ಭವಿಷ್ಯ ನುಡಿದರು.
Mar 25, 2023, 3:32 pm IST

ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗಿ

ಕಾರು, ಲಾರಿ, ಬಸ್ ಗಳ ಮೂಲಕ ಲಕ್ಷಾಂತರ ಜನರು ಆಗಮಿಸಿದರು. ದಾವಣಗೆರೆ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ವಿಜಯನಗರ, ಗದಗ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಿಂದ ಜನರು ಆಗಮಿಸಿದರು. ಬಿಜೆಪಿ ಮುಖಂಡರು, ಶಾಸಕರು ಬಸ್ ಗಳ ವ್ಯವಸ್ಥೆ ಮಾಡಿದ್ದು, ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಮಹಾಸಂಗಮಕ್ಕೆ ಬಂದರು. ಸಾವಿರಾರು ಬಸ್ ಗಳಲ್ಲಿ ಜನರು ಆಗಮಿಸಿದ್ದು, ಐದು ಸಾವಿರ ಬಸ್ ಗಳ ಮೂಲಕ ಕರೆತರಲಾಯಿತು.
Mar 25, 2023, 3:31 pm IST

ದಾವಣಗೆರೆ ಕೇಸರಿಮಯಾ

ದಾವಣಗೆರೆಯ ಪಿ. ಬಿ. ರಸ್ತೆಯಿಂದ ಸುಮಾರು ಆರೇಳು ಕಿಲೋಮೀಟರ್ ವರೆಗೆ ಬಿಜೆಪಿ ಬಾವುಟಗಳು, ಫ್ಲೆಕ್ಸ್, ಬಂಟಿಂಗ್ಸ್, ಕೇಸರಿ ಧ್ವಜಗಳನ್ನು ಕಟ್ಟಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿಯೂ ಬಾವುಟಗಳನ್ನು ಕಟ್ಟಲಾಗಿತ್ತು. ನರೇಂದ್ರ ಮೋದಿ ಅವರ ಭಾವಚಿತ್ರಗಳು ಕಣ್ಣಿಗೆ ರಾಚುತ್ತಿದ್ದವು.
Mar 25, 2023, 3:30 pm IST

ಬೆಣ್ಣೆನಗರಿಯಲ್ಲಿ ಮೋದಿ ಮೇನಿಯಾ

ಮುಂಬರುವ ವಿಧಾನಸಭಾ ಚುನಾವಣೆಗೆ ದಾವಣಗೆರೆಯಿಂದ ರಣಕಹಳೆ ಊದಿದ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ವಿಶ್ವ ಮೆಚ್ಚಿದ ನಾಯಕನನ್ನು ನೋಡಲು ಬಂದಿದ್ದ ಜನರತ್ತ ಕೈಬೀಸಿ ಮೋದಿ ಧನ್ಯವಾದ ಸಲ್ಲಿಸಿದರು. ಈ ವೇಳೆ ಬಿಜೆಪಿ ಮುಖಂಡರು ಸೇರಿದಂತೆ ನೂರು ಕಾರ್ಯಕರ್ತರು ಸ್ವಾಗತ ಕೋರಿದರು. ಅಲ್ಲಿಂದ ಮಹಾಸಂಗಮ ನಡೆಯುವ ಸ್ಥಳಕ್ಕೆ ಬಿಗಿ ಭದ್ರತೆಯಲ್ಲಿ ಕಾರಿನಿಂದ ತೆರಳಿದ ಮೋದಿ ಅವರು, ಪೆಂಡಾಲ್ ಹಾಕಿದ್ದ ಸ್ಥಳದಿಂದ ವಿಶೇಷ ವಾಹನದಲ್ಲಿ ವೇದಿಕೆಯವರೆಗೆ ಜನರಿಗೆ ಕೈ ಬೀಸುತ್ತಾ ಆಗಮಿಸಿದರು. ಈ ವೇಳೆ ಹೂವಿನಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಮೋದಿ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು. ಹೂವು ಸಿಂಪಡಿಸಿ ಅದ್ಧೂರಿ ಸ್ವಾಗತ ಕೋರಲಾಯಿತು.
Mar 25, 2023, 3:29 pm IST

ಮೋದಿ ನೋಡಲು ನೆರೆದ ಜನಸಾಗರ

ದಾವಣಗೆರೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಸಮಾರೋಪ ಸಮಾರಂಭ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆರೆದ ವಾಹನದಲ್ಲಿ ಆಗಮಿಸಿದರು. ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ದಾವಣಗೆರೆಯಲ್ಲಿ ಜನಸಾಗರವೇ ನೆರೆದಿದೆ.
Mar 25, 2023, 2:21 pm IST

ದಾವಣಗೆರೆಯಲ್ಲಿ ಜನರ ನಡುವೆ ಮೋದಿ 3 ಸುತ್ತು ರೋಡ್ ಶೋ

ಮಹಾಸಂಗಮ ಸಮಾರಂಭಕ್ಕೆ ಮೋದಿ ಅದ್ಧೂರಿ ಎಂಟ್ರಿಗೆ ಯೋಜನೆ ಮಾಡಲಾಗಿದೆ. ದಾವಣಗೆರೆಯ ಜಿಎಂಐಟಿ ಕಾಲೇಜು ಪಕ್ಕದ ಮೈದಾನದಲ್ಲಿ ವಿಜಯ ಸಂಕಲ್ಪ ನಾಲ್ಕು ಯಾತ್ರೆಗಳ ಸಮಾರೋಪ ಸಮಾರಂಭ ನಡೆಯಲಿದೆ. ಈ ವೇದಿಕೆಗೆ ಆಗಮನಕ್ಕೂ ಮುನ್ನ ಮೋದಿ ಜನರ ನಡುವೆ ಮೂರು ಸುತ್ತು ರೋಡ್ ಶೋ ನಡೆಸಲಿದ್ದಾರೆ.
Mar 25, 2023, 2:19 pm IST

ದಾವಣಗೆರೆಯಲ್ಲಿ ಮೋದಿಗೆ ಬೆಳ್ಳಿ ಇಟ್ಟಿಗೆ ಉಡುಗೊರೆ

ದಾವಣಗೆರೆಗೆ ಮೋದಿ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ದಾವಣಗೆರೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಹದಿನೈದು ಕೆಜಿಯ ಬೆಳ್ಳಿ ಇಟ್ಟಿಗೆಯ ಉಡುಗೊರೆ ನೀಡಲಾಗುತ್ತದೆ. ರಾಮನ ಮೂರ್ತಿ, ರಾಮ ಮಂದಿರ ಕೆತ್ತನೆ ಈ ಇಟ್ಟಿಗೆಯ ಮೇಲಿದೆ. ಕಮಲದ ಚಿತ್ರ ಇದರ ಮೇಲಿದೆ. ಜೈ ಶ್ರೀರಾಮ ಬರಹವನ್ನು ಈ ಇಟ್ಟಿಗೆ ಹೊಂದಿದೆ. ಈಗಾಗಲೇ ಪೆಶಾವರ ಶ್ರೀಗಳು ಈ ಇಟ್ಟಿಗೆಗೆ ಪೂಜೆಯನ್ನು ಸಲ್ಲಿಸಿದ್ದಾರೆ. 1990 ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟದ ವೇಳೆ ಪ್ರಾಣ ತ್ಯಾಗ ಮಾಡಿದ ಎಂಟು ಹುತಾತ್ಮರ ಹೆಸರು ಬರೆಯಲಾಗಿದೆ. ಜಿಲ್ಲಾ ಬಿಜೆಪಿ ಘಟಕದಿಂದ ಈ ಉಡುಗೊರೆಯನ್ನು ನೀಡಲಾಗುತ್ತಿದೆ.
Mar 25, 2023, 2:11 pm IST

ದಾವಣಗೆರೆಗೆ ಮೋದಿ: ಊಟದ ವ್ಯವಸ್ಥೆ ಹೇಗಿದೆ?

ಮೂರು ಪೆಂಡಲ್ನಲ್ಲಿ ಆರು ನೂರು ಕೌಂಟರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬಂದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಊಟಕ್ಕಾಗಿ ಗೋದಿ ಪಾಯಿಸಾ, ಮೊಸರನ್ನ, ಮಜ್ಜಿಗೆ, ಪಲಾವ್, ಚಿತ್ರನ್ನದ ವ್ಯವಸ್ಥೆ ಮಾಡಲಾಗಿದೆ. ಊಟಕ್ಕಾಗಿ ಮುಗಿ ಬಿದ್ದಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಜನ ಸಮಾರಂಭಕ್ಕೆ ಆಗಮಿಸಿದ್ದಾರೆ. ನೂರಾರು ಬಾಣಸಿಗರು ನಿನ್ನೆ ರಾತ್ರಿಯಿಂದಲೇ ಅಡುಗೆ ವ್ಯವಸ್ಥೆ ಮಾಡಿದ್ದಾರೆ.
Mar 25, 2023, 2:04 pm IST

ದಾವಣಗೆರೆಯಲ್ಲಿ ಬಿಜೆಪಿ ಮಹಾಸಂಗಮಕ್ಕೆ ಆಗಮಿಸಿದ ಲಕ್ಷ ಲಕ್ಷ ಜನ

ಬೆಂಗಳೂರು ವೈಟ್‌ಫೀಲ್ಡ್‌ನಿಂದ ಬೆಣ್ಣೆ ನಗರಿ ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ವಾಯುಸೇನೆ ಹೆಲಿಕಾಪ್ಟರ್‌ ಮೂಲಕ ಆಗಮಿಸುತ್ತಿದ್ದಾರೆ. ದಾವಣಗೆರೆಯ ಜಿಎಂಐಟಿ ಕಾಲೇಜು ಪಕ್ಕದ ಮೈದಾನದಲ್ಲಿ ವಿಜಯ ಸಂಕಲ್ಪ ನಾಲ್ಕು ಯಾತ್ರೆಗಳ ಸಮಾರೋಪ ಸಮಾರಂಭ ನಡೆಯಲಿದೆ. ಲಕ್ಷಾಂತರ ಜನ ಮೋದಿ ಅವರನ್ನು ನೋಡಲು ದಾವಣಗೆರೆಯಲ್ಲಿ ನೆರೆದಿದ್ದಾರೆ. ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿ ಎಲ್ಲಾ ಜಿಲ್ಲೆಗಳಿಂದ ಲಕ್ಷಾಂತರ ಜನ ಆಗಮಿಸುತ್ತಿದ್ದಾರೆ. ಸಾವಿರಾರು ಬಸ್‌ನಲ್ಲಿ ಸುಮಾರು ಆರು ಲಕ್ಷ ಜನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಬೇರೆ ಬೇರೆ ಕಲಾ ತಂಡಗಳು ಸ್ಥಳದಲ್ಲಿ ಭಾಗವಹಿಸಿವೆ. ಜೊತೆಗೆ ಫ್ಲೆಕ್ಸ್, ಕಟೌಟ್, ಬಿಜೆಪಿ ಫ್ಲಾಗ್‌ಗಳು ರಾರಾಜಿಸುತ್ತಿವೆ. ಉತ್ಸಾಹದಿಂದ ಜನ ಭಾಗವಹಿಸುತ್ತಿದ್ದಾರೆ. ಶಾಸಕರು, ಸಂಸದರು ಸಮಾರಮಭದಲ್ಲಿ ಪಾಲ್ಗೊಳ್ಳಲಿದ್ದಾರೆ.
Mar 25, 2023, 1:38 pm IST

ಮಕ್ಕಳು, ಸಿಬ್ಬಂದಿಯೊಂದಿಗೆ ಮೆಟ್ರೋದಲ್ಲಿ ಮೋದಿ ಪ್ರಯಾಣ

ಬೆಂಗಳೂರನ ವೈಟ್‌ಫೀಲ್ಡ್‌ - ಕೆಆರ್‌ಪುರಂ ಮೆಟ್ರೋ ಮಾರ್ಗ ಉದ್ಘಾಟನೆ ಬಳಿಕ ನಾಲ್ಕು ಕಿ.ಮೀ ವರೆಗೂ ಮೋದಿ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಮೆಟ್ರೋದಲ್ಲಿ ಸಿಬ್ಬಂದಿಗಳು, ಮಕ್ಕಳು, ವಿದ್ಯಾರ್ಥಿಗಳು ಮೋದಿ ಅವರೊಂದಿಗೆ ಪ್ರಯಾಣ ಮಾಡಿದರು. ಸಿಬ್ಬಂದಿಗಳೊಂದಿಗೆ ಮೋದಿ ಅವರು ಮಾತನಾಡುತ್ತಾ ಮೆಟ್ರೋದಲ್ಲಿ ಪ್ರಯಾಣ ಮಾಡಿದರು.
Mar 25, 2023, 1:33 pm IST

ವೈಟ್‌ಫೀಲ್ಡ್‌ - ಕೆಆರ್‌ಪುರಂ ಮೆಟ್ರೋ ಮಾರ್ಗ ಉದ್ಘಾಟಿಸಿದ ಮೋದಿ

ಬೆಂಗಳೂರನ ವೈಟ್‌ಫೀಲ್ಡ್‌ - ಕೆಆರ್‌ಪುರಂ ಮೆಟ್ರೋ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. 4,500 ಕೋಟಿ ವೆಚ್ಚದ ಮಾರ್ಗ ಇದಾಗಿದೆ.
Mar 25, 2023, 1:16 pm IST

'ಹಗಲು ರಾತ್ರಿ ದುಡಿ ಸರ್ಕಾರಕ್ಕೆ ಕೊಡಿ' ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿದೆ. ರಾಜ್ಯಕ್ಕೆ ಮೋದಿ ಭೇಟಿ ಬೆನ್ನಲ್ಲೆ ಕಾಂಗ್ರೆಸ್ ಟ್ವೀಟಾಸ್ತ್ರ ಪ್ರಾರಂಭಿಸಿದೆ. "ಹಗಲು ರಾತ್ರಿ ದುಡಿ ಸರ್ಕಾರಕ್ಕೆ ಕೊಡಿ ಸಂಸಾರ ಬದುಕು ಬಿಡಿ" ಇದು ಜನಸಾಮಾನ್ಯರ ದುಃಸ್ಥಿತಿ! ರಾಜ್ಯದ ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ ಅವರದ್ದೇ ಕಾರ್ಯಕರ್ತರು ಬೆಲೆ ಏರಿಕೆಯ ಬಗ್ಗೆ ಛಿಮಾರಿ ಹಾಕುತ್ತಿದ್ದಾರೆ. @narendramodi ಅವರ ಅಮೃತ ಕಾಲವು ಬಡ ಭಾರತೀಯರಿಗೆ ಅಪತ್ಕಾಲವಾಗಿದೆ! ಎಂದು ಕಾಂಗ್ರೆಸ್ ಕಿಡಿ ಕಾರಿದೆ.
Mar 25, 2023, 1:09 pm IST

13.71 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಉದ್ಘಾಟನೆ

13.71 ಕಿ.ಮೀ. ಉದ್ದದ ವೈಟ್‌ಫೀಲ್ಡ್‌ - ಕೆಆರ್‌ಪುರ ಮಾರ್ಗದ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಮೂಲಕ ನಮ್ಮ ಮಟ್ರೋ ಸಂಚಾರ ಮಾರ್ಗದ ಉದ್ದ 69.71 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಸದ್ಯ 56 ಕಿ.ಮೀ. ಮಾರ್ಗದಲ್ಲಿ ಮೆಟ್ರೋ ಕ್ರಮಿಸುತ್ತಿದೆ.
Mar 25, 2023, 1:07 pm IST

ದೇಶದ ಎರಡನೇ ಅತಿ ದೂರ ಕ್ರಮಿಸುವ 'ನಮ್ಮ ಮೆಟ್ರೋ'

ದಿಲ್ಲಿ ಮೆಟ್ರೋ ಪ್ರಸ್ತುತ 390 ಕಿ.ಮೀ. ಸಂಚಾರ ಮಾರ್ಗ ಹೊಂದಿದ್ದು, ದೇಶದಲ್ಲಿಯೇ ನಂಬರ್‌ ಒನ್‌ ಸ್ಥಾನದಲ್ಲಿದೆ. ನಮ್ಮ ಮೆಟ್ರೋ ಇಂದು (ಮಾ.25) ಇನ್ನಷ್ಟು ದೂರ ಕ್ರಮಿಸಲಿದ್ದು, ದೇಶದ ಎರಡನೇ ಅತಿ ದೂರ ಕ್ರಮಿಸುವ ಮೆಟ್ರೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯ 69.2 ಕಿ.ಮೀ. ಸಂಚಾರ ಮಾಡುತ್ತಿರುವ ಹೈದರಾಬಾದ್‌ ಮೆಟ್ರೋ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಗ್ಗಲಿದೆ.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+