ಪ್ರಧಾನಿ ನರೇಂದ್ರ ಮೋದಿ ಮೆಂಟಲಿ ವೀಕ್ ಇದ್ದಾರೆ ಎಂದ ಅಬಕಾರಿ ಸಚಿವ ತಿಮ್ಮಾಪುರ
ಬೆಂಗಳೂರು, ಜೂನ್ 26: ಪ್ರಧಾನಿ ನರೇಂದ್ರ ಮೋದಿ ಅವರು ಮೆಂಟಲಿ ವೀಕ್ ಇದ್ದಾರೆ. ದೇಶದಲ್ಲಿ ಅವರೊಬ್ಬರೇ ದುರ್ಬಲ ಪ್ರಧಾನಿಯಾಗಿದ್ದಾರೆ ಎಂದು ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ಹೇಳಿದ್ದಾರೆ.
ದೇಶದಲ್ಲಿ ಇಷ್ಟೊಂದು ದುರ್ಬಲ ಪ್ರಧಾನಿ ಮೋದಿ ಅವರೊಬ್ಬರೆ ಎಂದ ಅವರು ಮೋದಿ ಯಾವತ್ತಾದರೂ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಿದ್ದಾರಾ? ಪ್ರೆಸ್ ಮೀಟ್ ಮಾಡಿದ್ದಾರಾ? ಯಾಕೆಂದರೆ ಅವರಿಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡುವ ಶಕ್ತಿ ಇಲ್ಲ ಎಂದು ಹೇಳಿದ್ದಾರೆ.

ಮೋದಿ ಅವರ ಇಮೇಜ್ ಡೆವಲಪ್ ಮಾಡಲು ಕಸರತ್ತು ನಡೆಯುತ್ತಲೇ ಇದೆ, ಆದರೆ ಅವರ ಇಮೇಜ್ ಬಹಳ ಕುಗ್ಗಿದೆ. ಇದು ಕರ್ನಾಟಕದ ಬಿಜೆಪಿಯವರಿಗೆ ಇನ್ನೂ ಗೊತ್ತಾಗುತ್ತಿಲ್ಲ. ಯಾವಾಗ ಬಡವರ ಅನ್ನಕ್ಕೆ ಕನ್ನ ಹಾಕಿದರೂ, ಯಾವಾಗ ಬಡವರ ಅನ್ನಕ್ಕೆ ತಡೆಯೊಡ್ಡಿದರೂ, ಯಾವಾಗ ಅಂಬಾನಿ, ಅದಾನಿ ಸಾಲ ಮನ್ನಾ ಆಯಿತು. ಚೀನಾ ನಮ್ಮ ಅಕ್ರಮಣ ಮಾಡಿದಾಗಲೇ ಅವರ ಇಮೇಜ್ ಕುಸಿಯುತ್ತಾ ಬಂದಿತು. ಈ ಚುನಾವಣೆಯಲ್ಲಿ ಅವರು ಎಷ್ಟು ಓಡಾಡಿದರು. ಆದರೆ ಕೊನೆ ಏನಾಯಿತು ನೀವು ನೋಡಬಹುದು ಎಂದು ಹೇಳಿದರು.
ಇನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ಕೂಡ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು, ಮೋದಿ ಅವರು ಇನ್ನು ಎಷ್ಟು ದಿನ ಅಂತ ಈ ದೇಶದ ಜನತೆ ಸುಳ್ಳು ಹೇಳುತ್ತಾರೆ. ಎಲ್ಲೆಲ್ಲಿ ಮೋದಿ ಅವರು ಭಾಷಣ ಮಾಡಿ ಹೋಗಿದ್ದಾರೋ ಅಲ್ಲೆಲ್ಲ ಕಾಂಗ್ರೆಸ್ ಪಕ್ಷ ಜಯ ಗಳಿಸಿದ. ಅವರದು ಐರನ್ ಲೆಗ್. ಅದು ಸಿಂಧನೂರು ಬಂದರು. ನಾವು ರಾಯಚೂರು ಮತ್ತು ಕೊಪ್ಪಳ ಎರಡು ಜಿಲ್ಲೆಗಳನ್ನು ಗೆದ್ದೆವು. ಮೋದಿ ಚಿತ್ರದುರ್ಗಕ್ಕೂ ಹೋದರು ಅಲ್ಲೂ ನಾವು ಗೆಲುವು ಸಾಧಿಸಿದೆವು ಎಂದು ಹೇಳಿದರು.
ಅವರೂ ಬಳ್ಳಾರಿಗೂ ಹೋಗಿ ಪ್ರಚಾರ ಮಾಡಿದರೂ ಆದರೆ ಅಲ್ಲೂ ನಾವು ಪೂರ್ಣ ಗೆದ್ದೆವು. ಕಲಬುರಗಿ, ಹೈದರಾಬಾದ್ ಕರ್ನಾಟಕ, ಮೈಸೂರು, ದಾವಣಗೆರೆ ಇಲ್ಲೆಲ್ಲಾ ಅವರು ಹೋಗಿದ್ದರು. ಆದರೆ ಅಲ್ಲೆಲ್ಲಾ ನಾವು ಗೆಲುವು ಕಂಡಿದ್ದೇವೆ, ಕಳೆದ 9 ವರ್ಷಗಳಿಂದ ಅವರು ಸುಳ್ಳನ್ನೇ ಸತ್ಯವೆಂದು ಹೇಳುತ್ತಾ ಬಂದಿದ್ದಾರೆ. ಚುನಾವಣೆಯಲ್ಲಿ ಚಾಣಕ್ಯನ ತಂತ್ರ ಏನಾಯಿತು. ಬಹಳಷ್ಟು ದಿನ ಇದೆಲ್ಲಾ ನಡೆಯಲ್ಲ ಎಂದರು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications