ಕವಿತೆಯ ಕೊಲ್ಲುವ ಯತ್ನ: ಮರುಹುಟ್ಟು ಪಡೆಯುತ್ತಲೇ ಇದೆ ಕವಿತೆ
'ಕವಿಯ ಕೊಲ್ಲಬಹುದು, ಕವಿತೆಯ ಕೊಲ್ಲಲಾಗುವುದೇ?', ಸರ್ಕಾರದ ಕಾಲಾಳುಗಳು ಕವಿಯ ಮೇಲೆ ಕೇಸು ದಾಖಲಿಸಿ ಕವಿತೆಯನ್ನು ಕೊಲ್ಲುವ ಯತ್ನ ಮಾಡಿದರು. ಆದರೆ ಕವಿತೆಯನ್ನು 'ಜಪ್ತಿ' ಮಾಡಲು ಸಾಧ್ಯವಾಗಲಿಲ್ಲ. ಕವಿಯ ಕವಿತೆ ಮರುಹುಟ್ಟು ಪಡೆಯುತ್ತಲೇ ಇದೆ.
ಸಿಎಎ-ಎನ್ಆರ್ಸಿ ವಿರುದ್ಧ ಕವಿತೆ ಬರೆದ ಕೊಪ್ಪಳದ ಪರ್ತಕರ್ತ, ಕವಿ ಸಿರಾಜ್ ಬಿಸರಳ್ಳಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಆದರೆ ಸಿರಾಜ್ ಬರೆದಿದ್ದ ಕವಿತೆ ಎರಡೇ ದಿನದಲ್ಲಿ ಹನ್ನೆರಡು ಭಾಷೆಗಳಿಗೆ ತರ್ಜುಮೆಗೊಂಡಿದೆ. ಹೆಚ್ಚು-ಹೆಚ್ಚು ಓದುಗರನ್ನು ತಲುಪುತ್ತಿದೆ. ಕವಿಯ ಉಮೇದು ಪೂರ್ತಿಯಾಗುತ್ತಿದೆ.
ಸಿರಾಜ್ ಅವರ 'ನಿನ್ನ ದಾಖಲೆ ಯಾವಾಗ ನೀಡುತ್ತಿ?' ಕವನವನ್ನು ಕಾದಂಬಿನಿಯವರು ಹಿಂದಿಗೆ ಅನುವಾದ ಮಾಡಿದ್ದಾರೆ. ಗುರು ಸುಳ್ಯ ತುಳುವಿಗೆ, ವಿಲ್ಸನ್ ಕಟಿಲ್ ಕೊಂಕಣಿಗೆ, ಪದ್ಮಾ ಕೆ ರಾಜ್ ತೆಲುಗಿಗೆ, ಜಿಶನ್ ಅಲ್ ಸಿದ್ಧಿಕಿ ಉರ್ದುವಿಗೆ, ಉಮ್ಮರ್ ಬೋರ್ಕಳ ಮಲಯಾಳಂ ಗೆ, ಮಿಸ್ರಿಯಾ ಇಸ್ಮತ್ ಪಜೀರ್ ಅವರು ಮಲಾಮೆ ಭಾಷೆಗೆ, ನಾಚಪ್ಪ ಹಣಸೂರು ಕೂರ್ಗಿ ಭಾಷೆಗೆ, ಸುರೇಶ್ ಚೌವ್ಹಾಣ್ ಅವರು ಲಂಬಾಣಿ ಭಾಷೆಗೆ, ಇಸ್ಮತ್ ಪಜೀರ್ ಅವರು ಬ್ಯಾರಿ ಭಾಷೆಗೆ ಅನುವಾದಿಸಿದ್ದಾರೆ. ಇಂಗ್ಲಿಷ್, ತಮಿಳು ಭಾಷೆಗೂ ಕವಿತೆ ಅನುವಾದಗೊಂಡಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ 12 ಭಾಷೆಗಳಿಗೆ ತರ್ಜುಮೆಗೊಂಡಿರುವ 'ನಿನ್ನ ದಾಖಲೆ ಯಾವಾಗ ನೀಡುತ್ತಿ' ಕವಿತೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳಿಗೆ ತರ್ಜುಮೆಗೊಳ್ಳುವ ಸಾಧ್ಯತೆ ಇದೆ.
ಆಳುವ ಜನರನ್ನು ಪ್ರಶ್ನಿಸುವ 'ನಿನ್ನ ದಾಖಲೆ ಯಾವಾಗ ನೀಡುತ್ತಿ' ಕವಿತೆಯು 'ದೇಶದ್ರೋಹಿ' ಎಂದು ಕೊಪ್ಪಳದ ಗಂಗಾವತಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕವಿತೆಯ, ಕವಿಯ ವಿರುದ್ಧ ದೂರು ದಾಖಲಿಸಿ 'ನಿಯಂತ್ರಿಸುವ' ಸರ್ಕಾರದ ಕಾಲಾಳುಗಳ ಹುನ್ನಾರದ ವಿರುದ್ಧ ಕವಿಗಳು ಸಾತ್ವಿಕ ಪ್ರತಿಭಟನೆಯಾಗಿ ಕವಿತೆಯನ್ನು ಹೆಚ್ಚು ಭಾಷೆಗಳಿಗೆ ಆ ಮೂಲಕ ಹೆಚ್ಚು ಓದುಗರಿಗೆ ತಲುಪಿಸುತ್ತಿದ್ದಾರೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications