Live

PM Modi in Dharwad Live: ಅವಳಿ ನಗರದಲ್ಲಿ ಮೋದಿ ಹವಾ, ಧಾರವಾಡ ಪೇಡಾವನ್ನು ಹೊಗಳಿದ ಮೋದಿ

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಮತದಾರರ ಮನಗೆಲ್ಲಲು ರಾಜ್ಯ ಭೇಟಿ ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಇಂದು (ಮಾರ್ಚ್ 12) ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮೋದಿ ಅವರು ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಭೇಟಿ ನೀಡಲಿದ್ದಾರೆ.

ಮುಖ್ಯವಾಗಿ ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇ ಉದ್ಘಾಟನೆ ಸೇರಿದಂತೆ ಸುಮಾರು 16,000 ಕೋಟಿ ರೂ. ಮೌಲ್ಯದ ಯೋಜನೆಗಳ ಲೋಕಾರ್ಪಣೆ ಮಾಡಲಿದ್ದಾರೆ. ಮೈಸೂರು-ಕುಶಾಲನಗರ 4 ಲೇನ್ ಹೆದ್ದಾರಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಲಿದ್ದು ಮೋದಿ ಆಗಮನದ ಹಿನ್ನಲೆಯಲ್ಲಿ ಸಕ್ಕರೆ ನಾಡು ಮಂಡ್ಯ ಕೇಸರಿಮಯವಾಗಿದೆ.

PM Modi Karnataka Visit Live Updates; PM to Visit Mandya, Dharwad Districts News & Highlights

ಮಂಡ್ಯ ಭೇಟಿ ನಂತರ ಧಾರವಾಡಕ್ಕೆ ತೆರಳಲಿರುವ ಪ್ರಧಾನಿಮೋದಿ ಅವರು, 5 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:15ರ ಸುಮಾರಿಗೆ ಧಾರವಾಡದಲ್ಲಿ ಐಐಟಿ ಕಟ್ಟಡ, ಜಲಜೀವನ ಯೋಜನೆ, ಜಯದೇವ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Mar 25, 2023, 3:27 pm IST

ಬೆಣ್ಣೆನಗರಿಯಲ್ಲಿ ಮೋದಿ ಮೇನಿಯಾ

ಮುಂಬರುವ ವಿಧಾನಸಭಾ ಚುನಾವಣೆಗೆ ದಾವಣಗೆರೆಯಿಂದ ರಣಕಹಳೆ ಊದಿದ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ವಿಶ್ವ ಮೆಚ್ಚಿದ ನಾಯಕನನ್ನು ನೋಡಲು ಬಂದಿದ್ದ ಜನರತ್ತ ಕೈಬೀಸಿ ಮೋದಿ ಧನ್ಯವಾದ ಸಲ್ಲಿಸಿದರು. ಈ ವೇಳೆ ಬಿಜೆಪಿ ಮುಖಂಡರು ಸೇರಿದಂತೆ ನೂರು ಕಾರ್ಯಕರ್ತರು ಸ್ವಾಗತ ಕೋರಿದರು. ಅಲ್ಲಿಂದ ಮಹಾಸಂಗಮ ನಡೆಯುವ ಸ್ಥಳಕ್ಕೆ ಬಿಗಿ ಭದ್ರತೆಯಲ್ಲಿ ಕಾರಿನಿಂದ ತೆರಳಿದ ಮೋದಿ ಅವರು, ಪೆಂಡಾಲ್ ಹಾಕಿದ್ದ ಸ್ಥಳದಿಂದ ವಿಶೇಷ ವಾಹನದಲ್ಲಿ ವೇದಿಕೆಯವರೆಗೆ ಜನರಿಗೆ ಕೈ ಬೀಸುತ್ತಾ ಆಗಮಿಸಿದರು. ಈ ವೇಳೆ ಹೂವಿನಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಮೋದಿ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು. ಹೂವು ಸಿಂಪಡಿಸಿ ಅದ್ಧೂರಿ ಸ್ವಾಗತ ಕೋರಲಾಯಿತು.
Mar 25, 2023, 3:25 pm IST

ಮೋದಿ ನೋಡಲು ನೆರೆದ ಜನಸಾಗರ

ದಾವಣಗೆರೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಸಮಾರೋಪ ಸಮಾರಂಭ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆರೆದ ವಾಹನದಲ್ಲಿ ಆಗಮಿಸಿದರು. ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ದಾವಣಗೆರೆಯಲ್ಲಿ ಜನಸಾಗರವೇ ನೆರೆದಿದೆ.
Mar 25, 2023, 3:18 pm IST

ವಿಜಯ ಸಂಕಲ್ಪ ಯಾತ್ರೆ ಮಹಾಸಂಗಾಮ

ವಿಜಯ ಸಂಕಲ್ಪ ಯಾತ್ರೆ ಮಹಾಸಂಗಾಮ ಸಮಾರೋಮ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಿಟಿ ರವಿ, ಶ್ರೀರಾಮುಲು, ಬಿಎಸ್‌ ಯಡಿಯೂರಪ್ಪ, ನಳಿನ್ ಕುಮಾರ್ ಕಟಿಲ್ ಹಾಗೂ ಬಸವರಾಜ್ ಬೊಮ್ಮಾಯಿ ಉಪಸ್ಥಿತರಿರಲಿದ್ದಾರೆ.
Mar 12, 2023, 5:40 pm IST

'ನಾವು ಮಹತ್ತರವಾದುದನ್ನು ಸಾಧಿಸಿ ತೋರಿಸಬಲ್ಲೆವು' ಮೋದಿ

ಸಿದ್ದರೂಢ ಸ್ವಾಮಿ ರೈಲ್ವೆ ಸ್ಟೇಶನ್‌ ಕೇವಲ ಜಗತ್ತಿನ ಅತಿ ಉದ್ದದ ಪ್ಲಾಟ್‌ಫಾರ್ಮ್‌ ಮಾತ್ರವಲ್ಲ. ಇದು ಉನ್ನತವಾಗಿದ್ದನ್ನು ಸಾಧಿಸುವ ನಮ್ಮ ಚಿಂತನೆಯ ಕುರುಹಾಗಿದೆ. ಮೂಲಸೌಕರ್ಯ ಒದಗಿಸುವಲ್ಲಿ ನಾವು ಮಹತ್ತರವಾದುದನ್ನು ಸಾಧಿಸಿ ತೋರಿಸಬಲ್ಲೆವು ಎಂಬುದರ ಸೂಚಕವಾಗಿದೆ ಎಮದು ಮೋದಿ ಹೇಳಿದರು.
Mar 12, 2023, 5:38 pm IST

ಡಬಲ್‌ ಎಂಜಿನ್‌ ಸರ್ಕಾರವನ್ನು ಹೊಗಳಿದ ಮೋದಿ

ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಅನೇಕ ಐಐಎಮ್‌ಗಳನ್ನು ತೆರೆಯಲಾಯಿತು. 7 ವಿಶ್ವವಿದ್ಯಾಲಯಗಳನ್ನು ಮಾಡಲಾಯಿತು. ಇಡೀ ಕರ್ನಾಟಕದಲ್ಲಿ ಜಯದೇವ ಸಂಶೋಧನಾ ಕೇಂದ್ರದ ಬಗ್ಗೆ ಉತ್ತಮ ಮಾತುಗಳಾಡಲಾಗುತ್ತದೆ. ಧಾರವಾಡದಲ್ಲಿ ಇಂದು ಜಯದೇವ ಸಂಶೋಧನಾ ಕೇಂದ್ರದ ಉದ್ಘಾಟನೆಯೂ ಆಯಿತು. ಇದರಿಂದ ಜನರಿಗೆ ಬಹಳ ಉಪಯೋಗವಾಗಲಿದೆ. ಶಿಲಾನ್ಯಾಸದಿಂದ ಲೋಕಾರ್ಪಣೆಯವರೆಗೂ ಡಬಲ್‌ ಎಂಜಿನ್‌ ಸರ್ಕಾರ ಇಷ್ಟೇ ವೇಗವಾಗಿ ಕೆಲಸ ಮಾಡುತ್ತದೆ. ಯಾರೋ ಶಿಲಾನ್ಯಾಸ ಮಾಡುವುದು, ಇನ್ಯಾರೋ ಲೋಕಾರ್ಪಣೆ ಮಾಡುವ ಕಾಲ ಹೊರಟು ಹೋಯಿತು. ನಾವೇ ಶಿಲಾನ್ಯಾಸ ಮಾಡುವುದು, ನಾವೇ ಲೋಕಾರ್ಪಣೆ ಮಾಡುವುದು ಇದು ಡಬಲ್‌ ಎಂಜಿನ್‌ ಸರ್ಕಾರದ ಸ್ಟೈಲ್ ಎಂದರು.
Mar 12, 2023, 5:37 pm IST

ಕರ್ನಾಟಕದ ಪ್ರಗತಿಗೆ ದೊಡ್ಡ ಕಾಣಿಕೆ ಬಿಜೆಪಿ ನೀಡಿದೆ- ಮೋದಿ

ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಉದ್ಘಾಟನೆ, ಶಿವಮೊಗ್ಗದಲ್ಲಿ ಕುವೆಂಪು ವಿಮಾನ ನಿಲ್ದಾಣ, ಈಗ ಧಾರವಾಡದಲ್ಲಿ ಐಐಟಿ. ಇವೆಲ್ಲ ಕರ್ನಾಟಕದ ಪ್ರಗತಿಗೆ ದೊಡ್ಡ ಕಾಣಿಕೆ ನೀಡಲಿವೆ. ಇವು ಬಿಜೆಪಿ ಸರ್ಕಾರದ ಸಂಕಲ್ಪ ಸೇ ಸಿದ್ಧಿಯ ಉದಾಹರಣೆ. ಧಾರವಾಡದ ಮಣ್ಣು ಸಂಗೀತಮಯವಾಗಿದೆ. ಈ ನೆಲವು ಅನೇಕ ಸಂಗೀತ ವಿದ್ವಾಂಸರ ನೀಡಿದೆ. ಪಂಡಿತ್‌ ಭೀಮಸೇನ್‌ ಜೋಷಿ, ಗಂಗೂಬಾಯಿ ಹಾನಗಲ್‌, ಬಸವರಾಜ ರಾಜಗುರು, ಮಲ್ಲಿಕಾರ್ಜುನ್‌ ಮನ್ಸೂರ್‌ರಂಥ ಸಂಗೀತರತ್ನರನ್ನು ನೀಡಿದೆ ಎಂದರು.
Mar 12, 2023, 5:36 pm IST

'ಧಾರವಾಡ ಬಯಲು ಸೀಮೆ ಮಲೆನಾಡಿನ ಗೇಟ್‌ ವೇಯಂತಿದೆ'

ಇಂದು ಧಾರವಾಡದ ಈ ನೆಲದಲ್ಲಿ ವಿಕಾಸದ ಹೊಸ ಪಥ ತೆರೆದುಕೊಂಡಿದೆ. ಧಾರವಾಡ ಬಯಲು ಸೀಮೆ ಹಾಗೂ ಮಲೆನಾಡಿನ ಗೇಟ್‌ ವೇಯಂತಿದೆ. ಈ ನಾಡು ಎಲ್ಲರನ್ನೂ ತೆರೆದ ಬಾಹುವಿನಿಂದ ಸ್ವಾಗತಿಸಿತು. ಎಲ್ಲರ ಬೆಳವಣಿಗೆಗೂ ಸಹಕರಿಸಿತು. ಹೀಗಾಗಿ ಧಾರವಾಡ ಕೇವಲ ಕರ್ನಾಟಕದ್ದಷ್ಟೇ ಅಲ್ಲ ಭಾರತದ ಜೀವಂತಿಕೆಯ ಕುರುಹಿನಂತಿದೆ ಎಂದರು ಮೋದಿ.
Mar 12, 2023, 5:35 pm IST

'ಕನ್ನಡನಾಡಿನ ಸ್ನೇಹದ ಋಣ ನನ್ನ ಮೇಲಿದೆ'

ಕಲೆ ಸಾಹಿತ್ಯ ಸಂಸ್ಕೃತಿಯ ಈ ನಾಡಿನ ಕರ್ನಾಟಕದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ನಮನಗಳು. ನಿಮ್ಮೆಲ್ಲರ ಈ ಪ್ರೀತಿ ಆಶೀರ್ವಾದವನ್ನು ನನಗೆ ಮರೆಯಲು ಸಾಧ್ಯವೇ ಇಲ್ಲ. ಕನ್ನಡನಾಡಿನ ಮೂಲೆ ಮೂಲೆಯಿಂದ ನೀವೆಲ್ಲ ತೋರುತ್ತಿರುವ ಸ್ನೇಹದ ಋಣ ನನ್ನ ಮೇಲಿದೆ. ಆ ಋಣವನ್ನು ಕನ್ನಡಿಗರ ಸೇವೆ ಮಾಡಿ ತೀರಿಸುತ್ತೇನೆ ಎಂದು ಮೋದಿ ಹೇಳಿದರು.
Mar 12, 2023, 5:27 pm IST

'ಅಂದು ನಾನೇ ಐಐಟಿ ಅಡಿಗಲ್ಲು ಹಾಕಿದ್ದೆ' ಮೋದಿ

ನಾಲ್ಕು ವರ್ಷಗಳ ಹಿಂದೆ ನಾನೇ ಐಐಟಿ ಅಡಿಗಲ್ಲು ಹಾಕಿದ್ದೆ. ಈಗ ನಾನೇ ಐಐಟಿ ಉದ್ಘಾಟನೆ ಮಾಡಿದ್ದೇನೆ. ಹಿಂದಿನ ಸರ್ಕಾರಗಳು ಅಡಿಗಲ್ಲು ಮಾತ್ರ ಹಾಕಿದ್ದವು. ಯಾವುದೇ ಅಭಿವೃದ್ಧಿ ಮಾಡಿರಲಿಲ್ಲ. ಇದು ಬಿಜೆಪಿ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಮೋದಿ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.
Mar 12, 2023, 5:11 pm IST

ಧಾರವಾಡ ಪೇಡಾವನ್ನು ಹೊಗಳಿದ ಮೋದಿ

ಐಟಿಟಿ ಕ್ಯಾಂಪಸ್ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ ಅವರು, ಶ್ರೀಗುರು ಸಿದ್ಧಾರೂಢರನ್ನು ಹಾಗೂ ಬಸವೇಶ್ವರರನ್ನು ಸ್ಮರಿಸಿದರು. ಹುಬ್ಬಳ್ಳಿಯಲ್ಲಿ ಸಿಕ್ಕ ಪ್ರೀತಿ, ವಿಶ್ವಾಸವನ್ನು ಮರೆಯಲು ಆಗುವುದಿಲ್ಲ. ಈ ವರ್ಷದಲ್ಲಿ ಹುಬ್ಬಳ್ಳಿಗೆ ಆಗಮಿಸುವ ಅವಕಾಶ ಸಿಕ್ಕಿದೆ. ಒಂದು ಬಾರಿ ಧಾರವಾಡ ಪೇಡಾ ಸ್ವಾದವನ್ನು ಸಿವಿದರೆ ಅದನ್ನು ಮತ್ತೆ ತಿನ್ನುವ ಮನಸ್ಸಾಗದೇ ಇರದು ಎಂದು ಮೋದಿ ಅವರು ಧಾರವಾಡ ಪೇಡಾವನ್ನು ಹೊಗಳಿದ್ದಾರೆ. ಜೊತೆಗೆ ರಾಜ್ಯದ ಜನರಿಗೆ ಉದ್ಯೋಗ ನೀಡಲು ಆಧ್ಯತೆ ನೀಡಲಾಗುತ್ತದೆ ಎನ್ನುವ ಭರವಸೆ ನೀಡಿದರು.
Mar 12, 2023, 5:04 pm IST

ಧಾರವಾಡ: ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ

IIT ಕ್ಯಾಂಪಸ್ ಉದ್ಘಾಟನೆ ಬಳಿಕ ಮೋದಿ ಅವರು ಕನ್ನಡದಲ್ಲಿ ಭಾಷಣ ಆರಂಭಿಸಿದರು. 'ಬಸವೇಶ್ವರ ಅವರಿಗೆ ನನ್ನ ನಮಸ್ಕಾರಗಳು. ಕಲೆ ಮತ್ತು ಸಾಹಿತ್ಯ ಹಾಗೂ ಸಂಸ್ಕೃತಿಯ ಈ ನಾಡಿಗೆ, ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು' ಎಂದು ಕನ್ನಡದಲ್ಲಿ ಮೋದಿ ಭಾಷಣ ಆರಂಭಿಸಿದರು.
Mar 12, 2023, 4:53 pm IST

ಹಲವಾರು ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಧಾರವಾಡದಲ್ಲಿ ಪರಿಸರಸ್ನೇಹಿ IIT ಕ್ಯಾಂಪಸ್ ಉದ್ಘಾಟನೆ ಮಾಡಿದರು. 535 ಎಕರೆಯಲ್ಲಿ 852 ಕೋಟಿ ರೂ. ವೆಚ್ಚದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿ ಕ್ಯಾಂಪಸ್ ನಿರ್ಮಿಸಲಾಗಿದೆ. IIT ಕ್ಯಾಂಪಸ್ ಜೊತೆಗೆ ಹಲವಾರು ಯೋಜನೆಗಳಿಗೆ ಮೋದಿ ಉದ್ಘಾಟನೆ ಮಾಡಿದರು. ಹುಬ್ಬಳ್ಳಿ ಹೊಸಪೇಟೆ ರೈಲು ಮಾರ್ಗ ವಿದ್ಯುದೀಕರಣ ಯೋಜನೆಯನ್ನು ಉದ್ಘಾಟಿಸಿದರು. ಸ್ಮಾರ್ಟ್‌ಸಿಟಿ ಯೋಜನೆಯ ಹದಿನೈದು ಕಾಮಗಾರಿಗಳನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು. ಜಯದೇವ ಹೃದ್ರೋಗ ಸಂಸ್ಥೆ, ವಿವೇಕ್‌ ತರಗತಿ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ. 144 ಗ್ರಾಮಪಂಚಾಯಿತಿಗಳಿಗೆ ನಲ್ಲಿ ನೀರು ಒದಗಿಸುವ 1200 ಕೋಟಿ ರೂ.ಗಳ ಜಲಜೀವನ್‌ ಮಿಷನ್‌ಗೆ ಶಂಕುಸ್ಥಾಪನೆ ನೆರವೇರಿಸಿದರು.
Mar 12, 2023, 4:27 pm IST

ಧಾರವಾಡದಲ್ಲಿ ಕಸೂತಿ ಶಾಲು, ಏಲಕ್ಕಿ ಹಾರ, ಏಲಕ್ಕಿ ಪೇಟ ನೀಡಿ ಮೋದಿಗೆ ಸನ್ಮಾನ

ಧಾರವಾಡಕ್ಕೆ ಆಗಮಿಸಿದ ಮೋದಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಜಿಲ್ಲಾಡಳಿತದಿಂದ ಪ್ರಧಾನಮಂತ್ರಿಗಳಿಗೆ ಕಲಘಟಗಿಯ ತೊಟ್ಟಿಲು, ಸಿದ್ಧಾರೂಢರ ಮೂರ್ತಿ, ಕಸೂತಿ ಶಾಲು, ಏಲಕ್ಕಿ ಹಾರ, ಏಲಕ್ಕಿ ಪೇಟ ನೀಡಿ ಗೌರವಿಸಲಾಯಿತು. ಜೊತೆಗೆ ಧಾರವಾಡ ಪೇಡಾವನ್ನು ಮೋದಿ ಅವರಿಗೆ ನೀಡಲಾಯಿತು. ಐಐಟಿ ಕಟ್ಟಡವನ್ನು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡಿ ಜನರನ್ನು ಉದ್ದೇಶಿಸಿ ಮಾತನಾಡುವರು. ಧಾರವಾಡ ಪೇಡಾವನ್ನು ಮೋದಿ ಅವರಿಗೆ ನೀಡಲಾಯಿತು.
Mar 12, 2023, 4:26 pm IST

'ಚುನಾವಣೆಗಾಗಿ ಹಲ್ಲು ಕಿಸಿದು, ಕೈಬೀಸಿ ಹೋಗಲು ಬರುವ ಮೋದಿ' ಕಾಂಗ್ರೆಸ್

'ನೆರೆ ಬಂದಾಗ ಬರಲಿಲ್ಲ, ಬರ ಬಂದಾಗ ಬರಲಿಲ್ಲ, ಕರ್ನಾಟಕಕ್ಕೆ ಆಕ್ಸಿಜನ್ ಕೊಡಲಿಲ್ಲ, ವ್ಯಾಕ್ಸಿನ್ ನೀಡಲಿಲ್ಲ, GST ಪಾಲು ಸಿಗಲಿಲ್ಲ. ಬಿಎಸ್‌ವೈ ಅವರು ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಭೇಟಿಯಾಗಿರಲಿಲ್ಲ. ಚುನಾವಣೆಗಾಗಿ ಹಲ್ಲು ಕಿಸಿದು, ಕೈಬೀಸಿ ಹೋಗಲು ಬರುವ ನರೇಂದ್ರ ಮೋದಿ ಕರ್ನಾಟಕಕ್ಕೆ ಮಾಡಿದ್ದು ಮಹಾ ವಂಚನೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ಮಾಡಿದೆ.
Mar 12, 2023, 4:22 pm IST

ಧಾರವಾಡದ ಐಐಟಿಯ ಕ್ಯಾಂಪಸ್ ಉದ್ಘಾಟಿಸಿದ ಮೋದಿ

ಧಾರವಾಡದ ಐಐಟಿಯ ಕ್ಯಾಂಪಸ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. 852ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪರಿಸರ ಸ್ನೇಹಿ ಐಐಟಿ ಕ್ಯಾಂಪಸ್‌ ಅನ್ನು ಮೋದಿ ವೀಕ್ಷಿಸಿದರು. ಬಹಳ ವಿಶೇಷತೆಗಳನ್ನು ಹೊಂದಿರುವ ಕ್ಯಾಂಪಸ್ ಇಂದು ಲೋಕಾರ್ಪಣೆಯಾಗಿದೆ.
Mar 12, 2023, 4:17 pm IST

'ಭ್ರಷ್ಟರಿಗೆ ತ್ವರಿತಗತಿಯಲ್ಲಿ ಜಾಮೀನು ಕೊಡಿಸಿದ ಬಿಜೆಪಿ'

'ಮಹಿಳೆಯರು ಮತ್ತು ಮಕ್ಕಳ ಅಪರಾಧ ಪ್ರಕರಣಗಳ ಇತ್ಯರ್ಥಕ್ಕಾಗಿ ತ್ವರಿತಗತಿ ನ್ಯಾಯಾಲಯ ಸ್ಥಾಪಿಸುತ್ತೇವೆ ಎಂದಿತ್ತು ಬಿಜೆಪಿ ಸರ್ಕಾರ. ಆದರೆ ಮಾಡಿದ್ದೇನು? ಭ್ರಷ್ಟರಿಗೆ ತ್ವರಿತಗತಿಯಲ್ಲಿ ಜಾಮೀನು ಸಿಗುವ ವ್ಯವಸ್ಥೆ ಮಾಡಿತು. ಬಿಜೆಪಿ ಶಾಸಕರು, ಸರ್ಕಾರದ ಸಚಿವರೇ ಮಹಿಳಾ ಪೀಡಕರಾಗಿರುವಾಗ ಮಕ್ಕಳು ಮಹಿಳೆಯರಿಗೆ ನ್ಯಾಯ ಸಿಗುವುದೇ' ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದೆ.
Mar 12, 2023, 4:15 pm IST

'ಮೋದಿಯವರೆಂದರೆ ಕಳ್ಳರಿಗೆ, ಸುಳ್ಳರಿಗೆ ತುಂಬಾ ಅಚ್ಚುಮೆಚ್ಚು' ಕಾಂಗ್ರೆಸ್ ಟ್ವೀಟ್

'ಮೋದಿಯವರೆಂದರೆ ಕಳ್ಳರಿಗೆ, ಸುಳ್ಳರಿಗೆ, ವಂಚಕರಿಗೆ, ಭ್ರಷ್ಟರಿಗೆ, ರೌಡಿಗಳಿಗೆ ಭಲೇ ಅಚ್ಚುಮೆಚ್ಚು. ಬಿಜೆಪಿ ರೌಡಿ ಮೋರ್ಚ್ ವತಿಯಿಂದ ಮೋದಿಗೆ ಭಾರಿ ಸ್ವಾಗತವಿದೆ. ನರೇಂದ್ರ ಮೋದಿ ಅವರೇ ಬಿಜೆಪಿ ಪಕ್ಷದ ರೌಡಿ ಮೋರ್ಚಾ ಯಾವಾಗ ಉದ್ಘಾಟಿಸುವಿರಿ? ಯಾವಾಗ ಮಚ್ಚು, ಲಾಂಗುಗಳನ್ನು ಪಕ್ಷದ ಚಿಹ್ನೆಯಾಗಿ ಪಡೆಯುವಿರಿ? 'ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದೆ.
Mar 12, 2023, 4:01 pm IST

ಧಾರವಾಡ ಐಐಟಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೋದಿ ಭಾಗಿ

ಧಾರವಾಡ ಐಐಟಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ದಾರೆ. ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಶಿಕ್ಷಣ, ಕೌಶಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್‌, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಐಐಟಿ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಚಟರ್ಜಿ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಮತ್ತಿತರರು ಉಪಸ್ಥಿತರಿದ್ದಾರೆ.
Mar 12, 2023, 3:27 pm IST

'ಐಐಟಿ ನಮ್ಮ ಕನಸಿನ ಕೂಸು' ಬಿಜೆಪಿ- ಕಾಂಗ್ರೆಸ್‌ ಕಾದಾಟ

ಐಐಟಿ ನಮ್ಮ ಕನಸಿನ ಕೂಸು ಎಂದು ಬಿಜೆಪಿ- ಕಾಂಗ್ರೆಸ್‌ ಈಗ ಕಿತ್ತಾಡಿಕೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಶ್ರಮದ ಫಲವಾಗಿ ಧಾರವಾಡಕ್ಕೆ ಐಐಟಿ ಬಂದಿದೆ ಎಂಬುದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ವಾದ. ಇದಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡುತ್ತಿರುವ ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಐಐಟಿಗೆ 470 ಎಕರೆ ಜಮೀನು ನೀಡಿದರು. ಐಐಟಿ ಸಮಿತಿ ಜತೆಗೆ ನಿರಂತರ ಸಂಪರ್ಕ ಸಾಧಿಸಿ ಅಗತ್ಯ ಸೌಲಭ್ಯ ಕಲ್ಪಿಸಿದರು. ಇದು ಕಾಂಗ್ರೆಸ್‌ ಸರಕಾರದ ಕಳಕಳಿಯ ಯೋಜನೆ ಎಂದು ಪ್ರತ್ಯುತ್ತರ ನೀಡುತ್ತಿದ್ದಾರೆ.
Mar 12, 2023, 3:26 pm IST

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮೋದಿ ಆಗಮನ

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಾಯುಸೇನೆ ವಿಮಾನದಲ್ಲಿ ಹುಬ್ಬಳ್ಳಿಗೆ ಮೋದಿ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಧಾರವಾಡ ಐಐಟಿ ಕ್ಯಾಂಪಸ್‌ ಅನ್ನು ಉದ್ಘಾಟನೆ ಮಾಡಲಿದ್ದಾರೆ. ಧಾರವಾಡ ಹೊರವಲಯದ 470 ಎಕರೆ ಜಾಗೆಯಲ್ಲಿ 852 ಕೋಟಿ ರೂ. ವೆಚ್ಚದಲ್ಲಿ ಐಐಟಿ ಶಾಶ್ವತ ಕಟ್ಟಡ ನಿರ್ಮಾಣಗೊಂಡಿದ್ದು, ನಾನಾ ವಿಭಿನ್ನತೆಗಳೊಂದಿಗೆ ಶೈಕ್ಷಣಿಕ ವಲಯದಲ್ಲಿ ಗಮನ ಸೆಳೆಯುತ್ತಿದೆ.
Mar 12, 2023, 2:56 pm IST

400 ಬಾಣಸಿಗರಿಂದ ಊಟದ ವ್ಯವಸ್ಥೆ

400 ಬಾಣಸಿಗರಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಪಲಾವ್, ಮೊಸರನ್ನ, ಮೊಸರು ಬಜ್ಜಿಯನ್ನು ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.
Mar 12, 2023, 2:47 pm IST

ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯದಲ್ಲಿ ಬೃಹತ್‌ ಗಾತ್ರದ ರಂಗೋಲಿ

ಐಐಟಿ ಕ್ಯಾಂಪಸ್‌ನಲ್ಲಿರುವ ಮುಖ್ಯ ವೇದಿಕೆಯನ್ನು ಸಾಂಸ್ಕೃತಿಕವಾಗಿ ಸಿಂಗರಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯದಲ್ಲಿ ಬೃಹತ್‌ ಗಾತ್ರದ ರಂಗೋಲಿ ಬಿಡಿಸಿ 'ಇಂಟರ್‌ನ್ಯಾಷನಲ್‌ ಇಯರ್‌ಆಫ್‌ ಮಿಲ್ಲೆಟ್ಸ...- 2023'' ಎಂದು ಬರೆಯಲಾಗಿದೆ. ಜತೆಗೆ ವೇದಿಕೆಯ ಮುಂಭಾಗದಲ್ಲಿ ಸಿರಿಧಾನ್ಯದಿಂದ ವಿವಿಧ ಚಿತ್ರಗಳನ್ನು ಬಿಡಿಸಲಾಗಿದ್ದು ಗಮನ ಸೆಳೆಯುತ್ತಿದೆ.
Mar 12, 2023, 2:44 pm IST

ಧಾರವಾಡ ಐಐಟಿ ಬಗ್ಗೆ-

ಐಐಟಿ ಕ್ಯಾಂಪಸ್‌ ಸರ್ವಶ್ರೇಷ್ಠ ಹವಾಮಾನ ವ್ಯವಸ್ಥೆ ಹೊಂದಿದೆ. ಚಾಲುಕ್ಯರ, ವಿಜಯನಗರ ಕಾಲದ ಶಿಲ್ಪಗಳು ಮುಖ್ಯದ್ವಾರದಲ್ಲಿಪ್ರತಿಬಿಂಬಗೊಂಡಿವೆ. 2,500 ವಿದ್ಯಾರ್ಥಿಗಳಿಗೆ ವಸತಿ, ಕಲಿಕೆಗೆ ಬೇಕಾದ ಸೌಲಭ್ಯಗಳುಳ್ಳ ಕಟ್ಟಡ ಸಿದ್ಧವಾಗಿದೆ. ಇಲ್ಲಿ ಆಡಳಿತ ಭವನ, ಅಕಾಡೆಮಿ ಬ್ಲಾಕ್‌, ವಿಜ್ಞಾನ ಬ್ಲಾಕ್‌, ಮೆಸ್‌ ಬ್ಲಾಕ್‌ ಹಾಗೂ ಗ್ರಂಥಾಲಯ ಸೇರಿ 18 ಕಟ್ಟಡಗಳು ತಲೆ ಎತ್ತಿವೆ. 68 ಎಕರೆ ಮೀಸಲು ಅರಣ್ಯಪ್ರದೇಶದಲ್ಲಿ ಅಂತರ್ಗತವಾದ ಐಐಟಿ ಕ್ಯಾಂಪಸ್‌ ಸೌರಶಕ್ತಿ ಇಂಧನ ಬಳಕೆ, ಸ್ವತಂತ್ರ ನೀರಿನ ವ್ಯವಸ್ಥೆ ಹೊಂದಿದೆ.
Mar 12, 2023, 2:42 pm IST

ಹುಬ್ಬಳ್ಳಿಯತ್ತ ನರೇಂದ್ರ ಮೋದಿ

ಭಾರತದ ಪ್ರಥಮ ಮೊದಲ ಹಸಿರು ಐಐಟಿ ನಮ್ಮ ಕರ್ನಾಟಕದಲ್ಲಿ ಉದ್ಘಾಟನೆಯಾಗಲಿದೆ. ಐಐಟಿ ಉದ್ಘಾಟನೆ ಕೆಲವೇ ಕ್ಷಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಬರುವ ಜನರಿಗೆ ಬಸ್‌ ವ್ಯವಸ್ಥೆ ಕೂಡ ಮಾಡಲಾಗಿದೆ. ಜೊತೆಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ.
Mar 12, 2023, 2:40 pm IST

ಕೆಲವೇ ಕ್ಷಣಗಳಲ್ಲಿ ಧಾರವಾಡದ ಐಐಟಿ ಉದ್ಘಾಟನೆ

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಾಯುಸೇನೆ ವಿಮಾನದಲ್ಲಿ ಹುಬ್ಬಳ್ಳಿಯತ್ತ ಮೋದಿ ಪ್ರಯಾಣ ಬೆಳಸಿದ್ದಾರೆ. ಧಾರವಾಡ ಹೊರವಲಯದ 470 ಎಕರೆ ಜಾಗೆಯಲ್ಲಿ852 ಕೋಟಿ ರೂ. ವೆಚ್ಚದಲ್ಲಿ ಐಐಟಿ ಶಾಶ್ವತ ಕಟ್ಟಡ ನಿರ್ಮಾಣಗೊಂಡಿದ್ದು, ನಾನಾ ವಿಭಿನ್ನತೆಗಳೊಂದಿಗೆ ಶೈಕ್ಷಣಿಕ ವಲಯದಲ್ಲಿ ಗಮನ ಸೆಳೆಯುತ್ತಿದೆ.
Mar 12, 2023, 2:33 pm IST

ಹುಬ್ಬಳ್ಳಿಯಲ್ಲಿಂದು ಹೈಟೆಕ್‌ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ

ಹುಬ್ಬಳ್ಳಿಯಲ್ಲಿಂದು 166 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೈಟೆಕ್‌ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ಸಮಯದಲ್ಲಿ ಹುಬ್ಬಳ್ಳಿ ಹೊಸಪೇಟೆ ರೈಲು ಮಾರ್ಗ ವಿದ್ಯುದೀಕರಣ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿದೆ.
Mar 12, 2023, 2:30 pm IST

ಮೋದಿ ಟೀ ಶರ್ಟ್ ತೆಗೆದುಕೊಳ್ಳಲು ಮುಗಿಬಿದ್ದ ಜನ

ಧಾರವಾಡಕ್ಕೆ ಮೋದಿ ಭೇಟಿ ಹಿನ್ನೆಲೆಯಲ್ಲಿ ಮೋದಿ ಚಿತ್ರವಿರುವ ಟೀ ಶರ್ಟ್ ಹಂಚಿಕೆ ಮಾಡಲಾಗುತ್ತಿದೆ. ಉಚಿತವಾಗಿ ಟೀಶರ್ಟ್ ಹಂಚಿಕೆ ಮಾಡುತ್ತಿರುವುದರಿಂದಾಗಿ ಅದನ್ನು ಪಡೆಯಲು ಜನ ಮುಗಿಬಿದ್ದಿರುವ ದೃಶ್ಯ ಕಂಡುಬಂದಿದೆ.
Mar 12, 2023, 2:27 pm IST

ಮಂಡ್ಯ ಬಳಿಕ ಧಾರವಾಡದತ್ತ ಮೋದಿ ಪ್ರಯಾಣ

ಮಂಡ್ಯ ಬಳಿಕ ಧಾರವಾಡಕ್ಕೆ ಪ್ರಧಾನಿ ಮೋದಿ ತೆರಳಿದ್ದಾರೆ. ಐಐಟಿ ಧಾರವಾಡ ಕ್ಯಾಂಪಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಜಗತ್ತಿನ ಅತಿಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ತುಪ್ಪರಿಹಳ್ಳ ಏತ ನೀರಾವರಿ ಯೋಜನೆಗೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
Mar 12, 2023, 2:00 pm IST

ಇದು ಸ್ಥಳೀಯ ಜನರ ಬದುಕು ಕಸಿಯುವ ಹೆಮ್ಮಾರಿ- ಬಿಜೆಪಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಹೊಸ ದಶಪಥ ಹೆದ್ದಾರಿ ಜನರ ಬದುಕು ಕಟ್ಟುವ ರಹದಾರಿಯಷ್ಟೇ ಆಗಲಿ. ಅದು ಬಿಟ್ಟು ಕೆಲವರ ಪಾಲಿನ ಎಟಿಎಂ ಆಗಿ, ಸ್ಥಳೀಯ ಜನರ ಬದುಕು ಕಸಿಯುವ ಹೆಮ್ಮಾರಿ ಆಗದಿರಲಿ. ಕರ್ನಾಟಕ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ. ಕರ್ನಾಟಕ ಕೇಂದ್ರದಿಂದ ಅತಿಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯವಾಗಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ಈ ನೀತಿಯ ಕೆನ್ನಾಲಿಗೆಗೆ ಸಿಕ್ಕಿ ಕನ್ನಡಿಗರು ಬೇಯುತ್ತಿದ್ದಾರೆ. ಹೆದ್ದಾರಿ ಕನ್ನಡಿಗರದು, ಅದನ್ನು ಬಳಸುವ ಹಕ್ಕು ಕನ್ನಡಿಗರದು. ಕನ್ನಡಿಗರಿಗೆ ನ್ಯಾಯ ಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಟ್ವೀಟ್ ಮಾಡಿದ್ದಾರೆ.
Mar 12, 2023, 1:57 pm IST

'ಅಬ್ಬರ, ಅರ್ಭಟದಲ್ಲಿ ಜನರ ಬದುಕು ಅವನತಿ' ಎಚ್‌ಡಿಕೆ

ಈ ಎಕ್ಸ್ ಪ್ರೆಸ್ ಹೆದ್ದಾರಿಯ ನಿಜವಾದ ಹಕ್ಕುದಾರರಾದ ರಾಮನಗರ, ಮಂಡ್ಯ ಜನರನ್ನು ಪರಾವಲಂಭಿಗಳನ್ನಾಗಿ ಮಾಡಿದ್ದಲ್ಲದೆ, ಭೂಮಿ ಕಳೆದುಕೊಂಡ ಬಡರೈತರು ಹೆದ್ದಾರಿ ಬದಿ ನಿಂತು ಭಿಕ್ಷೆ ಬೇಡುವಂಥ ದುಃಸ್ಥಿತಿಯನ್ನು ಕೇಂದ್ರ ಸರಕಾರ ಸೃಷ್ಟಿಸಿದೆ. ದಶಪಥ ಹೆದ್ದಾರಿ ಕಸಿದುಕೊಂಡ ಬದುಕಿಗೆ ಉತ್ತರದಾಯಿ ಯಾರು? ಅವರ ಜೀವನೋಪಾಯಕ್ಕೆ ಪರ್ಯಾಯ ದಾರಿ ಯಾವುದು? ಮಾನ್ಯ ಪ್ರಧಾನಮಂತ್ರಿಗಳು ಈ ಬಗ್ಗೆ ಜನರಿಗೆ ವಿಶ್ವಾಸ ತುಂಬಬೇಕು. ರೋಡ್ ಶೋ ಮಾಡುವುದಕ್ಕಿಂತ ತುರ್ತಾಗಿ ಮಾಡಬೇಕಿರುವುದು ಇದನ್ನು. ಅಬ್ಬರ, ಅರ್ಭಟದಲ್ಲಿ ಜನರ ಬದುಕು ಅವನತಿ ಆಗಬಾರದು ಎನ್ನುವುದು ನನ್ನ ಕಳಕಳಿ ಎಂದು ಎಚ್‌ಡಿಕೆ ಟ್ವೀಟ್ ಮಾಡಿದ್ದಾರೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+