Pralhad Joshi Profile: 'ನಮೋ 3.0 ಸಂಪುಟದಲ್ಲಿ ಸಚಿವರಾದ ಪ್ರಹ್ಲಾದ್ ಜೋಶಿ, ಜೀವನ, ರಾಜಕೀಯ ಪರಿಚಯ
ಬೆಂಗಳೂರು, ಜೂನ್ 09: ಲೋಕಸಭಾ ಚುನಾವಣೆ 2024ರಲ್ಲಿ ಉತ್ತರ ಕರ್ನಾಟಕದ ಧಾರವಾಡ ಕ್ಷೇತ್ರದಿಂದ ಐದನೇ ಭಾರಿ ಪ್ರಹ್ಲಾದ್ ಜೋಶಿಯವರು ವಿಜಯಪತಾಕೆ ಹಾರಿಸಿದ್ದಾರೆ. ಇದೀಗ ಅವರು ಪ್ರಧಾನಿ ನರೇಂದ್ರ ಮೋದಿಯವರ (Modi 3.0) ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೆ ಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೋಶಿಯವರ ಜೀವನ, ಬಾಲ್ಯ, ಶಿಕ್ಷಣ, ರಾಜೀಕೀಯ ಪ್ರವೇಶ, ಧಾರವಾಡದಲ್ಲಿ ಹ್ಯಾಟ್ರಿಕ್ ಗೆಲುವು ಹಾಗೂ ಅವರ ಜೀವನ ಪರಿಚಯ ಇಲ್ಲಿದೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 61 ವರ್ಷ ವಯಸ್ಸಿನ ಪ್ರಹ್ಲಾದ್ ಜೋಶಿಯವರು ಕಾಂಗ್ರೆಸ್ ವಿರುದ್ಧ ಬರೋಬ್ಬರಿ ಸುಮಾರು 97000 ಮತಗಳ ಅಂತದಲ್ಲಿ ಗೆಲುವು ಸಾಧಿಸಿದ್ದಾರೆ. ಪಕ್ಷದ ಅಧ್ಯಕ್ಷಗಿರಿ, ಕೇಂದ್ರ ಸಚಿವ ಸ್ಥಾನಗಳನ್ನು ನಿರ್ವಹಿಸಿರುವ ಅನುಭವ ಅವರಿಗಿದೆ. ಬಿಜೆಪಿಯಲ್ಲಿ ಹಿರಿಯ ನಾಯಕರ ಪೈಕಿ ಇವರು ಒಬ್ಬರಾಗಿದ್ದಾರೆ.

ಇಂದು ಜೂನ್ 09ರಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದು. ಅವರೊಂದಿಗೆ ಸಂಸದ ಪ್ರಹ್ಲಾದ್ ಜೋಶಿ (61) ಸಹ ಮತ್ತೊಮ್ಮೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ವಿಜಯಪುರದಲ್ಲಿ 1962 ರಲ್ಲಿ ಜನನ
ಮೂಲತಃ ಬ್ರಾಹ್ಮಣ ಕುಟುಂಬದಲ್ಲಿ 1962ರ ನವೆಂಬರ್ 27 ರಂದು ಕರ್ನಾಟಕದ ವಿಜಯಪುರದಲ್ಲಿ ಜನಿಸಿದರು. ಸಾಮಾನ್ಯ ಬ್ರಾಹ್ಮಣ ಹುಡುಗರಂತೆ ಬಾಲ್ಯ ಕಳೆದ ಇವರು ಪದವಿಧರರು. ರಾಜಕೀಯ ಜೊತೆಗೆ ಕೈಗಾರಿಕೋದ್ಯಮ ವಲಯದಲ್ಲಿ ಗುರುತಿಸಿಕೊಂಡವರು.
1992 ರಿಂದ 1994ರ ಅವಧಿಯಲ್ಲಿ ಹುಬ್ಬಳ್ಳಿಯಲ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದಾಗಿ ಆರ್ಎಸ್ಎಸ್ ಘೋಷಿಸಿತ್ತು. ಇವು ಪ್ರಹ್ಲಾದ್ ಜೋಶಿಯವರ ರಾಜಕೀಯದ ಆರಂಭಿಕ ದಿನಗಳಾಗಿದ್ದವು. ಆಗಲೂ ಅವರು ಆರ್ಎಸ್ಎಸ್ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದರು.

ಈ ಮೈದಾನ ಮಾಲೀಕತ್ವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪುನಃ ಸ್ಥಾಪಿಸುವಲ್ಲಿ ಜೋಶಿಯವರ ಪಾತ್ರ ಮಹತ್ವದ್ದು. ಈ ಮೈದಾನ ಸರ್ಕಾರ ಅಧೀನದ್ದು ಎಂಬುದನ್ನು ಹೈಕೋರ್ಟ್, ಕಳೆದ ವರ್ಷ ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿತ್ತು. ಹೀಗಾಗಿ ಹಂತ ಹಂತವಾಗಿ ಆರ್ಎಸ್ಎಸ್ ಜೊತೆಗೆ ರಾಜಕೀಯದಲ್ಲಿ ಗುರುತಿಸಿಕೊಂಡರು.
2004ರಲ್ಲಿ ಮೊದಲ ಭಾರಿಗೆ ಸಂಸದರಾಗಿ ಆಯ್ಕೆ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿರ್ವಹಿಸಿದ್ದ ಇವರು, 2004ರಲ್ಲಿ ಬಿಜೆಪಿಯಿಂದ ಇದೇ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಭೂತಪೂರ್ವ ಜಯ ಗಳಿಸಿದರು. ಅಲ್ಲಿಂದ ಅವರು ನಿಂತರವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಈವರೆಗೆ ಅವರು ಐದು ಭಾರಿ ಧಾರವಾಡದಲ್ಲಿ ಗೆದ್ದ ಏಕೈಕ ಸಂಸದರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
2004ರಲ್ಲಿ, 2009, 2014ರಲ್ಲೂ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದರು. ನಂತರ 2019ರಲ್ಲಿ ನಾಲ್ಕನೇ ಭಾರಿಗೆ ಗೆದ್ದು ಪ್ರಧಾನಿ ಮೋದಿಯವರ 2.0 ಸರ್ಕಾರದಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದರು.
ಧಾರವಾಡಕ್ಕೆ ಐಐಟಿ ತರುವಲ್ಲಿ ಪ್ರಮುಖ ಪಾತ್ರ
ಇದರೊಂದಿಗೆ ಧಾರವಾಡದಲ್ಲಿ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' (IIT Dharwad) ಸ್ಥಾಪನೆಗೆ, ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲ್ದರ್ಜೆಗೆ ಏರಿಸುವಲ್ಲಿ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿದ್ದರು. ಸದ್ಯ ಹುಬ್ಬಳ್ಳಿಯ ಖ್ಯಾತ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಮೇಲ್ಸೇತುವೆ ಯೋಜನೆಗೆ ಸಾಕಾರ ಇವರ ನೇತೃತ್ವದಲ್ಲಿ ಆಗಲಿದೆ.
ಧಾರವಾಡದಲ್ಲಿ ಭರ್ಜರಿ ಗೆಲುವು: 2019ರಲ್ಲಿ ಭಾರೀ ಅಂತರದ ಜಯ
ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿಯವರು 2004ರಲ್ಲಿ ಮೊದಲ ಭಾರಿಗೆ ಸಂಸದರಾದರು. 2009 ರಲ್ಲಿ ಸಹ ಕಣಕ್ಕಿಳಿದು ಬರೋಬ್ಬರಿ 4,46,786 ಬಹುಮತ ಪಡೆದು ಮೊದಲ ಭಾರಿಗೆ ಸಂಸದರಾದರು. ನಂತರ 2014ರಲ್ಲಿ ಕಾಂಗ್ರೆಸ್ ವಿರುದ್ಧ ವಿನಯ್ ಕುಲಕರ್ಣಿ ವಿರುದ್ಧ 5,45,395 ಬಹುಮತಗಳಿಂದ ಗೆದ್ದು ಬೀಗಿದ್ದರು.
ಕಳೆದ ಭಾರಿಗೆ 2019ರಲ್ಲೂ ಮತ್ತದೇ ಕ್ಷೇತ್ರದಿಂದ ನಿಂತ ಪ್ರಹ್ಲಾದ್ ಜೋಶಿಯವರು ಕಾಂಗ್ರೆಸ್ ವಿನಯ್ ಕುಲಕರ್ಣಿ ವಿರುದ್ಧ ಭರ್ಜರಿ 6,84,837 ಬಹುಮತ ಪಡೆದು ಗೆದ್ದರು. ಈ ವೇಳೆ ಅವರು ಮತ್ತು ಕುಲಕರ್ಣಿ ಮಧ್ಯ 2.5 ಲಕ್ಷ ಮತಗಳ ಅಂತರ ಇತ್ತು ಎಂಬುದು ವಿಶೇಷ.
ಕಾಂಗ್ರೆಸ್ ವಿರುದ್ಧ ಮತ್ತೆ ಗೆಲುವು, ಮತ್ತೆ ಮಂತ್ರಿ ಸ್ಥಾನ
ಈ ಭಾರಿ 2024ರಲ್ಲಿ ಧಾರವಾಡದಿಂದ ಕಣಕ್ಕಿಳಿದರು. ಹಲವು ಆರೋಪಗಳನ್ನು ಎದುರಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ವಿರುದ್ಧ 97ಸಾವಿರ ಮತಗಳ ಅಂತದಲ್ಲಿ ಗೆದ್ದು, ಐದನೇ ಭಾರಿಗೆ ಸಂಸದರಾದರು. ಪ್ರತಿ ಭಾರಿಗೆ ಗೆದ್ದಾಗಲು ಅವರು ಮತಗಳನ್ನು ಹೆಚ್ಚಿಸಿಕೊಂಡೇ ಬಂದಿದ್ದಾರೆ.
2019ರಿಂದ ಐದು ವರ್ಷ ಕಲ್ಲಿದ್ದಲು-ಸಂಸದೀಯ ವ್ಯವಹಾರ ಸಚಿವರಾಗಿ ಸೇವೆ ಸಲ್ಲಿಸದ ಪ್ರಹ್ಲಾದ್ ಜೋಶಿಯವರಿಗೆ 2024ರ ಪ್ರಧಾನಿ ಸಂಪುಟದಲ್ಲಿ ಮತ್ತೆ ಮಂತ್ರಿಗಿರಿ ಭಾಗ್ಯ ಸಿಕ್ಕಿದೆ. ಇಂದು ಜೂನ್ 09 ರಂದು ಅವರು ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications