Get Updates
Get notified of breaking news, exclusive insights, and must-see stories!

Vidhana Soudha: ದಯವಿಟ್ಟು ವಿಧಾನಸೌಧವನ್ನು ನಾಯಿಗಳಿಂದ ರಕ್ಷಿಸಿ: ಸ್ಪೀಕರ್‌ಗೆ ಶಾಸಕರು ಮನವಿ

ಬೆಂಗಳೂರು, ಆಗಸ್ಟ್‌ 13: ಬೆಂಗಳೂರು ಸೇರಿದಂತೆ ವಿವಿಧ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಾಯಿಗಳ ಹೆಚ್ಚಾಗಿದ್ದು, ವಿಧಾನಸೌಧದ ಸುತ್ತಮುತ್ತ ಅಲೆಮಾರಿ ನಾಯಿಗಳ ಸಮಸ್ಯೆ ಉಂಟಾಗಿದೆ. ಹೀಗಾಗಿ ಹಲವು ಶಾಸಕರು ಈ ವಿಷಯವನ್ನು ಸ್ವೀಕರ್‌ ಯು ಟಿ ಖಾದರ್‌ ಅವರ ಗಮನಕ್ಕೆ ತಂದಿದ್ದು, ವಿಧಾನಸೌಧವನ್ನ ನಾಯಿಗಳಿಂದ ರಕ್ಷಿಸಿ ಎಂದು ವಿಧಾನಸಭೆಯಲ್ಲಿ ಹಲವು ಶಾಸಕರು ಮನವಿ ಮಾಡಿದ್ದಾರೆ.

ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿಬಿ ಸುರೇಶ್ ಬಾಬು ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸುಪ್ರೀಂ ಕೋರ್ಟ್ ನವದೆಹಲಿಯ ಬೀದಿಗಳನ್ನು ನಾಯಿ ಮುಕ್ತಗೊಳಿಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ, ವಿಧಾನಸೌಧ ಮತ್ತು ಶಾಸಕರ ಭವನದ ಆವರಣದಿಂದ ಮುಕ್ತವಾಗಿ ಓಡಾಡುವ ನಾಯಿಗಳು ಹೆಚ್ಚಾಗಿವೆ, ವಿಧಾನಸೌಧವನ್ನ ರಕ್ಷಿಸಿ ಎಂದು ಕರ್ನಾಟಕದ ಶಾಸಕರು ಬುಧವಾರ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸದನದಲ್ಲಿ ಮನವಿ ಮಾಡಿದರು.

Please save Vidhana Soudha from dogs Karnataka MLAs tell Speaker

ಸುಪ್ರೀಂ ಕೋರ್ಟ್ ಆದೇಶವು ರಾಜ್ಯದ ಎಲ್ಲಾ ಪುರಸಭೆಗಳಿಗೆ ಅನ್ವಯವಾಗಬೇಕು. ನಮ್ಮ ಮಕ್ಕಳನ್ನು ಸುರಕ್ಷಿತವಾಗಿಡಲು ನಾಯಿಗಳನ್ನು ಸ್ಥಳಾಂತರಿಸಬೇಕು ಎಂದು ಜೆಡಿಎಸ್‌ ಶಾಸಕ ಸುರೇಶ್‌ ಬಾಬು ಅವರು ಹೇಳಿದರು.

ಈ ವೇಳೆ ಹಿರಿಯ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಮಾತನಾಡಿ, ಸುಪ್ರೀಂ ಕೋರ್ಟ್‌ನ ಆದೇಶ ಭಾರತದಾದ್ಯಂತ ಅನ್ವಯವಾಗಬೇಕು ಎಂದು ಹೇಳಿದರು. ಕೇವಲ ಆರು ತಿಂಗಳಲ್ಲಿ ಬೆಂಗಳೂರಿನಲ್ಲಿ 18,000 ನಾಯಿ ಕಡಿತದ ಪ್ರಕರಣಗಳು ಕಂಡುಬಂದಿವೆ ಮತ್ತು 18 ಜನರು ರೇಬೀಸ್‌ಗೆ ತುತ್ತಾಗಿದ್ದಾರೆ. ಬೆಂಗಳೂರು, ಮಂಗಳೂರು ಮಂಗಳೂರು, ಮೈಸೂರು ಮತ್ತು ಇತರ ನಗರಗಳಲ್ಲಿ ಅನ್ವಯವಾಗಬೇಕು ಎಂದು ಅವರು ಹೇಳಿದರು.

ಹೌದು, ತುಂಬಾ ಬೀದಿ ನಾಯಿಗಳಿವೆ. ಎರಡು ಲಕ್ಷ ನಾಯಿ ಕಡಿತದ ವರದಿಯಾಗಿದೆ. ಇದು ಗಂಭೀರ ವಿಷಯ ಎಂದು ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಬಿಜೆಪಿಯ ಸಿಎನ್ ಅಶ್ವಥ್ ನಾರಾಯಣ್ ಹೇಳಿದರು. ನಾಯಿಗಳನ್ನು ನಾಯಿ ಪ್ರಿಯರ ಮನೆಗಳಲ್ಲಿ ಬಿಡೋಣ ಎಂದು ಅವರು ಹೇಳಿದರು. ನಾಯಿಗಳಿಗೆ ಬಿರಿಯಾನಿ ತಿನ್ನಿಸುವ ಬದಲು ಅವುಗಳನ್ನು ಹಿಡಿಯಬೇಕು ಎಂದು ಸುರೇಶ್‌ ಬಾಬು ಹೇಳಿದರು.

ಶಾಸಕರ ನಿವಾಸದ ಬಾಗಿಲು ತೆರೆದಿಡಲು ಶಾಸಕರು ಕಷ್ಟಪಡುತ್ತಿದ್ದಾರೆ ಎಂದು ಬಿಜೆಪಿಯ ಉಮಾನಾಥ್ ಕೋಟ್ಯಾನ್ ಹೇಳಿದರು. ನಾಯಿಗಳು ಪಾದರಕ್ಷೆಗಳ ಮೇಲೆ ಮೂತ್ರ ವಿಸರ್ಜಿಸುತ್ತವೆ. ನಾವು ಹೊರಗೆ ಹೆಜ್ಜೆ ಇಡಲೂ ಸಾಧ್ಯವಿಲ್ಲ ಎಂದು ಹೇಳಿದರು.

ಕೆಲವು ಶಾಸಕರು ನಾಯಿಗಳ ಪರವಾಗಿದ್ದರೆ, ಕೆಲವರು ವಿರೋಧಿಸುತ್ತಿದ್ದಾರೆ ಎಂದು ಖಾದರ್ ಈ ವಿಷಯದ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ದಯವಿಟ್ಟು ವಿಧಾನಸೌಧ ಮತ್ತು ಶಾಸಕರ ಮನೆಯನ್ನು ನಾಯಿಗಳಿಂದ ರಕ್ಷಿಸಿ ಎಂದು ಅಶ್ವತ್ಥ ನಾರಾಯಣ್ ಖಾದರ್ ಅವರನ್ನು ಒತ್ತಾಯಿಸಿದರು. ಬಿಜೆಪಿಯ ಎಚ್.ಕೆ. ಸುರೇಶ್ ಕೂಡ ನಾಯಿಗಳನ್ನು ದೂರವಿಡುವಂತೆ ಖಾದರ್ ಅವರನ್ನು ಒತ್ತಾಯಿಸಿದರು. ದಯವಿಟ್ಟು ನಾಯಿಗಳು ಶಾಸಕರ ಮನೆಗೆ ಪ್ರವೇಶಿಸದಂತೆ ನೋಡಿಕೊಳ್ಳಿ. ಅವುಗಳನ್ನು ಓಡಿಸಿ ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+