Get Updates
Get notified of breaking news, exclusive insights, and must-see stories!

ಮಂಗಳಸೂತ್ರಕ್ಕೆ ಓಕೆ, ಹಿಜಾಬ್‌ಗೆ ಕೊಕ್ಕೆ: ಕೆಇಎ, ಸರ್ಕಾರದ ನಡೆಗೆ ಖಂಡನೆ

ಬೆಂಗಳೂರು, ನವೆಂಬರ್‌ 14: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷಾ ಅಕ್ರಮ ತಡೆಯಲು ಕೊಠಡಿಗೆ ತಾಳಿ, ಹಿಜಾಬ್‌ ಸೇರಿದಂತೆ ಹಲವು ವಸ್ತುಗಳ ಮೇಲೆ ವಿಧಿಸಿದ್ದ ನಿರ್ಬಂಧ ಸಡಿಸಲಿದ್ದು, ಈಗ ಹಿಂದೂಗಳು ಧರಿಸುವ ತಾಳಿಗೆ ಅವಕಾಶ ನೀಡಿ ಮುಸ್ಲಿಮರು ಧರಿಸುವ ಹಿಜಾಬ್‌ಗೆ ನಿರ್ಬಂಧ ವಿಧಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಸರ್ಕಾರ ಅನುಮತಿ ನೀಡಿದ ಸುಮಾರು 20 ದಿನಗಳ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಂಗಳವಾರ ಮುಂಬರುವ ಪರೀಕ್ಷೆಗಳಿಗೆ ಎಲ್ಲಾ ರೀತಿಯ ತಲೆ ಹೊದಿಕೆಯನ್ನು ನಿಷೇಧಿಸಿದೆ. ರಾಜ್ಯಾದ್ಯಂತ ನವೆಂಬರ್ 18 ಮತ್ತು 19 ರಂದು ನಡೆಯಲಿರುವ ವಿವಿಧ ಪರೀಕ್ಷೆಗಳಿಗೆ ಕೆಇಎ ಹೊಸ ಡ್ರೆಸ್ ಕೋಡ್ ಅನ್ನು ಬಿಡುಗಡೆ ಮಾಡಿದೆ.

kea-governments-move

ಕೆಇಎ ತನ್ನ ಆದೇಶದಲ್ಲಿ ಹಿಜಾಬ್ ಅನ್ನು ಉಲ್ಲೇಖಿಸದಿದ್ದರೂ ಸುತ್ತೋಲೆಯು "ತಲೆ, ಬಾಯಿ ಮತ್ತು ಕಿವಿಗಳನ್ನು ಮುಚ್ಚುವ ಯಾವುದೇ ಉಡುಪು ಅಥವಾ ಕ್ಯಾಪ್ ಅನ್ನು ಪರೀಕ್ಷಾ ಹಾಲ್‌ಗಳಲ್ಲಿ ಅನುಮತಿಸಲಾಗುವುದಿಲ್ಲ" ಎಂದು ಹೇಳಿದೆ. ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವ ಪ್ರಯತ್ನದ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೆಇಎ ಹೇಳಿದೆ.

ಕಲಬುರಗಿ ಮತ್ತು ಯಾದಗಿರಿಯಲ್ಲಿ ಪ್ರಥಮ ವಿಭಾಗದ ಸಹಾಯಕ ಹುದ್ದೆಗಳಿಗೆ ಕೆಇಎ ನಡೆಸಿದ ಪರೀಕ್ಷೆಗಳನ್ನು ಬರೆಯುವಾಗ ಬ್ಲೂಟೂತ್ ಸಾಧನಗಳನ್ನು ಬಳಸಿದ್ದಕ್ಕಾಗಿ ಹಲವಾರು ಅಭ್ಯರ್ಥಿಗಳನ್ನು ಬಂಧಿಸಿದ 15 ದಿನಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ಸರ್ಕಾರವು ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ ವರ್ಗಾಯಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 19 ಮಂದಿಯನ್ನು ಬಂಧಿಸಲಾಗಿದೆ.

ಅಕ್ಟೋಬರ್‌ನಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಿಜಾಬ್‌ಗೆ ಅವಕಾಶ ಮಾಡಿಕೊಟ್ಟಿದ್ದರು. ಜನರು ತಮಗೆ ಬೇಕಾದ ರೀತಿಯಲ್ಲಿ ಉಡುಗೆ ತೊಡಲು ಸ್ವತಂತ್ರರು ಎಂದು ಹೇಳಿದ್ದರು. ಅಂತಹ ವಿದ್ಯಾರ್ಥಿಗಳನ್ನು ತಪಾಸಣೆಗೆ ಪರೀಕ್ಷೆಗೆ ಬೇಗ ಬರುವಂತೆ ಸಚಿವರು ಹೇಳಿದ್ದರು. ಈ ನಿರ್ಧಾರಕ್ಕೆ ಹಲವು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಏತನ್ಮಧ್ಯೆ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರಗಳನ್ನು ಧರಿಸಲು ಕೆಇಎ ಅವಕಾಶ ನೀಡಿದೆ. ಮಂಗಳಸೂತ್ರ ಮತ್ತು ಕಾಲ್ಬೆರಳ ಉಂಗುರಗಳನ್ನು ತೆಗೆಯಲು ಹಿಂದೂ ಪರ ಗುಂಪುಗಳು ಆಕ್ಷೇಪಿಸಿದ ನಂತರ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಜನವರಿ 2022 ರಲ್ಲಿ ಪ್ರಾರಂಭವಾದ ಹಿಜಾಬ್ ಸಮಸ್ಯೆಯು ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಆಗಿನ ಕರ್ನಾಟಕ ಸರ್ಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿತು. ಕರ್ನಾಟಕ ಹೈಕೋರ್ಟ್ ಕೂಡ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದು, ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಇನ್ನು ಹಿಬಾಜ್‌ಗೆ ನಿರ್ಬಂಧಿಸಿ ಮಂಗಳಸೂತ್ರಕ್ಕೆ ಅವಕಾಶ ಮಾಡಿಕೊಟ್ಟಿರುವ ಕ್ರಮಕ್ಕೆ ಆಕ್ಷೇಪಿಸಿರುವ ಕೆಲವು ಮುಸ್ಲಿಂ ಮುಖಂಡರು, ಅಕ್ರಮ ಕೇವಲ ಹಿಬಾಜ್‌ ಧರಿಸಿದರೆ ನಿಲ್ಲುತ್ತದೆಯೇ? ಅಲ್ಲದೆ ಇದುವರೆಗೂ ಹಿಜಾಬ್‌ ಧರಿಸಿರುವ ಯಾವ ಮಕ್ಕಳು ಅಕ್ರಮ ಎಸಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಹೀದೂಗಳಿಗೆ ತಾಳಿ ಎಷ್ಟು ಮುಖ್ಯವೋ ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಬಾಜ್‌ ಕೂಡ ಅಷ್ಟೇ ಪವಿತ್ರ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ನಡೆ ಖಂಡನೀಯ. ಇದು ಪ್ರಜಾಪ್ರಭುತ್ವ ಒಬ್ಬರಿಗೆ ಒಂದು ನ್ಯಾಯ ಇರಬಾರದು. ಎಲ್ಲರಿಗೂ ಸಮಾನ ಅವಕಾಶ, ಸಮಾನ ಪ್ರವೇಶ ಇರಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+