ಮಂಗಳೂರು: ಈ ಮನುಷ್ಯ 92 ಕೆಜಿ ತೂಕ ಕಳೆದುಕೊಂಡ

ಎರಡು ವರ್ಷಗಳಿಂದೀಚೆಗೆ 35 ವರ್ಷದ ಸುನಿಲ್ ಡಿ ಮೆಲ್ಲೋ ಅವರ ದೇಹ ತೂಕ 181 ಕೆಜಿಗೆ ತಲುಪಿತ್ತು. ಅವರೀಗ 92 ಕೆಜಿ ಕರಗಿದ್ದು, ಬೇರೆಯವರಂತೆ ಸಾಮಾನ್ಯ ಜೀವನ ನಡೆಸಲು ಆರಂಭಿಸಿದ್ದಾರೆ. bariatric bypass surgery ಮೂಲಕ ವೈದ್ಯರು ಸುನಿಲ್ ಡಿ ಮೆಲ್ಲೋಗೆ ಆಸರೆಯಾಗಿದ್ದಾರೆ.
( ರಾಜಾಜ್ಞೆಗೆ ಬೆದರಿ 320 ಕೆಜಿ ತೂಕ ಇಳಿಸಿದ ಶಾಯರಿ )
ಶಸ್ತ್ರಚಿಕಿತ್ಸೆಗೆ ಮುಂಚೆ ಸುನಿಲ್ ಡಿ ಮೆಲ್ಲೋ ಆರೋಗ್ಯ ಗಂಭೀರವಾಗುತ್ತಾ ಸಾಗಿತ್ತು. ಅವರ ದೇಹದಲ್ಲಿ ಒಂದೇ ಸಮನೆ ಕೊಬ್ಬು ಶೇಖರಣೆಯಾಗುತ್ತಾ ಸಾಗಿತ್ತು. ಸುನಿಲ್ ಡಿ ಮೆಲ್ಲೋಗೆ ಬಾಲ್ಯಾವಸ್ಥೆಯಿಂದಲೂ ಈ ಅವಸ್ಥೆ ಒದಗಿಬಂದಿತ್ತು. ಶಸ್ತ್ರಚಿಕಿತ್ಸೆ ನಂತರ ಸುನಿಲ್ ಡಿ ಮೆಲ್ಲೋ ಈಗ 89 ಕೆಜಿ ತೂಗುತ್ತಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಂದಹಾಸ ಬೀರಿದ್ದಾರೆ.
ಸುನಿಲ್ ಡಿ ಮೆಲ್ಲೋ 15 ವರ್ಷದವರಾಗಿದ್ದಾಗಲೇ 102 ಕೆಜಿ ದೇಹವನ್ನು ಹೊತ್ತುಕೊಳ್ಳುವಂತಾದರರು. 2005ರಲ್ಲಿ ಅವರಿಗೆ ಬೆನ್ನುನೋವು ತೀವ್ರವಾಗಿ ಬಾಧಿಸತೊಡಗಿತು. ಆಗ ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಚಿಕಿತ್ಸೆ ಪಡೆದರು.
ಅದರಂತೆ 6 ತಿಂಗಳಲ್ಲಿ 30 ಕೆಜಿ ದೇಹ ತೂಕ ಕಡಿಮೆಯಾಯಿತಾದರೂ ಮತ್ತೆ 3 ತಿಂಗಳಲ್ಲಿ 45 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ನ್ಯಾಚುರೋಪತಿ, ಡಯಟ್ ಅಂತೆಲ್ಲಾ ಟ್ರೈ ಮಾಡಿದರು. ಆದರೆ ಯಾವುದೂ ಮೈಗೆ ಹತ್ತಲಿಲ್ಲ.
ಆದರೆ 2010ರಲ್ಲಿ ಮಗ ಹುಟ್ಟಿದಾಗ ಸುನಿಲ್ ಡಿ ಮೆಲ್ಲೋ ಮೈಕೊಡವಿಕೊಂಡು ಎದ್ದುಕುಳಿತರು. ಇನ್ನು ಹೀಗೇ ಇರಲು ಸಾಧ್ಯವಿಲ್ಲ ಎಂದು ಸೀದಾ Kasturba Medical College Hospitalನಲ್ಲಿ ತಪಾಸಣೆಗೆ ಒಳಗಾದರು. 2011ರಲ್ಲಿ ವೈದ್ಯರು bariatric bypass surgeryಗೆ ತಾವು ಸಿದ್ಧವೆಂದರು.
ನೋಡನೋಡುತ್ತಿದ್ದಂತೆ ಸುನಿಲ್ ಡಿ ಮೆಲ್ಲೋ ದೇಹಸಿರಿ ಕರಗುತ್ತಾ ಬಂದಿತು. ಆಹಾರ ಪದ್ಧತಿ ಬದಲಾಯಿಸಿಕೊಳ್ಳುವುದರ ಜತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವಂತೆ ವೈದ್ಯ ಸಲಹೆ ನೀಡಲಾಗಿದೆ. ಸುನಿಲ್ ಎಲ್ಲರಂತೆ ಮಾಮೂಲಿ ಮನುಷ್ಯರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications