ಎನ್ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ವಿರುದ್ಧ ಜಾಮೀನು ರಹಿತ ವಾರೆಂಟ್
ಬೆಂಗಳೂರು, ನವೆಂಬರ್ 24: ಬೆಂಗಳೂರಿನ ಅನಾಥಾಶ್ರಮ 'ದಾರುಲ್ ಉಲೂಮ್ ಸಾಯಿದೀಯ ಯತೀಂಖಾನಾ'ದಲ್ಲಿನ ಮಕ್ಕಳ ಸ್ಥಿತಿಯನ್ನು ಮಧ್ಯಕಾಲೀನ ತಾಲಿಬಾನ್ ಜೀವನಕ್ಕೆ ಹೋಲಿಸಿದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ವಿರುದ್ಧ ಕರ್ನಾಟಕ ಸರ್ಕಾರ ಗುರುವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಪ್ರಿಯಾಂಕ್ ಕಾನೂಂಗೊ ವಿರುದ್ಧ ಅನಾಥಾಶ್ರಮದ ಸದಸ್ಯರೊಬ್ಬರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. "ನವೆಂಬರ್ 19 ರಂದು, ಪ್ರಿಯಾಂಕ್ ಕಾನೂಂಗೊ ಅವರು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (ಪೂರ್ವ) ಮತ್ತು ಇತರ ಅಧಿಕಾರಿಗಳೊಂದಿಗೆ ಕರ್ನಾಟಕದ ಬೆಂಗಳೂರಿನಲ್ಲಿ ದಾರುಲ್ ಉಲೂಮ್ ಸಯ್ಯದಿಯಾ ಯತಿಮ್ ಖಾನಾ ಎಂಬ ಅಕ್ರಮವಾಗಿ ನಡೆಯುತ್ತಿರುವ ನೋಂದಣಿಯಾಗದ ಅನಾಥಾಶ್ರಮವನ್ನು ಹಠಾತ್ ತಪಾಸಣೆ ನಡೆಸಿದರು. ಇದರಲ್ಲಿ ಅನೇಕ ಅಕ್ರಮಗಳು ಕಂಡುಬಂದಿವೆ ಎಂದು ಅವರು ಹೇಳಿದರು.

ಬಡ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುತ್ತಿರುವ ಆಯೋಗದ ಧ್ವನಿಯನ್ನು ಕರ್ನಾಟಕ ಸರ್ಕಾರ ಹತ್ತಿಕ್ಕಲು ಬಯಸುತ್ತಿದೆ ಎಂದು ಎನ್ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಹೇಳಿದ್ದಾರೆ. "ಬೆಂಗಳೂರಿನಲ್ಲಿ ಸಯ್ಯದಿಯಾ ಯತೀಂಖಾನಾ ಎಂಬ ಅನಾಥಾಶ್ರಮವಿತ್ತು. ನಾವು ಸಿಪಿಸಿಆರ್ ಕಾಯಿದೆಯಡಿ ಅದಕ್ಕೆ ಭೇಟಿ ನೀಡಿದ್ದೇವೆ. ಮಕ್ಕಳು ವಾಸಿಸುವ ಪ್ರತಿಯೊಂದು ಸ್ಥಳವನ್ನು ಪರಿಶೀಲಿಸುವ ಕರ್ತವ್ಯವನ್ನು ಈ ಕಾಯಿದೆ ನಮಗೆ ನೀಡುತ್ತದೆ. ವಿಶೇಷವಾಗಿ ಅನಾಥ ಮಕ್ಕಳು. ಆ ಸ್ಥಳದಲ್ಲಿ ಸುಮಾರು 200 ಅನಾಥ ಮಕ್ಕಳನ್ನು ಇರಿಸಲಾಗಿತ್ತು, ಮಾತ್ರವಲ್ಲದೆ 100 ಚದರ ಅಡಿಯ ಕೊಠಡಿಗಳಲ್ಲಿ ಎಂಟು ಮಕ್ಕಳನ್ನು ಒಟ್ಟಿಗೆ ಇರಿಸಲಾಗಿತ್ತು ಮತ್ತು ಉಳಿದ 5 ಕೊಠಡಿಗಳಲ್ಲಿ 40 ಮಕ್ಕಳು ವಾಸಿಸುತ್ತಿದ್ದರು. ಇದನ್ನು ಹೊರತುಪಡಿಸಿ 16 ಮಕ್ಕಳು ಕಾರಿಡಾರ್ನಲ್ಲಿ ಕಂಡುಬಂದವು" ಎಂದು ಅವರು ಹೇಳಿದ್ದಾರೆ.
ಮಕ್ಕಳು ಶಾಲೆಗೆ ಹೋಗುವುದಿಲ್ಲ. ಆದರೆ ಅವರಿಗೆ 200 ವರ್ಷಗಳಷ್ಟು ಹಳೆಯ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಅಲ್ಲಿದ್ದ ನೌಕರರು ಹೇಳಿದರು. ಅಷ್ಟೇ ಅಲ್ಲ, ಈ ಅನಾಥಾಶ್ರಮದಲ್ಲಿ ಮಕ್ಕಳಿಗೆ ಆಟವಾಡುವ ಪರಿಕರಗಳಿರಲಿಲ್ಲ, ಟಿವಿಯೂ ಇರಲಿಲ್ಲ, ಭಯಭೀತರಾದ ಚಿಕ್ಕ ಮಕ್ಕಳಿದ್ದರು. ನೋಟಿಸ್ ಜಾರಿ ಮಾಡಿದ ಬಳಿಕ ಕರ್ನಾಟಕ ಸರ್ಕಾರ ನನ್ನ ವಿರುದ್ಧ ಪ್ರಕರಣ ದಾಖಲಿಸಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ನಾವು ಬಡ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರೆ ಜಾಮೀನು ರಹಿತ ಸೆಕ್ಷನ್ಗಳ ಅಡಿಯಲ್ಲಿ ಅವರು ನಮ್ಮ ಧ್ವನಿಯನ್ನು ಹತ್ತಿಕ್ಕಲು ಬಯಸುತ್ತಾರೆ. ಕರ್ನಾಟಕ ಸರ್ಕಾರ ಅದನ್ನು ಧರ್ಮದ ದೃಷ್ಟಿಯಲ್ಲಿ ನೋಡುತ್ತದೆ, ಅವರು ಆಯೋಗವನ್ನು ಹತ್ತಿಕ್ಕುವ ಬಗ್ಗೆ ಮಾತನಾಡುತ್ತಾರೆ, ಅವರ ತಂತ್ರಗಳನ್ನು ಅವರು ಅರ್ಥಮಾಡಿಕೊಳ್ಳಬೇಕು. ಅವರು ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ" ಎಂದು ಪ್ರಿಯಾಂಕ್ ಕಾನೂಂಗೊ ಹೇಳಿದರು.
"ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಕಳುಹಿಸಲಾಗಿದೆ. ಈ ಪತ್ರವನ್ನು ನೀಡಿದ ಏಳು (7) ದಿನಗಳಲ್ಲಿ ಆಯೋಗಕ್ಕೆ ಕ್ರಮ ಕೈಗೊಂಡ ವರದಿಯನ್ನು ಕಳುಹಿಸುವಂತೆ ಆಯೋಗವು ಕೋರಿದೆ. ಅಕ್ರಮವಾಗಿ ನಡೆಯುತ್ತಿರುವ ಎಲ್ಲಾ ನೋಂದಣಿಯಾಗದ ಅನಾಥಾಶ್ರಮಗಳನ್ನು ಮುಚ್ಚುವಂತೆ ಎನ್ಸಿಪಿಸಿಆರ್ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಕಳುಹಿಸಿದೆ" ಎಂದು ಅವರು ಹೇಳಿದರು.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications