ಜಲಾಶಯಗಳ ನೀರು ಕುಡಿಯಲು ಮಾತ್ರ, ಕೃಷಿಗಿಲ್ಲ
ಬೆಂಗಳೂರು, ಆಗಸ್ಟ್ 18 : ಈ ವರ್ಷವೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಆದ್ದರಿಂದ, ಕರ್ನಾಟಕದಲ್ಲಿ ಬರದ ಛಾಯೆ ಎದುರಾಗುವ ಲಕ್ಷಣಗಳು ಕಾಣುತ್ತಿವೆ. ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕೃಷಿ ಚಟುವಟಿಕೆಗೆ ಬಿಡಬಾರದು ಎಂದು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರ
ಅಧ್ಯಕ್ಷತೆಯಲ್ಲಿ
ಬುಧವಾರ
ಸಂಜೆ
ಸಚಿವ
ಸಂಪುಟ
ಸಭೆ
ನಡೆಯಿತು.
ಸಭೆಯ
ಬಳಿಕ
ಮಾತನಾಡಿದ
ಕಾನೂನು
ಸಚಿವ
ಟಿ.ಬಿ.ಜಯಚಂದ್ರ
ಅವರು,
'ಈ
ವರ್ಷವೂ
ರಾಜ್ಯದಲ್ಲಿ
ಮಳೆಯ
ಕೊರತೆ
ಎದುರಾಗಿದೆ.
ಜಲಾಶಯಗಳಲ್ಲಿ
ಸಂಗ್ರಹವಾಗಿರುವ
ನೀರನ್ನು
ಕುಡಿಯುವ
ಉದ್ದೇಶಕ್ಕೆ
ಮಾತ್ರ
ಮೀಸಲಿಡಬೇಕು'
ಎಂದು
ಸಭೆಯಲ್ಲಿ
ನಿರ್ಧರಿಸಲಾಗಿದೆ
ಎಂದರು.[ಪಶ್ಚಿಮ
ಘಟ್ಟ
ಸಾಲಿನಲ್ಲಿ
ಜೋರು
ಮಳೆಗೆ
ಮೋಸ
ಇಲ್ಲ]
ನೀರಾವರಿ ಸಲಹಾ ಸಮಿತಿಗಳು ಈಗಿನ ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟು ಸರ್ಕಾರದ ಜತೆ ಸಹಕರಿಸುವಂತೆ ಮನವಿ ಮಾಡಬೇಕು ಎಂದು ಚರ್ಚೆ ನಡೆಯಿತು. ತಕ್ಷಣ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಲು ಕಂದಾಯ ಸಚಿವರ ನೇತೃತ್ವದ ವಿಪತ್ತು ನಿರ್ವಹಣಾ ಸಂಪುಟ ಉಪ ಸಮಿತಿ ಸಭೆ ಸೇರುವಂತೆ ಸೂಚನೆ ನೀಡಲಾಯಿತು.[ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]
'ಈ ವರ್ಷ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯ ಹೊರತುಪಡಿಸಿ ಉಳಿದೆಲ್ಲ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆಗಿರುವುದರಿಂದ ಇವೆರಡೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಿದೆ' ಎಂದು ಜಯಚಂದ್ರ ಹೇಳಿದರು.[ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಕುಸಿತ]