ಕಬ್ಬನ್ ಪಾರ್ಕ್ನಲ್ಲಿ ಹೊಸ ರೂಲ್ಸ್: ಪರಿಸರ ಉಳಿವಿಗಾಗಿ ಪ್ರತಿನಿತ್ಯ ಮೌನ ಪ್ರತಿಭಟನೆ
ಬೆಂಗಳೂರು, ಅಕ್ಟೋಬರ್ 03: ಕಬ್ಬನ್ ಪಾರ್ಕ್, ಬೆಂಗಳೂರಿನ ಸ್ವಚ್ಚಂದ ಮತ್ತು ಕಲುಷಿತಗೊಳ್ಳದ ಶುದ್ದಗಾಳಿ ಸಿಗುವ ಜಾಗ. ಈ ಪಾರ್ಕ್ ನಲ್ಲಿ ಸಾವಿರಾರು ಪ್ರಾಣಿ ಪಕ್ಷಿ ಸಂಕುಲ ವಾಸವಾಗಿವೆ. ಸಿಲಿಕಾನ್ ಸಿಟಿಯಲ್ಲಿ ಹಚ್ಚ ಹಸಿರಿನ ಹೊದಿಕೆಯಿಂದ ನಿಸರ್ಗದ ಮಧ್ಯೆ ಸ್ವಚ್ಚ ತಂಗಾಳಿಯಿಂದ ಕೂಡಿರುವ ಜಾಗ ಎಂದರೂ ತಪ್ಪಾಗಲಾರದು.
ದುಡಿದು ದಣಿದು ಬಂದವರಿಗೆ ರಿಲ್ಯಾಕ್ಸ್ ಮಾಡಲು ಇರುವ ಜಾಗ, ಮಕ್ಕಳಿಗೆ ಆಟ ಆಡಲು, ಕುಟುಂಬ ಸಮೇತ ಬಂದು ಕಾಲ ಕಳೆಯಲು ಇರುವ ಜಾಗ. ಆದರೆ ಸರ್ಕಾರದ ಇತ್ತೀಚಿನ ಒಂದು ನಿರ್ಧಾರ ಕಬ್ಬನ್ ಪಾರ್ಕ್ ಕಲುಷಿತಕ್ಕೆ ಕಾರಣವಾಗುತ್ತಾ ಎನ್ನುವ ಆತಂಕಕ್ಕೆ ದೂಡಿದ್ದು, ಪರಿಸರವಾದಿಗಳು ಕೂಡ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಬ್ಬನ್ ಪಾರ್ಕ್, ಲಾಲಾಬಾಗ್ ನಗರದ ಪರಿಸರವಾದಿಗಳ ಹಾಟ್ ಸ್ಪಾಟ್. ಕೇವಲ ಬೆಂಗಳೂರಿಗರು ಮಾತ್ರ ಅಲ್ಲದೇ ನಗರದ ಸುತ್ತಮುತ್ತ ಜಿಲ್ಲೆಯ ಜನರು ಕೂಡ ವಿಕೇಂಡ್, ರಜೆ ದಿನಗಳಲ್ಲಿ ಈ ಪಾರ್ಕ್ನ ಸ್ವಚ್ಚಂದ ವಾತಾವರಣ ಅನುಭವಕ್ಕಾಗಿ ಬರುತ್ತಾರೆ. ಕಾರಣ ವಿಕೇಂಡ್ ಗಳಲ್ಲಿ ಕಬ್ಬನ್ ಪಾರ್ಕ್ ಒಳಗೆ ವಾಹನ ಕಿರಿಕಿರಿ ಇಲ್ಲದೇ ಶಬ್ದ, ಮಾಲಿನ್ಯಗಳ ಕಿರಿಕಿರಿ ಇಲ್ಲ ಎನ್ನುವುದೇ ಪ್ರಮುಖ ಕಾರಣ. ಆದರೆ ಇನ್ಮುಂದೆ ವಿಕೇಂಡ್ ಮತ್ತು ರಜಾ ದಿನಗಳಲ್ಲೂ ವಾಹನ ಓಡಾಟಕ್ಕೆ ಅನುಮತಿ ನೀಡಲು ಸರ್ಕಾರ ಪ್ಲ್ಯಾನ್ ಮಾಡುತ್ತಿದೆ.
ಸದ್ಯ ಸರ್ಕಾರದ ಈ ಚಿಂತನೆ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದೆ. ವಾರದಲ್ಲಿ ಎರಡು ದಿನವಾದರೂ ಜನ ಇಲ್ಲಿ ಕಿರಿಕಿರಿ ಇಲ್ಲದೆ ನೆಮ್ಮದಿಯಿಂದ ಬಂದು ವಾತವರಣವನ್ನು ಅನುಭವಿಸುತ್ತಿದ್ದರು. ಆದರೆ ವಾರದ ಎಲ್ಲಾ ದಿನವು ವಾಹನ ಪಾರ್ಕಿಂಗ್ ಮತ್ತು ಓಡಾಟಕ್ಕೆ ಅವಕಾಶ ಕೊಟ್ಟರೆ ವೀಕೆಂಡ್ಗಳಲ್ಲಿ ಹೆಚ್ಚು ವಾಹನಗಳು ಬಂದು ಇಲ್ಲಿ ಪಾರ್ಕ್ ಮಾಡೋದಲ್ಲದೆ ಓಡಾಟ ಕೂಡ ಹೆಚ್ಚಾಗಲಿದೆ. ಇದರಿಂದ ಪ್ರಾಣಿ ಸಂಕುಲಕ್ಕೂ ತೊಂದರೆಯಾಗಲಿದೆ.
ಸದ್ಯ ಬೇರೆ ಬೇರೆ ಭಾಗಗಳಿಂದ ಬರುತ್ತಿರುವ ನೂರಾರು ಜಾತಿ ಪಕ್ಷಿಗಳು ಬೇರೆ ಕಡೆ ಹೋಗಿ ಪರಿಸರ ಹಾಳಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಈಗಾಗಲೇ ಪ್ರತಿಭಟನೆಗೆ ಮುಂದಾಗಿರುವ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ದಿನ ನಿತ್ಯ ಬೆಳಗ್ಗೆ ಮೌನ ಪ್ರತಿಭಟನೆ ಮೂಲಕ ಸರ್ಕಾರದ ಸೆಳೆಯಲು ಮುಂದಾಗಿದ್ದಾರೆ.

ವಾರದಲ್ಲಿ ಎರಡು ದಿನವಾದರೂ ವಾಹನ ಕಿರಿಕಿರಿ ಇಲ್ಲದೆ ಶಾಂತವಾಗಿರುವ ಕಬ್ಬನ್ ಪಾರ್ಕ್ನಲ್ಲಿ ಸರ್ಕಾರ ಏನಾದರೂ ಎಲ್ಲಾ ದಿನವು ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಟ್ಟರೆ. ನಗರದ ಇತರ ಕೆಲ ಭಾಗಗಳಂತೆ ಈ ಭಾಗ ಕೂಡ ಟ್ರಾಫಿಕ್ನಿಂದಾಗಿ ಕಿರಿಕಿರಿಯಿಂದ ಕೂಡಿರುತ್ತದೆ.
-
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಬೆಂಗಳೂರು-ಮಂಗಳೂರು ಮಧ್ಯ ನಿತ್ಯ ತಡರಾತ್ರಿ ವಿಮಾನ ಸೇವೆ, ಯಾವಾಗ? ಸಮಯ-ವೇಳಾಪಟ್ಟಿ ಇಲ್ಲಿದೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ












Click it and Unblock the Notifications