ಕನ್ನಡದ ತಾಯಿ ಸಂಸ್ಕೃತ ಎಂದ ಎಸ್.ಎಲ್.ಭೈರಪ್ಪ: ಶುರುವಾಯ್ತು ಹೊಸ ವಿವಾದ!
ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬೆನ್ನಲ್ಲೇ ಕೆಲವರು ಹಿರಿಯರು ಕನ್ನಡವು ಸಂಸ್ಕೃತದಿಂದ ಬಂದಿದೆ ಎಂದು ಹೇಳುತ್ತಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಇದೀಗ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ್ರು.ಟಿ.ಎ ಅವರು ಕನ್ನಡದ ಹಿರಿಯ ಸಾಹಿತಿ ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದಿರುವ ಎಸ್.ಎಲ್.ಭೈರಪ್ಪ ಅವರ ಹಳೆಯ ಹೇಳಿಕೆಗೆ ಗರಂ ಆಗಿದ್ದಾರೆ. ಕನ್ನಡದ ಹಿರಿಯ ಸಾಹಿತಿಗಳೇ ಈ ರೀತಿ ಹೇಳಿಕೆ ಕೊಡುವುದು ವಿಷಾದನೀಯ ಎನ್ನುತ್ತಿದ್ದಾರೆ. ಕನ್ನಡಿಗರು ಇದೇ ಸಂದರ್ಭದಲ್ಲಿ ಭೈರಪ್ಪ ಅವರ ಮೇಲೆ ಕನ್ನಡಿಗರು ಕೋಪಗೊಂಡಿದ್ದಾರೆ.
ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದಿರುವ ಎಸ್.ಎಲ್.ಭೈರಪ್ಪನವರು ಮತ್ತೆ ಕನ್ನಡದ ತಾಯಿ ಸಂಸ್ಕೃತ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ. ಅವರಿಗೆ ಸಂಸ್ಕೃತದ ವ್ಯಾಮೋಹ ವಿಪರೀತ ಇದ್ದಂತಿದೆ. ಈ ಇಳಿವಯಸ್ಸಿನಲ್ಲೂ ಅವರ ಸಂಸ್ಕೃತದ ಕುರಿತಾದ ಮೋಹ, ಅಮ್ಮ - ಮಗಳು ಅನ್ನುವ ಹಳಹಳಿಕೆ ಬೇಸರ ಹುಟ್ಟಿಸುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ್ರು.ಟಿ.ಎ ಅವರು ಹೇಳಿದ್ದಾರೆ.

ಕನ್ನಡದಲ್ಲಿ ಸಂಸ್ಕೃತ ನುಡಿಯ ಪದಗಳು ಇವೆ.ಹೇರಳವಾಗಿ ಇವೆ ಅನ್ನೋ ಮಾತನ್ನು ಯಾರೂ ಕೂಡ ಅಲ್ಲಗಳೆಯುತ್ತಿಲ್ಲ. ಪ್ರಶ್ನೆ ಇರುವುದು ಕನ್ನಡ ನುಡಿಯ ಹುಟ್ಟಿನ ಕುರಿತಾದದ್ದು. ಕನ್ನಡ ಮತ್ತು ಸಂಸ್ಕೃತ ಬೇರೆ ಬೇರೆ ನುಡಿ ಕುಟುಂಬದಿಂದ ಹುಟ್ಟಿವೆ, ಬೆಳೆದಿವೆ. ಇಲ್ಲಿ ಯಾರೂ ಅಮ್ಮನೂ ಅಲ್ಲ, ಅಪ್ಪನೂ ಅಲ್ಲ. ಕನ್ನಡ ಪ್ರೊಟೊ ದ್ರಾವಿಡಿಯನ್ ನುಡಿ ಕುಟುಂಬದಿಂದ ಹುಟ್ಟಿದ್ದರೆ, ಸಂಸ್ಕೃತ ಇಂಡೋ ಆರ್ಯನ್ ನುಡಿ ಕುಟುಂಬದಲ್ಲಿ ಹುಟ್ಟಿದೆ. ಎರಡರ ಹುಟ್ಟಿಗೂ ಯಾವ ಸಂಬಂಧವೂ ಇಲ್ಲ ಎಂದಿದ್ದಾರೆ.
ಎಲ್ಲ ನುಡಿಗಳಂತೆ ಕನ್ನಡವೂ ಕೂಡ ಬೇರೆ ಬೇರೆ ನುಡಿಗಳ ಪದಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಪಡೆದು ಬೆಳೆದಿವೆ. ಕನ್ನಡದಲ್ಲಿ ಸಂಸ್ಕೃತ ಮಾತ್ರವಲ್ಲ, ಪರ್ಷಿಯನ್, ಉರ್ದು, ತಮಿಳು, ಇಂಗ್ಲಿಷ್ ಪದಗಳು ಕಾಲಕಾಲಕ್ಕೆ ಬಂದು ಸೇರಿವೆ. ಅಂದ ಮಾತ್ರಕ್ಕೆ ಕನ್ನಡಕ್ಕೆ ಇವೆಲ್ಲ ನುಡಿಗಳು ಅಮ್ಮಂದಿರು, ಅಪ್ಪಂದಿರು ಆಗೋದಿಲ್ಲ. ಇಷ್ಟು ಸಣ್ಣ ವಿಷಯ ಮಾನ್ಯ ಭೈರಪ್ಪನವರಿಗೆ ಗೊತ್ತಿಲ್ಲ ಎಂದೇನಲ್ಲ. ಸಂಸ್ಕೃತವನ್ನು ಎಲ್ಲ ಭಾರತೀಯ ನುಡಿಗಳ ತಾಯಿ ಎಂದು ಹೇಳುವ ಹಿನ್ನೆಲೆಯಲ್ಲಿ ಒಂದು ಸಾಂಸ್ಕೃತಿಕ ರಾಜಕಾರಣವಿದೆ. ಅದರ ಭಾಗವಾಗಿ ಅವರು ಹೀಗೆ ಬಡಬಡಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಂಸ್ಕೃತ, ಪ್ರಾಕೃತ ನುಡಿಗಳನ್ನು ಆಳವಾಗಿ ಅರಿತಿರುವ ಕನ್ನಡದ ಹೆಸರಾಂತ ನುಡಿ ತಜ್ಞರಾದ ಹಂಪನಾ ಇಂದಿನ ಪ್ರಜಾವಾಣಿಯಲ್ಲಿ ಒಂದು ಲೇಖನ ಬರೆದಿದ್ದಾರೆ. ಭೈರಪ್ಪನವರು ಅದನ್ನು ಓದಿ ತಮ್ಮ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಿಕೊಳ್ಳಲಿ ಎಂದು ವಿನಂತಿ ಮಾಡುವೆ.
ಹಾಗೆಯೇ ಭೈರಪ್ಪನವರು ಬಿಡುವಾದಾಗ ನಮ್ಮ ಹಳ್ಳಿಗಳಿಗೆ ಒಂದು ಪ್ರವಾಸ ಹೋಗಿ ಬರಲಿ. ನಮ್ಮ ಹಳ್ಳಿಗಾಡಿನ ಜನರ ಜೊತೆ ಮಾತಾಡಿ ಬರಲಿ. ಅವರ ಮಾತುಗಳಲ್ಲಿ ಭೈರಪ್ಪ ನವರು ಹೇಳುವಂತೆ ಶೇ.60 ರಷ್ಟು ಬೇಡ ಶೇ. 10 ರಷ್ಟು ಕೂಡ ಸಂಸ್ಕೃತ ಪದಗಳು ಇರುವುದಿಲ್ಲ. ಆಗ ಬಹುಶಃ ಭೈರಪ್ಪನವರಿಗೆ ಸಂಸ್ಕೃತ ಕನ್ನಡಕ್ಕೆ ಅಮ್ಮನಂತಲ್ಲ, ತಂಗಿಯಂತೋ ತಮ್ಮನಂತೋ ತೋರಬಹುದು ಎಂದಿದ್ದಾರೆ.
ಭೈರಪ್ಪನವರು ಕನ್ನಡದ ಬಹುದೊಡ್ಡ ಸಾಹಿತಿಗಳು. ಕನ್ನಡ ನುಡಿಯ ಋಣ, ಕನ್ನಡಿಗರ ಪ್ರೀತಿಯ ಋಣ ಅವರ ಮೇಲಿದೆ. ಹೀಗಾಗಿ ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುವುದನ್ನು ಅವರು ಬಿಡಲಿ, ಅವರಿಗೆ ಒಳಿತಾಗಲಿ ಎಂದು ಹಾರೈಸುವೆ ಎಂದು ಸುದೀರ್ಘವಾಗಿ ಅವರ ಟ್ವೀಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications