ಲೋಕಾಯುಕ್ತ : ಎಸ್.ಆರ್.ನಾಯಕ್ ನೇಮಕ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ
ಬೆಂಗಳೂರು, ಮಾರ್ಚ್ 02 : ಕರ್ನಾಟಕದ ಲೋಕಾಯುಕ್ತರಾಗಿ ನ್ಯಾ.ಎಸ್.ಆರ್.ನಾಯಕ್ ಅವರನ್ನು ನೇಮಕ ಮಾಡುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಕರ್ನಾಟಕ ಸರ್ಕಾರ ಲೋಕಾಯುಕ್ತ ಹುದ್ದೆಗೆ ಎಸ್.ಆರ್.ನಾಯಕ್ ಅವರ ಹೆಸರನ್ನು ಅಂತಿಮಗೊಳಿಸಿದ್ದು, ರಾಜ್ಯಪಾಲರಿಗೆ ಶಿಫಾರಸು ಮಾಡಲು ತಯಾರಿ ನಡೆಸುತ್ತಿದೆ.
ಎಚ್.ಫಾರೂಕ್
ಎಂಬುವವರು
ಸುಪ್ರೀಂಕೋರ್ಟ್ಗೆ
ಅರ್ಜಿ
ಸಲ್ಲಿಸಿದ್ದು,
ಎಸ್.ಆರ್.ನಾಯಕ್
ಅವರನ್ನು
ನೇಮಕ
ಮಾಡುವುದನ್ನು
ಪ್ರಶ್ನಿಸಿದ್ದಾರೆ.
ಕೋರ್ಟ್
ಅರ್ಜಿಯ
ವಿಚಾರಣೆಗೆ
ಒಪ್ಪಿಗೆ
ನೀಡಿದೆ.
ಇಂದು
ಅರ್ಜಿಯ
ವಿಚಾರಣೆ
ಕೋರ್ಟ್ನಲ್ಲಿ
ನಡೆಯುವ
ಸಾಧ್ಯತೆ
ಇದೆ.
[ಲೋಕಾಯುಕ್ತ
ಹುದ್ದೆಗೆ
ನಾಯಕ್
ಹೆಸರು
ಅಂತಿಮ]
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ಹಗರಣ ಬೆಳಕಿಗೆ ಬಂದ ಬಳಿಕ ಲೋಕಾಯುಕ್ತ ಹುದ್ದೆ ವಿವಾದ ಹುಟ್ಟುಹಾಕುತ್ತಿದೆ. ಪುತ್ರ ಅಶ್ವಿನ್ ರಾವ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದು, ಅವರ ಬಂಧನವಾದ ಬಳಿಕ ಲೋಕಾಯುಕ್ತರಾಗಿದ್ದ ನ್ಯಾ.ವೈ.ಭಾಸ್ಕರರಾವ್ ಅವರು ರಾಜೀನಾಮೆ ನೀಡಿದ್ದರು. [ಲೋಕಾ ಭ್ರಷ್ಟಾಚಾರ : ಭಾಸ್ಕರರಾವ್ ಗೆ ಸಂಕಟ]
2015ರ ಡಿಸೆಂಬರ್ 8ರಂದು ನ್ಯಾ.ವೈ.ಭಾಸ್ಕರರಾವ್ ಅವರು ರಾಜೀನಾಮೆ ನೀಡಿದ ಬಳಿಕ ನೂತನ ಲೋಕಾಯುಕ್ತರನ್ನು ನೇಮಕ ಮಾಡುವುದು ವಿಳಂಬವಾಗುತ್ತಿದೆ. ಸದ್ಯ, ಸರ್ಕಾರ ಎಸ್.ಆರ್.ನಾಯಕ್ ಅವರನ್ನು ನೇಮಕ ಮಾಡಲು ಮುಂದಾಗಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. [ಕರ್ನಾಟಕ ಲೋಕಾಯುಕ್ತ ಹಗರಣದ Timeline]
ನ್ಯಾ.ಎಸ್.ಆರ್.ನಾಯಕ್ ಅವರು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿ 2007ರಿಂದ 2012ರ ತನಕ ಕಾರ್ಯನಿರ್ವಹಿಸಿದ್ದಾರೆ. ಸರ್ಕಾರಿ ಹುದ್ದೆ ನಿರ್ವಹಣೆ ಮಾಡಿದವರು ಲೋಕಾಯುಕ್ತರಾಗಲು ಅರ್ಹರಲ್ಲ ಎಂದು ಫಾರೂಕ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.