ಮೈಸೂರು ದಸರಾಕ್ಕೆ ಗೋಲ್ಡನ್ ಚಾರಿಯಟ್ ರೈಲಿನಲ್ಲಿ ಹೋಗಿ
ಬೆಂಗಳೂರು, ಅ.14 : ಪ್ರವಾಸೋದ್ಯಮ ಇಲಾಖೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮೈಸೂರು ದಸರಾ ಪ್ರಯುಕ್ತ ಗೋಲ್ಡನ್ ಚಾರಿಯಟ್ ವಿಶೇಷ ರೈಲು ಪ್ರವಾಸದ ಪ್ಯಾಕೇಜ್ ರೂಪಿಸಿದೆ. ಒಟ್ಟು 88 ಪ್ರವಾಸಿಗರಿಗೆ ಅವಕಾಶವಿರುತ್ತದೆ.
ನಾಗಾಪುರ ಗಿರಿಜನ ಆಶ್ರಮ ಶಾಲೆಯಿಂದ ಹೊರಟಿತು ಗಜ ಪಯಣ
ಸೆಪ್ಟೆಂಬರ್ 23ರಿಂದ ಅಕ್ಟೋಬರ್ 1ರ ತನಕ ಈ ವಿಶೇಷ ಪ್ಯಾಕೇಜ್ ಲಭ್ಯವಿರುತ್ತದೆ. ಎರಡು ರಾತ್ರಿ ಮತ್ತು ಒಂದು ದಿನದ ಪ್ಯಾಕೇಜ್ಗೆ ಭಾರತೀಯರಿಗೆ 25, ವಿದೇಶಿಯರಿಗೆ 40 ಸಾವಿರ ರೂ. ದರ ನಿಗದಿ ಮಾಡಲಾಗಿದೆ.
ಸೆಪ್ಟೆಂಬರ್ 23ಮತ್ತು 29ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಸುವರ್ಣರಥ ರೈಲು ಹೊರಡಲಿದೆ. ಈ ರೈಲು 44 ಐಷಾರಾಮಿ ಬೋಗಿಗಳನ್ನು ಹೊಂದಿದ್ದು, 88 ಪ್ರವಾಸಿಗರು ಮಾತ್ರ ಪ್ರಯಾಣ ಮಾಡಲು ಅವಕಾಶವಿರುತ್ತದೆ.
ಖಾದ್ಯ ಪ್ರಿಯರಿಗೆ ಈ ಬಾರಿ ದಸರೆಯಲ್ಲಿ ಹಬ್ಬವೋ ಹಬ್ಬ!
ಅಂದಹಾಗೆ ಸೆಪ್ಟೆಂಬರ್ 21ರಿಂದ 30ರ ತನಕ ಈ ಬಾರಿಯ ದಸರಾ ಮಹೋತ್ಸವ ನಡೆಯಲಿದೆ. ದಸರಾಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ಈ ವಿಶೇಷ ಪ್ಯಾಕೇಜ್ ರೂಪಿಸಿದೆ. ಪ್ರತಿ ವರ್ಷ ದಸರಾ ಸಮಯದಲ್ಲಿ ಕೆಎಸ್ಆರ್ಟಿಸಿ ಸಹ ಮೈಸೂರಿಗೆ ಹೆಚ್ಚುವರಿ ಬಸ್ಸುಗಳನ್ನು ಓಡಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ http://www.goldenchariottrain.com/ ವೆಬ್ ಸೈಟ್ ನೋಡಿ