Get Updates
Get notified of breaking news, exclusive insights, and must-see stories!

ಹಾಸನದಲ್ಲಿ ದೇವೇಗೌಡರ ನಿವೇಶನಗಳ ಅಕ್ರಮ ಬಿಚ್ಚಿಟ್ಟ ಕೈ ನಾಯಕ

ಮೈಸೂರು, ಆಗಸ್ಟ್ 09: ಮುಡಾ ಹಗರಣ ರಾಜ್ಯ ಸರ್ಕಾರದ ಕೊರಳಿಗೆ ಬಿಗಿಪಡಿಸಲು ಒಂದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಪಾದಯಾತ್ರೆ ಕೈಗೊಂಡರೆ, ಅವರಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಇಂದು ಮೈಸೂರಿನಲ್ಲಿ ಬೃಹತ್ ಜನಾಂದೋಲನ ಕಾರ್ಯಕ್ರಮ ನಡೆಸಿತು. ಲಕ್ಷಾಂತರ ಜನ ಸೇರಿದ್ದರು. ಈ ವೇಳೆ ಕೈ ಪಡೆ ಒಬ್ಬೊಬ್ಬರಾಗೇ ಬಿಜೆಪಿ, ಜೆಡಿಎಸ್ ಕಾಲದ ಹಗರಣಗಳನ್ನು ಬಿಚ್ಚಿಟ್ಟರು. ಈ ಪೈಕಿ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅವರು ಹಿಂದುಳಿದ ವರ್ಗದ ಸಿಎಂ ವಿರುದ್ಧ ಅಸಹನೆ ಇದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ ಜನಾಂದೋಲನ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಹಿಂದುಳಿದ ವರ್ಗದಿಂದ ಬಂದಿರುವ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಅಪಥ್ಯವಾಗಿದೆ. ಹೀಗಾಗಿ ಅವು ಆಧಾರರಹಿತ ಆರೋಪಗಳನ್ನು ಮಾಡುತ್ತ ಕುರ್ಚಿಯಿಂದ ಕೆಳಕ್ಕಿಳಿಸಲು ಸಂಚು ರೂಪಿಸುತ್ತಿವೆ ಎಂದು ಆರೋಪಿಸಿದರು.

Muda Scam HD Deve Gowda and His Family Have Hundreds of Sites in illegal at Hassan MB Patil

ಸಿಎಂ ಪದಚ್ಯುತಿಗೆ ಪಿತೂರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 40 ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ. ಈ ನಾಲ್ಕು ದಶಕಗಳಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಅವರ ಸಾರ್ವಜನಿಕ ಬದುಕಿನಲ್ಲಿ ಇಲ್ಲ. ಈಗ ಮುಡಾ ಹಗರಣದ ನೆಪದಲ್ಲಿ ಅವರನ್ನು ಪದಚ್ಯುತಗೊಳಿಸುವ ಪಿತೂರಿ ನಡೆಯುತ್ತಿದೆ. ಆದರೆ ನಾವೆಲ್ಲರೂ ಸಿಎಂ ಬೆಂಬಲಕ್ಕೆ ಇದ್ದೇವೆ. ಜನಾದೇಶವೂ ಅವರ ಪರವಾಗಿಯೇ ಇದೆ ಎಂದು ಅವರು ಪ್ರತಿಪಾದಿಸಿದರು.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಕಿಂಚಿತ್ತೂ ಇಲ್ಲ. ಮುಡಾ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು, ಕಾನೂನಿನ ಪ್ರಕಾರವೇ ಅವರ ಪತ್ನಿಗೆ ಬದಲಿ ನಿವೇಶನಗಳನ್ನು ಕೊಟ್ಟಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನಿದೆ ಎಂದು ಅವರು ಪ್ರಶ್ನಿಸಿದರು.

ಹಾಸನದಲ್ಲಿ ದೇವೇಗೌಡ ಕುಟುಂಬಕ್ಕೆ ನೂರಾರು ನಿವೇಶನ

ಇನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಮತ್ತು ಅವರ ಕುಟುಂಬದವರು ಹಾಗೂ ನೆಂಟರಿಷ್ಟರೆಲ್ಲ ಹಾಸನದಲ್ಲಿ ನೂರಾರು ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪಾಪಪ್ರಜ್ಞೆ ಇಲ್ಲದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಈಗ ಬಿಜೆಪಿ ಜತೆ ಸೇರಿಕೊಂಡು ಪಾದಯಾತ್ರೆಯ ‌ನಾಟಕ ಆಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಜೆಡಿಎಸ್ ಜಾತ್ಯತೀತ ತತ್ವಕ್ಕೆ ಎಳ್ಳುನೀರು ಬಿಟ್ಟು, ಅದನ್ನೆಲ್ಲ ಬಿಜೆಪಿಗೆ ಒಪ್ಪಿಸಿದೆ. ಈಗ ಸ್ವಾರ್ಥಕ್ಕಾಗಿ ಅದು ಭ್ರಷ್ಟ ಬಿಜೆಪಿ ಜತೆ ಸೇರಿಕೊಂಡು, ಅಸ್ತಿತ್ವಕ್ಕೆ ಹೋರಾಡುತ್ತಿದೆ ಎಂದು ಅವರು ಹರಿಹಾಯ್ದರು.

Muda Scam HD Deve Gowda and His Family Have Hundreds of Sites in illegal at Hassan MB Patil

ಅವ್ಯವಹಾರ ಮಾಡಿದವರಿಂದ ಸಿಎಂ ಮೇಲೆ ಆರೋಪ

ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಬದಲಿ ನಿವೇಶನಗಳ ಹಂಚಿಕೆ ಬಿಜೆಪಿ ಸರ್ಕಾರ ಆಗಿರುವ ಘಟನೆಯಾಗಿದೆ. ಆಗ ಅಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರೇ ಇದ್ದರು. ವಾಸ್ತವವಾಗಿ ಅವ್ಯವಹಾರ ಮಾಡಿರುವವರು ಅವರು. ಆದರೆ ವಿನಾ ಕಾರಣ ಸಿಎಂ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ. ಇದರ ಹಿಂದೆ ಕೇಂದ್ರ ಬಿಜೆಪಿ ಸರ್ಕಾರ ಕುಮ್ಮಕ್ಕು ಇದೆ ಎಂದು ಅವರು ಹೇಳಿದರು.

ಬಿಜೆಪಿ ಮುಖಂಡರಾದ ಶಾಸಕ ಬಸವನಗೌಡ ಯತ್ನಾಳ್ ಅವರು ಸ್ವತಃ ತಮ್ಮ ಪಕ್ಷದವರ ಮೇಲೆಯೇ ಬಹಿರಂಗವಾಗಿ ಆರೋಪಿಸಿದ ಅವರು, ಬಿಎಸ್ ಯಡಿಯೂರಪ್ಪ ಅವರು ಮಾರಿಷಸ್ ನಲ್ಲಿ 10 ಸಾವಿರ ಕೋಟಿ ಇಟ್ಟು ಬಂದಿದ್ದಾರೆ ಎಂದು ಹೇಳಿದ್ದರು.

ಬಿಜೆಪಿ ಇದ್ದಾಗ 2,000 ಕೋಟಿ ಲೂಟಿ

ಕೊರೊನಾ ಅಕ್ರಮದಲ್ಲಿ 2,000 ಕೋಟಿ ಲೂಟಿ ನಡೆದಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಬಿಜೆಪಿ ಪಕ್ಷದವರು ಅಧಿಕಾರದಲ್ಲಿದ್ದಾಗ ಎಲ್ಲದರಲ್ಲೂ ಲೂಟಿ ಮಾಡಿದ್ದಾರೆ ಎಂದು ಟೀಕಾಸ್ತ್ರ ಪ್ರಯೋಗಿಸಿದರು.

ಬಿಜೆಪಿ- ಜೆಡಿಎಸ್ ಪಕ್ಷದವರು ನಾಳೆ ಇಲ್ಲಿಗೆ ಬಂದಾಗ ಇವೆಲ್ಲಾ ಪ್ರಶ್ನೆಗಳನ್ನು ಜನರು ಕೇಳಬೇಕು. ಲೂಟಿ ಮಾಡಿದ ನೀವು, ಸಿದ್ದರಾಮಯ್ಯ‌ ಅವರಿಗೆ ಮಸಿ ಬಳಿಯಲು ಏಕೆ‌ ಬಂದಿದ್ದೀರಿ? ಎಂದು ಧ್ವನಿ ಎತ್ತಬೇಕು ಎಂದು ಅವರು ಕರೆ ಕೊಟ್ಟರು.

ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಜಾರ್ಜ್ ಸೇರಿದಂತೆ ಕಾಂಗ್ರೆಸ್ಸಿನ ನಾಯಕಗಣವೇ ಕಂಡು ಬಂತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+