MSIL Chit Fund: ಸುರಕ್ಷಿತ 'ಮೈಕ್ರೋ ಚಿಟ್ ಫಂಡ್' ಪರಿಚಯ, ಹೊಸ ಆಪ್ ರಚನೆ: ಮಹತ್ವದ ಅಪ್ಡೇಟ್ಸ್
ಬೆಂಗಳೂರು, ಜುಲೈ 09: ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ನಡೆಸುವ ಚಿಟ್ ಫಂಡ್ ಯೋಜನೆಯಲ್ಲಿ ಮಹತ್ವದ ಹಾಗೂ ಪಾರದರ್ಶಕ ಬದಲಾವಣೆಗಲೂ ಆಗುತ್ತಿವೆ. ರಾಜ್ಯ ಸರ್ಕಾರ ಹೊಸದಾಗಿ ಗುರಿ ಹಾಕಿಕೊಂಡಿದೆ. ಮೊಬೈಲ್ ಆಬ್ ಸಹ ಹೊರ ತರುತ್ತಿದೆ. ಈ ಕುರಿತು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಹೈ ಓಲ್ಟೇಜ್ ಸಭೆ ಮಾಡಿದ್ದಾರೆ. ಉಳಿತಾಯ, ವ್ಯವಹಾರ ಕುರಿತು ಮಹತ್ವದ ಅಪ್ಡೇಟ್ ನೀಡಿದ್ದಾರೆ.
ಎಂಎಸ್ಐಎಲ್ ಚಿಟ್ ಫಂಡ್ ಕರ್ನಾಟಕ ರಾಜ್ಯದ ಸರ್ಕಾರದ ಒಂದು ಉದ್ಯಮ ಎನ್ನಬಹುದು. ಚಿಟ್ ಫಂಡ್ ಎಲ್ಲಾ ಆದಾಯ ಗುಂಪುಗಳ ಅಗತ್ಯತೆ ಪೂರೈಕೆಗೆ ವಿನ್ಯಾಸ ಮಾಡಿದ್ದು, ಸಣ್ಣ ಉಳಿತಾಯ ಪ್ರೋತ್ಸಾಹಿಸಲಾಗುತ್ತದೆ. ಸಾರ್ವಜನಿಕರಿಗೆ ಅನುಕೂಲ ಒದಗಿಸುವ ಆರ್ಥಿಕ ವ್ಯವಹಾರ ಇದಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಸಚಿವ ಎಂಬಿ ಪಾಟೀಲ್ ಅವರು MSIL ಚಿಟ್ ಫಂಡ್ ಯೋಜನೆಯಲ್ಲಿ ಉಳಿತಾಯ ಹೆಚ್ಚಿಸುವುದು, ಸಬಲೀಕರಣಗೊಳಿಸುವುದು, ಹಣಕಾಸು ಸೇರ್ಪಡೆಗೆ ಚಾಲನೆ ನೀಡುವ ಕೆಲಸವಾಗಿದೆ. ಅನೌಪಚಾರಿಕ ಉಳಿತಾಯದಲ್ಲಿ ರಾಜ್ಯದ ಸಾಮರ್ಥ್ಯ ಬಹಿರಂಗಗೊಳಿಸಲು (ಅನ್ಲಾಕ್) MSIL ನ ಚಿಟ್ ಫಂಡ್ ಕಾರ್ಯಾಚರಣೆಗಳನ್ನು ಪರಿವರ್ತಿಸಲಿದ್ದೇವೆ. ಪಾರದರ್ಶಕತೆ, ನಂಬಿಕೆ ಮತ್ತು ತಂತ್ರಜ್ಞಾನದ ಮೇಲೆ ಸ್ಥಾಪಿತವಾದ ಈ ಮಾರುಕಟ್ಟೆಯನ್ನು ವಾರ್ಷಿಕವಾಗಿ ₹10,000 ಕೋಟಿಗೆ ಬೆಳೆಸುವುದು ಗುರಿ ಸರ್ಕಾರ ಹೊಂದಿದೆ ಎಂದರು.
ರಾಜ್ಯದ ಗ್ರಾಮೀಣ ಭಾಗಗಳು, ಸೂಕ್ಷ್ಮ ಪ್ರದೇಶಗಳ ಜನರು ಸೇರಿದಂತೆ ಎಲ್ಲ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಸಾರ್ವಜನಿಕರನ್ನು ತಲುಪಲು ಸುರಕ್ಷಿತ, ಬಳಕೆದಾರ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಹೊರ ತರಲಿದ್ದೇವೆ. ನಿವೃತ್ತ ಬ್ಯಾಂಕರ್ಗಳನ್ನು ಒಳಗೊಂಡಂತೆ ಮೀಸಲಾದ ಏಜೆಂಟ್ ನೆಟ್ವರ್ಕ್ ಅನ್ನು ನಿರ್ಮಿಸುತ್ತಿದ್ದೇವೆ. ಒಟ್ಟಾರೆ ಈ ಉಳಿತಾಯ ಯೋಜನೆಯಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿದ್ದರ ಎಂದು ಮಹತ್ವದ ಅಪ್ಡೇಟ್ ನೀಡಿದರು.
ಮೈಕ್ರೋ ಚಿಟ್ಗಳಿಂದ ದೊಡ್ಡ ಪ್ರಮಾಣದ ಉಳಿತಾಯ, ವ್ಯವಹಾರಗಳ (₹1 ಲಕ್ಷ-₹1 ಕೋಟಿ) ಸುಧಾರಣೆಗಳು, ಸುರಕ್ಷಿತತೆ ಅಗತ್ಯವಾಗಿರುತ್ತದೆ. ಉಳಿತಾಯವನ್ನು ಉತ್ತಮವಾಗಿ ಯೋಜಿಸಲು ಮತ್ತು ಔಪಚಾರಿಕ ಬ್ಯಾಂಕಿಂಗ್ನ ಹೊರಗೆ ಹೆಚ್ಚು ಅಗತ್ಯವಿರುವ ಹಣಕಾಸು ಆಯ್ಕೆಗಳನ್ನು ಪ್ರವೇಶಿಸಲು ಜನರಿಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗುತ್ತದೆ.
ಎಂಎಸ್ಐಎಲ್ ಎಂಬ ಮದ್ಯ ಕೇಂದ್ರಿತ ಸಂಸ್ಥೆಯಿಂದ ವಿಶ್ವಾಸಾರ್ಹ, ಡಿಜಿಟಲ್-ಮೊದಲ ಹಣಕಾಸು ವೇದಿಕೆ ಪರಂಪರೆ ಮರುರೂಪಿಸುವಲ್ಲಿ ಕೈಗೊಂಡ ನಿರ್ಧಾರಗಳು ಚಿಟ್ಫಂಡ್ ಪಾಲಿಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications