ಸರ್ಜಾ ಪರ ನಿಂತ ನಟಿ ಹರ್ಷಿಕಾ ಪೂಣಚ್ಚಗೆ ಬೆದರಿಕೆ, ಹಣದ ಆಮಿಷ
ಬೆಂಗಳೂರು, ಅಕ್ಟೋಬರ್ 27: ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿ ಆಗಿದ್ದ ನಟ ಅರ್ಜುನ್ ಸರ್ಜಾ ಪರ ನಿಂತಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಹಾಗೂ ಹಣದ ಆಮಿಷ ಸಹ ಒಡ್ಡಾಲಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಅಳಲು ತೋಡಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಚ ಅವರು, 'ನನಗೆ ಎರಡು ದಿನಗಳಿಂದ ಹೆಸರಾಂತ ವ್ಯಕ್ತಿಗಳಿಂದ ಬೆದರಿಕೆ ಸಂದೇಶಗಳು, ಕರೆಗಳು ಬರುತ್ತಿವೆ, ನನ್ನನ್ನು ಸುಮ್ಮನಾಗಿಸಲು ಹಣದ ಆಮೀಷ ಒಡ್ಡುತ್ತಿದ್ದಾರೆ' ಎಂದು ಹೇಳಿದ್ದಾರೆ.
ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ಪ್ರಕರಣಕ್ಕೆ ಸಂಬಧಿಸಿದಂತೆ ಹರ್ಷಿಕಾ ಪೂಣಚ್ಚ ಅವರು ಅರ್ಜುನ್ ಸರ್ಜಾ ಪರ ವಹಿಸಿ ಹೇಳಿಕೆಗಳನ್ನು ನೀಡಿದ್ದರು. ಇದೇ ಕಾರಣಕ್ಕೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.
| Array |
'ಪೊಲೀಸ್ ದೂರು ನೀಡುತ್ತೇನೆ'
'ಬೆದರಿಕೆ ಕರೆ, ಸಂದೇಶಗಳು ಹೀಗೆ ಮುಂದುವರೆದರೆ ನಾನು ಪೊಲೀಸ್ ಠಾಣೆ ಮೆಟ್ಟಿಲೇರುತ್ತೇನೆ. ಕೆಚ್ಚೆದೆಯ ಕನ್ನಡಿತಿಯಾದ ನಾನು ಸದಾ ಸತ್ಯದ ಪರ' ಎಂದು ಅವರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
| Array |
ಅವಕಾಶ ಎಲ್ಲಾ ಮಾಡಿದವರು ಆರೋಪಿಸುತ್ತಿದ್ದಾರೆ
ಜೊತೆಗೆ ಉದ್ದದ ಪತ್ರವನ್ನು ಬರೆದಿರುವ ನಟಿ ಹರ್ಷಿಕ ಪೂಣಚ್ಚ, ಕೆಲವು ವರ್ಷಗಳ ಹಿಂದೆ, ಹಣ, ಅವಕಾಶ, ಶ್ರೀಮಂತ ಬದುಕಿಗಾಗಿ ಎಲ್ಲವನ್ನೂ ಮಾಡಿದ ಅವಕಾಶವಾದಿ ಹೋರಾಟಗಾರ್ತಿ ನಟಿಯರೇ ಇಂದು ಅದೇ ಗಂಡಸರ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬರೆದಿದ್ದಾರೆ.
| Array |
ಗಾಂಜಾ ಸೇದುತ್ತಿದ್ದ ಹೋರಾಟಗಾರ್ತಿ ನಟಿಯರು
ಇಂದು ಇತರರ ಮೇಲೆ ಆರೋಪ ಮಾಡುತ್ತಿರುವ ನಟಿಯರೇ ವಿದೇಶಗಳಲ್ಲಿ ಖ್ಯಾತ ನಿರ್ಮಾಪಕರುಗಳ ಜೊತೆ ಗಾಂಜಾ ಸೇದುತ್ತಾ, ಲಲ್ಲೆ ಹೊಡೆಯುತ್ತಿದ್ದುದನ್ನು, ನಾನು ಹೇಳಲಾಗದ ಕಾರ್ಯಗಳನ್ನು ಮಾಡಿರುವುದನ್ನು ನಾನು ಕಂಡಿದ್ದೇನೆ ಎಂದು ಹರ್ಷಿಕಾ ಹೇಳಿದ್ದಾರೆ. ಜೊತೆಗೆ ಕೆಲವು ವಿಡಿಯೋಗಳನ್ನೂ ನೋಡಿದ್ದೇನೆ ಎಂದು ಸಹ ಅವರು ಬರೆದುಕೊಂಡಿದ್ದಾರೆ.

ಬಾಂಬ್ ಸಿಡಿಸಿರುವ ಹರ್ಷಿಕಾ
#ಮೀಟೂ ನಟಿಯರು ಗಾಂಜಾ ಸೇದುತ್ತಾ, ಯಾವ, ಯಾವ ನಟರ ಹೆಸರನ್ನು ಹೇಗೆ ಹಾಳು ಮಾಡಬಹುದು ಎಂದು ಮಾತನಾಡಿಕೊಳ್ಳುತ್ತಿದ್ದ ವಿಡಿಯೋವನ್ನು ಸಹ ನಾನು ನೋಡಿದ್ದೇನೆ ಎಂದು ಹೊಸ ಬಾಂಬ್ ಅನ್ನು ಹರ್ಷಿಕಾ ಟ್ವಿಟ್ಟರ್ನಲ್ಲಿ ಸಿಡಿಸಿದ್ದಾರೆ.

ಎರಡೂ ಕೈ ಇಂದ ಮಾತ್ರವೇ ಚಪ್ಪಾಳೆ
ಎರಡೂ ಕೈ ಇಲ್ಲದೆ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ, ನಟಿಯರು ಅವಕಾಶ ನೀಡಿದ್ದಕ್ಕಾಗಿಯೇ ಲೈಂಗಿಕ ಕಿರುಕುಳ ಆಗಿವೆ. ಈಗ ಆರೋಪಿಸುತ್ತಿರುವ ನಟಿಯರು ಕಿರುಕುಳ ನಡೆದಾಗಲೇ ನಮಗಿದು ಸರಿ ಬರುತ್ತಿಲ್ಲ ಎಂದು ಹೇಳಿದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ನಾನು ಹಾಗೆ ಹೇಳಿದ್ದೇನೆ ಆದರೂ ನಾನು ಚಿತ್ರರಂಗದಲ್ಲಿ ಇಷ್ಟು ವರ್ಷ ಉಳಿದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications