ಕೇಂದ್ರದ ಯೋಜನೆಗಳಿಗೆ ಶೇ. 90ರಷ್ಟು ಅನುದಾನ ಕೊಡಿ
ಬೆಂಗಳೂರು, ಜೂ.24 : ಕೇಂದ್ರ ಸರ್ಕಾರದ ಯೋಜನೆಗಳಿಗೆ ಶೇ.90ರಷ್ಟು ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕೇಂದ್ರ ಶೇ.90ರಷ್ಟು ಅನುದಾನ ನೀಡಿದರೆ ರಾಜ್ಯ ಸರ್ಕಾರ ಶೇ.10ರಷ್ಟನ್ನು ಭರಿಸಬೇಕು ಎಂದು ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ.
ಬುಧವಾರ
ಕೇಂದ್ರ
ಸರ್ಕಾರದ
ನೀತಿ
ಆಯೋಗದ
ಸ್ವಚ್ಛ
ಭಾರತ
ಅಭಿಯಾನ
ಕುರಿತ
ಮುಖ್ಯಮಂತ್ರಿಗಳ
ಸಭೆ
ಆಂಧ್ರಪ್ರದೇಶ
ಮುಖ್ಯಮಂತ್ರಿ
ಚಂದ್ರಬಾಬು
ನಾಯ್ಡು
ಅವರ
ಅಧ್ಯಕ್ಷತೆಯಲ್ಲಿ
ವಿಧಾನಸೌಧದ
ಸಮ್ಮೇಳನ
ಸಭಾಂಗಣದಲ್ಲಿ
ನಡೆಯಿತು.
ಕರ್ನಾಟಕ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಸಭೆಯಲ್ಲಿ
ಪಾಲ್ಗೊಂಡಿದ್ದರು.
[ಮೋದಿ
ಆಫರ್
ತಿರಸ್ಕರಿಸಿದ
ಸಿಎಂ
ಸಿದ್ದರಾಮಯ್ಯ]
ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ವೇಳೆಗೆ ದೇಶಾದ್ಯಂತ ನೈರ್ಮಲ್ಯ ಹಾಗೂ ಬಯಲು ಮುಕ್ತ ಶೌಚಾಲಯ ನಿರ್ಮಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಹಲವು ಉಪಯುಕ್ತ ಸಲಹೆಗಳನ್ನು ಆಯೋಗಕ್ಕೆ ನೀಡಿದ್ದಾರೆ. ನೀತಿ ಆಯೋಗದ ಮುಂದಿನ ಸಭೆ ನವದೆಹಲಿಯಲ್ಲಿ ನಡೆಯಲಿದೆ. [ಅಂತೂ ಇಂತೂ ಸ್ವಚ್ಛವಾಯಿತು ವಿಕ್ಟೋರಿಯಾ ಆಸ್ಪತ್ರೆ]
ಕೇಂದ್ರ
ಮತ್ತು
ರಾಜ್ಯ
ಸರ್ಕಾರಗಳು
ಜಂಟಿಯಾಗಿ
ಸ್ವಚ್ಛ
ಭಾರತ
ಯೋಜನೆಯನ್ನು
ಅನುಷ್ಠಾನಗೊಳಿಸಬೇಕು.
ಕೇಂದ್ರ
ಸರ್ಕಾರದ
ಗಡುವಿನಂತೆ
2018ಕ್ಕೆ
ಬಯಲು
ಮುಕ್ತ
ಶೌಚಾಲಯ
ನಿರ್ಮಾಣವಾಗಬೇಕಾದರೆ,
ಕೇಂದ್ರ
ಸರ್ಕಾರವೂ
ಅಗತ್ಯ
ಅನುದಾನಗಳನ್ನು
ನೀಡಬೇಕು
ಎಂದು
ಸಿದ್ದರಾಮಯ್ಯ
ಅವರು
ಹೇಳಿದರು.
ರಾಷ್ಟ್ರೀಯ ಜಲ ನೀತಿ ಮತ್ತು ಪರಿಸರ ಸಂರಕ್ಷಣೆಯ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ. ಪರಿಸರ ಸಂರಕ್ಷಣೆ ಕಾಯ್ದೆಗೆ ಯಾವುದೇ ತಿದ್ದುಪಡಿ ತರುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಆದ್ದರಿಂದ ತಿದ್ದುಪಡಿಗೆ ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಮಹಾರಾಷ್ಟ್ರ, ಹರ್ಯಾಣ, ಪಶ್ಚಿಮ ಬಂಗಾಳ, ಬಿಹಾರ ರಾಜ್ಯದ ಮುಖ್ಯಮಂತ್ರಿಗಳು ಸಭೆಗೆ ಹಾಜರಾಗಿರಲಿಲ್ಲ. ಸರ್ಕಾರದ ಪ್ರತಿನಿಧಿಗಳು ಮಾತ್ರ ಪಾಲ್ಗೊಂಡಿದ್ದರು.