LIVE ಅಪ್ಡೇಟ್ಸ್ : ಕರ್ನಾಟಕ ಬಂದ್ ಎಲ್ಲೆಲ್ಲಿ ಏನು ನಡೆದಿದೆ?
ಬೆಂಗಳೂರು, ಸೆ. 09: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕರ್ನಾಟಕ ಸರ್ಕಾರ ಕಾವೇರಿ ನದಿ ನೀರನ್ನು ಹರಿಸಿದೆ. ಸರ್ಕಾರ, ನಾರಿಮನ್, ಜಯಲಲಿತಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾವಿರಾರು ಕನ್ನಡ ಪರ ಸಂಘಟನೆಗಳು ಶುಕ್ರವಾರ (ಸೆಪ್ಟೆಂಬರ್ 9) ಬಂದ್ ಆಚರಿಸುತ್ತಿವೆ. ಬಂದ್ ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಸುಮಾರು 1,200ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು ಶುಕ್ರವಾರ (ಸೆಪ್ಟೆಂಬರ್ 09) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದೆ. ಬಂದ್ ದಿನದ ಬೆಳವಣಿಗೆಗಳು ಇಲ್ಲಿವೆ: [ಕರ್ನಾಟಕ ಬಂದ್ ದಿನ ಏನೆಲ್ಲ ಬಂದ್?]
I have written to @PMOIndia drawing his urgent attention to extreme public unrest in Cauvery basin,esp BLR, over SC interim order
— CM of Karnataka (@CMofKarnataka) September 9, 2016
* ಶನಿವಾರ ಸಂಜೆ ತುರ್ತು ಸಂಪುಟ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ
* ಬಂದ್ ಸಂದರ್ಭದಲ್ಲಿ ಜೂಜಾಟವಾಡುತ್ತಿದ್ದ ಚನ್ನಪಟ್ಟಣದ ಮೂರು ಕ್ಲಬ್ ಮೇಲೆ ಪ್ರತಿಭಟನಾಕಾರರ ದಾಳಿ, ಜೂಜುಕೋರರು ಪರಾರಿ.
* ತಮಿಳುನಾಡು, ಕರ್ನಾಟಕ ಸಿಎಂ, ಸಚಿವ ಎಂಬಿ ಪಾಟೀಲ್, ಸುಪ್ರೀಂಕೋರ್ಟ್ ಜಡ್ಜ್ ಗಳ ವಿರುದ್ಧ ಪ್ರಕರಣ, ಮಂಡ್ಯದಲ್ಲಿ ಎಂಡಿ ರಾಜಣ್ಣ ಎಂಬುವವರಿಂದ ಜೆಎಂಎಫ್ ಕೋರ್ಟ್ ನಲ್ಲಿ ದೂರು ದಾಖಲು. ಸೆಪ್ಟೆಂಬರ್ 14 ರಂದು ವಿಚಾರಣೆ ಸಾಧ್ಯತೆ.
* ಕಲ್ಲು ತೂರಾಟದಿಂದ ಮೂರು ಕೆಎಸ್ಸಾರ್ಟಿಸಿ ಬಸ್ ಗಳು ಜಖಂ.
* ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನಾ ನಿರತ ಚೋಳರಪಾಳ್ಯದ ನಿವಾಸಿ ಪ್ರಭು(30) ಚಾಕುವಿನಿಂದ ಹೊಟ್ಟೆಯನ್ನು ಕುಯ್ದುಕೊಂಡಿದ್ದಾರೆ. ಅಸ್ವಸ್ಥಗೊಂಡ ಪ್ರಭು ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಸೇರಿಸಲಾಗಿದೆ.
* ಕೆಆರ್ ಎಸ್ ಅಣೆಕಟ್ಟು ಸಮೀಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Lathicharge at KRS dam during #KarnatakaBandh for #NammaKaveri pic.twitter.com/vVCZz1RyqM
— T S Sudhir (@Iamtssudhir) September 9, 2016
* ಕೆ ಆರ್ ಎಸ್ ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪಾಂಡವಪುರದ ಚಂದ್ರೇಗ್ರಾಮದ ರೈತ ರಾಮೇಗೌಡ(58).
* ಶುಕ್ರವಾರ ಸಂಜೆ ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಸಿದ್ದರಾಮಯ್ಯ
* ಕಾವೇರಿ ವಿವಾದ ಬಗೆಹರಿಸಲು ಸಿಎಂಗಳ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ
* ಕೆಆರ್ ಎಸ್ ಬಳಿ ಲಾಠಿಚಾರ್ಜ್ ನಿಂದ ಪೆಟ್ಟು ತಿಂದ ಇಬ್ಬರು ಪ್ರತಿಭಟನಾಕಾರರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

* ಮಂಡ್ಯದ ಕೃಷ್ಣರಾಜಸಾಗರ ಬಳಿ ಪರಿಸ್ಥಿತಿ ಉದ್ವಿಗ್ನ, ಕೆ ಆರ್ ಎಸ್ ಗೆ ನುಗ್ಗಲು ಯತ್ನಿಸಿದ ರೈತರು, ಕಾವೇರಿ ಹಿತರಕ್ಷಣಾ ಸಮಿತಿಯವರ ಮೇಲೆ ಪೊಲೀಸರಿಂದ ಲಾಠಿಚಾರ್ಜ್.
* ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನೆಯ ಬಗ್ಗೆ ನೇರ ವರದಿ
* ಮಂಡ್ಯ ಜಿಲ್ಲೆಯಲ್ಲಿ ತೀವ್ರಗೊಂಡ ಹೋರಾಟ, ಸಾವಿರಾರು ಜನರಿಂದ ರಸ್ತೆಗಿಳಿದು ಪ್ರತಿಭಟನೆ.
* ಬೆಂಗಳೂರಿನ ನಿಮ್ಹಾನ್ಸ್ ಸಿಬ್ಬಂದಿಯಿಂದ ಪ್ರತಿಭಟನೆ. ಡಾ. ಗಂಗಾಧರ್ ನೇತೃತ್ವದಲ್ಲಿ ಸಾಂಕೇತಿಕ ಬೆಂಬಲ.
* ಬಂದ್ ದಿನ ಅಂಗಡಿ ಬಾಗಿಲು ತೆಗೆದ ವೈನ್ ಸ್ಟೋರ್ ಮೇಲೆ ದಾಳಿ, ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಘಟನೆ

* ಕರ್ನಾಟಕ ಬಂದ್ ಗೆ ಮಂಗಳೂರಿನಲ್ಲಿ ಶೇ 1 ರಷ್ಟು ಬೆಂಬಲ ಇಲ್ಲ
* ಕೊಪ್ಪಳದಲ್ಲಿ ಶಾಲೆಗೆ ರಜೆ ನೀಡದ ತಮಿಳು ಅಧಿಕಾರಿಗೆ ಎಚ್ಕೆ ಪಾಟೀಲ್ ಕಿವಿಮಾತು, ಆದೇಶ ರದ್ದುಮಾಡಿದ ಸಿಇಒ ಸೆಂಥಿಲ್ ಕುಮಾರ್
* ಕನ್ನಡ ಟ್ವೀಟ್ ಗಳಿಂದ ಬೆಚ್ಚಿದ ಬಯೋಕಾನ್ ಅಧ್ಯಕ್ಷೆ ಕಿರಣ್ ಅವರಿಂದ ಯೂ ಟರ್ನ್, ಕಾವೇರಿ ನದಿ ನೀರು ಉಳಿಸಿಕೊಳ್ಳೋಣ ಎಂದು ಟ್ವೀಟ್, ಹಳೆ ಟ್ವೀಟ್ ಡಿಲೀಟ್ ಮಾಡಿದ್ದಾರೆ.
* ಹೆಬ್ಬುಲಿ ಚಿತ್ರ ಶೂಟಿಂಗ್ ನಿಮಿತ್ತ ಕಾಶ್ಮೀರದಲ್ಲಿರುವ ಕಿಚ್ಚ ಸುದೀಪ್ ಅಲ್ಲಿಂದಲೇ ತಮ್ಮ ಚಿತ್ರತಂಡದ ಪರವಾಗಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

* ಡಾ. ಶಿವರಾಜ್ ಕುಮಾರ್, ಉಪೇಂದ್ರ, ಶರಣ್ , ಹರಿಪ್ರಿಯಾ ಸೇರಿದಂತೆ ಹಲವಾರು ನಟ, ನಟಿಯರು, ಕಲಾವಿದರು, ತಂತ್ರಜ್ಞರಿಂದ ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ.

* ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ನಿರತ ಟೆಕ್ಕಿಗಳ ವಿರುದ್ಧ ಆಕ್ರೋಶ. ಬಲವಂತವಾಗಿ ಕಚೇರಿ ಬಂದ್ ಮಾಡಿಸಿದ ಹೋರಾಟಗಾರರು.
* ಬೆಂಗಳೂರಿನ ಟೌನ್ ಹಾಲ್ ಬಳಿ ತೀವ್ರಗೊಂಡ ಪ್ರತಿಭಟನೆ, ಜಯಲಲಿತಾ ತಿಥಿ ಆಚರಣೆ. ನರಕ ಪ್ರಾಪ್ತಿಯಾಗಲಿ ಎಂದು ಕೋರಿಕೆ.
* ಬೆಂಗಳೂರಿನ ನಮ್ಮ ಮೆಟ್ರೋ ಸಂಚಾರ ಸ್ಥಗಿತ.
* ಏರ್ ಪೋರ್ಟ್ ಕ್ಯಾಬ್, ಟೂರಿಸ್ಟ್ ವಾಹನ, ಬಿಎಂಟಿಸಿ, ಕೆಎಸ್ಸಾರ್ಟಿಸಿ ಸಂಚಾರ ಬಂದ್.
* ತಮಿಳು 53 ಚಾನೆಲ್ ಗಳನ್ನು ಬಂದ್ ಮಾಡಿದ ಕೇಬಲ್ ಆಪರೇಟರ್ಸ್, ಆಕ್ಟ್ ಬ್ರ್ಯಾಡ್ ಬಾಂಡ್ ನಿಂದ ಕಸ್ಟಮರ್ ಕೇರ್ ಕೇಂದ್ರ ಬಂದ್.

* ಭದ್ರಕಾಳಿ ವೇಷದಲ್ಲಿ ಜಯಲಲಿತಾ, ಸಿದ್ದರಾಮಯ್ಯ ಹಾಗೂ ಸಂಸದರ ಹರಾಜು, ಅರೆಬೆತ್ತಲೆ ಪ್ರತಿಭಟನೆ-ಚಾಮರಾಜನಗರ, ಭುವನೇಶ್ವರಿ ವೃತ್ತ. [ಬಂದ್ ಬಗ್ಗೆ ಬಯೋಕಾನ್ ಕಿರಣ್ ಕಿಡಿ, ಟ್ವಿಟ್ಟರ್ ನಲ್ಲಿ ಉರಿ]
* ಕನ್ನಡ ಚಲನಚಿತ್ರರಂಗದಿಂದ ಬಂದ್ ಗೆ ಬೆಂಬಲ, ಮಂಡ್ಯ ಹಿತರಕ್ಷಣಾ ವೇದಿಕೆ ತೆಗೆದುಕೊಳ್ಳುವ ನಿರ್ಣಯಕ್ಕೆ ನಾವು ಬದ್ಧ ಕೆಪಿಸಿಸಿ ಅಧ್ಯಕ್ಷ ಸಾರಾ ಗೋವಿಂದು ಘೋಷಣೆ.[ಗ್ಯಾಲರಿ : ಕರ್ನಾಟಕ ಬಂದ್, ಜನಜೀವನ ಅಸ್ತವ್ಯಸ್ತ]
* ಶಿವಮೊಗ್ಗ ಡಿವಿಎಸ್ ಶಾಲೆ ಮುಂದೆ ಪ್ರತಿಭಟನೆ ನಂತರ ರಜೆ ಘೋಷಣೆ
* ಕಲಬುರಗಿಯಲ್ಲಿ ಜನಜೀವನ ಅಸ್ತವ್ಯಸ್ತ, ಬಸ್ ಸಂಚಾರ ಸಂಪೂರ್ಣ ಸ್ಥಗಿತ.
* ಮಂಡ್ಯದ ಸಂಜಯ್ ವೃತ್ತದಲ್ಲಿ ಬಲೂನ್ ಹಿಡಿದು ಶಾಂತಿಯುತವಾಗಿ ಪ್ರತಿಭಟನೆ. ಮಂಡ್ಯದ ಜನ ಹೃದಯವಂತರು ಎಂದು ಸಾರಿದ ಕಾರ್ಮಿಕ ಹಿತರಕ್ಷಣಾ ಟ್ರಸ್ಟ್
* ಬೆಂಗಳೂರಿನ ಟೌನ್ ಹಾಲ್ ಬಳಿ ಅರೆಬೆತ್ತಲೆಯಾಗಿ ಉರುಳುಸೇವೆ, ತೀವ್ರ ಪ್ರತಿಭಟನೆ
* ಬೆಳಗ್ಗೆ 7.30 ರ ವೇಳೆಗೆ ಮೆಜೆಸ್ಟಿಕ್ ಬಳಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ, ಕ್ಯಾಬ್ ನಿಲ್ಲಿಸುವಂತೆ ಆಗ್ರಹ. ಓಲಾ ಡ್ರೈವರ್ ಗೆ ಕನ್ನಡ ಪರ ಹೋರಾಟಗಾರರಿಂದ ಬಂದ್ ಬಗ್ಗೆ ಪಾಠ.
* ತಮಿಳು ನಾಡು ಖಾಸಗಿ ಬಸ್ ಗಳನ್ನು ಮೆಜೆಸ್ಟಿಕ್ ನಲ್ಲೇ ನಿಲ್ಲಿಸಿದ ಪೊಲೀಸರು.

* ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಗೆ ಅಭೂತಪೂರ್ವ ಭದ್ರತೆ. [ಕಾವೇರಿ: ಉರಿಯೋ ಬೆಂಕಿಗೆ ತುಪ್ಪ ಸುರಿದ ತಮಿಳುನಾಡು]
* ಆಟೋ, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕರು ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
* ಬೆಂಗಳೂರಲ್ಲಿ ಬಸ್ ಮತ್ತು ಆಟೋ ಸಂಚಾರ ಸ್ಥಗಿತಗೊಂಡಿದೆ. ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿ, ಖಾಸಗಿ ಉದ್ಯಮ ಬಂದ್
(ಒನ್ ಇಂಡಿಯಾ ಸುದ್ದಿ)
-
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications