LIVE ಅಪ್ಡೇಟ್ಸ್ : ಕರ್ನಾಟಕ ಬಂದ್ ಎಲ್ಲೆಲ್ಲಿ ಏನು ನಡೆದಿದೆ?
ಬೆಂಗಳೂರು, ಸೆ. 09: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕರ್ನಾಟಕ ಸರ್ಕಾರ ಕಾವೇರಿ ನದಿ ನೀರನ್ನು ಹರಿಸಿದೆ. ಸರ್ಕಾರ, ನಾರಿಮನ್, ಜಯಲಲಿತಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾವಿರಾರು ಕನ್ನಡ ಪರ ಸಂಘಟನೆಗಳು ಶುಕ್ರವಾರ (ಸೆಪ್ಟೆಂಬರ್ 9) ಬಂದ್ ಆಚರಿಸುತ್ತಿವೆ. ಬಂದ್ ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಸುಮಾರು 1,200ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು ಶುಕ್ರವಾರ (ಸೆಪ್ಟೆಂಬರ್ 09) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದೆ. ಬಂದ್ ದಿನದ ಬೆಳವಣಿಗೆಗಳು ಇಲ್ಲಿವೆ: [ಕರ್ನಾಟಕ ಬಂದ್ ದಿನ ಏನೆಲ್ಲ ಬಂದ್?]
I have written to @PMOIndia drawing his urgent attention to extreme public unrest in Cauvery basin,esp BLR, over SC interim order
— CM of Karnataka (@CMofKarnataka) September 9, 2016
* ಶನಿವಾರ ಸಂಜೆ ತುರ್ತು ಸಂಪುಟ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ
* ಬಂದ್ ಸಂದರ್ಭದಲ್ಲಿ ಜೂಜಾಟವಾಡುತ್ತಿದ್ದ ಚನ್ನಪಟ್ಟಣದ ಮೂರು ಕ್ಲಬ್ ಮೇಲೆ ಪ್ರತಿಭಟನಾಕಾರರ ದಾಳಿ, ಜೂಜುಕೋರರು ಪರಾರಿ.
* ತಮಿಳುನಾಡು, ಕರ್ನಾಟಕ ಸಿಎಂ, ಸಚಿವ ಎಂಬಿ ಪಾಟೀಲ್, ಸುಪ್ರೀಂಕೋರ್ಟ್ ಜಡ್ಜ್ ಗಳ ವಿರುದ್ಧ ಪ್ರಕರಣ, ಮಂಡ್ಯದಲ್ಲಿ ಎಂಡಿ ರಾಜಣ್ಣ ಎಂಬುವವರಿಂದ ಜೆಎಂಎಫ್ ಕೋರ್ಟ್ ನಲ್ಲಿ ದೂರು ದಾಖಲು. ಸೆಪ್ಟೆಂಬರ್ 14 ರಂದು ವಿಚಾರಣೆ ಸಾಧ್ಯತೆ.
* ಕಲ್ಲು ತೂರಾಟದಿಂದ ಮೂರು ಕೆಎಸ್ಸಾರ್ಟಿಸಿ ಬಸ್ ಗಳು ಜಖಂ.
* ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನಾ ನಿರತ ಚೋಳರಪಾಳ್ಯದ ನಿವಾಸಿ ಪ್ರಭು(30) ಚಾಕುವಿನಿಂದ ಹೊಟ್ಟೆಯನ್ನು ಕುಯ್ದುಕೊಂಡಿದ್ದಾರೆ. ಅಸ್ವಸ್ಥಗೊಂಡ ಪ್ರಭು ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಸೇರಿಸಲಾಗಿದೆ.
* ಕೆಆರ್ ಎಸ್ ಅಣೆಕಟ್ಟು ಸಮೀಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Lathicharge at KRS dam during #KarnatakaBandh for #NammaKaveri pic.twitter.com/vVCZz1RyqM
— T S Sudhir (@Iamtssudhir) September 9, 2016
* ಕೆ ಆರ್ ಎಸ್ ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪಾಂಡವಪುರದ ಚಂದ್ರೇಗ್ರಾಮದ ರೈತ ರಾಮೇಗೌಡ(58).
* ಶುಕ್ರವಾರ ಸಂಜೆ ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಸಿದ್ದರಾಮಯ್ಯ
* ಕಾವೇರಿ ವಿವಾದ ಬಗೆಹರಿಸಲು ಸಿಎಂಗಳ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ
* ಕೆಆರ್ ಎಸ್ ಬಳಿ ಲಾಠಿಚಾರ್ಜ್ ನಿಂದ ಪೆಟ್ಟು ತಿಂದ ಇಬ್ಬರು ಪ್ರತಿಭಟನಾಕಾರರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

* ಮಂಡ್ಯದ ಕೃಷ್ಣರಾಜಸಾಗರ ಬಳಿ ಪರಿಸ್ಥಿತಿ ಉದ್ವಿಗ್ನ, ಕೆ ಆರ್ ಎಸ್ ಗೆ ನುಗ್ಗಲು ಯತ್ನಿಸಿದ ರೈತರು, ಕಾವೇರಿ ಹಿತರಕ್ಷಣಾ ಸಮಿತಿಯವರ ಮೇಲೆ ಪೊಲೀಸರಿಂದ ಲಾಠಿಚಾರ್ಜ್.
* ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನೆಯ ಬಗ್ಗೆ ನೇರ ವರದಿ
* ಮಂಡ್ಯ ಜಿಲ್ಲೆಯಲ್ಲಿ ತೀವ್ರಗೊಂಡ ಹೋರಾಟ, ಸಾವಿರಾರು ಜನರಿಂದ ರಸ್ತೆಗಿಳಿದು ಪ್ರತಿಭಟನೆ.
* ಬೆಂಗಳೂರಿನ ನಿಮ್ಹಾನ್ಸ್ ಸಿಬ್ಬಂದಿಯಿಂದ ಪ್ರತಿಭಟನೆ. ಡಾ. ಗಂಗಾಧರ್ ನೇತೃತ್ವದಲ್ಲಿ ಸಾಂಕೇತಿಕ ಬೆಂಬಲ.
* ಬಂದ್ ದಿನ ಅಂಗಡಿ ಬಾಗಿಲು ತೆಗೆದ ವೈನ್ ಸ್ಟೋರ್ ಮೇಲೆ ದಾಳಿ, ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಘಟನೆ

* ಕರ್ನಾಟಕ ಬಂದ್ ಗೆ ಮಂಗಳೂರಿನಲ್ಲಿ ಶೇ 1 ರಷ್ಟು ಬೆಂಬಲ ಇಲ್ಲ
* ಕೊಪ್ಪಳದಲ್ಲಿ ಶಾಲೆಗೆ ರಜೆ ನೀಡದ ತಮಿಳು ಅಧಿಕಾರಿಗೆ ಎಚ್ಕೆ ಪಾಟೀಲ್ ಕಿವಿಮಾತು, ಆದೇಶ ರದ್ದುಮಾಡಿದ ಸಿಇಒ ಸೆಂಥಿಲ್ ಕುಮಾರ್
* ಕನ್ನಡ ಟ್ವೀಟ್ ಗಳಿಂದ ಬೆಚ್ಚಿದ ಬಯೋಕಾನ್ ಅಧ್ಯಕ್ಷೆ ಕಿರಣ್ ಅವರಿಂದ ಯೂ ಟರ್ನ್, ಕಾವೇರಿ ನದಿ ನೀರು ಉಳಿಸಿಕೊಳ್ಳೋಣ ಎಂದು ಟ್ವೀಟ್, ಹಳೆ ಟ್ವೀಟ್ ಡಿಲೀಟ್ ಮಾಡಿದ್ದಾರೆ.
* ಹೆಬ್ಬುಲಿ ಚಿತ್ರ ಶೂಟಿಂಗ್ ನಿಮಿತ್ತ ಕಾಶ್ಮೀರದಲ್ಲಿರುವ ಕಿಚ್ಚ ಸುದೀಪ್ ಅಲ್ಲಿಂದಲೇ ತಮ್ಮ ಚಿತ್ರತಂಡದ ಪರವಾಗಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

* ಡಾ. ಶಿವರಾಜ್ ಕುಮಾರ್, ಉಪೇಂದ್ರ, ಶರಣ್ , ಹರಿಪ್ರಿಯಾ ಸೇರಿದಂತೆ ಹಲವಾರು ನಟ, ನಟಿಯರು, ಕಲಾವಿದರು, ತಂತ್ರಜ್ಞರಿಂದ ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ.

* ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ನಿರತ ಟೆಕ್ಕಿಗಳ ವಿರುದ್ಧ ಆಕ್ರೋಶ. ಬಲವಂತವಾಗಿ ಕಚೇರಿ ಬಂದ್ ಮಾಡಿಸಿದ ಹೋರಾಟಗಾರರು.
* ಬೆಂಗಳೂರಿನ ಟೌನ್ ಹಾಲ್ ಬಳಿ ತೀವ್ರಗೊಂಡ ಪ್ರತಿಭಟನೆ, ಜಯಲಲಿತಾ ತಿಥಿ ಆಚರಣೆ. ನರಕ ಪ್ರಾಪ್ತಿಯಾಗಲಿ ಎಂದು ಕೋರಿಕೆ.
* ಬೆಂಗಳೂರಿನ ನಮ್ಮ ಮೆಟ್ರೋ ಸಂಚಾರ ಸ್ಥಗಿತ.
* ಏರ್ ಪೋರ್ಟ್ ಕ್ಯಾಬ್, ಟೂರಿಸ್ಟ್ ವಾಹನ, ಬಿಎಂಟಿಸಿ, ಕೆಎಸ್ಸಾರ್ಟಿಸಿ ಸಂಚಾರ ಬಂದ್.
* ತಮಿಳು 53 ಚಾನೆಲ್ ಗಳನ್ನು ಬಂದ್ ಮಾಡಿದ ಕೇಬಲ್ ಆಪರೇಟರ್ಸ್, ಆಕ್ಟ್ ಬ್ರ್ಯಾಡ್ ಬಾಂಡ್ ನಿಂದ ಕಸ್ಟಮರ್ ಕೇರ್ ಕೇಂದ್ರ ಬಂದ್.

* ಭದ್ರಕಾಳಿ ವೇಷದಲ್ಲಿ ಜಯಲಲಿತಾ, ಸಿದ್ದರಾಮಯ್ಯ ಹಾಗೂ ಸಂಸದರ ಹರಾಜು, ಅರೆಬೆತ್ತಲೆ ಪ್ರತಿಭಟನೆ-ಚಾಮರಾಜನಗರ, ಭುವನೇಶ್ವರಿ ವೃತ್ತ. [ಬಂದ್ ಬಗ್ಗೆ ಬಯೋಕಾನ್ ಕಿರಣ್ ಕಿಡಿ, ಟ್ವಿಟ್ಟರ್ ನಲ್ಲಿ ಉರಿ]
* ಕನ್ನಡ ಚಲನಚಿತ್ರರಂಗದಿಂದ ಬಂದ್ ಗೆ ಬೆಂಬಲ, ಮಂಡ್ಯ ಹಿತರಕ್ಷಣಾ ವೇದಿಕೆ ತೆಗೆದುಕೊಳ್ಳುವ ನಿರ್ಣಯಕ್ಕೆ ನಾವು ಬದ್ಧ ಕೆಪಿಸಿಸಿ ಅಧ್ಯಕ್ಷ ಸಾರಾ ಗೋವಿಂದು ಘೋಷಣೆ.[ಗ್ಯಾಲರಿ : ಕರ್ನಾಟಕ ಬಂದ್, ಜನಜೀವನ ಅಸ್ತವ್ಯಸ್ತ]
* ಶಿವಮೊಗ್ಗ ಡಿವಿಎಸ್ ಶಾಲೆ ಮುಂದೆ ಪ್ರತಿಭಟನೆ ನಂತರ ರಜೆ ಘೋಷಣೆ
* ಕಲಬುರಗಿಯಲ್ಲಿ ಜನಜೀವನ ಅಸ್ತವ್ಯಸ್ತ, ಬಸ್ ಸಂಚಾರ ಸಂಪೂರ್ಣ ಸ್ಥಗಿತ.
* ಮಂಡ್ಯದ ಸಂಜಯ್ ವೃತ್ತದಲ್ಲಿ ಬಲೂನ್ ಹಿಡಿದು ಶಾಂತಿಯುತವಾಗಿ ಪ್ರತಿಭಟನೆ. ಮಂಡ್ಯದ ಜನ ಹೃದಯವಂತರು ಎಂದು ಸಾರಿದ ಕಾರ್ಮಿಕ ಹಿತರಕ್ಷಣಾ ಟ್ರಸ್ಟ್
* ಬೆಂಗಳೂರಿನ ಟೌನ್ ಹಾಲ್ ಬಳಿ ಅರೆಬೆತ್ತಲೆಯಾಗಿ ಉರುಳುಸೇವೆ, ತೀವ್ರ ಪ್ರತಿಭಟನೆ
* ಬೆಳಗ್ಗೆ 7.30 ರ ವೇಳೆಗೆ ಮೆಜೆಸ್ಟಿಕ್ ಬಳಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ, ಕ್ಯಾಬ್ ನಿಲ್ಲಿಸುವಂತೆ ಆಗ್ರಹ. ಓಲಾ ಡ್ರೈವರ್ ಗೆ ಕನ್ನಡ ಪರ ಹೋರಾಟಗಾರರಿಂದ ಬಂದ್ ಬಗ್ಗೆ ಪಾಠ.
* ತಮಿಳು ನಾಡು ಖಾಸಗಿ ಬಸ್ ಗಳನ್ನು ಮೆಜೆಸ್ಟಿಕ್ ನಲ್ಲೇ ನಿಲ್ಲಿಸಿದ ಪೊಲೀಸರು.

* ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಗೆ ಅಭೂತಪೂರ್ವ ಭದ್ರತೆ. [ಕಾವೇರಿ: ಉರಿಯೋ ಬೆಂಕಿಗೆ ತುಪ್ಪ ಸುರಿದ ತಮಿಳುನಾಡು]
* ಆಟೋ, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕರು ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
* ಬೆಂಗಳೂರಲ್ಲಿ ಬಸ್ ಮತ್ತು ಆಟೋ ಸಂಚಾರ ಸ್ಥಗಿತಗೊಂಡಿದೆ. ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿ, ಖಾಸಗಿ ಉದ್ಯಮ ಬಂದ್
(ಒನ್ ಇಂಡಿಯಾ ಸುದ್ದಿ)
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications