ಕರ್ನಾಟಕ ಬಂದ್ : ಕ್ಷಣ-ಕ್ಷಣದ ಮಾಹಿತಿ
ಬೆಂಗಳೂರು, ಜುಲೈ 30 : ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಕರೆವೇ ಪ್ರತಿಭಟನೆ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.[ಚಿತ್ರಗಳು : ಕರ್ನಾಟಕ ಬಂದ್]
'ಕರ್ನಾಟಕದ
ಹಿತರಕ್ಷಣೆಗಾಗಿ
ಈ
ಬಂದ್
ಕರೆ
ನೀಡಲಾಗಿದೆ.
ಜನರು
ಸ್ವಯಂ
ಪ್ರೇರಿತವಾಗಿ
ಬಂದ್ಗೆ
ಬೆಂಬಲ
ನೀಡಬೇಕು.
ಮಹಾರಾಷ್ಟ್ರ
ಮತ್ತು
ಗೋವಾ
ಸರ್ಕಾರಕ್ಕೆ
ನಮ್ಮ
ಶಕ್ತಿ
ತೋರಿಸಬೇಕು'
ಎಂದು
ಕನ್ನಡ
ಚಳವಳಿ
ವಾಟಾಳ್
ಪಕ್ಷದ
ಅಧ್ಯಕ್ಷ
ವಾಟಾಳ್
ನಾಗರಾಜ್
ಕರೆ
ನೀಡಿದ್ದಾರೆ.[ಕರ್ನಾಟಕ
ಬಂದ್
:
ವಾಟಾಳ್
ನಾಗರಾಜ್
ಸಂದರ್ಶನ]
ಕರ್ನಾಟಕ ಬಂದ್ ಏಕೆ? : ಕುಡಿಯುವ ನೀರು ಪೂರೈಕೆ ಮಾಡಲು 7.56 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಮಂಡಳಿ ತಿರಸ್ಕರಿಸಿದೆ. ನ್ಯಾಯಮಂಡಳಿ ಆದೇಶದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ತೀರ್ಪು ವಿರೋಧಿಸಿ ಇಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ. [ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ?]
*
ಬೆಂಗಳೂರಿನ
ಟೌನ್
ಹಾಲ್ನಿಂದ
ಕನ್ನಡ
ಸಂಘಟನೆಗಳ
ಪ್ರತಿಭಟನೆ
ಆರಂಭವಾಗಿದೆ.
ಚಿತ್ರರಂಗದ
ಪ್ರಮುಖರೂ
ಇದರಲ್ಲಿ
ಪಾಲ್ಗೊಂಡಿದ್ದಾರೆ.
* ಉಡುಪಿ, ಮಂಗಳೂರಿನಲ್ಲಿ ಕರ್ನಾಟಕ ಬಂದ್ಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ಜನ ಜೀವನ ಎಂದಿನಂತೆ ಇದ್ದು, ಬಸ್ಸುಗಳು ಸಂಚಾರ ನಡೆಸುತ್ತಿವೆ.
*
ಧಾರವಾಡದಲ್ಲಿ
ರಸ್ತೆಯನ್ನು
ಬಂದ್
ಮಾಡಿರುವ
ಕರ್ನಾಟಕ
ರಕ್ಷಣಾ
ವೇದಿಕೆ
ಕಾರ್ಯಕರ್ತರು
ಕ್ರಿಕೆಟ್ಟ
ಆಡುತ್ತಿದ್ದಾರೆ.
*
ಬಳ್ಳಾರಿ
ನಗರದಲ್ಲಿ
ಬಂದ್
ಬಿಸಿ
ಇಲ್ಲ,
ಬಸ್
ಸಂಚಾರ
ಎಂದಿನಂತೆ
ಇದೆ.
ಅಂಗಡಿಗಳು
ತೆರೆದಿವೆ
* ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
* ಉಡುಪಿ, ಚಿಕ್ಕಮಗಳೂರು, ಮಂಗಳೂರಿನಲ್ಲಿ ಬಂದ್ ಬಿಸಿ ಇಲ್ಲ. ಜನಜೀವನ ಎಂದಿನಂತೆ ಇದೆ
* ಬೆಂಗಳೂರಿನ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಬೆಳಗ್ಗೆ ಮೆಟ್ರೋ ಸಂಚಾರ ಆರಂಭವಾಗಿತ್ತು. 7ಗಂಟೆ ವೇಳೆಗೆ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ, ಸಂಪಿಗೆ ರಸ್ತೆ-ನಾಗಸಂದ್ರ ಮಾರ್ಗದಲ್ಲಿ ಸಂಚಾರ ನಡೆಯುತ್ತಿದೆ.
* ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಬಿಎಂಟಿಸಿಯ 132 ವೊಲ್ವೋ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ಕ್ಯಾಬ್ಗಳು ಸಂಚಾರ ನಡೆಸುತ್ತಿವೆ.
* ಮೈಸೂರಿನಲ್ಲಿ ಬಂದ್ಗೆ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದೆ