Get Updates
Get notified of breaking news, exclusive insights, and must-see stories!

ವೈಜ್ಞಾನಿಕ ಜಾತಿ ಗಣತಿ ನಡೆಸುವಂತೆ ಲಿಂಗಾಯತ ಮುಖಂಡರ ಆಗ್ರಹ

ಬೆಳಗಾವಿ, ಡಿಸೆಂಬರ್‌ 16: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಲಿಂಗಾಯತ ಮುಖಂಡರು ಶುಕ್ರವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹೊಸದಾಗಿ ಜಾತಿ ಸಮೀಕ್ಷೆ ವೈಜ್ಞಾನಿಕವಾಗಿ ನಡೆಸುವಂತೆ ಒತ್ತಾಯಿಸಿದರು.

ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ ಸೇರಿದಂತೆ ಹಲವು ಸಮುದಾಯದ ಮುಖಂಡರು ಶಿವಶಂಕರಪ್ಪ ಅವರ ಜತೆಗಿದ್ದರು. ಕಳೆದ ಎಂಟು ವರ್ಷಗಳ ಹಿಂದೆ ಕಾಂತರಾಜ್ ಆಯೋಗದಿಂದ ಜಾತಿ ಸಮೀಕ್ಷೆ ನಡೆಸಲಾಗಿತ್ತು. ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸಲಾಗುತ್ತದೆ ಎಂದು ಪರಿಗಣಿಸಿ, ಅವರು ಈಗ ಎಂಟು ವರ್ಷಗಳ ಹಿಂದಿನ ಅಂಕಿಅಂಶವನ್ನು ಬಳಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

Lingayat leaders demand to conduct scientific caste census

ವರದಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಅವುಗಳನ್ನು ಸರಿಪಡಿಸಬೇಕು. ಹಾಗಾಗಿ ಹೊಸದಾಗಿ ಸಮೀಕ್ಷೆ ನಡೆಸಿದರೆ ಉತ್ತಮ. ತಾಲೂಕು ಮತ್ತು ಜಿಲ್ಲಾ ಮಟ್ಟದ ಸಭೆಗಳಲ್ಲಿ ಸರ್ವೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿಲ್ಲ ಹಾಗೂ ತಮ್ಮ ಸಮುದಾಯದವರಿಂದ ಅಗತ್ಯ ವಿವರಗಳನ್ನು ಪಡೆದಿಲ್ಲ ಎಂಬ ದೂರುಗಳು ಬಂದಿವೆ ಎಂದು ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಿಳಿಸಿದೆ.

ಅನೇಕರು ತಾವು ಲಿಂಗಾಯತರು ಎಂದು ಅಧಿಕಾರಿಗಳಿಗೆ ತಿಳಿಸದೆ ಸಮುದಾಯದೊಳಗಿನ ತಮ್ಮ ಉಪಜಾತಿಗಳ ವಿವರಗಳನ್ನು ಮಾತ್ರ ನೀಡಿದ್ದಾರೆ. ಸಂಗ್ರಹಿಸಿದ ವಿವರಗಳನ್ನು ಅಧಿಕಾರಿಗಳು ಯಾವುದೇ ಅಡ್ಡ ಪರಿಶೀಲನೆ ನಡೆಸಿಲ್ಲ. ಇಂತಹ ನ್ಯೂನತೆಗಳನ್ನು ಹೊಸದಾಗಿ ಸಮೀಕ್ಷೆ ನಡೆಸಿ ಸರಿಪಡಿಸಬೇಕು ಎಂದು ತಿಳಿಸಿದೆ.

Lingayat leaders demand to conduct scientific caste census

ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ದೊಡ್ಡ ಸಮುದಾಯಗಳು ಸಣ್ಣ ಸಮುದಾಯಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದರೆ ಉತ್ತಮ. ಲಿಂಗಾಯತರು ಈ ರೀತಿ ವರ್ತಿಸಿದರೆ, ಸಣ್ಣ ಸಮುದಾಯಗಳ ಗತಿಯೇನು? ಇದನ್ನು ಬಸವಣ್ಣನವರ ಭೂಮಿ ಬೆಳಗಾವಿ'ಯಲ್ಲಿ ಈ ಆಕ್ಷೇಪ ಎತ್ತಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.

ಈ ಲಿಂಗಾಯತ ನಾಯಕರು ಅಧಿವೇಶನದ ಮುಕ್ತಾಯದ ದಿನದಂದು ಈ ಬೇಡಿಕೆಯನ್ನು ಇಟ್ಟಿರುವುದು ವಿಪರ್ಯಾಸ. ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಬಹುದಿತ್ತು ಎಂದು ಕೆಲವು ಹಿಂದುಳಿದ ವರ್ಗಗಳ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

Lingayat leaders demand to conduct scientific caste census

ವರದಿ ವಿಚಾರದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರ ಈ ಧೋರಣೆ ಆಶ್ಚರ್ಯವೇನಿಲ್ಲ. ಈ ಹಿಂದೆಯೂ ಇಂತಹ ವರದಿಗಳು ಸಲ್ಲಿಕೆಯಾದಾಗ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿದ್ದರು. ಅಂತಹ ಒಂದು ವರದಿಯನ್ನು ಲಿಂಗಾಯತರು ಮತ್ತು ಒಕ್ಕಲಿಗರು ಹರಿದು ಹಾಕಿದರು. ಈ ವರದಿಯನ್ನು ಯಾರೂ ಓದದೇ ಇರುವಾಗ ಅದು ಅವೈಜ್ಞಾನಿಕ ಎಂದು ಹೇಗೆ ಹೇಳಲು ಸಾಧ್ಯ? ಎಂದು ಬಿಜೆಪಿ ಎಂಎಲ್ಸಿ ಎ.ಎಚ್.ವಿಶ್ವನಾಥ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+