ಕೋಲಾರದಲ್ಲಿ ಸತ್ತ ಕೋತಿಗಳಿಗಾಗಿ ದೇವಾಲಯ ನಿರ್ಮಾಣ
ಕೋಲಾರ, ಜೂ. 7 : ಕೋಲಾರ ಜಿಲ್ಲೆಯಲ್ಲಿ ಮಳೆಯ ಅಬ್ಬರದಿಂದ ತರಕಾರಿ, ಹಣ್ಣಿನ ಬೆಳೆಗಳು ನಾಶವಾಗಿರುವುದರ ಜೊತೆಗೆ ಸಿಡಿಲು ಬಡಿದು 20 ಕೋತಿಗಳು ಸಾವನ್ನಪ್ಪಿವೆ. ಸತ್ತ ಕೋತಿಗಳ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಿರುವ ಗ್ರಾಮಸ್ಥರು, ಅವುಗಳ ನೆನಪಿನಲ್ಲಿ ದೇವಾಲಯ ಕಟ್ಟಿಸಲು ಮುಂದಾಗಿದ್ದಾರೆ.
ಕೋಲಾರ
ಜಿಲ್ಲೆಯಲ್ಲಿ
ಗುರುವಾರ
ರಾತ್ರಿ
ಸುರಿದ
ಮಳೆ
ಜನರಿಗೆ
ಸಂತಸ
ಉಂಟುಮಾಡಿರುವುದರ
ಜೊತೆಗೆ
ದುಖಃವನ್ನು
ತಂದಿದೆ.
ಮಳೆಗಾಗಿ
ಕಾಯುತ್ತಿದ್ದ
ಜನರಿಗೆ
ವರುಣ
ದೇವ
ಸಂತಸ
ತಂದಿದ್ದರೆ,
ಮಳೆಯ
ಜೊತೆ
ಬಂದ
ಗಾಳಿ,
ಬೆಳೆದು
ನಿಂತಿದ್ದ
ಬೆಳೆಯನ್ನು
ನಾಶ
ಮಾಡಿದೆ.
ಹತ್ತಾರು ವರ್ಷಗಳ ನಂತರ ಬಂಗಾರಪೇಟೆ ತಾಲೂಕಿನ ಮರಗಲ್ ಗ್ರಾಮದ ಬಳಿ ಸಣ್ಣ ಕೆರೆಯೊಂದು ಮಳೆಯಿಂದ ಭರ್ತಿಯಾಗಿದ್ದು, ಗ್ರಾಮಸ್ಥರು ಶುಕ್ರವಾರ ಕೆರೆಯಲ್ಲಿ ಗಂಗಾಪೂಜೆ ಸಲ್ಲಿಸಿದ್ದಾರೆ. ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಗೆ ಸೇರಿದ ಮೈಲಾಂಡಹಳ್ಳಿಯಲ್ಲಿ ಮರವೊಂದರಲ್ಲಿ ಕುಳಿತಿದ್ದ 20 ಮಂಗಗಳು ಸಿಡಿಲು ಬಡಿದು ಸಾವನ್ನಪ್ಪಿವೆ. [ಮಳೆಗೆ ಕೆಸರು ಗದ್ದೆಯಾದ ನಾಯಂಡನಹಳ್ಳಿ ಜಂಕ್ಷನ್]
ಮೈಲಾಂಡಹಳ್ಳಿ ಊರಾಚೆಯ ಮರದ ಮೇಲೆ 20ಕ್ಕೂ ಹೆಚ್ಚು ಕೋತಿಗಳಿದ್ದವು. ಆದರೆ, ಗುರುವಾರ ಸಿಡಿಲು ಮರಕ್ಕೆ ಬಡಿದಿದ್ದರಿಂದ 20 ಕೋತಿಗಳು ಸಾವನ್ನಪ್ಪಿವೆ. ಬದುಕುಳಿದ ಮರಿ ಕೋತಿಗಳು ಸತ್ತ ಕೋತಿಗಳ ಮುಂದೆ ಕುಳಿತು ರೋದಿಸುತ್ತಿದ್ದ ದೃಶ್ಯ ಕಂಡು ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ.
ಗುಡಿ ಕಟ್ಟಲು ನಿರ್ಧಾರ : ಶುಕ್ರವಾರ ಸತ್ತ ಕೋತಿಗಳಿಗೆ ಗ್ರಾಮಸ್ಥರು ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಕೋತಿಗಳ ಸಮಾಧಿ ಸ್ಥಳದಲ್ಲಿ ದೇವಾಲಯ ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಸತ್ತ ಕೋತಿಗಳ ತಂಡದಲ್ಲಿ ಎರಡು-ಮೂರು ದಿನಗಳ ಹಿಂದೆ ಜನಿಸಿದ ಮರಿ ಕೋತಿಗಳಿದ್ದು, ಅವುಗಳು ತಾಯಿಗಾಗಿ ರೋದಿಸುತ್ತಿವೆ.