ವಿಧಾನಪರಿಷತ್ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಬೆಂಗಳೂರು, ಡಿಸೆಂಬರ್ 30 : ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಜಯಭೇರಿ ಬಾರಿದೆ. ಪ್ರತಿಪಕ್ಷ ಬಿಜೆಪಿ 10 ಸ್ಥಾನಗಳಲ್ಲಿಯೂ ಗೆಲುವು ಸಾಧಿಸಲು ವಿಫಲವಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸಹ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದು, 13 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದೆ. [ಚುನಾವಣೆ ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ]

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರೆ, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರು, ಜಯಗಳಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ.... [ನಾನ್ಯಾಕೆ ರಾಜಕೀಯ ಸನ್ಯಾಸ ಸ್ವೀಕರಿಸಲಿ : ಈಶ್ವರಪ್ಪ]
| ಕ್ಷೇತ್ರ | |
| ಗೆದ್ದವರು | |
| ಬಳ್ಳಾರಿ | ಕೆ.ಸಿ.ಕೊಂಡಯ್ಯ (ಕಾಂಗ್ರೆಸ್) |
| ಬೆಂಗಳೂರು ನಗರ | ಎಂ.ನಾರಾಯಣ ಸ್ವಾಮಿ (ಕಾಂಗ್ರೆಸ್) |
| ಬೆಂಗಳೂರು ಗ್ರಾಮಾಂತರ | ಬಿ.ರವಿ (ಕಾಂಗ್ರೆಸ್) |
| ಚಿತ್ರದುರ್ಗ | ರಘು ಆಚಾರ್ (ಕಾಂಗ್ರೆಸ್) |
| ಹಾಸನ | ಎಂ.ಎ.ಗೋಪಾಲಸ್ವಾಮಿ (ಕಾಂಗ್ರೆಸ್) |
| ರಾಯಚೂರು-ಕೊಪ್ಪಳ | ಬಸವರಾಜ್ ಪಾಟೀಲ್ ಇಟಗಿ (ಕಾಂಗ್ರೆಸ್) |
| ಬೀದರ್ | ವಿಜಯ್ ಸಿಂಗ್ (ಕಾಂಗ್ರೆಸ್) |
| ಶಿವಮೊಗ್ಗ | ಆರ್.ಪ್ರಸನ್ನ ಕುಮಾರ್ (ಕಾಂಗ್ರೆಸ್) |
| ಉತ್ತರ ಕನ್ನಡ | ಎಸ್.ಎಲ್.ಘೋಟ್ನೇಕರ್ (ಕಾಂಗ್ರೆಸ್) |
| ಚಿಕ್ಕಮಗಳೂರು | ಎಂ.ಕೆ.ಪ್ರಾಣೇಶ್ (ಬಿಜೆಪಿ) |
| ಕೊಡಗು | ಸುನೀಲ್ ಸುಬ್ರಮಣಿ (ಬಿಜೆಪಿ) |
| ಮಂಡ್ಯ | ಅಪ್ಪಾಜಿ ಗೌಡ (ಜೆಡಿಎಸ್) |
| ದಕ್ಷಿಣ ಕನ್ನಡ (ದ್ವಿ ಸದಸ್ಯ ಕ್ಷೇತ್ರ) | ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ), ಕೆ.ಪ್ರತಾಪ್ ಚಂದ್ರ ಶೆಟ್ಟಿ (ಕಾಂಗ್ರೆಸ್) |
| ಬೆಳಗಾವಿ (ದ್ವಿ ಸದಸ್ಯ ಕ್ಷೇತ್ರ) | ವಿವೇಕರಾವ್ (ಪಕ್ಷೇತರ), ಮಹಾಂತೇಶ ಕವಟಗಿಮಠ (ಬಿಜೆಪಿ) |
| ಮೈಸೂರು (ದ್ವಿ ಸದಸ್ಯ ಕ್ಷೇತ್ರ) | ಆರ್.ಧರ್ಮಸೇನ (ಕಾಂಗ್ರೆಸ್), ಸಂದೇಶ್ ನಾಗರಾಜ್ (ಜೆಡಿಎಸ್) |
| ಧಾರವಾಡ (ದ್ವಿ ಸದಸ್ಯ ಕ್ಷೇತ್ರ) | ಪ್ರದೀಪ್ ಶೆಟ್ಟರ್ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್) |
| ವಿಜಯಪುರ (ದ್ವಿ ಸದಸ್ಯ ಕ್ಷೇತ್ರ) | ಎಸ್.ಆರ್.ಪಾಟೀಲ್ (ಕಾಂಗ್ರೆಸ್), ಬಸನಗೌಡ ಪಾಟೀಲ್ ಯತ್ನಾಳ್ (ಪಕ್ಷೇತರ) |
| ತುಮಕೂರು | ಬಿ.ಎಂ.ಕಾಂತರಾಜು (ಜೆಡಿಎಸ್) |
| ಕೋಲಾರ | ಸಿ.ಆರ್.ಮನೋಹರ್ (ಜೆಡಿಎಸ್) |
| ಕಲಬುರ್ಗಿ | ಬಿ.ಜಿ.ಪಾಟೀಲ (ಬಿಜೆಪಿ) |












Click it and Unblock the Notifications