Get Updates
Get notified of breaking news, exclusive insights, and must-see stories!

ಕುಮಾರಸ್ವಾಮಿ ಗ್ರಾಮ ವಾಸ್ತವ್ಯ: ಲಾಭ ಜೆಡಿಎಸ್‌ಗೋ, ಕಾಂಗ್ರೆಸ್‌ಗೊ?

ಬೆಂಗಳೂರು, ಜೂನ್ 28: ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಸದ್ಯದ ರಾಜ್ಯ ರಾಜಕಾರಣದಲ್ಲಿ ಚರ್ಚೆಯ ವಿಷಯ. ಲೋಕಸಭೆ ಚುನಾವಣೆಯಲ್ಲಿ ಕಳೆದುಕೊಂಡ ಮಾನವನ್ನು ಮರಳಿ ಗಳಿಸಲು ಕುಮಾರಸ್ವಾಮಿ ಇರಿಸಿದ ಸರಿಯಾದ ಹೆಜ್ಜೆ 'ಗ್ರಾಮ ವಾಸ್ತವ್ಯ'.

ಆದರೆ ಮೈತ್ರಿ ಪಕ್ಷಗಳ ನಡುವೆ ಈಗಾಗಲೇ ಇರುವ ಗೊಂದಲಗಳ ಜೊತೆ ಗ್ರಾಮ ವಾಸ್ತವ್ಯದ ನಂತರ ಹೊಸದೊಂದು ಸಂಘರ್ಷ ಸೇರಿಕೊಂಡಿದ್ದು, ಅದುವೇ 'ಗ್ರಾಮ ವಾಸ್ತವ್ಯದ ಕ್ರೆಡಿಟ್ ಯಾರಿಗೆ ಸಲ್ಲಬೇಕು' ಎಂಬುದು.

ಮೇಲ್ನೋಟಕ್ಕೆ ನೋಡಿದಲ್ಲಿ, ಗ್ರಾಮ ವಾಸ್ತವ್ಯ ಎಂಬುದು ಕುಮಾರಸ್ವಾಮಿ ಅವರ ಒನ್‌ ಮ್ಯಾನ್ ಶೋ ನಂತೆ ಗೋಚರವಾಗುತ್ತಿದೆ. ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಕುಮಾರಸ್ವಾಮಿ ಕೇಂದ್ರಿತ ಕಾರ್ಯಕ್ರಮವೇ ಆಗಿದೆ. ಇದು ಕಾಂಗ್ರೆಸ್‌ನ ಕೆಲವು ನಾಯಕರಲ್ಲಿ ತಳಮಳ ತಂದಿದೆ.

ಗ್ರಾಮ ವಾಸ್ತವ್ಯವನ್ನು ಸರ್ಕಾರದ ಕಾರ್ಯಕ್ರಮ ಎಂದು ಬಿಂಬಿಸುವುದಕ್ಕೂ ಮಿಗಿಲಾಗಿ ಕುಮಾರಸ್ವಾಮಿ ಕಾರ್ಯಕ್ರಮ ಎಂದು ಬಿಂಬಿಸುತ್ತಿರುವ ಬಗ್ಗೆ ಕಾಂಗ್ರೆಸ್‌ನ ಕೆಲವು ನಾಯಕರು ಈಗಾಗಲೇ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಅವರ ಬಳಿ ದೂರು ಹೇಳಿಕೊಂಡಿದ್ದಾರೆ.

ಪ್ರಿಯಾಂಕ್ ಖರ್ಗೆ ಕೆಲವು ಕಾರ್ಯಕ್ರಮದಲ್ಲಿ ಕಂಡರು

ಪ್ರಿಯಾಂಕ್ ಖರ್ಗೆ ಕೆಲವು ಕಾರ್ಯಕ್ರಮದಲ್ಲಿ ಕಂಡರು

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿಯೂ ಸಹ ಬಹುಪಾಲು ಜೆಡಿಎಸ್‌ನ ಶಾಸಕರು, ಮಂತ್ರಿಗಳೇ ಮುನ್ನೆಲೆಯಲ್ಲಿರುತ್ತಾರೆ. ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಅವರು ಮಾತ್ರ ಎರಡು ಗ್ರಾಮ ವಾಸ್ತವ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರನ್ನು ಹೊರತು ಪಡಿಸಿದರೆ, ಕುಮಾರಸ್ವಾಮಿ ಅವರ ಆಪ್ತ ಜೆಡಿಎಸ್‌ ಮಂತ್ರಿಗಳು, ಶಾಸಕರುಗಳೇ ಗ್ರಾಮ ವಾಸ್ತವ್ಯದ ಮುನ್ನೆಲೆಯಲ್ಲಿದ್ದಾರೆ. ಇದು ಸಹ ಕಾಂಗ್ರೆಸ್ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಡಿಸಿಎಂ ಪರಮೇಶ್ವರ್ ಹೇಳಿದ್ದೇನು?

ಡಿಸಿಎಂ ಪರಮೇಶ್ವರ್ ಹೇಳಿದ್ದೇನು?

ಈ ಬಗ್ಗೆ ಚರ್ಚೆಗಳು ಪ್ರಾರಂಭವಾಗುತ್ತಿದ್ದಂತೆ, ಡಿಸಿಎಂ ಪರಮೇಶ್ವರ್ ಅವರು, ಗ್ರಾಮ ವಾಸ್ತವ್ಯವು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಅದು ಸರ್ಕಾರದ ಕಾರ್ಯಕ್ರಮವಾಗಿದೆ. ಇದರಿಂದ ಮೈತ್ರಿಗೆ ಸಹಾಯವಾಗಲಿದೆ ಎಂದಿದ್ದಾರೆ. ಸಿದ್ದರಾಮಯ್ಯ ಸಹ ಇಂತಹುದೇ ಮಾತುಗಳನ್ನಾಡಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?

ಕುಮಾರಸ್ವಾಮಿ ಹೇಳಿದ್ದೇನು?

ಕುಮಾರಸ್ವಾಮಿ ಅವರು ಸಹ ಗ್ರಾಮ ವಾಸ್ತವ್ಯವನ್ನು ಪಕ್ಷದ ದೃಷ್ಟಿಯಿಂದ ನೋಡಲಾಗುವುದಿಲ್ಲವೆಂದೇ ಹೇಳಿದ್ದಾರಾದರೂ, ಕಾರ್ಯಕ್ರಮದಲ್ಲಿ ಜೆಡಿಎಸ್‌ ಮುಖಂಡರು, ಸಚಿವರು, ಶಾಸಕರು ಮುನ್ನೆಲೆಯಲ್ಲಿರುವುದು ಮತ್ತು ಕಾರ್ಯಕ್ರಮವು ಮತ್ತು ಅದರ ಪ್ರಚಾರವು ತಮ್ಮ ಸುತ್ತಲೇ ಗಿರಕಿ ಹೊಡೆಯುವಂತೆ ಕುಮಾರಸ್ವಾಮಿ ನಿಗಾ ವಹಿಸಿರುವುದು ಅಸತ್ಯವೇನಲ್ಲ.

ಆಗ ಯಡಿಯೂರಪ್ಪ ಅವರು ಜಂಟಿ ವಾಸ್ತವ್ಯ ಮಾಡಿದ್ದರು

ಆಗ ಯಡಿಯೂರಪ್ಪ ಅವರು ಜಂಟಿ ವಾಸ್ತವ್ಯ ಮಾಡಿದ್ದರು

ಈ ಹಿಂದೆ 2006 ರಲ್ಲಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾಗಲೂ ಸಹ, ಆಗ ಮೈತ್ರಿ ಪಕ್ಷವಾಗಿದ್ದ ಬಿಜೆಪಿಗೆ ಸಹ ಇದೇ ಅನುಮಾನ ಬಂದಿತ್ತು. ಆಗ ಡಿಸಿಎಂ ಆಗಿದ್ದ ಯಡಿಯೂರಪ್ಪ ಅವರು ಒಂದು ದಿನ ಕುಮಾರಸ್ವಾಮಿ ಅವರ ಜೊತೆ ಜಂಟಿ ಗ್ರಾಮ ವಾಸ್ತವ್ಯ ಮಾಡಿದ್ದರು.

ಕುಮಾರಸ್ವಾಮಿ-ಪರಮೇಶ್ವರ್ ಜಂಟಿ ಗ್ರಾಮ ವಾಸ್ತವ್ಯ

ಕುಮಾರಸ್ವಾಮಿ-ಪರಮೇಶ್ವರ್ ಜಂಟಿ ಗ್ರಾಮ ವಾಸ್ತವ್ಯ

ಈಗಲೂ ಸಹ ಇಂತಹುದೇ ಯೋಜನೆಯೊಂದನ್ನು ಕೆಪಿಸಿಸಿ ಡಿಸಿಎಂ ಪರಮೇಶ್ವರ್ ಅವರ ಮುಂದೆ ಇಟ್ಟಿದೆ ಎನ್ನಲಾಗಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕುಮಾರಸ್ವಾಮಿ ಅವರೊಂದಿಗೆ ಗ್ರಾಮ ವಾಸ್ತವ್ಯಕ್ಕೆ ತೆರಳುವ ಸಾಧ್ಯತೆ ಇಲ್ಲದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+