Get Updates
Get notified of breaking news, exclusive insights, and must-see stories!

KSRTC: ಬೆಂಗಳೂರು-ತಿರುಪತಿ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ದರ್ಬಾರ್: KSRTC ಬಸ್‌ಗಳಿಗೆ ಹೆಚ್ಚಿದ ಬೇಡಿಕೆ

Bengaluru-Tirupati Bus Routes: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಿಂದ ಈಗಾಗಲೇ ಬೆಂಗಳೂರಿನಿಂದ ತಿರುಪತಿಗೆ ಸಾರಿಗೆ ಬಸ್‌ಗಳು ಇವೆ. ಆದರೆ ಇವು ಸಾಕಾಗುತ್ತಿಲ್ಲ. ಹಬ್ಬಗಳು, ವಾರಾಂತ್ಯ ಹಾಗೂ ಉತ್ಸವದಂತಹ ಸಂದರ್ಭಗಳಲ್ಲಿ ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರು ಹಾಗೂ ವಿವಿಧ ಭಾಗದ ಪ್ರಯಾಣಿಕರು ಖಾಸಗಿ ಬಸ್ ಅವಲಂಬಿಸುವಂತಾಗಿದೆ. ಸುರಕ್ಷತೆ ದೃಷ್ಟಿಯಿಂದ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆಗೆ ಪ್ರಯಾಣಿಕರು ಕರ್ನಾಟಕ ಸಾರಿಗೆ ಇಲಾಖೆಗೆ ಒತ್ತಾಯ ಮಾಡಿದ್ದಾರೆ.

ಬೆಂಗಳೂರಿನಿಂದ ಚಿಂತಾಮಣಿ ಮೂಲಕ ಮದನಪಲ್ಲಿಗೆ, ಬೆಂಗಳೂರಿನಿಂದ ಯಲಹಂಕ, ಚಿಂತಾಮಣಿ ಮೂಲಕ ತಿರುಪತಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ಸುಗಳು ತೀರಾ ಕಡಿಮೆ ಇದೆ. ಈ ಮಾರ್ಗವಾಗಿ ದಿನನಿತ್ಯ ಮತ್ತು ವಾರಾಂತ್ಯ ಹಾಗೂ ಹಬ್ಬ-ಹರಿದಿನಗಳ ಸಂದರ್ಭದಲ್ಲಿ KSRTC ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಆದ್ದರಿಂದ ಈ ಮಾರ್ಗದಲ್ಲಿ ಪ್ರಯಾಣಿಕರು ಅನುಣಭವಿಸುತ್ತಿರುವ ಸಮಸ್ಯೆ ಪರಿಗಣಿಸುವಂತೆ ಪ್ರಯಾಣಿಕರಾದ ಶ್ರೀಸಾಯಿ ಕೊಕಾಟೆ ಅವರು ಕೋರಿದ್ದಾರೆ.

KSRTC Passengers Urged to Increase Bus Services from Bengaluru to Tirupati in route

ಅರ್ಧಗಂಟೆಗೊಂದು ಬಸ್ ಬಿಟ್ಟರೂ ಒಳಿತು

ಕೋಲಾರ, ಮುಳಬಾಗಿಲು, ಮದನಪಲ್ಲಿ ಸೇರಿದಂತೆ ಈ ಭಾಗದ ವಿವಿಧ ಊರುಗಳ ಮಾರ್ಗವಾಗಿ ಪ್ರತಿ ಅರ್ಧಗಂಟೆಗೆ ಒಂದು KSRTC ಸೇವೆ ನೀಡಿದರೆ ಸಹಾಯವಾಗುತ್ತದೆ. ವಾರಾಂತ್ಯ ಮತ್ತು ಹಬ್ಬಗಳ ಸಂದರ್ಭಗಳಲ್ಲಿ ಸಮಸ್ಯೆ ಆಗುತ್ತಿದೆ. ಹೀಗಾಗಿ ಬೆಳಗ್ಗೆ 5:00 ಗಂಟೆಯಿಂದ ಮಧ್ಯರಾತ್ರಿ 12:00 ಗಂಟೆವರೆಗೆ ಈ ಮೇಲಿನ ಮಾರ್ಗಗಳಲ್ಲಿ ಬಸ್ ಕಾರ್ಯಾಚರಿಸಲು ಆದೇಶಿಸುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ.

ಪರವಾನಿಗೆ ಇಲ್ಲದೇ ಖಾಸಗಿ ಬಸ್ ಸಂಚಾರ?

ಕ್ಕಬಳಾಪುರ ವಿಭಾಗ ಚಿಂತಾಮಣಿ ಮದನಪಲ್ಲಿ ಕಡಪ ಮಾರ್ಗವಾಗಿ ಮತ್ತು ಕರ್ನಾಟಕ ಮತ್ತು ಆಂಧ್ರ ಗಡಿಗಳಿಂದ ಅಂತಾರಾಜ್ಯ ಖಾಸಗಿ ಬಸ್‌ಗಳು ಪರವಾನಿಗೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿವೆ. ಜನರನ್ನು ವಾರಾಂತ್ಯ, ಹಬ್ಬಗಳ ವೇಳೆ ಬಸ್‌ಗಳಲ್ಲಿ ತುಂಬಿಸಲಾಗುತ್ತದೆ. ಸಂಚಾರ ವೇಳೆ ಏನಾದರು ಹೆಚ್ಚು ಕಡಿಮೆ ಆದರೆ, ಪ್ರಯಾಣಿಕರ ಜೀವಕ್ಕೆ ಯಾರು ಜವಾಬ್ದಾರರು?. ಇಲ್ಲಿರುವ ಖಾಸಗಿ ಬಸ್ ಗಳ ದರ್ಬಾರಿಗೆ ಬ್ರೇಕ್ ಹಾಕಬೇಕು. ನಿಯಮ ಪಾಲಿಸದೇ ಸಂಚರಿಸುವ ಖಾಸಗಿ ಬಸ್ ನಿರ್ವಾಹಕರ ವಿರುದ್ಧ ದಯವಿಟ್ಟು ಕ್ರಮ ಕೈಗೊಳ್ಳಬೇಕು ಎಂದರು.

ಕರ್ನಾಟಕ KSRTC ಬಸ್ಸುಗಳು ಸುರಕ್ಷಿತ ಪ್ರಯಾಣ ಒದಗಿಸುತ್ತಿವೆ. ರಾಜ್ಯ, ಅಂತಾರಾಜ್ಯ ಮಟ್ಟಿಗೆ ಹೆಸರು ಮಾಡಿವೆ. ಖಾಸಗಿ ಬಸ್‌ಗಳಿಂದಾಗಿ ಪ್ರಯಾಣಿಕರನ್ನು ಕಳೆದುಕೊಳ್ಳದೇ ಅಗತ್ಯತೆ ಪರಿಗಣಿಸುವ ಸೂಕ್ತ ಮಾರ್ಗಗಳಲ್ಲಿ ಬಸ್ ಬಿಡಬೇಕು.

ಗಡಿ ಆಚೆಗಿನ ಕನ್ನಡಿಗರಿಂದ KSRTC ಬಸ್‌ಗಳಿಗೆ ಬೇಡಿಕೆ

ರಾಮಸಮುದ್ರದಿಂದ ಬೆಂಗಳೂರಿಗೆ, ಕೋಲಾರ, ಕೆಜಿಎಫ್, ಮುಳಬಾಗಲು ಮೂಲಕ ಬೆಂಗಳೂರು ಮತ್ತು ಪುಂಗನೂರಿನಿಂದ ಕೆಜಿಎಫ್, ಕೋಟಿಲಿಂಗೇಶ್ವರದಿಂದ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುತ್ತಾರೆ. ಈ ಮಾರ್ಗದಲ್ಲಿ KSRTC ಬಸ್‌ಗಳು ತೀರಾ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿದೆ. ವಾರಾಂತ್ಯದಲ್ಲಂತೂ ಪ್ರಯಾಣಿಕರು ಸಂಚಾರ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಪರಿಸ್ಥಿತಿ ಅರಿತುಕೊಂಡು ಸೂಕ್ತ ನಿರ್ಧಾರ ಪ್ರಕಟಿಸುವಂತೆ ಪ್ರಯಾಣಿಕರು ಕೋರಿದ್ದಾರೆ.

ಈ ಮಾರ್ಗಗಳಲ್ಲಿ ಭಕ್ತರ ಸಂಚಾರ ಅಧಿಕ

ಕರ್ನಾಟಕದ ಬೆಂಗಳೂರಿನಿಂದ ಆಂದ್ರಪ್ರದೇಶ, ಕಡಪಾ ಹಾಗೂ ತಿರುಪತಿಗೆ ಸಂಚರಿಸುವ KSRTC ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಆಂಧ್ರಪ್ರದೇಶದ ಕಡಪದಲ್ಲಿ ಹಾಗೂ ತಿರುಪತಿಯಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅಲ್ಲದೇ ಶ್ರೀಕ್ಷೇತ್ರ ರಾಯಚೂಟಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗಲು ಭಕ್ತರು ಕಡಪ ಅಥವಾ ತಿರುಮಲ ತಿರುಪತಿಗೆ ಬಸ್ ಕಾರ್ಯಾಚರಣೆಯ ಅವಶ್ಯಕತೆ ಇದೆ. ಜನರಿಗೆ ಅನುಕೂಲವಾಗುವಂತೆ ಈ ಮಾರ್ಗಗಳಲ್ಲಿ ಬಸ್‌ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಬೇಕು.

ಗಡಿ ಆಚೆಗೆ ಆಂಧ್ರದಲ್ಲಿರುವ ಕನ್ನಡಿಗರ ಪ್ರಯಾಣ ಸುರಕ್ಷತೆಗಾಗಿ ಅಗತ್ಯ ಸಾರಿಗೆ ಸೇವೆ ಒದಗಿಸಬೇಕು. ಗಡಿ ಆಚೆಗೆ ತೆರಳುವ ಕನ್ನಡಿಗರಿಗೆ ಉತ್ತಮ ಸಾರಿಗೆ ಸೇವೆ ಬಯಸಿದ್ದಾರೆ. ಈ ಸಂಬಂಧ ಸಾರಿಗೆ ಇಲಾಖೆ ಸಚಿವರು, ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕೆಂಬ ಕೂಗು ಕೇಳಿ ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+