Get Updates
Get notified of breaking news, exclusive insights, and must-see stories!

ಮಧ್ಯಪ್ರಾಚ್ಯದಲ್ಲಿ ವಿಮಾನಗಳ ಸಂಚಾರ ವ್ಯತ್ಯಯ: ಕರ್ನಾಟಕದ ನಾಗರಿಕರಿಗೆ ಸರ್ಕಾರ ನೆರವು

ಯುದ್ಧದಿಂದಾಗಿ ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು NOTAM ಪ್ರಕಟಿಸಿ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿವೆ. Ministry of Civil Aviation ನೀಡಿದ ಇತ್ತೀಚಿನ ಸಲಹೆ ಪ್ರಕಾರ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳ ವಾಯುಪ್ರದೇಶಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದು, ಅಂತರಾಷ್ಟ್ರೀಯ ವಿಮಾನಯಾನದ ಮೇಲೆ ತೀವ್ರ ಪರಿಣಾಮ ಬೀರಿದ್ದು ಕರ್ನಾಟಕದ 109 ಮಂದಿ ಸೇರಿದಂತೆ ನೂರಾರು ಭಾರತೀಯರು ವಿದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಈ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸರ್ಕಾರವು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ ಎಂದು ಕಂದಾಯ ಸಚಿವ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಮಾನಗಳ ಸಂಚಾರ ವ್ಯತ್ಯಯದಿಂದ ಕರ್ನಾಟಕ ಸೇರಿದಂತೆ ವಿವಿಧ ದೇಶಗಳ ಅನೇಕ ಪ್ರಯಾಣಿಕರು ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದಾರೆ. ವಿಶೇಷವಾಗಿ ಯುಎಇಯ ದುಬೈ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಮತ್ತು ಕರ್ನಾಟಕದ ನಾಗರಿಕರು ಸಿಲುಕಿರುವುದು ವರದಿಯಾಗಿದೆ.

Krishna Byregowda

ಮುಖ್ಯಮಂತ್ರಿಗಳ ನಿರ್ದೇಶನದಂತೆ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಹಾಗೂ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳು (DEOC) 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಪ್ರಾಧಿಕಾರ (Karnataka State Disaster Management Authority) ಆಯುಕ್ತರನ್ನು ನೊಡಲ್ ಅಧಿಕಾರಿಯಾಗಿ ನೇಮಿಸಿ, ನವದೆಹಲಿಯ ಕರ್ನಾಟಕ ಭವನ ಹಾಗೂ ವಿದೇಶಾಂಗ ಸಚಿವಾಲಯ, ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಕರ್ನಾಟಕದ ಜನರಿಗೆ ಅಗತ್ಯ ನೆರವು ಒದಗಿಸುವ ಕ್ರಮ ಕೈಗೊಳ್ಳಲಾಗಿದೆ.

ಎಸ್‌ಇಓಸಿ ಹಾಗೂ ಡಿಇಓಸಿಗಳು ಮಧ್ಯಪ್ರಾಚ್ಯದ ದೇಶಗಳಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ವಿದೇಶಾಂಗ ಸಚಿವಾಲಯ ನೀಡುವ ಸೂಚನೆಗಳನ್ನು ನಿರಂತರವಾಗಿ ಪ್ರಕಟಿಸುತ್ತಿವೆ. ನವದೆಹಲಿಯ ಕರ್ನಾಟಕ ಭವನ ತಂಡವೂ ಸಮನ್ವಯ ಕಾರ್ಯಕ್ಕಾಗಿ ಸಕ್ರಿಯಗೊಂಡಿದೆ. ರಾಯಭಾರ ಕಚೇರಿಗಳ ಸಹಾಯವಾಣಿ ಸಂಖ್ಯೆಗಳು ಹಾಗೂ ಸಲಹೆಗಳನ್ನು ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ತಲುಪಿಸಲಾಗಿದೆ.

ಮಾರ್ಚ್ 2ರಂದು ಬೆಳಿಗ್ಗೆ 10 ಗಂಟೆಯ ತನಕ ಕರ್ನಾಟಕದ 109 ಮಂದಿ ಸಿಲುಕಿರುವ ಮಾಹಿತಿ ಎಸ್‌ಇಓಸಿ ಮತ್ತು ಡಿಇಓಸಿಗಳಿಗೆ ಲಭ್ಯವಾಗಿದ್ದು, ಈ ವಿವರಗಳನ್ನು ವಿದೇಶಾಂಗ ಸಚಿವಾಲಯ ಹಾಗೂ ಕರ್ನಾಟಕ ಭವನಕ್ಕೆ ಕಳುಹಿಸಲಾಗಿದೆ. ಎಸ್‌ಇಓಸಿ ಮತ್ತು ಕರ್ನಾಟಕ ನಿವಾಸ ಆಯುಕ್ತರ ಕಚೇರಿ ವಿದೇಶಾಂಗ ಸಚಿವಾಲಯದ ತ್ವರಿತ ಸ್ಪಂದನೆ ಮಾಡುತ್ತಿದೆ.

ಕ್ರಮ ಸಂಖ್ಯೆ ಜಿಲ್ಲೆ ಸಿಲುಕಿರುವವರ ಸಂಖ್ಯೆ
1 ಬಳ್ಳಾರಿ 32
2 ಬೆಂಗಳೂರು 25
3 ಚಿಕ್ಕಬಳ್ಳಾಪುರ 2
4 ಚಿಕ್ಕಮಗಳೂರು 5
5 ಚಿತ್ರದುರ್ಗ 2
6 ದಕ್ಷಿಣ ಕನ್ನಡ 3
7 ದಾವಣಗೆರೆ 9
8 ಕಲಬುರಗಿ 2
9 ಶಿವಮೊಗ್ಗ 3
10 ಕೊಡಗು 4
11 ತುಮಕೂರು 1
12 ಉಡುಪಿ 2
13 ವಿಜಯಪುರ 4
14 ರಾಯಚೂರು 3
15 ಜಿಲ್ಲೆ ಸ್ಪಷ್ಟವಿಲ್ಲ 3
ಒಟ್ಟು 100
ಕ್ರಮ ಸಂಖ್ಯೆ ಜಿಲ್ಲೆ ಸಿಲುಕಿರುವವರ ಸಂಖ್ಯೆ
1 ಹಾಸನ 4
2 ಕೊಡಗು 1
3 ಉಡುಪಿ 3
4 ಅಪರಿಚಿತ ಜಿಲ್ಲೆ 1
ಒಟ್ಟು 9


ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಾಸಿಸುವ ಕರ್ನಾಟಕದ ಜನರು ಸ್ಥಳೀಯ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ. ಭಾರತೀಯ ರಾಯಭಾರ ಕಚೇರಿಗಳ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಹಾಗೂ ಅಧಿಕೃತ ಪೋರ್ಟಲ್‌ಗಳಲ್ಲಿ ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ವೀಸಾ ಸಂಬಂಧಿತ ಸಮಸ್ಯೆಗಳಿಗಾಗಿ ಸಮೀಪದ ಎಫ್‌ಆರ್‌ಆರ್‌ಓ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ವಿದೇಶಾಂಗ ಸಚಿವಾಲಯದಿಂದ ಸ್ಥಳಾಂತರ ಕಾರ್ಯಾಚರಣೆ ಪ್ರಾರಂಭವಾದ ನಂತರ ಭಾರತದಲ್ಲಿನ ವಿವಿಧ ವಿಮಾನ ನಿಲ್ದಾಣಗಳಿಗೆ ಬರುವ ಕರ್ನಾಟಕದ ನಾಗರಿಕರ ಸಮನ್ವಯಕ್ಕಾಗಿ ಪ್ರತ್ಯೇಕ ಕಾರ್ಯವಿಧಾನಗಳನ್ನು ಜಾರಿಗೆ ತರಲಾಗುತ್ತದೆ. ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು ಅಗತ್ಯವಿದ್ದಲ್ಲಿ ಮುಂದಿನ ಮಾಹಿತಿ ನೀಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ತುರ್ತು ಸಹಾಯವಾಣಿ ಸಂಖ್ಯೆಗಳು:

ಸಂಕಷ್ಟದಲ್ಲಿರುವವರು ಅಥವಾ ಅವರ ಕುಟುಂಬದವರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:

ಯುಎಇ ಭಾರತೀಯ ರಾಯಭಾರ ಕಚೇರಿ: +971 569916774, +971 56388

ಹೆಚ್ಚುವರಿ ಸಹಾಯವಾಣಿ: 8288-0507576238 / 0507576238

ಕರ್ನಾಟಕ ರಾಜ್ಯ ತುರ್ತು ಕೇಂದ್ರ: ಅಧಿಕೃತ ಎಕ್ಸ್ (X) ಮತ್ತು ವಾಟ್ಸಾಪ್ ಗ್ರೂಪ್‌ಗಳ ಮೂಲಕ ನಿರಂತರವಾಗಿ ಅಪ್‌ಡೇಟ್ ನೀಡಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+