ಕೋಲಾರ : 20 ಟನ್ ಈರುಳ್ಳಿ ಲಾರಿ ಅಪಹರಿಸಿದವರು ಸಿಕ್ಕಿಬಿದ್ರು

ಕೋಲಾರ, ಸೆಪ್ಟೆಂಬರ್, 03 : ಈರುಳ್ಳಿ ಬೆಲೆಯನ್ನೇ ಬಂಡವಾಳ ಮಾಡಿಕೊಂಡು 20 ಟನ್ ಈರುಳ್ಳಿ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಅಪಹರಣ ಮಾಡಿದ್ದ ಗುಂಪಿನ ಒಬ್ಬ ಆರೋಪಿಯನ್ನು ಕೋಲಾರದ ಪೊಲೀಸರು ಬಂಧಿಸಿದ್ದಾರೆ. ಈರುಳ್ಳಿ ಲಾರಿ ಮತ್ತು ಚಾಲಕನ ಬಳಿ ಇದ್ದ 24 ಸಾವಿರ ಹಣದೊಂದಿಗೆ ಗುಂಪು ಪರಾರಿಯಾಗಿತ್ತು.

ಬಂಧಿತ ಆರೋಪಿಯನ್ನು ಮಾಲೂರು ತಾಲೂಕಿನ ನಿವಾಸಿ ಚಿನ್ನಪ್ಪ (22) ಎಂದು ಗುರುತಿಸಲಾಗಿದೆ. ಪೇಮ್ ಕುಮಾರ್ ಮತ್ತು ಪ್ರಭು ಎಂಬುವವರ ಜೊತೆ ಸೇರಿ ಚಿನ್ನಪ್ಪ ಈರುಳ್ಳಿ ಲಾರಿಯನ್ನು ಅಪಹರಣ ಮಾಡಿದ್ದ. [ಸಿಮ್ ಖರೀದಿಸಿ ಈರುಳ್ಳಿ ಉಚಿತವಾಗಿ ಪಡೆಯಿರಿ]

onion

ಘಟನೆ ವಿವರ : ಆ.31ರ ಸೋಮವಾರ ರಾತ್ರಿ ಬೆಂಗಳೂರಿನಿಂದ-ಆಂಧ್ರಪ್ರದೇಶಕ್ಕೆ 20 ಟನ್ ಈರುಳ್ಳಿ ಹೊತ್ತ ಲಾರಿ ಹೊರಟ್ಟಿತ್ತು. ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿ ಬೈಕ್‌ನಲ್ಲಿ ಬಂದ ಚಿನ್ನಪ್ಪ ಮತ್ತು ಇತರ ಇಬ್ಬರು ಲಾರಿಯನ್ನು ಅಡ್ಡಗಟ್ಟಿದ್ದರು. [ಕಣ್ಣೀರುಳ್ಳಿ: ಸಾಮಾಜಿಕ ತಾಣದಲ್ಲಿ ಕಂಡಿದ್ದು, ಕೇಳಿದ್ದು]

ಲಾರಿ ಚಾಲಕನಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿಗಳು ಆತನ ಬಳಿ ಇದ್ದ 24 ಸಾವಿರ ರೂ. ಹಣ, ಮೊಬೈಲ್ ಕಿತ್ತುಕೊಂಡಿದ್ದರು. ಸ್ವಲ್ಪ ದೂರ ತೆರಳಿದ ಬಳಿಕ ಚಾಲಕನನ್ನು ಲಾರಿಯಿಂದ ಕೆಳಗೆ ತಳ್ಳಿ, ಲಾರಿಯೊಂದಿಗೆ ಪರಾರಿಯಾಗಿದ್ದರು.

ಸೆ.1ರ ಮಂಗಳವಾರ ಲಾರಿ ಚಾಲಕ ಈ ಕುರಿತು ಕೋಲಾರ ನಗರ ಪೊಲೀಸರಿಗೆ ದೂರು ಕೊಟ್ಟಿದ್ದ. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಬುಧವಾರ ಸಂಜೆ ಚಿನ್ನಪ್ಪನನ್ನು ಬಂಧಿಸಿದ್ದಾರೆ. ಆರೋಪಿಗಳು ಬಂದಿದ್ದ ಬೈಕ್‌ ನಂಬರ್‌ಅನ್ನು ಲಾರಿ ಚಾಲಕ ನೀಡಿದ್ದ. ಇದರ ಆಧಾರದ ಮೇಲೆ ಚಿನ್ನಪ್ಪ ಸಿಕ್ಕಿಬಿದ್ದಿದ್ದು, ಇತರ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ.

ಚಿನ್ನಪ್ಪನನ್ನು ಬಂಧಿಸಿದ ಪೊಲೀಸರು 17 ಸಾವಿರ ಹಣ, ಬೈಕ್, ಈರುಳ್ಳಿ ಸರಕು, ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಚಿನ್ನಪ್ಪ ಮತ್ತು ಇತರ ಆರೋಪಿಗಳ ವಿರುದ್ಧ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿದ್ದವು.

ಅಂದಹಾಗೆ ಬೆಂಗಳೂರಿನಲ್ಲಿ ಗುರುವಾರದ ಈರುಳ್ಳಿ ಬೆಲೆ ಕಲಾಸಿಪಾಳ್ಯದಲ್ಲಿ 50 ರಿಂದ 60 ರೂ. ಮತ್ತು
ಹಾಪ್‌ಕಾಮ್ಸ್‌ನಲ್ಲಿ 69 ರೂ.ಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+