ಸಿದ್ದರಾಮಯ್ಯ ಸಂಪುಟ; ನೂತನ ಸಚಿವರ ವಿಧಾನಸೌಧದ ಕೊಠಡಿ ಸಂಖ್ಯೆ
ಬೆಂಗಳೂರು, ಮೇ 29; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಮಾಡಿ 34 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ರಾತ್ರಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಪರಿಪೂರ್ಣ ಮಂತ್ರಿ ಮಂಡಲ ರಚನೆಯಾಗಿದ್ದು, ಹೊಸ ಸರ್ಕಾರ ಆಡಳಿತದತ್ತ ಗಮನ ಹರಿಸಬೇಕಿದೆ.

27/5/2023ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಂಪುಟ ದರ್ಜೆ ಸಚಿವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ವಿಧಾನಸೌಧ/ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಸಚಿವರು, ಕೊಠಡಿಗಳ ಸಂಖ್ಯೆ
ಎಚ್. ಕೆ. ಪಾಟೀಲ್, ಕಾನೂನು & ಸಂಸದೀಯ, ಪ್ರವಾಸೋದ್ಯಮ ಸಚಿವರು. ವಿಧಾನಸೌಧದಲ್ಲಿ ಕೊಠಡಿ ಸಂಖ್ಯೆ 314-314ಎ.

ಕೆ. ವೆಂಕಟೇಶ. ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರು. ವಿಧಾನಸೌಧದಲ್ಲಿ ಕೊಠಡಿ ಸಂಖ್ಯೆ 329-329ಎ ಹಂಚಿಕೆ ಮಾಡಲಾಗಿದೆ.
ಡಾ. ಎಚ್. ಸಿ. ಮಹದೇವಪ್ಪ. ಸಂಪುಟ ದರ್ಜೆ ಸಚಿವರು. ಸಮಾಜ ಕಲ್ಯಾಣ ಖಾತೆ. ವಿಧಾನಸೌಧ ಕೊಠಡಿ ಸಂಖ್ಯೆ 330-330ಎ.
ಕೆ. ಎನ್. ರಾಜಣ್ಣ. ಸಂಪುಟ ದರ್ಜೆ ಸಚಿವರು. ಸಹಕಾರ ಖಾತೆ ಸಚಿವರು. ವಿಧಾನಸೌಧ ಕೊಠಡಿ ಸಂಖ್ಯೆ 339-339ಎ.
ಶರಬಸಪ್ಪ ದರ್ಶನಾಪುರ್. ಸಂಪುಟ ದರ್ಜೆ ಸಚಿವರು. ಸಣ್ಣ ಕೈಗಾರಿಕೆ & ಸಾರ್ವಜನಿಕ ಉದ್ದಿಮೆ ಖಾತೆ ಸಚಿವರು. ವಿಧಾನಸೌಧ ಕೊಠಡಿ ಸಂಖ್ಯೆ 328-328ಎ.
ಸಂತೋಷ ಎಸ್. ಲಾಡ್. ಸಂಪುಟ ದರ್ಜೆ ಸಚಿವರು. ಕಾರ್ಮಿಕ ಇಲಾಖೆ. ವಿಧಾನಸೌಧ ಕೊಠಡಿ ಸಂಖ್ಯೆ 342-342ಎ.
ಸುರೇಶ್ ಬಿ. ಎಸ್.. ಸಂಪುಟ ದರ್ಜೆ ಸಚಿವರು. ನಗರಾಭಿವೃದ್ಧಿ, ನಗರ ಯೋಜನೆ ಖಾತೆ ಸಚಿವರು. ವಿಧಾನಸೌಧ ಕೊಠಡಿ ಸಂಖ್ಯೆ 316-316ಎ.
ಬಿ. ನಾಗೇಂದ್ರ. ಸಂಪುಟ ದರ್ಜೆ ಸಚಿವರು. ಯುವ ಸಬಲೀಕರಣ, ಕ್ರೀಡೆ ಇಲಾಖೆ. ವಿಧಾನಸೌಧ ಕೊಠಡಿ ಸಂಖ್ಯೆ 343-343ಎ.
ಕೃಷ್ಣ ಬೈರೇಗೌಡ. ಸಂಪುಟ ದರ್ಜೆ ಸಚಿವರು. ಕಂದಾಯ ಇಲಾಖೆ. ವಿಕಾಸ ಸೌಧ ಕೊಠಡಿ ಸಂಖ್ಯೆ 245-245.
ಡಾ. ಎಂ. ಸಿ. ಸುಧಾಕರ್. ಸಂಪುಟ ದರ್ಜೆ ಸಚಿವರು. ಉನ್ನತ ಶಿಕ್ಷಣ ಇಲಾಖೆ. ವಿಕಾಸ ಸೌಧ ಕೊಠಡಿ ಸಂಖ್ಯೆ 344-45.
ರಹೀಂ ಖಾನ್. ಸಂಪುಟ ದರ್ಜೆ ಸಚಿವರು. ಪೌರಾಡಳಿತ ಮತ್ತು ಹಜ್ ಖಾತೆ ಸಚಿವರು. ವಿಕಾಸ ಸೌಧ. ಕೊಠಡಿ ಸಂಖ್ಯೆ 38-39.
ಲಕ್ಷ್ಮೀ ಹೆಬ್ಬಾಳ್ಕರ್. ಸಂಪುಟ ದರ್ಜೆ ಸಚಿವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರು. ವಿಧಾನ ಸೌಧ ಕೊಠಡಿ ಸಂಖ್ಯೆ 301-301ಎ.
-
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
ಯಾವ ಧರ್ಮವೂ ಧ್ವೇಷ ಬೋಧಿಸಲ್ಲ: ಸಮಾನತೆ ಸ್ಥಾಪಿಸುವುದೇ ಯೋಜನೆಗಳ ಗುರಿ: ಸಿದ್ದರಾಮಯ್ಯ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ಬಜೆಟ್ನಲ್ಲಿ ಅನಿವಾಸಿ ಸಚಿವಾಲಯ ಘೋಷಣೆ ಇಲ್ಲ: ನಿರಾಶೆ ವ್ಯಕ್ತಪಡಿಸಿದ ಡಾ.ರೊನಾಲ್ಡ್ ಕೊಲಾಸೊ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ












Click it and Unblock the Notifications