ಸಿ.ಎ., ಅಮೆನಿಟಿ ನಿವೇಶನಗಳ ಹಂಚಿಕೆ; ಹೊಸ ನಿಯಮಗಳು
ಬೆಂಗಳೂರು, ನವೆಂಬರ್ 14; ಕರ್ನಾಟಕ ಸರ್ಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕೈಗಾರಿಕಾ ಪ್ರದೇಶಗಳಲ್ಲಿನ ಸಿ.ಎ./ ಅಮೆನಿಟಿ ನಿವೇಶನಗಳನ್ನು ಹಂಚಿಕೆ ಮಾಡುವಲ್ಲಿ ಅನುಸರಿಸಬೇಕಾದ ವಿಧಿ-ವಿಧಾನಗಳ ಬಗ್ಗೆ ಆದೇಶವೊಂದನ್ನು ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಹಾಗೂ ಅವರ ಹೆಸರಿನಲ್ಲಿ (ಭೀಮಪ್ಪ ಪ. ಅಜೂರ್) ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.) ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಸರ್ಕಾರದ ಆದೇಶ ದಿನಾಂಕ 08/03/2019 ಮತ್ತು ದಿನಾಂಕ 13/10/2023ರಂದು ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳನ್ನು ಓದಲಾಗಿದೆ.

ಪ್ರಸ್ತಾವನೆ ಏನು?; ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕೈಗಾರಿಕಾ ಪ್ರದೇಶಗಳಲ್ಲಿನ ಸಿ.ಎ./ ಅಮೆನಿಟಿ ನಿವೇಶನಗಳನ್ನು ಹಂಚಿಕೆ ಮಾಡುವಾಗ ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ನಿಗಧಿಪಡಿಸಿ ಸರ್ಕಾರದ ಆದೇಶದಲ್ಲಿ ಅನುಮೋದನೆ ನೀಡಲಾಗಿದೆ.
ಹಾಲಿ ಕೆ.ಐ.ಎ.ಡಿ.ಬಿ.ಯಲ್ಲಿ ಸಿ.ಎ. ನಿವೇಶನಗಳ ಹಂಚಿಕೆಯ ಸಂಪೂರ್ಣ ಮೊತ್ತವನ್ನು upfront ಪಾವತಿಸಿಕೊಳ್ಳುತ್ತಿದ್ದರೂ ಸಹ ಹಂಚಿಕೆದಾರರಿಗೆ 99 ವರ್ಷಗಳ ಲೀಸ್ ಆಧಾರದ ಮೇಲೆ ನೀಡಲಾಗುತ್ತಿದೆ. ಆದರೆ, ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಿ.ಎ. ನಿವೇಶನಕ್ಕೆ ಹಂಚಿಕೆಯ ಶೇ. 10ರಷ್ಟು ಮೊತ್ತವನ್ನು ಮಾತ್ರ ಪಡೆದು, 30 ವರ್ಷಗಳ ಲೀಸ್ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಪರಿಶೀಲನಾ ಸಭೆಯಲ್ಲಿ ಪ್ರಸ್ತುತ ಇರುವ ಕೆ.ಐ.ಎ.ಡಿ.ಬಿ.ಯ ಸಿ.ಎ. ನಿವೇಶನಗಳ ಹಂಚಿಕೆಗಳ ಮಾರ್ಗಸೂಚಿಗಳನ್ನು ಬದಲಾಯಿಸುವುದು ಅವಶ್ಯಕವಿದೆ ಎಂದು ಅಭಿಪ್ರಾಯಪಡಲಾಗಿದೆ. ಅದರಂತೆ, ಸಿ.ಎ. ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಸರ್ಕಾರದಿಂದ ಹೊರಡಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.
ಆದುದರಿಂದ, ಸರ್ಕಾರವು ಈ ಆದೇಶವನ್ನು ಹೊರಡಿಸಿದೆ. ಸರ್ಕಾರದ ಆದೇಶ 10/11/2023ರ ಆದೇಶದಂತೆ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳಲ್ಲಿ ಸಿ.ಎ./ ಅಮೆನಿಟಿ ನಿವೇಶನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಕಂಡ ವಿಧಿ-ವಿಧಾನಗಳನ್ವಯ ಹಂಚಿಕೆ ಮಾಡಲು ಆದೇಶಿಸಲಾಗಿದೆ.
* ಸಿ.ಇ.ಒ.ಇ.ಎಂ., ಕೆ.ಐ.ಎ.ಡಿ.ಬಿ.ರವರು ಲಭ್ಯವಿರುವ ಸಿ.ಎ./ ಅಮೆನಿಟಿ ನಿವೇಶನಗಳಲ್ಲಿ ಕೈಗಾರಿಕಾ ಪದೇಶಗಳಿಗೆ ಒದಗಿಸಬೇಕಾದ ಚಟುವಟಿಕೆಗಳು/ ಸೌಕರ್ಯಗಳನ್ನು ಅಧಿಸೂಚನೆ ಸಂಖ್ಯೆ ಸಿಐ 78 ಎಸ್ಪಿಕ್ಯು 2021, ದಿನಾಂಕ: 10/11/2023ರನ್ವಯ ಮೀಸಲಿಡಬೇಕು.
* ಸಿ.ಎ./ ಅಮೆನಿಟಿ ನಿವೇಶನಗಳ ಹಂಚಿಕೆಗೆ ಕನ್ನಡ ಹಾಗೂ ಆಂಗ್ಲ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು. ಜಾಹೀರಾತಿನಲ್ಲಿ ಸಿ.ಎ./ ಅಮೆನಿಟಿ ನಿವೇಶನಗಳ ಸ್ಥಳ, ಉದ್ದೇಶ ಮತ್ತು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹಂಚಿಕೆಗೆ ಅಗತ್ಯವೆಂದು ಪರಿಗಣಿಸಬಹುದಾದ ಇತರೆ ಮಾನದಂಡಗಳ ವಿವರಗಳನ್ನು ಪ್ರಚಾರಪಡಿಸಬೇಕು.
* ಹಂಚಿಕೆಗೆ ಇರುವ ಮಾನದಂಡಗಳನ್ನು ಸಿ.ಇ.ಒ.ಇ.ಎಂ., ಕೆ.ಐ.ಎ.ಡಿ.ಬಿ.ಯವರು ನಿಗದಿಪಡಿಸಬೇಕು.
* ಸ್ವೀಕರಿಸಿದ ಅರ್ಜಿಗಳನ್ನು ಸಿ.ಇ.ಒ.ಇ.ಎಂ., ಕೆ.ಐ.ಎ.ಡಿ.ಬಿ. ರವರ ಅಧ್ಯಕ್ಷತೆಯಲ್ಲಿ ಮಂಡಳಿಯ ಅಧಿಕಾರಿಗಳೊಂದಿಗೆ ಉಪ ಸಮಿತಿಯನ್ನು ರಚಿಸಿ, ಜಾಹೀರಾತಿನಲ್ಲಿ ನೀಡಿರುವ ಮಾನದಂಡಗಳಂತೆ ಅರ್ಜಿಗಳನ್ನು ಪರಿಶೀಲಿಸುವುದು.
* ಪರಿಶೀಲಿಸಿದ ಅರ್ಜಿಗಳನ್ನು SLSWCC ಸಭೆಯ ಮುಂದೆ ಚರ್ಚೆಗಾಗಿ ಹಾಗೂ ಅನುಮೋದನೆಗಾಗಿ ಮಂಡಿಸುವುದು.
* SLSWCC ಸಭೆಯಲ್ಲಿ ಸಿ.ಎ./ ಅಮೆನಿಟಿ ನಿವೇಶನಗಳಲ್ಲಿ ಸ್ಥಾಪಿಸುವ ಯೋಜನೆಯ ಅನುಮೋದನೆ ಪಡೆದವರಿಗೆ ಕೆಐಎಡಿಬಿ ವತಿಯಿಂದ 10 ವರ್ಷಗಳ ಕಾಲ ಲೀಸ್ ಕಂ ಸೇಲ್ ಆಧಾರದಲ್ಲಿ ನಿವೇಶನವನ್ನು ಹಂಚಿಕೆ ಮಾಡುವುದು.
* ಸಿ.ಎ./ಅಮೆನಿಟಿ ನಿವೇಶನಗಳಿಗೆ ಸರ್ಕಾರದ ಆದೇಶ ಸಂಖ್ಯೆ ಸಿಐ 132 ಎಸ್ಪಿಕ್ಯು (ಇ) 2021, ದಿನಾಂಕ 01/01/2022ರನ್ವಯ ಶುದ್ಧ ಕ್ರಯ ಪತ್ರಗಳನ್ನು ನೆರವೇರಿಸುವುದು.
* ಪ್ರಸ್ತಾವಿತ ಮೇಲಿನ ನೀತಿಯು KIADB ಯ ಅಸ್ತಿತ್ವದಲ್ಲಿರುವ ಸಿ.ಎ./ಅಮೆನಿಟಿ ನಿವೇಶನಗಳ ಗುತ್ತಿಗೆಗಳಿಗೂ ಅನ್ವಯಿಸುತ್ತದೆ.
ಸರ್ಕಾರದ ಆದೇಶ ದಿನಾಂಕ 08/03/2019ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ರಾಜ್ಯಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
-
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
ಮಾರ್ಚ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ












Click it and Unblock the Notifications