Get Updates
Get notified of breaking news, exclusive insights, and must-see stories!

Karnataka Rains: ಚಂಡಮಾರುತದ ತೀವ್ರತೆ ಏರಿಕೆ: ಮೇ 25ರವರೆಗೆ ಈ ಜಿಲ್ಲೆಗಳಿಗೆ ಮಳೆಯಾರ್ಭಟ, ಎಲ್ಲೆಲ್ಲಿ?

ಬೆಂಗಳೂರು, ಮೇ 20: ಸಮುದ್ರ ಮಟ್ಟದಲ್ಲಿರುವ ಚಂಡಮಾರುತ ಪರಿಚಲನೆ ಪ್ರಭಾವ ಹೆಚ್ಚಾಗುತ್ತಿದೆ. ಗಾಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಇದು ಸೇರಿದಂತೆ ಹಲವು ಹವಾಮಾನ ಬದಲಾವಣೆಗಳಿಂದ ಕರ್ನಾಟಕದಲ್ಲಿ ಮುಂದಿನ 05 ದಿನ ಭಾರೀ ಮಳೆ ಕಂಡು ಬರಲಿದೆ. ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ 'ಆರೆಂಜ್' ಮತ್ತು 'ಯೆಲ್ಲೋ ಅಲರ್ಟ್' ಘೋಷಿಸಿದೆ.

ತಮಿಳುನಾಡಿನ ದಕ್ಷಿಣದ ಒಳಭಾಗದ ಮತ್ತು ನೆರೆಹೊರೆಯ ಮೇಲೆ ಚಂಡಮಾರುತದ ಪರಿಚಲನೆ ಇದೆ. ಈ ವೈಪರಿತ್ಯ ಸೋಮವಾರ ದಕ್ಷಿಣ ಕರಾವಳಿ ತಮಿಳುನಾಡು ಮತ್ತು ನೆರೆಹೊರೆಯಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 3.1 ಕಿಮೀ ವರೆಗೆ ಎತ್ತರದಲ್ಲಿದೆ. ಇದು ನೈಋತ್ಯ ದಿಕ್ಕಿನತ್ತ ಸಾಗುವ ಲಕ್ಷಣಗಳು ಕಂಡು ಬಂದಿವೆ.

Karnataka Rains IMD Predicts Heavy Rain Continue in These Districts Till May 25th Cyclonic Effect

ದಕ್ಷಿಣ ಕರಾವಳಿ ತಮಿಳುನಾಡಿನಿಂದ ಈ ಚಂಡಮಾರುತದ ಪರಿಚಲನೆಯು ಉತ್ತರ ಒಳನಾಡು ವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿ ಹಾದು ಹೋಗಲಿದೆ.

ಸೈಕ್ಲೋನಿಕ್ ಪರಿಚಲನೆಯು ಉತ್ತರ ಕೇರಳ ಮತ್ತು ನೆರೆಹೊರೆಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಮೀ ಮತ್ತು 5.8 ಕಿಮೀ ಎತ್ತದಲ್ಲಿದೆ. ಪಶ್ಚಿಮ ವಿದರ್ಭದ ಮೇಲಿನ ಚಂಡಮಾರುತದ ಪರಿಚಲನೆಯಿಂದ ದಕ್ಷಿಣ ತಮಿಳುನಾಡಿನವರೆಗೆ ಮರಾಠವಾಡ ಮತ್ತು ಒಳನಾಡು ವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿದೆ ಎಂದು ಹವಾಮಾನ ಇಲಾಖೆ ವೈಪರಿತ್ಯಗಳ ಪ್ರಭಾವ, ಚಲನೆಯನ್ನು ಪತ್ತೆ ಮಾಡಿದೆ.

ರಾಜ್ಯದಲ್ಲಿ ಮೇ 25ರವರೆಗೆ ಭಾರೀ ಮಳೆ

ಚಂಡಮಾರುತ ಈ ತೀವ್ರತೆ ಕಾರಣದಿಂದ ಕರ್ನಾಟಕದಲ್ಲಿ ಮೇ 25ರವರೆಗೆ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುಂದುವರಿಯಲಿದೆ. ನಾಳೆ ಮೇ 21ರಂದು ಮಂಗಳವಾರ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿಪರೀತ ಮಳೆ ಆಗಲಿದೆ. ಹೀಗಾಗಿ ಇವುಗಳಿಗೆ ನಾಳೆ ಒಂದು ದಿನ 'ಆರೆಂಜ್ ಅಲರ್ಟ್' ನೀಡಲಾಗಿದೆ.

Karnataka Rains IMD Predicts Heavy Rain Continue in These Districts Till May 25th Cyclonic Effect

ಇದೇ ವೇಳೆ ದಾವಣಗೆರೆ, ಗದಗ, ಧಾರವಾಡ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ಇವುಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ.

ನಂತರದ ನಾಲ್ಕು ದಿನಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಐದು ದಿನ ನಿರಂತರ ಮಳೆ ಆಗಲಿದೆ. ಉಡುಪಿಗೆ ಎರಡು ದಿನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ವಿಜಯನಗರ ಜಿಲ್ಲೆಗಳಲ್ಲಿ ಒಂದು ದಿನ ಬಿಟ್ಟು ದಿನ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಂದಜಿಸಿದೆ. ಈ ಜಿಲ್ಲೆಗಳಿಗೆ ಆಯಾ ದಿನಗಳಂದು 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ಇಲ್ಲಿ ಸಾಧಾರಣದಿಂದ ಜೋರು ಮಳೆ ಸಂಭವ

ಈ ಮೇಲಿನ ಎಲ್ಲ ಜಿಲ್ಲೆಗಳ ಹೊರತುಪಡಿಸಿದರೆ ಉಳಿದ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಕೆಲವು ಕಡೆ ಹಗುರ ಮಳೆಯಾದರೆ, ಹಲವು ಕಡೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸದ್ಯ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕಟ್ಟೆಗಳು, ಜಲಾಶಯಗಳಿಗೆ ಜೀವಕಳೆ ಬಂದಿದೆ. ಜನರಿಗೆ ತಾಪಮಾನದಿಂದ ಮುಕ್ತಿ ಸಿಕ್ಕಿದೆ. ಮತ್ತೊಂದೆಡೆ ರೈತರು ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಈ ವರ್ಷ ಮುಂಗಾರು ಮಳೆ ಭರ್ಜರಿಯಾಗಿ ಸುರಿಯಲಿದೆ. ಹೆಚ್ಚು ಮಳೆ ನಿರೀಕ್ಷಿಸಲಾಗಿದೆ.

ಮುಂಗಾರಿನ ದುರ್ಬಲ ಪ್ರವೇಶ

ಮುಂಗಾರು ಮಳೆ ಅಂಡಮಾನ್ ಹಾಗೂ ನಿಕೋಬಾರ್ ಮೂಲಕ ಹಾದು ಕೇರಳವನ್ನು ಒಂದೆರಡು ದಿನಗಳಲ್ಲಿ ಪ್ರವೇಶ ಮಾಡಲಿದೆ. ವಾಯುಭಾರ ಕುಸಿತದ ಪ್ರಭಾವದಿಂದಾಗಿ ಮುಂಗಾರು ಮಾರುತಗಳು ಅಷ್ಟಾಗಿ ಶಕ್ತಿಯುತವಾಗಿರದೇ, ದುರ್ಬಲವಾಗುತ್ತದೆ ಎಂದು ಐಎಂಡಿ ಹವಾಮಾನ ತಜ್ಞರು ಅಂದಾಜು ಮಾಡಿದ್ದಾರೆ.

ವಾಡಿಕೆಯಂತೆ ಮುಂಗಾರು ಮಳೆಯ ಆಗಮನವನ್ನು ನಿರೀಕ್ಷಿಸಲಾಗಿದೆ. ಜೂನ್ ಮೊದಲ ವಾರವೇ ಮುಂಗಾರು ಕರ್ನಾಟಕ ಸೇರಿದಂತೆ ದೇಶಾದ್ಯಂತ ವ್ಯಾಪ್ತಿಸುವ ಸಾಧ್ಯತೆ ಇದೆ.

ಸೋಮವಾರ ರಾಜ್ಯದ ಸುಮಾರು ಹದಿನೈದು ಜಿಲ್ಲೆಗಳಲ್ಲಿ ಮಳೆ ಆಗಿದ್ದು, ಹಲವೆಡೆ ಆವಾಂತರ ಸೃಷ್ಟಿ ಆಗಿವೆ. ಅಲ್ಲದೇ ಮಳೆಯಿಂದಾಗಿ ಇಬ್ಬರು ಸಾವಾಗಿದೆ. ಮಳೆನಾಡು, ದಕ್ಷಿಣ ಒಳನಾಡು ಜಿಲ್ಲೆಗಳು ಸೇರಿ ವಿವಿಧೆಡೆ ನೆನ್ನೆ ಒಂದೇ ದಿನದಲ್ಲಿ ಭಾರೀ ಮಳೆ ಆಗಿದೆ.

ಕೇವಲ ಬೆಂಗಳೂರು, ಮಂಗಳೂರು, ಬೆಳಗಾವಿ, ಉಡುಪಿ, ಚಿಕ್ಕಮಗಳೂರು ಮಾತ್ರವಲ್ಲದೇ ಇದುವರೆಗೂ ಬಾರದ ಜಿಲ್ಲೆ, ತಾಲೂಕು ಪ್ರದೇಶಗಳಲ್ಲೂ ಉತ್ತಮ ಮಳೆ ಆಗಿದೆ. ರೈತರು ಕೃಷಿ ವ್ಯವಸಾಯ ಚಟುವಟಿಕೆಗಳಿಗೆ ಸಿದ್ಧತೆ ಆರಂಭಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+