'ಬರ'ಗೆಟ್ಟ ರಾಯಚೂರು ಜನತೆಗೆ ನೀರು ಮಾಫಿಯಾ ಬರೆ
ರಾಯಚೂರು, ಏಪ್ರಿಲ್, 25: ಏರುತ್ತಿರುವ ಬಿಸಿಲಿನ ತಾಪಕ್ಕೆ ಪರಿಹಾರವೇ ಇಲ್ಲ. ಮಳೆಯ ದೇವರಿಗೂ ರಾಯಚೂರು ಜನರ ಕೂಗು ಕೇಳುತ್ತಿಲ್ಲ. ಆಡಳಿತವೂ ಜನರಿಗೆ ಸ್ಪಂದಿಸುತ್ತಿಲ್ಲ.
ಸಿಎಂ ಸಿದ್ದರಾಮಯ್ಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆಯೇ? ಅದಕ್ಕೆ ಸ್ಪಷ್ಟ ಉತ್ತರ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ.[ರಾಯಚೂರು: ಮಸೀದಿಯೊಳಗೆ ಪತ್ತೆಯಾಯ್ತು ಮಂದಿರ]

ಇವೆಲ್ಲದರ ಮಧ್ಯೆ ನೀರು ಮಾರಾಟದ ಮಾಫಿಯಾ ತಲೆ ಎತ್ತಿದೆ. ಜನರನ್ನು ಸುಲಿಯುತ್ತಿರುವ ನೀರು ಮಾಫಿಯಾ ನಿಯಂತ್ರಿಸಲು ಸ್ಥಳೀಯ ಆಡಳಿತದ ಬಳಿ ಸಾಧ್ಯವಾಗುತ್ತಿಲ್ಲ. 10 ರು. ಗೆ ಸಿಗುತ್ತಿದ್ದ ಬಿಂದಿಗೆ ನೀರಿಗೆ ರಾಯಚೂರು ಜನ 20 ರು. ನೀಡಬೇಕಾಗಿದೆ.
ಜೀವ ಜಲ ದುಬಾರಿ: ನೀರು ಮಾಫಿಯಾ ಕರ್ನಾಟಕವೊಂದಕ್ಕೆ ಸೀಮಿತವಾದ ಸಮಸ್ಯೆಯಾಗಿ ಉಳಿದುಕೊಂಡಿಲ್ಲ. ಪ್ರತಿಯೊಂದು ರಾಜ್ಯಗಳಲ್ಲೂ ತಲೆ ಎತ್ತಿದ್ದು ಜನರನ್ನು ಸುಲಿಗೆ ಮಾಡುತ್ತಿದೆ.['ಪ್ರತಿ ಕುಟುಂಬಕ್ಕೆ ಕನಿಷ್ಠ 12 ಬಿಂದಿಗೆ ನೀರು ನೀಡಿ']
ನೀವು ಹೆಚ್ಚಿನ ದರ ನೀಡಲೇಬೇಕು, ಸರ್ಕಾರವೇ ನೀರಿನ ದರ ಏರಿಕೆ ಮಾಡಿದೆ. ಬಿಂದಿಗೆ ನೀರಿಗೆ 20 ರು. ನೀಡಿ ಎಂದು ದಲ್ಲಾಳಿಗಳು ನಮ್ಮನ್ನು ಕೇಳುತ್ತಿದ್ದಾರೆ. ನಿಜವಾಗಿ ನೀರೆಲ್ಲ ಸರ್ಕಾರಕ್ಕೆ ಸೇರಿದ್ದು ಅಂದರೆ ಜನರಿಗೆ ಸೇರಿದ್ದು, ನಮ್ಮ ನೀರಿಗೆ ನಾವೇ ದುಡ್ಡು ಕೊಟ್ಟು ಕೊಂಡುಕೊಳ್ಳುವಂಥ ಸ್ಥಿತಿ ಎದುರಾಗಿದೆ ಎಂದು ಕಮಲಮ್ಮ ಎಂಬ ಮಹಿಳೆ ಆತಂಕ ತೋಡಿಕೊಳ್ಳುತ್ತಾರೆ.
ದೇವಾಲಯ ಮೂಲ: ಕೆಲ ದೇವಾಲಯಗಳಿಗೆ ಸೇರಿದ ಜಾಗದಲ್ಲಿ ನೀರಿನ ಮೂಲಗಳು ಉಳಿದುಕೊಂಡಿವೆ ಆದರೆ ನೀರಿಗೆ ಬೇಡಿಕೆ ಹೆಚ್ಚಾಗಿದ್ದು ಜನರು ಒಂದೇ ಕಡೆ ಧಾವಿಸುತ್ತಿದ್ದು ಇನ್ನು ಕೆಲವೇ ದಿನದಲ್ಲಿ ಈ ಮೂಲಗಳು ಬತ್ತಿ ಹೋಗಲಿವೆ. ಜನರ ಕೈಯಿಂದ ಹಣ ಸುಲಿಗೆ ಮಾಡುತ್ತಿರುವ ವಾಟರ್ ಮಾಫಿಯಾದವರನ್ನು ಮೊದಲು ನಿಯಂತ್ರಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications