Live : Karnataka Assembly Session 2019 | Karnataka Floor Test
ಬೆಂಗಳೂರು, ಜುಲೈ 23: ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಆರು ಗಂಟೆಯಿಂದ ಅನ್ವಯವಾಗುವಂತೆ 48 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ವೇಳೆ ಬಾರ್, ಪಬ್ಗಳನ್ನು ತೆರೆಯುವಂತಿಲ್ಲ. ನಿಷೇಧಾಜ್ಞೆ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸದನದಲ್ಲಿ ಅನೇಕ ಚರ್ಚೆಗಳು ನಡೆದವು. ಸುಪ್ರೀಂಕೋರ್ಟ್ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆಗೆ ಬರಬೇಕಿದ್ದರಿಂದ ಎಲ್ಲರ ಗಮನ ಅತ್ತ ಇತ್ತು. ಆದರೆ, ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಅದರ ನಡುವೆ ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೆ ಜವಾಬ್ದಾರಿಯನ್ನೂ ಹೊರಿಸಿದೆ.
ಮಂಗಳವಾರ ಸಂಜೆ ಆರು ಗಂಟೆ ಒಳಗೆ ವಿಶ್ವಾಸಮತ ಯಾಚನೆ ನಡೆಸುವುದಾಗಿ ಸ್ಪೀಕರ್ ಸೋಮವಾರ ತಿಳಿಸಿದ್ದಾರೆ. ಹಾಗಾಗಿ ಇಂದೇ ವಿಶ್ವಾಸಮತ ಯಾಚನೆ ನಡೆಯಲಿದೆ ಎಂದು ರಮೇಶ್ ಕುಮಾರ್ ಅವರ ಪರ ವಕೀಲ ಕೋರ್ಟ್ಗೆ ತಿಳಿಸಿದ್ದರು.
ಅತೃಪ್ತ ಶಾಸಕರು ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿತೇಶ್ ಅಪಾರ್ಟ್ಮೆಂಟ್ನಲ್ಲಿ ಇದ್ದಾರೆ ಎಂಬ ಸುದ್ದಿ ತಿಳಿದು ಕಾಂಗ್ರೆಸ್ ಕಾರ್ಯಕರ್ತರು ಅಪಾರ್ಟ್ಮೆಂಟ್ಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಬಿಜೆಪಿ ಕಾರ್ಯಕರ್ತರು ಸಹ ಅಲ್ಲಿ ಸೇರಿಕೊಂಡಿದ್ದರು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಭಾರಿ ಗಲಾಟೆ ನಡೆಯಿತು.
Jul 23, 2019, 8:42 pm IST
ವಿಶ್ವಾಸಮತಕ್ಕೆ ಗೈರಾಗಿದ್ದಕ್ಕೆ ಬಿಎಸ್ಪಿ ಶಾಸಕ ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
Jul 23, 2019, 8:32 pm IST
ವಿಶ್ವಾಸಮತ ಸೋತ ಕುಮಾರಸ್ವಾಮಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು.
Jul 23, 2019, 8:01 pm IST
ಪ್ರಜಾಪ್ರಭುತ್ವಕ್ಕೆ ತಾತ್ಕಾಲಿಕ ಸೋಲು. ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಆರ್ ಎಸ್ಎಸ್/ಬಿಜೆಪಿಯವರ ಸಂಚಿನಿಂದ ಕರ್ನಾಟಕದ ಸೋಲು ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಪ್ರಜಾಪ್ರಭುತ್ವಕ್ಕೆ ತಾತ್ಕಾಲಿಕ ಸೋಲು.
ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಆರ್ ಎಸ್ಎಸ್/ಬಿಜೆಪಿಯವರ ಸಂಚಿನಿಂದ ಕರ್ನಾಟಕದ ಸೋಲು.
ಬಹುಮತ ಕಳೆದುಕೊಂಡ ಕಾರಣ ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ಅವರು ನಾಳೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಕೊಡಲಿದ್ದಾರೆ. ಆ ನಂತರ ಬಿಜೆಪಿಯು ತಮ್ಮ ಬಳಿ ಸಂಖ್ಯೆ ಇರುವುದಾಗಿ ಪ್ರಸ್ತಾವನೆ ಸಲ್ಲಿಸಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Jul 23, 2019, 7:50 pm IST
ಯಡಿಯೂರಪ್ಪ ಅವರು ಆರ್.ಅಶೋಕ್ ಹಾಗೂ ಇತರ ಸದಸ್ಯರೊಡನೆ ಗೆಲುವಿನ ಚಿಹ್ನೆ ತೋರಿಸಿದರು. ಶಾಸಕರು ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
Jul 23, 2019, 7:48 pm IST
ಕುಮಾರಸ್ವಾಮಿ ಅವರು ಮಂಡಿಸಿದ್ದ ವಿಶ್ವಾಸಮತ ಪ್ರಸ್ತಾವನೆಯ ಪರವಾಗಿ 99 ಮತಗಳು ಚಲಾವಣೆ ಆದವು. ಪ್ರಸ್ತಾವನೆಯ ವಿರುದ್ಧವಾಗಿ 105 ಮತಗಳು ಚಲಾವಣೆ ಆದವು. 20 ಮಂದಿ ಸದನಕ್ಕೆ ಗೈರಾಗಿದ್ದರು. ಸ್ಪೀಕರ್ ಅವರು ಯಾರ ಪರವಾಗಿಯೂ ಮತ ಚಲಾವಣೆ ಮಾಡುವಂತೆ ಇರಲಿಲ್ಲ ಹಾಗಾಗಿ ಅವರು ಮತ ಚಲಾವಣೆ ಮಾಡಲಿಲ್ಲ.
Jul 23, 2019, 7:40 pm IST
ಸರ್ಕಾರದ ಪರವಾಗಿ 99 ಮತಗಳು, ಸರ್ಕಾರದ ವಿರುದ್ಧವಾಗಿ 105 ಮತಗಳು ಚಲಾವಣೆ ಆಗಿವೆ.
Jul 23, 2019, 7:24 pm IST
ಡಿವಿಷನ್ ಬೆಲ್ ಆಗಿದ್ದು, ಸದನದ ಬಾಗಿಲು ಹಾಕಲಾಗಿದ್ದು, ಇನ್ನು ಯಾರೂ ಸಹ ಸದನದ ಒಳಗೆ ಬಂದು ವಿಶ್ವಾಸಮತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಇಲ್ಲ. ಈಗ ಎಣಿಕೆ ಪ್ರಾರಂಭವಾಗಿದ್ದು ವಿಶ್ವಾಸಮತದ ಪರ ಇರುವವರು ಕೈ ಎತ್ತಿ ಮತ ಹಾಕಬೇಕಿದೆ.
Jul 23, 2019, 7:20 pm IST
ವಿಶ್ವಾಸಮತ ಪ್ರಸ್ತಾವವನ್ನು ಕುಮಾರಸ್ವಾಮಿ ಅವರು ಮಂಡಿಸಿದರು. ಅದನ್ನು ಸ್ಪೀಕರ್ ಅವರು ಅಂಗೀಕರಿಸಿದರು. ಮತಕ್ಕೆ ಹಾಕಿದರು. ಮೊದಲಿಗೆ ದ್ವನಿ ಮತ ಅಂಗೀಕಾರ ಮಾಡಿದರು. ವಿಪಕ್ಷ ಸದಸ್ಯರು ಡಿವಿಶನ್ಗೆ ಒತ್ತಾಯಿಸಿದರು.
Jul 23, 2019, 7:19 pm IST
ಕೆಲವು ಪತ್ರಿಕೆಗಳ ಸಂಪಾದಕೀಯವನ್ನು ಉಲ್ಲೇಖಿಸಿದ ಕುಮಾರಸ್ವಾಮಿ ಅವರು, ಅತೃಪ್ತ ಶಾಸಕರ ವರ್ತನೆ ಮತ್ತು ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಪತ್ರಿಕೆಗಳು ಜರಿದಿರುವುದನ್ನು ಸದನದ ಗಮನಕ್ಕೆ ತಂದರು.
Jul 23, 2019, 7:15 pm IST
ಯಡಿಯೂರಪ್ಪ ಅವರು ಸಿಎಂ ಆಗಿ ಮಂತ್ರಿ ಮಂಡಲ ರಚನೆ ಆದ ಕೂಡಲೇ ಬಾಂಬ್ ಬೀಳುತ್ತೆ, ಸಚಿವ ಸಂಪುಟ ರಚನೆ ಆದ ಕೂಡಲೇ ನಿಮಗೂ ಬಿಸಿ ತಟ್ಟುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
Jul 23, 2019, 7:15 pm IST
ಪಕ್ಷಕ್ಕೆ ದ್ರೋಹ ಮಾಡಿ ಪಕ್ಷ ತ್ಯಜಿಸಿದ್ದಾರೆ, ಬಿಜೆಪಿ ಆಮೀಷಗಳಿಗೆ ಒಳಗಾಗಿ ಪಕ್ಷ ಬಿಟ್ಟಿದ್ದಾರೆಯೋ ಅವರನ್ನು ಜಗತ್ತೇ ಪ್ರಳಯ ಆದರೂ ಸಹ ಅವರನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಸದನದಲ್ಲಿ ಘೋಷಣೆ ಮಾಡಿದರು. ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು. ಕುಮಾರಸ್ವಾಮಿ ಅವರೂ ಸಹ ಮೂರು ಅತೃಪ್ತ ಶಾಸಕರನ್ನು ವಾಪಸ್ ಪಡೆಯುವುದಿಲ್ಲ ಎಂದು ಹೇಳಿದರು. ಇದು ರಾಜ್ಯದ ಜನರಿಗೆ ಗೊತ್ತಾಗಲಿ ಎಂದು ಹೇಳಿದರು.
Jul 23, 2019, 7:12 pm IST
ಪಕ್ಷಾಂತರ ಒಳ್ಳೆಯದಲ್ಲ, ಆಯ್ಕೆ ಆದ ಪಕ್ಷಕ್ಕೆ ನಿಷ್ಠೆ ತೋರಿಸಿ, ರಾಜೀನಾಮೆ ನೀಡುವ ಬದಲಿಗೆ ಐದು ವರ್ಷ ಪೂರ್ಣ ಮಾಡಿ ಎಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸದನದಲ್ಲಿ ಹೇಳಿದ್ದನ್ನು ಕುಮಾರಸ್ವಾಮಿ ಅವರು ಹೇಳಿದರು.
Jul 23, 2019, 7:06 pm IST
ಬರವನ್ನು, ಕೊಡಗು ಪ್ರವಾಹವನ್ನು ಸರ್ಕಾರ ನಿರ್ವಹಿಸಲು ಎಲ್ಲಿಯಾದರೂ ಎಡವಿದೆ ಎಂದರೆ ನಮ್ಮ ಗಮನಕ್ಕೆ ತನ್ನಿ. ಎಲ್ಲ ಜಿಲ್ಲೆಗಳಿಗೂ ನಾವು ಸಮಾನ ಅನುದಾನ ನೀಡಿದ್ದೇನೆ. ಮಂಡ್ಯ ಮತ್ತು ಹಾಸನಕ್ಕೆ ಸ್ವಲ್ಪ ಹೆಚ್ಚು ಅನುದಾನವನ್ನು ನೀಡಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ, ಆದರೆ ಯಾವ ಜಿಲ್ಲೆಯನ್ನೂ ನಾವು ನಿರ್ಲಕ್ಷಿಸಿಲ್ಲ - ಕುಮಾರಸ್ವಾಮಿ
Jul 23, 2019, 6:59 pm IST
ನೂರು ಕೋಟಿ ಹಣವನ್ನು ಸಿಎಂ ಪರಿಹಾರ ನಿಧಿಯ ಅಡಿಯಲ್ಲಿ ಜನರಿಗೆ ನೀಡಿದ್ದೇವೆ. ಅದಕ್ಕೆಲ್ಲಾ ಪಕ್ಷಭೇದ ಮಾಡಿಲ್ಲ- ಕುಮಾರಸ್ವಾಮಿ
Jul 23, 2019, 6:58 pm IST
ಅತೃಪ್ತ ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ನೀಡಿದ್ದೇವೆ ಎಂದು ಕುಮಾರಸ್ವಾಮಿ ಅವರು ಲೆಕ್ಕ ನೀಡಿದರು. ಎಲ್ಲ ಅತೃಪ್ತ ಶಾಸಕರ ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ನೀಡುವುದನ್ನು ಸಿಎಂ ಅವರು ಸದನದ ಗಮನಕ್ಕೆ ತಂದರು.
Jul 23, 2019, 6:56 pm IST
ನಿಮಗೆ, ಸಿದ್ದರಾಮಯ್ಯ ಅವರಿಗೆ ಆಗಬೇಕಿತ್ತು. ಇಂಥಹವರೆನ್ನೆಲ್ಲ ಬೆಳೆಸುವ ಒಳ್ಳೆತನ ತೋರಿಸಿದ್ದಿರಲ್ಲ. ನೀವೇ ಸಾಕಿದ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ ಎಂಬ ಹಾಡು ಇದೆಯಲ್ಲ- ರಮೇಶ್ ಕುಮಾರ್
Jul 23, 2019, 6:54 pm IST
ಕೆಆರ್ ಪೇಟೆ ನಾರಾಯಣ ಗೌಡ, ಬೋರ್ವೆಲ್ ಕೊಡಿಸಲೂ ದುಡ್ಡು ಕೊಡಲಿಲ್ಲ. ನಾನೇ ಕೈಯಿಂದ ಖರ್ಚು ಮಾಡಿ ಕೊರೆಯಿಸಿದೆ. ದೇವೇಗೌಡರ ಕುಟುಂಬದವರು ತೊಂದರೆ ಕೊಟ್ಟರು ಎಂದರು. ಬೇಡ ಎಂದರೂ ಅವರಿಗೆ ಟಿಕೆಟ್ ಕೊಡಲಾಗಿತ್ತು. ದೇವೇಗೌಡರ ಮನೆಗೆ ಕಾರ್ಯಕರ್ತರ ಜತೆ ಬ್ರೀಫ್ಕೇಸ್ ತಂದು ಇಟ್ಟುಹೋದ. ಅದನ್ನು ಗನ್ಮ್ಯಾನ್ ತೆಗೆದು ನೋಡಿದರೆ ಖಾದಿ ಪಂಚೆ, ಜುಬ್ಬಾ ಇರಿಸಿದ್ದ.; ಅದನ್ನು ನೋಡಿದ ಕಾರ್ಯಕರ್ತರು ದೇಣಿಗೆ ಕೊಟ್ಟಿದ್ದಾನೆ ಎಂದುಕೊಳ್ಳಬೇಕು- ರಮೇಶ್ ಕುಮಾರ್
Jul 23, 2019, 6:50 pm IST
ಎಲ್ಲ ಸಭೆಗಳಲ್ಲಿಯೂ ಉಡುಗೊರೆ ಕೊಡಲು ಅವಕಾಶವಿದೆ. ಹಾಗೆಯೇ ಬಿಜೆಪಿಯವರಿಗೂ ಕೊಟ್ಟಿದ್ದೆ. ರಾಜೀವ್ ಚಂದ್ರಶೇಖರ್ ಅದನ್ನು ಟ್ವೀಟ್ ಮಾಡಿದರು. ಬಿಜೆಪಿಯವರು ನಮಗೆ ಬೇಡ ಎಂದರು. ಮರುದಿನವೇ ಐಟಿಯವರ ನೋಟಿಸ್ ಬಂತು. ನಾನು ವಿವರಣೆ ನೀಡಿದರೂ ಮತ್ತೆ ನೋಟಿಸ್. ಬಿಜೆಪಿಯಲ್ಲಿ ಮೂವರನ್ನು ಬಿಟ್ಟು ಮತ್ತೆಲ್ಲರೂ ಉಡುಗೊರೆ ಪಡೆದುಕೊಂಡಿದ್ದರು- ಡಿಕೆ ಶಿವಕುಮಾರ್
Jul 23, 2019, 6:47 pm IST
ಎಲ್ಲಿ ಹೋದರು ನಿಮ್ಮ ಐಟಿಯವರು? ಯಾರನ್ನೂ ಹಿಡಿದಿದ್ದು ನೋಡಿಲ್ಲ- ಕುಮಾರಸ್ವಾಮಿ
Jul 23, 2019, 6:46 pm IST
ದುಬೈನಿಂದ ಆ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದು ನಮ್ಮ ರಾಜ್ಯದ ಅಧಿಕಾರಿಗಳು. ಅಲ್ಲಿನ ಎಂಬೆಸಿ ಪರ್ಮಿಷನ್ ತೆಗೆದುಕೊಳ್ಳಬೇಕು. ದೆಹಲಿಗೆ ತೆಗೆದುಕೊಂಡು ಹೋಗಬೇಕು ಎನ್ನುತ್ತಾರೆ. ಅಲ್ಲಿ ಇಳಿದ ಕೂಡಲೇ ಇಡಿಯವರು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಯಾರನ್ನು ಫಿಕ್ಸ್ ಮಾಡಲು ಇದನ್ನು ಮಾಡಿದ್ದೀರಿ?- ಕುಮಾರಸ್ವಾಮಿ
Jul 23, 2019, 6:44 pm IST
ಅಧಿಕಾರಕ್ಕಾಗಿ ವಿಶೇಷ ವಿಮಾನ ತೆಗೆದುಕೊಂಡು ಕಳಿಸಲು ಹೋದರಲ್ಲ, ವಿಮಾನ ನಿಲ್ದಾಣದ ಸಿಸಿಟಿವಿ ಫೂಟೇಜ್ ಬೇಕೇ? ಅಧಿಕಾರ ದುರ್ಬಳಕೆ ಮಾಡಿಕೊಂಡು ಐಎಂ ಪ್ರಕರಣದಲ್ಲಿ ಶಾಸಕನನ್ನು ಬಂಧಿಸಿದರು ಎಂದು ಹೇಳಿದರು- ಕುಮಾರಸ್ವಾಮಿ
Jul 23, 2019, 6:43 pm IST
ವಿದ್ಯುನ್ಮಾನ ಮಾಧ್ಯಮಗಳಿಗೆ ಹೇಳುತ್ತೇನೆ, ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ- ಕುಮಾರಸ್ವಾಮಿ
Jul 23, 2019, 6:42 pm IST
ಇದರಿಂದ ಕುಮಾರಸ್ವಾಮಿಗೆ ನಷ್ಟವಿಲ್ಲ. ನಾನೇನು ಶಾಶ್ವತವಾಗಿ ಇರುತ್ತೀನಾ.? 22-23 ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಯಾರೂ ಶಾಶ್ವತವಲ್ಲ- ಕುಮಾರಸ್ವಾಮಿ
Jul 23, 2019, 6:41 pm IST
ಮತ್ತೊಬ್ಬ ನಮಗೆ ಎರಡನೆಯ ಬಾರಿ ಟೋಪಿ ಹಾಕಿರುವವನು. ಗೋಪಾಲಯ್ಯ ಎಂಬುವವನು. ಆತ ಕೊಲೆ ಪ್ರಕರಣದಲ್ಲಿದ್ದಾನೆ. ಅವನಿಗೆ ರಕ್ಷಣೆ ಕೊಡಲು ನಾನು ಸರ್ಕಾರ ನಡೆಸಬೇಕೇ? ಈಗ ನೀವು ಅವರಿಗೆ ರಕ್ಷಣೆ ಕೊಡಿ ಕರೆದುಕೊಂಡು ಹೋಗಿ. ಅಧಿಕಾರಕ್ಕೆ ಬಂದಾಗ ಎಂದೂ ದುರುಪಯೋಗಪಡಿಸಿಕೊಂಡಿಲ್ಲ- ಕುಮಾರಸ್ವಾಮಿ
Jul 23, 2019, 6:40 pm IST
ವಿಶ್ವನಾಥ್ ಅವರ ಬಗ್ಗೆ ಬಹಳ ಗೌರವ ಇತ್ತು. ಇತ್ತೀಚಿನ ಅವರ ನಡವಳಿಕೆ ನೋಡಿದಾಗ, ಹಲವು ವಿಚಾರಗಳ ಅವಶ್ಯಕತೆ ಇಲ್ಲಿ ಇಲ್ಲ. ಸಾರ್ವಜನಿಕವಾಗಿ ಹೇಳುವುದೇ ಒಂದು, ಒಳಗಿರುವುದೇ ಒಂದು. ಸಮ್ಮಿಶ್ರ ಸರ್ಕಾರ ಅನಾಗರಿಕವೋ ಎಂದು ಚರ್ಚೆ ಮಾಡಲಿ. ತಮ್ಮ ಬಗ್ಗೆ ಚರ್ಚಿಸುವುದು ಸರಿಯಲ್ಲ- ಕುಮಾರಸ್ವಾಮಿ
Jul 23, 2019, 6:37 pm IST
ರಾಜೀನಾಮೆ ಪತ್ರವನ್ನು ಎಲ್ಲರೂ ನೋಡಲಿ ಎಂದು ಕಳುಹಿಸಿದ ಸ್ಪೀಕರ್ ರಮೇಶ್ ಕುಮಾರ್
Jul 23, 2019, 6:33 pm IST
ಕೆಎಚ್ ರಂಗನಾಥ್ ಅವರ ನೆರಳಿನಲ್ಲಿ ಬೆಳೆದವನು ನಾನು. ಹೇಗಿರಬಹುದು ಯೋಚಿಸಿ ನನ್ನ ಪರಿಸ್ಥಿತಿ. ಇಂದು ಮತ್ತೆ ಸದನ ಮುಂದಕ್ಕೆ ಹೋಗುವಂತಾದರೆ ನನಗೇಕೆ ಎಂದು ಸಿದ್ಧನಾಗಿ ಬಂದಿದ್ದೇನೆ- ರಮೇಶ್ ಕುಮಾರ್
Jul 23, 2019, 6:32 pm IST
ಇದು ಸಭಾನಿಂದನೆ. ಸದನವನ್ನು ತಪ್ಪು ದಾರಿಗೆ ಎಳೆಯುತ್ತದೆ. ಇಂದು ಪತ್ರವನ್ನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದೇನೆ. ನನಗೆ ಒಂದು ಚೂರು ಸಮಸ್ಯೆಯಾದರೆ ರಾಜೀನಾಮೆ ಕೊಟ್ಟು ಹೋಗಲು ಸಿದ್ಧನಾಗಿ ಬಂದಿದ್ದೇನೆ- ರಮೇಶ್ ಕುಮಾರ್
Jul 23, 2019, 6:31 pm IST
ಯಾರು ಯಾರಿಗೆ ಸರ್ಟಿಫಿಕೇಟ್ ಕೊಡುವವರು. ಒಂದು ರಾಜೀನಾಮೆ ಪತ್ರವನ್ನು ಯಾವ ನಮೂನೆಯಲ್ಲಿ ಕೊಡಬೇಕೋ ಹಾಗೆ ಕೊಡುವುದಕ್ಕೆ ಸಿದ್ಧರಿರದವರು ಸ್ಪೀಕರ್ ನಡವಳಿಕೆ ಬಗ್ಗೆ ಮಾತನಾಡುತ್ತಾರೆ- ರಮೇಶ್ ಕುಮಾರ್
READ MORE
9:38 AM, 23 Jul
ಸಂಜೆ ಆರು ಗಂಟೆಗೆ ವಿಶ್ವಾಸ ಮತ ಯಾಚನೆಗೆ ಡೆಡ್ಲೈನ್ ನೀಡಲಾಗಿದೆ. ಬೆಳಿಗ್ಗೆ 10 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, ಸಂಜೆ ನಾಲ್ಕು ಗಂಟೆಯವರೆಗೂ ಚರ್ಚೆ ನಡೆಯಲಿದೆ.
9:38 AM, 23 Jul
ಪಕ್ಷೇತರ ಶಾಸಕರಾದ ಆರ್. ಶಂಕರ್ ಮತ್ತು ನಾಗೇಶ್ ಅವರು ವಿಶ್ವಾಸಮತ ಯಾಚನೆಗೆ ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಇಂದು ನಡೆಯುವ ನಿರೀಕ್ಷೆಯಿದೆ.
9:45 AM, 23 Jul
ವಿಧಾನಸೌಧಕ್ಕೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್
10:01 AM, 23 Jul
ರಾಜೀನಾಮೆ ನೀಡಿರುವ ಶಾಸಕರನ್ನು ಸ್ಪೀಕರ್ ಮುಂದಿಟ್ಟುಕೊಂಡು ಬೆದರಿಸುವ ಕೆಲಸ ಆಗುತ್ತಿದೆ. ರೇವಣ್ಣ ಅವರ ನಿಂಬೆ ಹಣ್ಣಿನ ಕಾಟಕ್ಕೆ ಹಳ್ಳಿಯಿಂದ ಬಂದ ನಾವೆಲ್ಲ ಸೊರಗುವ ಹಾಗಾಗಿದೆ. ಯಾರದೋ ಶಾಸ್ತ್ರ ಕೇಳಿಕೊಂಡು ಸದನ ಮುಂದೂಡುವುದು ಎಷ್ಟು ಸರಿ?- ಬಿಜೆಪಿ ಶಾಸಕ ಮಾಧುಸ್ವಾಮಿ
10:02 AM, 23 Jul
ರೆಸಾರ್ಟ್ನಿಂದ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಶಾಸಕರು. ಇನ್ನೂ ವಿಧಾನಸೌಧದತ್ತ ಸುಳಿಯದ ದೋಸ್ತಿ ಶಾಸಕರು
10:04 AM, 23 Jul
ದೇವೇಗೌಡರ ಮನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ. ವಿಶ್ವಾಸಮತದ ಕುರಿತು ಚರ್ಚೆ
10:05 AM, 23 Jul
ಸಮ್ಮಿಶ್ರ ಸರ್ಕಾರದ ಲೋಕೋಪಯೋಗಿ ಜ್ಯೋತಿಷಿ "ಇಂದು ಮಂಗಳವಾರ" ಎಂದು ಆಗಲೇ ರಾಗ ಎಳೆಯತೊಡಗಿದ್ದಾರಂತೆ. ಪೀಠಿಕೆ ಚೆನ್ನಾಗಿದೆ ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಸಮ್ಮಿಶ್ರ ಸರ್ಕಾರದ ಲೋಕೋಪಯೋಗಿ ಜ್ಯೋತಿಷಿ "ಇಂದು ಮಂಗಳವಾರ" ಎಂದು ಆಗಲೇ ರಾಗ ಎಳೆಯತೊಡಗಿದ್ದಾರಂತೆ. ಪೀಠಿಕೆ ಚೆನ್ನಾಗಿದೆ.
ನಿನ್ನೆ ಅಷ್ಟು ಸಮಯ ನೀಡಿದರು. ಸ್ಪೀಕರ್ ಕಚೇರಿಯಲ್ಲಿಯೂ ಮನವೊಲಿಸಿದರು. ನಿನ್ನೆ ದಿನ ಯಾಕೆ ಪ್ರತಿಭಟನೆ ನಡೆಸಿದರು ಅರ್ಥ ಆಗಲಿಲ್ಲ. ಇಲ್ಲಿ ಬಿಜೆಪಿಯ ಎಲ್ಲ ಶಾಸಕರೂ ಇದ್ದಾರೆ. ನಿಮ್ಮಲ್ಲಿ ಒಬ್ಬರೂ ಇಲ್ಲ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿರುವವರು ನೀವು. ಆಡಳಿತ ಪಕ್ಷದ ಬೆತ್ತಲೆ ಪ್ರದರ್ಶನ ಆಗುತ್ತಿದೆ.
#Karnataka: BS Yeddyurappa and other BJP MLAs arrive at Vidhana Soudha, Bengaluru. HD Kumaraswamy government will face floor test in the Assembly today. pic.twitter.com/hLqULs67Uw
ಶಾಸಕರು ಬಂದಿಲ್ಲ. ಸದನ ಮುಂದೂಡಿ ಎಂದು ಮನವಿ ಮಾಡಿದ ಪ್ರಿಯಾಂಕ್ ಖರ್ಗೆ. ಬಿಜೆಪಿ ಶಾಸಕರ ವಿರೋಧ.
10:19 AM, 23 Jul
ಜವಾಬ್ದಾರಿಯುತ ಸ್ಥಾನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಜರಾಗಲಿಲ್ಲ.- ಜಗದೀಶ್ ಶೆಟ್ಟರ್
10:20 AM, 23 Jul
ಸಮ್ಮಿಶ್ರ ಸರ್ಕಾರಕ್ಕೆ ರಾಜ್ಯದ ಜನತೆ ಛೀ ಥೂ ಎನ್ನುತ್ತಿದ್ದಾರೆ. ಸದನವನ್ನು ಮುಂದಕ್ಕೆ ಹಾಕುತ್ತಿರುವುದು ಕಪ್ಪುಚುಕ್ಕೆ- ಜಗದೀಶ್ ಶೆಟ್ಟರ್
10:21 AM, 23 Jul
ಸಭೆ ನಡೆಯುವಾಗ ಶಾಸಕರು ಮಾತಾಡಬೇಕೋ? ಅಥವಾ ಶಾಸಕರು ಇಚ್ಛಿಸಿದಾಗ ಸಭೆ ನಡೆಸಬೇಕೋ ತೀರ್ಮಾನ ನಡೆಸಿ- ಕೆಎಸ್ ಈಶ್ವರಪ್ಪ
10:22 AM, 23 Jul
ನಿನ್ನೆ ನೀನು ನಡೆದಿರುವ ನಿರ್ದೇಶನದ ಪ್ರಕಾರವೇ ಕಲಾಪ ನಡೆಯಲಿದೆ. ಅವರು ಬರುತ್ತಿರುವುದು ತಡವಾಗುತ್ತಿದೆ. ಸದನ ಸ್ವಲ್ಪ ಮುಂದೂಡಬೇಕು- ಶಿವಲಿಂಗೇಗೌಡ
10:24 AM, 23 Jul
ವಿಶ್ವಾಸಮತ ಯಾಚಿಸಬೇಕಾದ ಮುಖ್ಯಮಂತ್ರಿಯೇ ಬಾರದಿದ್ದಾಗ ಉಳಿದ ಶಾಸಕರು ಬರುತ್ತಾರೆಯೇ? ಯಥಾ ರಾಜ ತಥಾ ಪ್ರಜಾ. 3-4 ಗಂಟೆ ಬಳಿಕ ಕೂಗಲು ಶುರುಮಾಡುತ್ತಾರೆ. ನಮಗೆ ಅವಕಾಶ ಕೊಡಿ, ಮಾತಾಡಬೇಕು ಎಂದು ಹೇಳುತ್ತಾರೆ. ಸದನ ಎಳೆಯಲು ಮುಂದಾಗುತ್ತಾರೆ. ಸದನದ ಪಾವಿತ್ರ್ಯತೆ ಹಾಳಾಗಿ ಹೋಯಿತು. ಶಾಸಕರು ಇಷ್ಟಪಟ್ಟಾಗ ಅವರು ಮಾತಾಡೋದು. ಅವರು ಇಷ್ಟಪಟ್ಟಾದ ಸದನ ಮುಂದೆ ಹಾಕುವುದು. ಇವರು ಹಸಿದಾಗ ಸದನ ಮುಂದೂಡಬೇಕು. ಹೊಟ್ಟೆ ತುಂಬಿದಾಗ ಮತ್ತೊಂದು.- ಈಶ್ವರಪ್ಪ
10:25 AM, 23 Jul
89ರಿಂದ ಸದನದಲ್ಲಿ ಇದ್ದೇನೆ. ಇಂತಹ ಪರಿಸ್ಥಿತಿ ನೋಡಿಲ್ಲ. ನಮ್ಮ ಮುಖಂಡರು ಸ್ಪಷ್ಟವಾಗಿ ಹೇಳಿದ್ದಾರೆ. ಯಾರೂ ಮಾತಾಡಬೇಡಿ ಎಂದು. ಇದು ಮೊದಲ ಬಾರಿಗೆ ನಾನು ಸದನದಲ್ಲಿ ಬಾಯಿಮುಚ್ಚಿಕೊಂಡು ಕೂತಿದ್ದೇನೆ- ಈಶ್ವರಪ್ಪ.
10 ಗಂಟೆ ಅಂತ ಗೊತ್ತಿಲ್ಲ, 11 ಗಂಟೆ ಎಂದು ತಿಳಿದುಕೊಂಡು ಬಂದಿಲ್ಲ- ಶಿವಲಿಂಗೇಗೌಡ ಸಮಜಾಯಿಷಿ
10:33 AM, 23 Jul
ಕೆಲವೊಂದು ಕಾರಣಗಳಿಂದ ತಡವಾಗಿದೆ. ಕ್ಷಮೆ ಯಾಚಿಸುತ್ತೇವೆ- ಯುಟಿ ಖಾದರ್
10:35 AM, 23 Jul
ಆಮಿಷಕ್ಕೆ ಒಳಪಟ್ಟು ಎನ್ನುವ ಬದಲು ಅಮಿತ್ ಶಾಗೆ ಒಳಪಟ್ಟು ಎಂದ ಯುಟಿ ಖಾದರ್
10:35 AM, 23 Jul
ಜಿ. ಪರಮೇಶ್ವರ್ ಮಾತಾಡಿದಾಗ, ನಮ್ಮ ಸೌಭಾಗ್ಯ. ಸಂಸದೀಯ ವ್ಯವಹಾರಗಳ ಸಚಿವರು ಮಾತನಾಡಿದರು ಎಂದು ಕಿಚಾಯಿಸಿದ ಬಿಜೆಪಿಯ ಮಾಧುಸ್ವಾಮಿ
10:36 AM, 23 Jul
ಕೆಲವೇ ಕ್ಷಣಗಳಲ್ಲಿ ಆರ್. ಶಂಕರ್ ಸಲ್ಲಿಸಿರುವ ಅರ್ಜಿಯ ತೀರ್ಪು
10:37 AM, 23 Jul
ತಡವಾಗಿ ಆರಂಭವಾದರೂ ನೀವು ನಿಗದಿ ಮಾಡಿರುವ ಸಮಯದಲ್ಲಿ ವಿಶ್ವಾಸಮತ ಯಾಚನೆ ಮುಗಿಸುತ್ತೇವೆ- ಯುಟಿ ಖಾದರ್
10:42 AM, 23 Jul
ಸುಪ್ರೀಂಕೋರ್ಟ್ ಕಲಾಪ ಆರಂಭ
10:44 AM, 23 Jul
ಎನ್ಡಿಆರ್ಎಫ್ನಿಂದ ಬಂದ ದುಡ್ಡನ್ನು ಎಲ್ಲೋ ಹಾಕಿ, ಕೆ.ಆರ್. ಪುರಂನ ಜನರಿಗೆ ಕೆಲಸದ ಗುತ್ತಿಗೆ ನೀಡುತ್ತೀರಿ. ಕೊಡಗಿನ ಜನರು ಹೇಗಿದ್ದಾರೆ ಎಂದು ನೋಡಿ- ಬೋಪಯ್ಯ
10:45 AM, 23 Jul
ನೀವು ಪ್ರಾಮಾಣಿಕರಾಗಿಲ್ಲ ಅದಕ್ಕೆ ಮಳೆ ಬಂದಿಲ್ಲ ಎಂದು ಬೋಪಯ್ಯಗೆ ಹೇಳಿದ ಆಡಳಿತ ಪಕ್ಷದ ಶಾಸಕರು. ಪ್ರಾಮಾಣಿಕತೆಗೂ ಮಳೆಗೂ ಏನು ಸಂಬಂಧ? ಏನು ಮಾತನಾಡುತ್ತೀರಿ ಎಂದು ಬೋಪಯ್ಯ ಕಿಡಿ
10:46 AM, 23 Jul
ಅತೃಪ್ತ ಶಾಸಕರು ನಾಲ್ಕು ವಾರ ಸಮಯ ಕೇಳಿದ್ದು ಕಾನೂನು ಬಾಹಿರ. ಬಿಜೆಪಿ ಒತ್ತಡದಿಂದ ಹೀಗೆ ಕೇಳುತ್ತಿದ್ದಾರೆ. ಈ ಬಗ್ಗೆ ಸ್ಪೀಕರ್ 24 ಗಂಟೆಯೊಳಗೆ ಕ್ರಮ ತೆಗೆದುಕೊಳ್ಳಬೇಕು- ಈಶ್ವರ್ ಖಂಡ್ರೆ
10:49 AM, 23 Jul
ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದಿಂದ ಬ್ಯಾಂಕ್ ಕ್ಯೂನಲ್ಲಿ ನಿಂತು 150 ಜನರು ಸತ್ತುಹೋದರು. ಅದರ ಬಗ್ಗೆ ಕೇಂದ್ರದಿಂದ ಒಂದು ವರದಿ ಬಂದಿಲ್ಲ. ಜನರೂ ಮಾತಾಡಿಲ್ಲ. ಏಕೆಂದರೆ ಇದರಿಂದ ಒಳಿತಾಗುತ್ತದೆ ಎಂದು ಭಾವಿಸಿದ್ದರು- ಯುಟಿ ಖಾದರ್
10:50 AM, 23 Jul
ನೋಟು ಅಮಾನ್ಯೀಕರಣಕ್ಕೆ ರಿಸರ್ವ್ ಬ್ಯಾಂಕ್ ಎಷ್ಟು ಬಾರಿ ಅಭಿಪ್ರಾಯ ಹೊರಡಿಸಿತ್ತು ಎಂಬ ಮಾಹಿತಿ ತರಿಸಿಕೊಳ್ಳಿ. ಕಾಲಕಾಲಕ್ಕೆ ಅನೇಕ ದೇಶಗಳಲ್ಲಿ ಅಮಾನ್ಯೀಕರಣ ಆಗಿದೆ- ಮಾಧುಸ್ವಾಮಿ
10:52 AM, 23 Jul
ನೋಟು ರದ್ದತಿಗೆ ನಮ್ಮ ವಿರೋಧ ಇರಲಿಲ್ಲ. ಅದು ಜಾರಿಗೆ ಮಾಡಿದ ರೀತಿಯ ಬಗ್ಗೆ ಆಕ್ಷೇಪ ಇರುವುದು. ಅದಕ್ಕೆ ಸರಿಯಾದ ತಯಾರಿ ಇರಬೇಕಿತ್ತು- ಅಂಜಲಿ ನಿಂಬಾಳ್ಕರ್
Karnataka assembly floor-test live updates in kannada. Karnataka political crisis. Speaker Ramesh Kumar gave deadline of 5-6 pm to Chief Minister HD Kumaraswamy for floor test.