ದಿಕ್ಕುತಪ್ಪಿದ ತನಿಖೆ : ಸುಪ್ರೀಂಗೆ ಕಲ್ಬುರ್ಗಿ ಹೆಂಡತಿ ಮೊರೆ
ವಿಶೇಷ ತನಿಖಾ ತಂಡದಿಂದ ಸಂಶೋಧಕ- ವಿಚಾರವಾದಿ ಎಂ.ಎಂ.ಕಲ್ಬುರ್ಗಿ ಹತ್ಯೆಯ ತನಿಖೆ ಆಗಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ಸಿಬಿಐಗೆ ನೋಟಿಸ್ ನೀಡಲಾಗಿದೆ.
ವಿಶೇಷ ತನಿಖಾ ತಂಡದಿಂದ ಹತ್ಯೆಯ ತನಿಖೆಯಾಗಬೇಕು ಎಂದು ಕಲ್ಬುರ್ಗಿ ಅವರ ಪತ್ನಿ ಉಮಾದೇವಿ ಅರ್ಜಿ ಹಾಕಿದ್ದರು. ಹತ್ಯೆಯನ್ನು ಮಾಡಿದ ರೀತಿಯ ಬಗ್ಗೆ ಪ್ರಸ್ತಾವ ಮಾಡಿದ್ದ ಅವರು, ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್ ಮತ್ತು ನರೇಂದ್ರ ಪನ್ಸಾರೆ ಅವರನ್ನು ಹತ್ಯೆ ಮಾಡಿದ ಮಾದರಿಯಲ್ಲೇ ಕಲ್ಬುರ್ಗಿ ಅವರನ್ನೂ ಕೊಲ್ಲಲಾಗಿದೆ. ಆದ್ದರಿಂದ ಮೂರು ಪ್ರಕರಣದ ತನಿಖೆಯನ್ನು ಒಟ್ಟಾಗಿ ಕೈಗೊಳ್ಳಬೇಕು ಎಂದಿದ್ದರು.
ಕರ್ನಾಟಕ ಪೊಲೀಸರಿಂದ ಹತ್ಯೆಯ ತನಿಖೆ ಬಗ್ಗೆ ಭರವಸೆ ಇಲ್ಲ. ಮೂವರನ್ನೂ ಒಂದೇ ಸಂಘಟನೆಗೆ ಸೇರಿದವರೇ ಕೊಲೆ ಮಾಡಿದ್ದಾರೆ. ಈ ಮೂವರನ್ನೂ ಹತ್ಯೆ ಮಾಡಿದವರು ಕೂಡ ಕೊಲೆಗಾರರು ಅವರೇ. ಆದ್ದರಿಂದ ಮೂರು ಪ್ರಕರಣದ ತನಿಖೆ ಒಟ್ಟಿಗೆ ಮಾಡಿದರೆ ಆರೋಪಿಗಳನ್ನು ಶೀಘ್ರ ಹಿಡಿಯಲು ಅನುಕೂಲವಾಗುತ್ತದೆ ಎಂದು ಉಮಾದೇವಿ ಅರ್ಜಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರ, ರಾಷ್ಟ್ರೀಯ ತನಿಖಾ ದಳ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.












Click it and Unblock the Notifications