ಕರ್ನಾಟಕದ ಬುಧವಾರದ ತುಣುಕು ಸುದ್ದಿ
ಬೆಂಗಳೂರು, ನ. 26 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 4 ಗಂಟೆ : ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಬಾಕಿ ಹಣದ ಪೈಕಿ ನ್ಯಾಯಯುತವಾದ (ಎಫ್ಆರ್ಪಿ) ದರವನ್ನು ನ. 30 ರೊಳಗಾಗಿ ನೀಡಬೇಕು. ಕಬ್ಬು ಅರೆಯುವ ಕೆಲಸವನ್ನು ಸಕ್ಕರೆ ಕಾರ್ಖಾನೆಗಳು ಆರಂಭಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.
ಸಮಯ
3
ಗಂಟೆ
:
ಬಿಡದಿ
ಧ್ಯಾನ
ಪೀಠದ
ಸ್ವಯಂ
ಘೋಷಿತ
ದೇವಮಾನವ
ನಿತ್ಯಾನಂದ
ಸ್ವಾಮಿಯ
ಪುರುಷತ್ವ
ಪರೀಕ್ಷೆ
ವರದಿಯ
ವಿಚಾರಣೆಯನ್ನು
ರಾಮನಗರ
ಕೋರ್ಟ್
ಡಿಸೆಂಬರ್
3ಕ್ಕೆ
ಮುಂದೂಡಿದೆ.
ಸಮಯ 2 ಗಂಟೆ : ಚೆಕ್ಬೌನ್ಸ್ ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗುವಂತೆ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರಿಗೆ ಬೆಂಗಳೂರಿನ 13ನೇ ಎಸಿಎಂಎಂ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ. ಡಿ.14ರಂದು ಹಾಜರಾಗಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ಸಮಯ 1 ಗಂಟೆ : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕಾಡುಮನೆ ಎಸ್ಟೇಟ್ ಬಳಿ ಆನೆ ತುಳಿದು ಹಸು ವ್ಯಾಪಾರಿ ಸಾವನ್ನಪ್ಪಿದ್ದಾನೆ. ಮೃತನನ್ನು ಆವಲನಹಳ್ಳಿ ನಿವಾಸಿ ವಿ.ರಾಜು ಎಂದು ಗುರುತಿಸಲಾಗಿದ್ದು, ಇವರ ಜೊತೆಯಿದ್ದ ಮಂಜಯ್ಯನಿಗೂ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಮಯ 12 ಗಂಟೆ : ಬಿಡದಿ ಧ್ಯಾನ ಪೀಠದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ವರದಿಯ ವಿಚಾರಣೆಯನ್ನು ರಾಮನಗರ ಕೋರ್ಟ್ ಮಧ್ಯಾಹ್ನಕ್ಕೆ ಮುಂದೂಡಿದೆ.
ಸಮಯ 11 ಗಂಟೆ : ರಾಮನಗರ ಕೋರ್ಟ್ಗೆ ಸ್ವಾಮಿ ನಿತ್ಯಾನಂದ ಮತ್ತು ಐವರು ಶಿಷ್ಯರ ಆಗಮನ
ಸಮಯ 10 ಗಂಟೆ : ಸಿಐಡಿ ಡಿವೈಎಸ್ಪಿ ಲೋಕೇಶ್ ನೇತೃತ್ವದ ತಂಡ ರಾಮನಗರ ಕೋರ್ಟ್ಗೆ ಆಗಮಿಸಿದ್ದು, ಕೆಲವು ಹೊತ್ತಿನಲ್ಲಿ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ವರದಿಯನ್ನು ಕೋರ್ಟ್ಗೆ ಸಲ್ಲಿಸಲಿದ್ದಾರೆ.
ಸಮಯ 9 ಗಂಟೆ : ಬಿಡದಿ ಧ್ಯಾನ ಪೀಠದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆ ವರದಿ ಇಂದು ರಾಮನಗರ ಕೋರ್ಟ್ಗೆ ಸಲ್ಲಿಕೆಯಾಗಲಿದೆ. ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ನಡೆಸಿರುವ ಪುರುಷತ್ವ ಪರೀಕ್ಷೆ ವರದಿ ಸಿಐಡಿ ಅಧಿಕಾರಿಗಳ ಕೈ ಸೇರಿದ್ದು, ಇಂದು ಕೋರ್ಟ್ಗೆ ಸಲ್ಲಿಕೆ ಮಾಡಲಾಗುತ್ತದೆ. [ಸಿಐಡಿ ಕೈ ಸೇರಿದ ನಿತ್ಯಾನಂದ ಪುರುಷತ್ವ ಪರೀಕ್ಷೆ ವರದಿ]
ಸಮಯ 8 ಗಂಟೆ : ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ರೌಡಿ ಶೀಟರ್ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು 100 ರೌಶಿ ಶೀಟರ್ಗಳನ್ನು ವಶಕ್ಕೆ ಪಡೆದಿರುವ ಇನ್ಸ್ಪೆಕ್ಟರ್ ಪರಮೇಶ್ವರ್ ಅವರ ನೇತೃತ್ವದ ತಂಡ ಅವರ ಕಾರ್ಯಚಟುಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.
ಸಮಯ 7.30 ಗಂಟೆ : ಬೆಂಗಳೂರಿನ ಜಿಗಣಿ ಬಳಿ ಅಕ್ರಮ ಮರಳು ಅಡ್ಡೆ ಮೇಲೆ ಜಿಲ್ಲಾಧಿಕಾರಿ ಶಂಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಒಂದು ಟ್ರಾಕ್ಟರ್, 12 ಮೋಟಾರ್ ಮತ್ತು ಎರಡು ದ್ವಿಚಕ್ರವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.