16 ಪತ್ರಕರ್ತರಿಗೆ ಆಜೀವ ಮಾಸಾಶನ ಮಂಜೂರು ಮಾಡಿದ ಸರ್ಕಾರ
ಬೆಂಗಳೂರು, ಜುಲೈ 26 : ಕರ್ನಾಟಕ ಸರ್ಕಾರ ಪತ್ರಕರ್ತರ ಮಾಸಾಶನ ಯೋಜನೆಯಡಿ 16 ಪತ್ರಕರ್ತರಿಗೆ ಆಜೀವ ಮಾಸಾಶವನ್ನು ಮಂಜೂರು ಮಾಡಿದೆ. ಸಂಕಷ್ಟದಲ್ಲಿರುವ ಪತ್ರಕರ್ತರನ್ನು ಗುರುತಿಸಿ ಮಾಸಾಶನ ನೀಡಲಾಗಿದೆ.
ಜುಲೈ 26ರ ಗುರುವಾರ ಕರ್ನಾಟಕ ಸರ್ಕಾರ 16 ಪತ್ರಕರ್ತರಿಗೆ ಆಜೀವ ಮಾಸಾಶನ ಮಂಜೂರು ಮಾಡಿ ಆದೇಶ ಹೊರಡಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರನ್ನು ಗುರುತಿಸಿ ಅವರಿಗೆ ಮಾಸಾಶನ ನೀಡಲಾಗಿದೆ.

ಈ ಯೋಜನೆಯ ಫಲಾನುಭವಿಗಳಾದ ಪತ್ರಕರ್ತರಿಗೆ 10 ಸಾವಿರ ರೂ. ಮಾಸಾಶನ ಸಿಗುತ್ತದೆ.
ಮಾಸಾಶನ ಪಡೆದ ಪತ್ರಕರ್ತರು
* ಹಾಸನ ಜಿಲ್ಲೆಯ ಸಕಲೇಶಪುರದ ಎಸ್.ಚಂದ್ರಶೇಖರ್
* ಬೆಳಗಾವಿ ಜಿಲ್ಲೆಯ ಗೋಕಾಕ್ನ ವೀರಣ್ಣ ಸಿದ್ದಪ್ಪ ಗಣೇಶವಾಡಿ
* ಮಂಡ್ಯ ಜಿಲ್ಲೆಯ ಪಾಂಡವಪುರದ ಎಸ್.ಚಂದ್ರಶೇಖರ್
* ಮಂಡ್ಯದ ಎಂ ಜಿ ನಾಗರಾಜ್
* ಶಿವಮೊಗ್ಗದ ಎಸ್.ಷಣ್ಮುಗಂ
* ಚಾಮರಾಜನಗರದ ಸಿ.ಆರ್.ಸುಗುಣಾಕರನ್
* ಮೈಸೂರಿನ ಮೊಹಮದ್ ನಯೀಮುಲ್ಲಾ
* ಬೆಂಗಳೂರಿನ ಜಿ.ಅಶ್ವಥ್
* ಬೆಂಗಳೂರಿನ ಸೋಮಸುಂದರ ರೆಡ್ಡಿ
* ವಿಜಯಪುರದ ಶೈಲಜಾ ಪಿ ಮಮದಾಪುರ
* ಗದಗ ಜಿಲ್ಲೆಯ ಮುಂಡರಗಿಯ ಹುಚ್ಚೀರಪ್ಪ ಗೆದ್ದೆಪ್ಪ ಸಜ್ಜನರ
* ಬೆಂಗಳೂರಿನ ಎಸ್.ಎಲ್.ಗುರುಶಾಂತ
* ಧಾರವಾಡದ ಕಲಘಟಗಿಯ ಶ್ರೀಕಾಂತ ರಾಮನಗೌಡ ಪಾಟೀಲ್
* ಬೆಂಗಳೂರಿನ ಎನ್.ಎಸ್.ರಾಮಚಂದ್ರ
* ಬೆಂಗಳೂರಿನ ಎಂ.ಕೆ.ವಿದ್ಯಾರಣ್ಯ
* ಧಾರವಾಡದ ಗಣೇಶ ನಾರಾಯಣ ಜೋಶಿ











Click it and Unblock the Notifications