ಬಿಯರ್ ಪ್ರಿಯರಿಗೆ ಭಾರಿ ಗುಡ್ನ್ಯೂಸ್ ಕೊಟ್ಟ ಸರ್ಕಾರ
ಮೈಕೊರೆಯುವ ಚಳಿಗಾಲ ಶುರುವಾಗಿರುವ ಹೊತ್ತಲ್ಲೇ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ನು ಈ ಬಾರಿ ಚಳಿ ಹೆಚ್ಚಾಗಿರುವ ಕಾರಣ ಚಳಿಗಾಲ ಪೂರ್ಣಗೊಳ್ಳುವರೆಗೆ ನೆಮ್ಮದಿಯಾಗಿ ಎಣ್ಣೆ ಕುಡಿಯಬಹುದು ಎಂಬ ಸಂದೇಶ ರವಾನಿಸಿದೆ. ಈ ಬಾರಿ ವಾಡಿಕೆಗಿಂತ ಚಳಿ ಹೆಚ್ಚಾಗಿದ್ದು, ಚಳಿಗಾಲ ಮುಗಿಯವವರೆಗೆ ಬಿಯರ್ ದರವನ್ನು ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿದೆ.
ಮೂಲಗಳ ಪ್ರಕಾರ ಪ್ರತಿವರ್ಷವೂ ಬಿಯರ್ ಮಾರಾಟದಲ್ಲಿ ಕುಸಿತ ಕಾಣುತ್ತಿದ್ದು, ಈ ಪರಿಸ್ಥಿತಿಯಲ್ಲಿ ಬಿಯರ್ ದರ ಏರಿಸಿದ್ರೆ ಹೆಚ್ಚೇನು ಆದಾಯ ಬರುವುದಿಲ್ಲ. ಹಾಗಾಗಿ ನಷ್ಟದ ಕಾರಣದಿಂದ ಬಿಯರ್ ದರ ಏರಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಚಳಿಗಾಲದಲ್ಲಿ ಮದ್ಯಪ್ರಿಯರು ಹೆಚ್ಚಾಗಿ ಬಿಯರ್ ಸೇವನೆ ಮಾಡೋದಿಲ್ಲ. ಇದರಿಂದ ಬಿಯರ್ ಮಾರಾಟ ಕಡಿಮೆಯಾಗುವ ಆತಂಕ ಇರುವುದರಿಂದ ದರ ಏರಿಕೆ ಮಾಡುವ ವಿಚಾರವನ್ನು ಕೈಬಿಟ್ಟಿದೆ ಎನ್ನಲಾಗಿದೆ.

ಅಬಕಾರಿ ಇಲಾಖೆಗೆ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಟಾರ್ಗೆಟ್ ನೀಡಿದ್ದು, ಇದಕ್ಕಾಗಿ ಬಿಯರ್ ದರ ಹೆಚ್ಚಿಸಲು ಮೊದಲಿಗೆ ನಿರ್ಧರಿಸಲಾಗಿತ್ತು. ಈ ಸಂಬಂಧ ಅಬಕಾರಿ ಇಲಾಖೆ ಪ್ರಸ್ತಾವನೆಯೂ ಸಲ್ಲಿಸಿತ್ತು. ಆದರೆ ಚಳಿಗಾಲ ಆಗಿರುವುದರಿಂದ ಬಿಯರ್ ದರ ಏರಿಕೆಯಾದರೆ ಇಲಾಖೆಯ ಆದಾಯಕ್ಕೂ ಪೆಟ್ಟು ಬೀಳುವ ಸೂಚನೆ ಇರುವುದರಿಂದ ಜನವರಿ ತಿಂಗಳವರೆಗೆ ಬಿಯರ್ ದರ ಏರಿಸದಿರಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ವರ್ಷಾಂತ್ಯ ಮುಗಿಯುತ್ತಿದ್ದು, ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದೆ. ಇನ್ನು ಕ್ರಿಸ್ಮಸ್ ವೇಳೆಯೂ ರಾಜ್ಯದಲ್ಲಿ ಮದ್ಯ ಸೇವನೆ ಹೆಚ್ಚಾಗಿ ನಡೆಯುವುದರಿಂದ ಅಲ್ಲಿಯವರೆಗೆ ಬಿಯರ್ ಪ್ರಿಯರಿಗೆ ಯಾವುದೇ ದುಬಾರಿ ಟೆನ್ಷನ್ ಇರೋದಿಲ್ಲ. ಬೆಲೆ ಏರಿಕೆ ಆಗದ ಕಾರಣ ಎಂದಿನಂತೆ ಬಿಯರ್ ಕುಡಿಯಲು ಯಾವುದೇ ಅಡ್ಡಿ ಆತಂಕಗಳೂ ಇರೋದಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಜನವರಿವರೆಗೆ ನಿಶ್ಚಿಂತೆಯಾಗಿ ಬಿಯರ್ ಕುಡಿಯೋಣ ಗುರು ಎಂದು ಎಣ್ಣೆಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ.

ಹೊಸ ವರ್ಷದ ಪಾರ್ಟಿಗೂ ಇಲ್ಲ ಟೆನ್ಷನ್: ಪ್ರತಿ ಹೊಸ ವರ್ಷಾಚರಣೆ ವೇಳೆ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತವೆ. ಎಲ್ಲಿ ನೋಡಿದರೂ ಪಾರ್ಟಿ ವಿಚಾರವೇ ಸದ್ದು ಮಾಡುತ್ತವೆ. ಹಾಗಾಗಿ ಈ ಬಾರಿ ಅಬಕಾರಿ ಇಲಾಖೆಯ ಈ ನಿರ್ಧಾರದಿಂದ ಬಿಯರ್ ಪ್ರಿಯರಿಗಂತೂ ಒಂದು ರೀತಿಯಲ್ಲಿ ಹಬ್ಬ ಎಂತಲೇ ಹೇಳಬಹುದು.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಈ ಜನವರಿವರಿಗೆ ರಾಜ್ಯದಲ್ಲಿ ಚಳಿ ಹೆಚ್ಚಾಗಿ ಇರುತ್ತೆ ಎನ್ನಲಾಗಿದೆ. ಈ ಅವಧಿಯಲ್ಲಿ ಬಿಯರ್ ಮಾರಾಟ ಕೂಡ ಸ್ವಲ್ಪ ಕುಸಿಯುವುದು ಸಾಮಾನ್ಯ. ಹೀಗಿರುವಾಗ ಬಿಯರ್ ದರ ಏರಿಸಿದರೆ ಇಲಾಖೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ಕಾರಣಕ್ಕೆ ಜನವರಿವರಿಗೆ ಬಿಯರ್ ದರ ಪರಿಷ್ಕರಣೆ ಮಾಡುವುದು ಬೇಡ ಎಂದು ಅಬಕಾರಿ ಇಲಾಖೆ ನಿರ್ಧರಿಸಿದೆ. ಪ್ರತಿ ವರ್ಷವೂ ಚಳಿಗಾಲದಲ್ಲಿ ಬಿಯರ್ನಿಂದ ಬರುವ ಆದಾಯದಲ್ಲಿ ಶೇಕಡಾ 20ರಷ್ಟು ಕುಸಿಯುತ್ತದೆ ಎನ್ನಲಾಗಿದೆ. ಮಾರಾಟ ಪ್ರಮಾಣ ಇಳಿಮುಖ ಆಗುವುದರಿಂದ ಈ ಬಾರಿ ಇಲಾಖೆ ಮೊದಲೇ ಎಚ್ಚೆತ್ತುಕೊಂಡು ದರ ಪರಿಷ್ಕರಣೆಗೆ ಬ್ರೇಕ್ ಹಾಕಿದೆ ಎಂದು ಹೇಳಲಾಗಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications