Karnataka Election: ಬಿಜೆಪಿ, ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಭಾಷಾ ತರಬೇತುದಾರರು ಯಾರು ಗೊತ್ತಾ?
ಬೆಂಗಳೂರು ಮಾರ್ಚ್ 10: ರಾಜ್ಯ ವಿಧಾನಸಬೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಬಲ ಪಕ್ಷಗಳು ಪಕ್ಷದ ಪ್ರಮುಖ ಹಾಗೂ ಹಿರಿಯ ನಾಯಕರನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿವೆ. ಈ ವೇಳೆ ಸ್ಥಳೀಯ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಶ್ಲಾಘಿಸುವ ಮೂಲಕ ಪ್ರಚಾರದಲ್ಲಿ ತೊಡಗುವ ರಾಷ್ಟ್ರೀಯ ನಾಯಕರು ಜನಪ್ರಿಯತೆ ಪಡೆಯುತ್ತಿದ್ದಾರೆ.
ಇತ್ತೀಚಿನ ರಾಜಕೀಯ ನಾಯಕರ ಭಾಷಣದ ಆರಂಭದಲ್ಲಿ "ಎಲ್ಲರಿಗೂ ನಮಸ್ಕಾರ" ಎಂಬ ಪದ ಹೆಚ್ಚು ಚಾಲ್ತಿಯಲ್ಲಿದೆ. ಮಾತ್ರವಲ್ಲದೆ ಪ್ರಚಾರದ ಸ್ಥಳದ ವೈಶಿಷ್ಟತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ರಾಷ್ಟ್ರೀಯ ನಾಯಕರು ಸ್ಥಳೀಯರಾಗುವಂತೆ ಭಾಷಾ ತರಬೇತುದಾರರು ನೋಡಿಕೊಳ್ಳುತ್ತಿದ್ದಾರೆ.
ರಾಷ್ಟ್ರೀಯ ನಾಯಕರ ಕನ್ನಡ ಉಚ್ಚಾರಣೆ ಮತ್ತು ವಾಕ್ಶೈಲಿಯು 2018 ರ ಪ್ರಚಾರದ ಸಮಯದಲ್ಲಿ ಗಮನಾರ್ಹ ಸುಧಾರಣೆಯನ್ನು ತಂದಿದೆ. ಹೀಗಾಗಿ ಭಾಷಾ ತರಬೇತುದಾರರ ತಂಡಕ್ಕೆ ಈ ರೂಪಾಂತರದ ಕೀರ್ತಿ ಸಲ್ಲುತ್ತದೆ. ಇದೇ ಮಾರ್ಗದಲ್ಲಿ ಈ ಬಾರಿಯೂ ಮತದಾರರನ್ನು ಮೆಚ್ಚಿಸಲು ಪಕ್ಷಗಳು ಇನ್ನಿಲ್ಲದ ಕಸರತ್ತನ್ನು ನಡೆಸಿವೆ.

ಶಿವಮೊಗ್ಗದಲ್ಲಿ ಮೋದಿ ಕನ್ನಡದಲ್ಲಿ ಭಾಷಣ
ಫೆಬ್ರವರಿ 27 ರಂದು, ಪಿಎಂ ನರೇಂದ್ರ ಮೋದಿಯವರ ಶಿವಮೊಗ್ಗ ಸಾರ್ವಜನಿಕ ಸಭೆಯಲ್ಲಿ ಮಾತು ಕೇಳಿ ಜನರು ತೃಪ್ತರಾಗಿದ್ದರು. ರಾಜಕೀಯ ವಾಕ್ಚಾತುರ್ಯದ ಹೊರತಾಗಿ, ಶಿವಮೊಗ್ಗದ ಸಾಂಸ್ಕೃತಿಕ ಮತ್ತು ಪರಂಪರೆಯನ್ನು ಶ್ಲಾಘಿಸಿದ ಅವರ ಭಾಷಣದ ಬಹುಪಾಲು ಭಾಗವು ಕನ್ನಡ ಉಲ್ಲೇಖಗಳಿಂದ ತುಂಬಿತ್ತು.
ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಅವರು ಕನ್ನಡದಲ್ಲಿ ಮಾತಾಡಿದಾಗ ನೆರೆದಿದ್ದ ಸಹಸ್ರಾರು ಜನ ಖುಷಿಯಿಂದ ಕೇಕೆ ಹಾಕಿದರು. ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ, ಪದ್ಯದ ಆರಂಭಿಕ ಸಾಲುಗಳನ್ನು ಹೇಳಿದ ಪ್ರಧಾನಿ ಮೋದಿಯವರು, ನಾಡಿನ ಹೆಮ್ಮೆ ಮತ್ತು ರಾಷ್ಟ್ರಕವಿಯವರ ಹೆಸರು ಹೇಳುತ್ತಾ ಅವರಿಗೆ ವಂದಿಸಿದರು. ಗಂಗಾ ಸ್ನಾನ, ತುಂಗಾ ಪಾನ ಎಂದು ಬಣ್ಣಿಸಿದ ಮೋದಿ, ಗಂಗಾ ನದಿಯಲ್ಲಿ ಸ್ನಾನ, ತುಂಗಾ ನದಿಯ ನೀರು ಕುಡಿಯದಿದ್ದರೆ ಜೀವನ ಅಪೂರ್ಣವಾಗುತ್ತದೆ ಎಂದೂ ಹೇಳಿದ್ರು.
‘ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರಗಳು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಜೈ ಭಾರತ ಜನನಿಯ ತನುಜಾತೆ. ಜಯ ಹೇ ಕರ್ನಾಟಕ ಮಾತೆ' ಎಂದು ಪ್ರಧಾನಿ ಮೋದಿ ಅವರು ಹೇಳುತ್ತಿದ್ದಂತೆ ಸಭೀಕರು ಜೈ ಎಂದು ಘೋಷಣೆ ಕೂಗಿದರು. ಹೀಗೆ ಪ್ರಧಾನಿ ಮೋದಿ ಭಾಷಣ ಆರಂಭಿಸಿ ನೆರೆದಿದ್ದವರ ಮೆಚ್ಚುಗೆ ಗಳಿಸಿದರು.

ಮತದಾರರನ್ನು ಮೆಚ್ಚಿಸಲು ಭಾಷಾ ತರಬೇತುದಾರರಿಂದ ತರಬೇತಿ
"ರಾಷ್ಟ್ರೀಯ ನಾಯಕರು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವಾಗ ಜನರಿಗೆ ಹತ್ತಿರವಾಗುವುದು ಮುಖ್ಯವಾಗಿದೆ. ಮೋದಿ ಅವರು ಈ ಬಗ್ಗೆ ಹೆಚ್ಚು ನಿರ್ದಿಷ್ಟವಾಗಿರುತ್ತಾರೆ. ಸಾಧ್ಯವಾದಷ್ಟು ಸ್ಥಳೀಯ ಭಾಷೆಯಲ್ಲಿ ತಮ್ಮ ಮಾತನಾಡಲು ಬಯಸುತ್ತಾರೆ. ಇದನ್ನು ಖಚಿತಪಡಿಸಿಕೊಳ್ಳಲು ಸಮರ್ಪಿತ ತರಬೇತುದಾರರು ಮತ್ತು ವಿಷಯ ತಜ್ಞರು ಇದ್ದಾರೆ" ಎಂದು ಬಿದರೆ ಪ್ರಕಾಶ್ ಹೇಳುತ್ತಾರೆ. ಬಿಜೆಪಿ ಪ್ರಕಾಶನ ಕೋಶದ ರಾಜ್ಯ ಸಂಚಾಲಕ ಮತ್ತು ಉಸ್ತುವಾರಿ, ಭಾಷಾ ತರಬೇತಿ ತಂಡಗಳು ಈ ಕೆಲಸವನ್ನು ನಿರ್ವಹಿಸುತ್ತವೆ.
ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು ಮತದಾರರನ್ನು ಮೆಚ್ಚಿಸಲು ಬಯಸುತ್ತಾರೆ ಮತ್ತು ಭಾಷಣದ ಆರಂಭದಲ್ಲಿ ಸ್ಥಳೀಯ ಭಾಷೆಯಲ್ಲಿ ಮಾತನಾಡುವುದು ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದು ನಂಬುತ್ತಾರೆ. ಹೀಗಾಗಿ ಕನ್ನಡದ ಗೌರವಾನ್ವಿತ ಕವಿಗಳು ಮತ್ತು ದಾರ್ಶನಿಕರ ಸಾಲುಗಳನ್ನು ಉಲ್ಲೇಖಿಸುವುದು ಚಾಲ್ತಿಯಲ್ಲಿದೆ. ಈ ನಡುವೆ ಉಚ್ಚಾರಣೆ ಮತ್ತು ವಾಕ್ಚಾತುರ್ಯವನ್ನು ಸರಿಯಾಗಿ ಪಡೆಯುವುದು ನಾಯಕರಿಗೆ ಸವಾಲಾಗಿದೆ. ಅದರ ಕೊರತೆಯು ವಿಪರೀತ ಸನ್ನಿವೇಶಗಳಿಗೆ ಕಾರಣವಾಗಬಹುದು.

ತಪ್ಪಾಗಿ ಉಚ್ಚರಿಸುವುದಕ್ಕಾಗಿ ಟ್ರೋಲ್ ಆಗಿದ್ದ ರಾಹುಲ್ ಗಾಂಧಿ
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು 2018 ರಲ್ಲಿ ಬಸವಣ್ಣನವರ 12 ನೇ ಶತಮಾನದ ವಚನವನ್ನು ಉಲ್ಲೇಖಿಸುವಾಗ 'ಇವನಾರವ' ಅನ್ನುವ ಬದಲು 'ಇವ್ನರ್ವ' ಎಂದು ತಪ್ಪಾಗಿ ಉಚ್ಚರಿಸುವುದಕ್ಕಾಗಿ ಟ್ರೋಲ್ ಮಾಡಲ್ಪಟ್ಟರು. ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಸರಿಯಾಗಿ ಉಚ್ಚರಿಸುವ ಧೈರ್ಯ ಅವರಿಗಿಲ್ಲ ಎಂದಿದ್ದರು.

ಕಾಂಗ್ರಸ್, ಬಿಜೆಪಿ ಭಾಷಾ ತರಬೇತುದಾರರು:-
ನಾವು ಸಾಲುಗಳನ್ನು ಆಯ್ಕೆ ಮಾಡುವುದರ ಜೊತೆಗೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಆಧಾರದ ಮೇಲೆ ವಿಷಯಗಳನ್ನು ಆಯ್ಕೆ ಮಾಡುತ್ತೇವೆ. ಶಿವಮೊಗ್ಗದ ಸಿಗಂದೂರು ಚೌಡೇಶ್ವರಿ ದೇವಸ್ಥಾನ, ಕಲಬುರಗಿಯ ರಾಷ್ಟ್ರಕೂಟರು, ಬೆಳಗಾವಿಯ ಕಿತ್ತೂರು ಚೆನ್ನಮ್ಮ ಮತ್ತು ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ಬಗ್ಗೆ ಮೋದಿ ಮಾತನಾಡುತ್ತಾರೆ ಎಂದು ಬಿಜೆಪಿ ಭಾಷಾ ತರಬೇತುದಾರ ಹೇಮಂತ್ ಹೇಳಿದರು.
ಕಾಂಗ್ರೆಸ್ನಲ್ಲಿ ರಾಜ್ಯ ಉಪಾಧ್ಯಕ್ಷ ಬಿ.ಎಲ್.ಶಂಕರ್, ಮಾಜಿ ಸಂಸದ ರಾಜೀವ್ ಗೌಡ ಮತ್ತು ಬಿ.ಕೆ.ಹರಿಪ್ರಸಾದ್ ಅವರಂತಹ ಹಿರಿಯರು ಸಾಮಾನ್ಯವಾಗಿ ರಾಹುಲ್, ಸೋನಿಯಾ ಮತ್ತು ಪ್ರಿಯಾಂಕಾ ಅವರ ಭೇಟಿಗೆ ತರಬೇತುದಾರರಾಗಿದ್ದಾರೆ.
-
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications