Karnataka: ಚುನಾವಣಾಧಿಕಾರಿಗಳಿಂದ ಪಕ್ಷದ ಚಿಹ್ನೆ 'ಪೊರಕೆ'ಗೆ ಗೇಟ್ ಪಾಸ್: 'ಕೈ' ಕತ್ತರಿಸುತ್ತಾರೆಯೇ?
ಬೆಂಗಳೂರು, ಮೇ 03: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಚುನಾವಣೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಮಧ್ಯೆ ಪಕ್ಷವೊಂದರ ಚಿಹ್ನೆ 'ಪೊರಕೆ'ಗೆ ಆಯೋಗವು ಮತದಾನ ಗೇಟ್ ಪಾಸ್ ನೀಡಿದೆ.
ಮೇ 10 ರಂದು ಮತದಾನ ನಡೆಯಲಿದೆ. ನೀತಿ ಸಂಹಿತೆ ಪಾಲನೆ ದೃಷ್ಟಿಯಿಂದ ಮತದಾನದ ಎರಡು ಮೂರು ದಿನದ ಮೊದಲೇ ಭಾವುಟ ಪ್ರದರ್ಶನ, ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಈ ವೇಳೆ ಯಾವುದೇ ಪಕ್ಷಗಳು ಮತದಾರರ ಮೇಲೆ ಆಮಿಷ ಒಡ್ಡದಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಪೊರಕೆ ಮರೆಮಾಚುವುದು ಹೇಗೆ? ಎಂಬ ಪ್ರಶ್ನೆ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಕಾಡಿದೆ.

ಈ ಸಂಬಂಧ ನಿರ್ಧಾರ ಮಾಡಿರುವ ಅವರು, ಆಮ್ ಆದ್ಮಿ ಪಕ್ಷದ (AAP) ಚಿಹ್ನೆ ಆಗಿರುವ 'ಪೊರಕೆ'ಯನ್ನು ಮತಗಟ್ಟೆ ಆವರಣದಲ್ಲಿ ಮತದಾನಕ್ಕೂ ಮುನ್ನ 48 ಗಂಟೆ ನಿಷೇಧಿಸಲಾಗಿದೆ. ಆವರಣದಲ್ಲಿ ಎಲ್ಲಿಯೂ ಪೊರಕೆ ಕಾರಣದಂತೆ ಹಾಗೂ ಸ್ವಚ್ಛತೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ. ಬೆಂಗಳೂರಿನಲ್ಲೂ ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಈ ಬಗ್ಗೆ ತಿಳಿಸಿದ್ದಾರೆ ಎಂದು ಟಿವಿ ನೈನ್ ಕನ್ನಡ ವರದಿ ಮಾಡಿದೆ.
ಎಲ್ಲ ರಾಜಕೀಯ ಪಕ್ಷಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾಧಿಕಾರಿಳು ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಮತದಾರರನ್ನು ಎಎಪಿ ಪಕ್ಷ ಚಿಹ್ನೆ ಪೊರಕೆ ಸಹ ಸೆಳೆಯಬಹುದು ಎಂದು ಅಂದಾಜಿಸಿರುವ ಅಧಿಕಾರಿಗಳು ಮತಗಟ್ಟೆಯ ಆವರಣದಲ್ಲಿ ಎರಡು ದಿನ ಕಾಣದಂತೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಆಮ್ ಆದ್ಮಿ ಪಕ್ಷವು (AAP) ಕರ್ನಾಟಕದಲ್ಲಿ ಸುಮಾರು 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಪ್ರತಿ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳು ಕಾರ್ಯಕರ್ತರು ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ. ಆದರೆ ಅವರ ಪೊರಕೆ ಚಿಹ್ಮೆಯನ್ನು ನೀತಿ ಸಂಹಿತೆಯ ನಿಯಮದಂತೆ ಮರೆಮಾಚಲೇ ಬೇಕಿದೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪರದೇ: ಕೈ ಕತ್ತರಿಸಲಾಗುವುದೇ?
ಮತದಾನ ಮೇ 10 ರಂದು ನಡೆಯುವುದಿದ್ದರೆ ಮುನ್ನಾ 48 ಗಂಟೆ ಎಂದರೆ ಮೇ 8ರಂದೇ ಮತಗಟ್ಟೆಯ ಆವರಣದಲ್ಲಿ ಎಎಪಿ ಪಕ್ಷದ ಚಿಹ್ನೆ ಪೊರಕೆ ಕಾಣದಂತೆ ಚುನಾವಣೆ ಆಯೋಗ ಅಗತ್ಯ ವ್ಯವಸ್ಥೆಗೆ ಮಾಡಲಿದೆ.
ಈ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣವು ಕಮಲ ಆಕಾರದಲ್ಲಿದೆ. ಹಾಗಾದರೆ ಅದು ಸಹ ಮತದಾರರ ಮೇಲೆ ಚುನಾವಣೆ ಹೊತ್ತಿನಲ್ಲಿ ಪ್ರಭಾವ ಭೀರಲಿದೆ ಎಂದು ಅದನ್ನು ಪರದೆಯಿಂದ ಮುಚ್ಚಬೇಕು. ಹೀಗೆಂಬ ಮಾತುಗಳು ಈಗಾಗಲೇ ಸಾರ್ವಜನಿಕವಾಗಿ ವ್ಯಕ್ತವಾಗಿತ್ತು. ಇನ್ನೂ ಮುಂದೆ ಹೋಗಿದ್ದ ಕೆಲವು ಕಾಂಗ್ರೆಸ್ ಪಕ್ಷದ ಚಿಹ್ಮೆ ಕೈ ಹಾಗೆಂದು ಕೈ ಕತ್ತರಿಲಾಗುತ್ತದೆಯೇ ಎಂದು ಪ್ರಶ್ನಿ ಮಾಡಲಾಗಿತ್ತು. ಸದ್ಯ ಎರಡು ದಿನ ಮತಗಟ್ಟೆಗಳ ಆವರಣದಲ್ಲಿ ಪೊರಕೆ ನಿರ್ಬಂಧ ಮಾಡಿರುವ ಚುನಾವಣಾ ಆಯೋಗದ ನಿರ್ಧಾರ ಸದ್ದು ಮಾಡಲಿದೆ ಎನ್ನಲಾಗಿದೆ.
-
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ











Click it and Unblock the Notifications