Get Updates
Get notified of breaking news, exclusive insights, and must-see stories!

Karnataka: ಚುನಾವಣಾಧಿಕಾರಿಗಳಿಂದ ಪಕ್ಷದ ಚಿಹ್ನೆ 'ಪೊರಕೆ'ಗೆ ಗೇಟ್‌ ಪಾಸ್: 'ಕೈ' ಕತ್ತರಿಸುತ್ತಾರೆಯೇ?

ಬೆಂಗಳೂರು, ಮೇ 03: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಚುನಾವಣೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಮಧ್ಯೆ ಪಕ್ಷವೊಂದರ ಚಿಹ್ನೆ 'ಪೊರಕೆ'ಗೆ ಆಯೋಗವು ಮತದಾನ ಗೇಟ್ ಪಾಸ್ ನೀಡಿದೆ.

ಮೇ 10 ರಂದು ಮತದಾನ ನಡೆಯಲಿದೆ. ನೀತಿ ಸಂಹಿತೆ ಪಾಲನೆ ದೃಷ್ಟಿಯಿಂದ ಮತದಾನದ ಎರಡು ಮೂರು ದಿನದ ಮೊದಲೇ ಭಾವುಟ ಪ್ರದರ್ಶನ, ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಈ ವೇಳೆ ಯಾವುದೇ ಪಕ್ಷಗಳು ಮತದಾರರ ಮೇಲೆ ಆಮಿಷ ಒಡ್ಡದಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಪೊರಕೆ ಮರೆಮಾಚುವುದು ಹೇಗೆ? ಎಂಬ ಪ್ರಶ್ನೆ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಕಾಡಿದೆ.

Election Commission decided Hide Bloom before 48 hours Voting on May 10

ಈ ಸಂಬಂಧ ನಿರ್ಧಾರ ಮಾಡಿರುವ ಅವರು, ಆಮ್ ಆದ್ಮಿ ಪಕ್ಷದ (AAP) ಚಿಹ್ನೆ ಆಗಿರುವ 'ಪೊರಕೆ'ಯನ್ನು ಮತಗಟ್ಟೆ ಆವರಣದಲ್ಲಿ ಮತದಾನಕ್ಕೂ ಮುನ್ನ 48 ಗಂಟೆ ನಿಷೇಧಿಸಲಾಗಿದೆ. ಆವರಣದಲ್ಲಿ ಎಲ್ಲಿಯೂ ಪೊರಕೆ ಕಾರಣದಂತೆ ಹಾಗೂ ಸ್ವಚ್ಛತೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ. ಬೆಂಗಳೂರಿನಲ್ಲೂ ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಈ ಬಗ್ಗೆ ತಿಳಿಸಿದ್ದಾರೆ ಎಂದು ಟಿವಿ ನೈನ್ ಕನ್ನಡ ವರದಿ ಮಾಡಿದೆ.

ಎಲ್ಲ ರಾಜಕೀಯ ಪಕ್ಷಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾಧಿಕಾರಿಳು ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಮತದಾರರನ್ನು ಎಎಪಿ ಪಕ್ಷ ಚಿಹ್ನೆ ಪೊರಕೆ ಸಹ ಸೆಳೆಯಬಹುದು ಎಂದು ಅಂದಾಜಿಸಿರುವ ಅಧಿಕಾರಿಗಳು ಮತಗಟ್ಟೆಯ ಆವರಣದಲ್ಲಿ ಎರಡು ದಿನ ಕಾಣದಂತೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Election Commission decided Hide Bloom before 48 hours Voting on May 10

ಆಮ್ ಆದ್ಮಿ ಪಕ್ಷವು (AAP) ಕರ್ನಾಟಕದಲ್ಲಿ ಸುಮಾರು 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಪ್ರತಿ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳು ಕಾರ್ಯಕರ್ತರು ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ. ಆದರೆ ಅವರ ಪೊರಕೆ ಚಿಹ್ಮೆಯನ್ನು ನೀತಿ ಸಂಹಿತೆಯ ನಿಯಮದಂತೆ ಮರೆಮಾಚಲೇ ಬೇಕಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪರದೇ: ಕೈ ಕತ್ತರಿಸಲಾಗುವುದೇ?

ಮತದಾನ ಮೇ 10 ರಂದು ನಡೆಯುವುದಿದ್ದರೆ ಮುನ್ನಾ 48 ಗಂಟೆ ಎಂದರೆ ಮೇ 8ರಂದೇ ಮತಗಟ್ಟೆಯ ಆವರಣದಲ್ಲಿ ಎಎಪಿ ಪಕ್ಷದ ಚಿಹ್ನೆ ಪೊರಕೆ ಕಾಣದಂತೆ ಚುನಾವಣೆ ಆಯೋಗ ಅಗತ್ಯ ವ್ಯವಸ್ಥೆಗೆ ಮಾಡಲಿದೆ.

ಈ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣವು ಕಮಲ ಆಕಾರದಲ್ಲಿದೆ. ಹಾಗಾದರೆ ಅದು ಸಹ ಮತದಾರರ ಮೇಲೆ ಚುನಾವಣೆ ಹೊತ್ತಿನಲ್ಲಿ ಪ್ರಭಾವ ಭೀರಲಿದೆ ಎಂದು ಅದನ್ನು ಪರದೆಯಿಂದ ಮುಚ್ಚಬೇಕು. ಹೀಗೆಂಬ ಮಾತುಗಳು ಈಗಾಗಲೇ ಸಾರ್ವಜನಿಕವಾಗಿ ವ್ಯಕ್ತವಾಗಿತ್ತು. ಇನ್ನೂ ಮುಂದೆ ಹೋಗಿದ್ದ ಕೆಲವು ಕಾಂಗ್ರೆಸ್ ಪಕ್ಷದ ಚಿಹ್ಮೆ ಕೈ ಹಾಗೆಂದು ಕೈ ಕತ್ತರಿಲಾಗುತ್ತದೆಯೇ ಎಂದು ಪ್ರಶ್ನಿ ಮಾಡಲಾಗಿತ್ತು. ಸದ್ಯ ಎರಡು ದಿನ ಮತಗಟ್ಟೆಗಳ ಆವರಣದಲ್ಲಿ ಪೊರಕೆ ನಿರ್ಬಂಧ ಮಾಡಿರುವ ಚುನಾವಣಾ ಆಯೋಗದ ನಿರ್ಧಾರ ಸದ್ದು ಮಾಡಲಿದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+