Get Updates
Get notified of breaking news, exclusive insights, and must-see stories!
Live

Karnataka Election 2023, Rahul Gandhi Rally Live: 'ಸಮಾನತೆಯನ್ನು ಸಮಾಜಕ್ಕೆ ಸಾರಿದ ಬಸವಣ್ಣ' ರಾಹುಲ್ ಗಾಂಧಿ

ರಾಜ್ಯ ವಿಧಾನಸಭಾ ಚುನಾವಣೆ ಬೆನ್ನಲ್ಲೆ ಕರ್ನಾಟಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೂಲಕ ಲಿಂಗಾಯತರನ್ನು ಸೆಳೆಯುವ ಪ್ರಯತ್ನ ಮಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೊಂದಿಗೆ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಾಥ್ ನೀಡಿದ್ದಾರೆ. ಚುನಾವಣೆಗೆ ಕಾಂಗ್ರೆಸ್ಸಿನ ಪ್ರಮುಖ ಸ್ಟಾರ್ ಕ್ಯಾಂಪೇನರ್ ಆಗಿರುವ ರಾಹುಲ್ ಗಾಂಧಿ ಎರಡು ದಿನದ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

ಇದರಲ್ಲಿರುವ ಪ್ರಮುಖ ಕಾರ್ಯಕ್ರಮಗಳಲ್ಲೊಂದು ಕೂಡಲಸಂಗಮದಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮ. ಸದ್ಯ ಕಾರ್ಯಕ್ರಮ ಮುಕ್ತಾಯಗೊಂಡಿದೆ.

Karnataka Election 2023, Rahul Gandhi Rally Live Updates on Basava Jayanthi in Kudala Sangama

ಲಿಂಗಾಯತರ ಸರ್ವಶ್ರೇಷ್ಠ ಗುರುಗಳಾದ ಬಸವಣ್ಣನವರ ಸಮಾಧಿ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಕಾಂಗ್ರೆಸ್‌, ಬಿಜೆಪಿಗೆ ಕಠಿಣ ಸಂದೇಶ ರವಾನೆ ಮಾಡಲು ಯೋಜನೆ ರೂಪಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ, ರಾಹುಲ್ ಗಾಂಧಿ ಎರಡು ದಿನದ ಈ ಪ್ರವಾಸ ಮಹತ್ವವನ್ನು ಪಡೆದುಕೊಂಡಿದೆ.

ರಾಹುಲ್ ಗಾಂಧಿಯ ಭಾಗವಹಿಸುತ್ತಿರುವ ಬಸವ ಜಯಂತಿ ಕಾರ್ಯಕ್ರಮದ ಪ್ರಮುಖಾಂಶ, ಅವರ ಭಾಷಣದ ಹೈಲೆಟ್ಸ್ ಅನ್ನು ಈ ಪೇಜಿನಲ್ಲಿ ಲೈವ್ ಆಗಿ ನೀಡುತ್ತಿದ್ದೇವೆ.

Apr 23, 2023, 6:51 pm IST

'ರಾಹುಲ್ ಗಾಂಧಿ ಹೋದ ಕಡೆ ಕಾಂಗ್ರೆಸ್ ಗೆಲ್ಲುತ್ತೆ' ನಲಪಾಡ್

ರಾಹುಲ್ ಗಾಂಧಿ ಹೋದ ಕಡೆ ಬಿಜೆಪಿಗೆ ಲಾಭವಾಗುತ್ತೆ ಎಂದಿದ್ದ ಸಿಸಿ ಪಾಟೀಲ್ ಹೇಳಿಕೆಗೆ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿಯ ಶಕ್ತಿ ಏನು ಎಂದು ಸಚಿವ ಸಿಸಿ ಪಾಟೀಲ್‌ ಅವರಿಗೆ ಗೊತ್ತಿಲ್ಲ, ಈ ಬಾರಿ ರಾಜ್ಯದಲ್ಲಿ ಎಲ್ಲೆಲ್ಲಿ ರಾಹುಲ್ ಗಾಂಧಿ ಹೋಗುತ್ತಾರೆ ಅಲ್ಲಿ ಕಾಂಗ್ರೆಸ್‌ ಗೆಲ್ಲುತ್ತೆ ಎಂದು ನಲಪಾಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Apr 23, 2023, 1:57 pm IST

'ನಾನು ಬಸವಣ್ಣ ಅವರ ಸಿದ್ಧಾಂತಗಳನ್ನು ಓದಿದ್ದೇನೆ' ರಾಹುಲ್ ಗಾಂಧಿ

'ನಾನು ಬಸವಣ್ಣ ಅವರ ಸಿದ್ಧಾಂತಗಳನ್ನು ಓದಿದ್ದೇನೆ' ರಾಹುಲ್ ಗಾಂಧಿ
ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 'ನಾನು ಬಸವಣ್ಣ ಸಿದ್ಧಾಂತಗಳನ್ನು ಓದಿದ್ದೇನೆ. ಅವರು ತಮ್ಮ ಸಿದ್ಧಾಂತಗಳಲ್ಲಿ ಹೇಳಿದ್ದಾರೆ ನೀವು ಹೆದರಬೇಡಿ, ಸತ್ಯದ ಮಾರ್ಗದದಲ್ಲಿ ನಡೆಯಿರಿ ಎಂದು. ಆದರೆ ಕೆಲವು ಮಂದಿ ಮಾತ್ರ ಇದನ್ನು ಪಾಲಿಸುತ್ತಾರೆ. ಅದರಲ್ಲಿ ಬಸವಣ್ಣ ಅವರು ಮೊದಲಿಗರು ಹೀಗಾಗಿ ಅವರು ಸಮಾಜದಲ್ಲಿ ಬೆಳಕು ಆಗಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
Apr 23, 2023, 1:55 pm IST

'ಸಮಾನತೆಯನ್ನು ಸಮಾಜಕ್ಕೆ ಸಾರಿದ ಬಸವಣ್ಣ'

ಎಲ್ಲರೂ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುತ್ತಾರೆ. ಸತ್ಯವನ್ನು ಅರಿತುಕೊಳ್ಳುತ್ತಾರೆ. ಆದರೆ ಸಮಾಜದಲ್ಲಿ ಅದನ್ನು ಹೇಳಲು ಮುಂದಾಗುವುದಿಲ್ಲ. ಅಂತವರನ್ನು ನಾವು ನೆನಪಿಸಿಕೊಳ್ಳುವುದಿಲ್ಲ. ಆದರೆ ತಮ್ಮ ಅರಿವಿಗೆ ಬಂದ ಸತ್ಯವನ್ನು ಬಸವಣ್ಣ ಸಮಾಜಕ್ಕೆ ಸಾರಿದರು. ಇಂದು ನನಗೆ ಬಂದು ತುಂಬಾ ಸಂತೋಷವಾಗಿದೆ. ಬಸವಣ್ಣ ಅವರು ಹೋರಾಟ ಮಾಡಿದ ರೀತಿಯನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ನನಗೆ ಈ ಸಂದರ್ಭದಲ್ಲಿ ಅದರನ್ನು ಅರಿತುಕೊಳ್ಳಲು ಸಾಧ್ಯವಾಗಿದೆ. ಬಸವಣ್ಣ ಅವರು ನಮ್ಮ ಎಲ್ಲರಿಗೂ ಮಾರ್ಗದರ್ಶನವಾಗಿದ್ದಾರೆ ಎಂದು ರಾಹುಲ್ ಗಾಂಧಿ ಬಸವ ಜಯಂತಿಯಂದು ಕೂಡಲ ಸಂಗಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
Apr 23, 2023, 1:52 pm IST

'ಅಸಮಾನತೆಯ ಬಗ್ಗೆ ಪ್ರಶ್ನೆ ಮಾಡಿದ ಬಸವಣ್ಣ'

ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 'ಬಸವಣ್ಣ ಅಸಮಾನತೆಯ ಬಗ್ಗೆ ಪ್ರಶ್ನೆ ಮಾಡಿದರು. ಅದನ್ನು ಸಮಾಜ ಮುಂದೆ ಅನುಷ್ಠಾನ ಮಾಡಿದರು. ಬಸವಣ್ಣನ ಮುಂದೆ ಹೂವು ಹಾಕಿರುವುದಕ್ಕೆ ಕಾರಣ ಇದೆ. ಇದನ್ನು ನೀವು ತಿಳಿದುಕೊಳ್ಳಬೇಕಾಗಿದೆ. ಸತ್ಯವನ್ನು ತೆರದಿಡುವುದು ಸಮಾಜದಲ್ಲಿ ಅಷ್ಟು ಸುಲಭವಿಲ್ಲ. ಬಸವಣ್ಣ ಅವರನ್ನು ಹೆದರಿಸಲಾಯಿತು, ಬೆದರಿಸಲಾಯಿತು ಆದರೆ ಆವರು ಹಿಂದೆ ಸರಿಲಿಲ್ಲ. ಅವರು ಗಟ್ಟಿಯಾಗಿ ನಿಂತರು. ಹೀಗಾಗಿ ನಾವು ಅವರ ಪಾದಕ್ಕೆ ಹೂವನ್ನು ಸಲ್ಲಿಸಿದ್ದೇವೆ' ಎಂದು ಹೇಳಿದರು.
Apr 23, 2023, 1:50 pm IST

ಬಸವಣ್ಣ ಅವರಿಗೂ ಇತರರಿಗೂ ಇರುವ ವ್ಯತ್ಯಾಸ ಏನು? ರಾಹುಲ್ ಗಾಂಧಿ

ಬಸವಣ್ಣ ಅವರಿಗೂ ಇತರರಿಗೂ ಇರುವ ವ್ಯತ್ಯಾಸ ಏನು? ರಾಹುಲ್ ಗಾಂಧಿ
ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಸವಣ್ಣನಿಗೂ ಇತರರಿಗೂ ಇರುವ ವ್ಯತ್ಯಾಸ ಏನು? ಎನ್ನುವುದುಕ್ಕೆ ಉತ್ತರಿಸಿದರು. 'ಇನ್ನೊಬ್ಬರಿಗೆ ಸವಾಲು ಮಾಡುವುದು ತುಂಬಾ ಸರಳ ನಮ್ಮನ್ನು ನಾವೇ ಸವಾಲು ಹಾಕಿಕೊಳ್ಳುವುದು ಕಷ್ಟ. ಸಣ್ಣ ವಯಸ್ಸಿನಲ್ಲಿ ಬಸವಣ್ಣನವರಿಗೆ ಇಂತಹ ದೊಡ್ಡ ವಿಚಾರಗಳು ಹೇಗೆ ಬಂತು? ಇದಕ್ಕೆ ಸ್ವಾಮೀಜಿಗಳು ಉತ್ತರ ಕೊಟ್ಟರು. ಈ ವಿಚಾರ ಯಾಕೆ ಬಂತು ಅಂದರೆ ಬಸವಣ್ಣ ಅವರ ಗೆಳೆಯರ ಪರಿಸ್ಥಿತಿ ನೋಡಿ ಅವರಿಗೆ ಈ ರೀತಿ ಬದಲಾವಣೆ ತರಬೇಕು ಎಂದು ಮನಸ್ಸಾಯಿತು. ಜಾತಿ ವಿರುದ್ಧ, ತಿರಸ್ಕಾರದ ಬಗ್ಗೆ, ಸಮಾಜದ ಬಗ್ಗೆ ತಮ್ಮನ್ನು ತಾವು ಸವಾಲು ಹಾಕಿಕೊಳ್ಳುವ ಪ್ರಯತ್ನ ಮಾಡಿದರು. ಪ್ರಶ್ನೆ ಕೇಳಿಕೊಂಡ ಮೇಲೆ ಹೃದಯದಲ್ಲಿ ಅನಿಸಿದ್ದು ಜೀವನ ಪೂರ್ತಿ ಅದನ್ನು ಮಾಡಲು ನಿರ್ಧರಿಸಿದರು. ಬಹಳ ಜನ ಸವಾಲು ಹಾಕಿಕೊಳ್ಳುತ್ತಾರೆ. ಆದರೆ ಸಮಾಜದಲ್ಲಿ ಧ್ವನಿ ಎತ್ತುವುದಿಲ್ಲ. ಅವರಿಗೆ ಸತ್ಯದ ಬಗ್ಗೆ ಗೊತ್ತಾಗುತ್ತದೆ. ಆದರೆ ಪ್ರಶ್ನೆ ಮಾಡುವುದಿಲ್ಲ. ಇದೇ ಬಸವಣ್ಣನಿಗೂ ಇತರರಿಗೂ ಇರುವ ವ್ಯತ್ಯಾಸ ಎಂದು ರಾಹುಲ್ ಗಾಂಧಿ ಹೇಳಿದರು.
Apr 23, 2023, 1:44 pm IST

'ಬಸವಣ್ಣನವರು ಸಮಾಜಕ್ಕೆ ಬೆಳಕನ್ನು ತಂದು ಕೊಟ್ಟರು' ರಾಹುಲ್ ಗಾಂಧಿ

ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಈ ಸಂದರ್ಭದಲ್ಲಿ ನನ್ನನ್ನು ಕರೆಸಿರುವುದಕ್ಕೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಸ್ವಾಮಿಜಿ ಅವರು ಮಾತನಾಡುವಾಗ ಹೇಳಿದರು, ಪ್ರಜಾಪ್ರಭುತ್ವವನ್ನು ಬಸವಣ್ಣ ಅವರು ರಕ್ಷಣೆ ಮಾಡಿದರು. ಇದು ಸತ್ಯ. ಇದನ್ನು ಅಲ್ಲಗಳಿಯಲು ಆಗುವುದಿಲ್ಲ. ಪ್ರಜಾಪ್ರಭುತ್ವ, ಸಂಸದೀಯ ಸಂಸತ್ತು ಬರಲು ಬಸವಣ್ಣ ನವರ ಅನುಭವ ಮಂಟಪ ಕಾರಣ. ಸಮಾಜದಲ್ಲಿ ಅವತ್ತು ಕತ್ತಲು ಇತ್ತು. ಆಗ ಬಸವಣ್ಣನವರು ಸಮಾಜಕ್ಕೆ ಬೆಳಕನ್ನು ತಂದು ಕೊಟ್ಟರು. ಅದು ಈಗಲೂ ಬೆಳಕನ್ನು ನೀಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.
Apr 23, 2023, 1:27 pm IST

ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಜೀವನ ಮುಡುಪಾಗಿಟ್ಟ ಬಸವಣ್ಣ

ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಜೀವನ ಮುಡುಪಾಗಿಟ್ಟ ಬಸವಣ್ಣ
'ಹನ್ನೆರಡನೆ ಶತಮಾನದಲ್ಲಿ ಇಂಗಳೇಶ್ವರ ಗ್ರಾಮದಲ್ಲಿ ಬಸವಣ್ಣ ಜನಿಸಿದರು. ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಅವರು ಪ್ರಯತ್ನ ಮಾಡಿದರು. ಇದಕ್ಕಾಗಿ ಬಾಲ್ಯದಲ್ಲಿ ಮನೆಯನ್ನು ತೊರೆದು ಕೂಡಲ ಸಂಗಮಕ್ಕೆ ಬಂದರು. ನಾನಾ ಬದಲಾವಣೆಗಳನ್ನು ಅವರು ತಂದಿದ್ದಾರೆ. ಈ ದಿನ ಅವರನ್ನು ಸ್ಮರಿಸುವುದು ನಮ್ಮ ಪುಣ್ಯ ಎಂದು ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು. ಜೊತೆಗೆ ರಾಹುಲ್ ಗಾಂಧಿ ಅವರು ಬಂದಿರುವುದು ನಮ್ಮ ಸೌಭಾಗ್ಯ' ಎಂದು ಪ್ರಸ್ತಾವಿಕ ನುಡಿಗಳನ್ನು ತೋಂಟದ ಸಿದ್ಧರಾಮ ಸ್ವಾಮೀಜಿ ಆಡಿದರು.
Apr 23, 2023, 1:24 pm IST

ಬಸವ ಜಯಂತಿ: ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಪ್ರಸ್ತಾವಿಕ ನುಡಿ

ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು, 'ಬಸವಣ್ಣನವರ ಐಕ್ಯ ಸ್ಥಳದಲ್ಲಿ ಅವರ ಗುಣಗಾನ, ಅವರ ಸ್ತುತಿ ಮಾಡುವಂತದ್ದು ಪೂರ್ಜ ಜನ್ಮದ ಪುಣ್ಯ. ಕೂಡಲ ಸಂಗಮ ನಮ್ಮೆಲ್ಲರ ಶ್ರದ್ಧಾ ಕೇಂದ್ರ. ಇದೊಂದು ಪವಿತ್ರ ಕ್ಷೇತ್ರವಾಗಿದೆ. ಯಾರು ಇಲ್ಲಿಗೆ ಬರುತ್ತಾರೋ ಅವರು ಸಂಕಷ್ಟದಿಂದ ಮುಕ್ತರಾಗುತ್ತಾರೆ. ಕೂಡಲ ಸಂಗಮದ ವಿಶೇಷತೆ ಇದಾಗಿದೆ' ಎಂದರು.
Apr 23, 2023, 1:17 pm IST

ರಾಹುಲ್ ಗಾಂಧಿ ಅವರಿಗೆ ಕಾರ್ಯಕ್ರಮಕ್ಕೆ ಅದ್ದೂರಿ ಸ್ವಾಗತ

ರಾಹುಲ್ ಗಾಂಧಿ ಅವರಿಗೆ ಶಾಲು ಹೊದಿಸಿ, ಬಸವಣ್ಣ ಮೂರ್ತಿಯನ್ನು ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ಈ ವೇಳೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವೇದಿಕೆ ಮೇಲೆ ನೆರೆದವರೆಲ್ಲರೂ ಬಸವಣ್ಣನವರ ಮೂರ್ತಿಗೆ ಪುಷ್ಪಾರ್ಪಣೆ ಮಾಡಲಾಯಿತು.
Apr 23, 2023, 12:53 pm IST

ಬಸವ ಜಯಂತಿ ಕಾರ್ಯಕ್ರಮ ಆರಂಭ

ಬಸವ ಜಯಂತಿ ಕಾರ್ಯಕ್ರಮ ಆರಂಭ
ಬಸವ ಧರ್ಮ ಪೀಠದಿಂದ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾಗವಹಿಸಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಿದ್ದಾರೆ.
Apr 23, 2023, 12:44 pm IST

ಸಂಗಮದಲ್ಲಿ ಸಂಗಮನಾಥ ದರ್ಶನ ಪಡೆದ ರಾಹುಲ್ ಗಾಂಧಿ

ಸಂಗಮದಲ್ಲಿ ಸಂಗಮನಾಥ ದರ್ಶನ ಪಡೆದ ರಾಹುಲ್ ಗಾಂಧಿ
ಕೂಡಲ ಸಂಗಮಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುನಗುಂದ ತಾಲೂಕು ಕೂಡಲ ಸಂಗಮದಲ್ಲಿ ಸಂಗಮನಾಥ ದರ್ಶನ ಪಡೆದರು. ಸಂಗಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಐಕ್ಯ ಮಂಟಪದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಹಾಗೂ ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ.ವೇಣುಗೋಪಾಲ್ ಅವರು ಉಪಸ್ಥಿತರಿದ್ದರು. ಸದ್ಯ ಬಸವ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ತೆರಳಿದ್ದಾರೆ.
Apr 23, 2023, 12:37 pm IST

ಬಸವ ಜಯಂತಿ ಕಾರ್ಯಕ್ರಮದಲ್ಲಿ ತೋಂಟದ ಸಿದ್ಧರಾಮ ಸ್ವಾಮೀಜಿ ಭಾಗಿ

ಬಸವ ಧರ್ಮ ಪೀಠದಿಂದ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾಗವಹಿಸಲಿದ್ದು, ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಇವರೊಂದಿಗೆ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಸಂಗಮೇಶ್ವರ ಹಾಗೂ ಬಸವಣ್ಣನ ಐಕ್ಯಸ್ಥಳ ದರ್ಶನದ ನಂತರ ಜಯಂತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
Apr 23, 2023, 11:41 am IST

ಸಂಜೆ ವಿಜಯಪುರದಲ್ಲಿ ರಾಹುಲ್ ಗಾಂಧಿ ಪಥಸಂಚಲನ

ಹುಬ್ಬಳ್ಳಿಯಿಂದ ಹೊರಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಲಸಂಗಮದ ಬಸವ ಮಂಟಪದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ದಾಸೋಹ ಭವನದಲ್ಲಿ ಪ್ರಸಾದ ವಿನಿಯೋಗ ಮಾಡುವರು. ಸಂಜೆ ವಿಜಯಪುರಕ್ಕೆ ತೆರಳಿ ಸಂಜೆ 5ರಿಂದ 6.30ರವರೆಗೆ ಪಥಸಂಚಲನ ನಡೆಸಲಿದ್ದಾರೆ. ಕರ್ನಾಟಕದಲ್ಲಿ ಮೇ 10 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆ ಎಲ್ಲ ಪಕ್ಷಗಳು ತಮ್ಮದೇ ರಣತಂತ್ರ ಹೆಣೆದು ಚುನಾವಣಾ ಅಖಾಡದಲ್ಲಿ ಮತ ಸೆಳೆಯುವ ಕಾರ್ಯದಲ್ಲಿ ತೊಡಗಿವೆ.
Apr 23, 2023, 11:33 am IST

ಬಸವ ಜಯಂತಿಯ ಶುಭಾಶಯ ಕೋರಿ ಕಾಂಗ್ರೆಸ್ ಟ್ವೀಟ್

'ಅನುಭವ ಮಂಟಪದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟ, ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ‌ ವಿರುದ್ಧ ಸಮರ ಸಾರಿದ, ಮಹಾನ್ ಮಾನವತಾ ವಾದಿ, ಜಗಜ್ಯೋತಿ, ಕ್ರಾಂತಿಯೋಗಿ ಬಸವ ಜಯಂತಿಯ ಶುಭಾಶಯಗಳು' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Apr 23, 2023, 11:08 am IST

ರಾಹುಲ್ ಗಾಂಧಿಗೆ ಹುಬ್ಬಳ್ಳಿಯಲ್ಲಿ ಸ್ವಾಗತ: ಮಾಜಿ ಸಿಎಂ ಜೊತೆಗೆ ರಾಗಾ ಮಾತುಕತೆ

ರಾಹುಲ್ ಗಾಂಧಿಗೆ ಹುಬ್ಬಳ್ಳಿಯಲ್ಲಿ ಸ್ವಾಗತ: ಮಾಜಿ ಸಿಎಂ ಜೊತೆಗೆ ರಾಗಾ ಮಾತುಕತೆ
ವಾಣಿಜ್ಯನಗರಿ ಹುಬ್ಬಳ್ಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಾಹುಲ್ ಗಾಂಧಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹುಬ್ಬಳ್ಳಿಗೆ ಬಂದಿಳಿದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು. ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಅನಿಲ ಕುಮಾರ್ ಪಾಟೀಲ್ ಸೇರಿ ಹಲವು ನಾಯಕರು ಭಾಗವಹಿಸಿದ್ದು, ಶೆಟ್ಟರ ಜೊತೆ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ.
Apr 23, 2023, 11:03 am IST

ರಾಹುಲ್ ಗಾಂಧಿಗೆ ಹುಬ್ಬಳ್ಳಿಯಲ್ಲಿ ಸ್ವಾಗತ: ಮಾಜಿ ಸಿಎಂ ಜೊತೆಗೆ ರಾಗಾ ಮಾತುಕತೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಾಹುಲ್ ಗಾಂಧಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
Apr 23, 2023, 10:44 am IST

'ಸಂಗಮಕ್ಕೆ ಭೇಟಿ' ಕಾಂಗ್ರೆಸ್ ನಾಯಕ ಟ್ವೀಟ್

'ಗುರು ಬಸವಣ್ಣನವರ ಜೀವನ ಭ್ರಾತೃತ್ವ ಮತ್ತು ಸಹಾನುಭೂತಿಯಿಂದ ಕೂಡಿತ್ತು. ಅವರು ಎಲ್ಲರಿಗೂ ನ್ಯಾಯ ಮತ್ತು ಘನತೆಗಾಗಿ ಅವಿರತವಾಗಿ ಶ್ರಮಿಸಿದರು. ಅವರ ಬೋಧನೆಗಳು ನಮ್ಮ ಪ್ರಜಾಪ್ರಭುತ್ವದಲ್ಲಿ ಅಜರಾಮರ. ಅವರಿಗೆ ನಮ್ರ ನಮನಗಳು. ಬಸವ ಜಯಂತಿಯ ಈ ಪವಿತ್ರ ಸಂದರ್ಭದಲ್ಲಿ ಕೂಡಲ ಸಂಗಮಕ್ಕೆ ಭೇಟಿ ನೀಡುತ್ತಿರುವುದಕ್ಕೆ ಸಂತೋಷವಿದೆ' ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.
Apr 23, 2023, 10:17 am IST

ಲಿಂಗಾಯತ ಮತಗಳ ಮೇಲೆ ಕಾಂಗ್ರೆಸ್ ಕಣ್ಣು

ಲಿಂಗಾಯತ ಮತಗಳ ಮೇಲೆ ಕಾಂಗ್ರೆಸ್ ಕಣ್ಣು
ಬಸವ ಜಯಂತಿಯನ್ನು ಏಪ್ರಿಲ್ 23 ರಂದು ರಾಜ್ಯದಾದ್ಯಂತ ಲಿಂಗಾಯತ ಸಮಾಜದವರು ಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಲಿಂಗಾಯತ ಸಮುದಾಯದ ಮತದಾರರನ್ನು ತನ್ನತ್ತ ಸೆಳೆಯಲು ಮುಂದಾಗಿರುವ ಕಾಂಗ್ರೆಸ್, ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಭಾಗವಹಿಸಲು ರಾಹುಲ್ ಗಾಂಧಿಯನ್ನು ಇಂದು ಕರೆತರುತ್ತಿದೆ. ಈ ಮೂಲಕ ಲಿಂಗಾಯತ ಮತಗಳನ್ನು ಸೆಳೆಯುವ ಯೋಜನೆಯನ್ನು ಕಾಂಗ್ರೆಸ್ ರೂಪಿಸಿದೆ.
Apr 23, 2023, 7:13 am IST

ಮೇ 10ಕ್ಕೆ ಚುನಾವಣೆ

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ದಿನಾಂಕ ಏಪ್ರಿಲ್ 20ಕ್ಕೆ ಕೊನೆಗೊಂಡಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ಕೂಡ ಮುಗಿದಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
Apr 23, 2023, 7:12 am IST

ವಿಜಯಪುರದಲ್ಲಿ ರಾಹುಲ್ ಗಾಂಧಿ ರೋಡ್ ಶೋ

ಸಂಜೆ 4.35ಕ್ಕೆ ಹೆಲಿಕಾಪ್ಟರ್ ಮೂಲಕ ವಿಜಯಪುರಕ್ಕೆ ಪ್ರಯಾಣ ಬೆಳೆಸಿ ವಿಜಯಪುರ ತಲುಪಿ ರೋಡ್ ಶೋ ನಡೆಸಲಿದ್ದಾರೆ. ಭಾನುವಾರ ವಿಜಯಪುರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಏ.24 ರಂದು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಮುಂದುವರಿಸಲಿದ್ದಾರೆ.
Apr 23, 2023, 7:12 am IST

ಬಸವ ಭವನದಲ್ಲಿ ಬೃಹತ್‌ ಕಾರ್ಯಕ್ರಮ

ಬಸವಣ್ಣನವರ ಐಕ್ಯ ಸ್ಥಳ ಜಿಲ್ಲೆಯ ಕೂಡಲಸಂಗಮದಲ್ಲಿಏ.23 ರಂದು ಬಸವ ಜಯಂತಿ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಏ.23 ರಂದು ಬಸವ ಭವನದಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಧ್ಯಾಹ್ನ 12ಕ್ಕೆ ಆಗಮಿಸಿ ಐಕ್ಯ ಮಂಟಪದ ದರ್ಶನ ಪಡೆಯಲಿದ್ದಾರೆ. 12.45ಕ್ಕೆ ಜಯಂತಿಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ದಾಸೋಹ ಭವನದಲ್ಲಿ ಊಟ ಮಾಡಿ ವಿಜಯಪುರಕ್ಕೆ ತೆರಳಲಿದ್ದಾರೆ.
Apr 23, 2023, 7:11 am IST

ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ

ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ದೂರವಿಲ್ಲ. ಪ್ರಬಲ ಪಕ್ಷಗಳು ಕೇಂದ್ರ ನಾಯಕರ ಮೂಲಕ ರಾಜ್ಯದಲ್ಲಿ ಮತಬೇಟೆ ಶುರು ಮಾಡಿವೆ. ಅದರಲ್ಲೂ ಲಿಂಗಾಯತ ಮತಗಳನ್ನು ಸೆಳೆಯುವ ಯೋಜನೆಯನ್ನು ರೂಪಿಸಲಾಗಿದೆ. ಇದರ ಬೆನ್ನಲ್ಲೆ ಇಂದು (ಏಪ್ರಿಲ್ 23) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಗಲಕೋಟೆಗೆ ಭೇಟಿ ನೀಡಲಿದ್ದಾರೆ. ಬಸವ ಜಯಂತಿಯ ದಿನವಾದ ಇಂದು ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಅವರನ್ನು ಕರೆಸಿ ಕಾಂಗ್ರೆಸ್ ಮತ ಆಕರ್ಷಣೆ ನಡೆಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+