Karnataka Election: ಹಿಂದಿನ ರಾಜಕಾರಣಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಿನ ರಾಜಕೀಯ ಸ್ಥಿತಿಗತಿ ಹೇಗಿದೆ?: ಇಲ್ಲಿದೆ ವಿವರ
ಕರ್ನಾಟಕ, ಏಪ್ರಿಲ್ 21: ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದಿರುವ ಇತರರಿಗಿಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಮತ್ತು ಸುದ್ದಿಯಲ್ಲಿರುವ ನಾಯಕರಿದ್ದರೆ ಅದು ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತ್ರ. ಮತ್ತೊಂದೆಡೆ ಇಲ್ಲಿ ಕೇವಲ ಜಾತಿ ನಾಯಕರಿದ್ದಾರೆ, ಜನನಾಯಕರಿಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಪಡೆಯಲು ವಿಫಲವಾಗಿರುವ ಬಿಜೆಪಿ ನಾಯಕರು ಈಗಾಗಲೇ ಬಿ.ಎಲ್. ಸಂತೋಷ್ ಮೇಲೆ ತೀವ್ರವಾದ ಆರೋಪ ಮಾಡಿ ಕೆಂಡಕಾರಿದ್ದಾರೆ. ರಾಜ್ಯದಲ್ಲಿ ಮಾಸ್ ಲೀಡರ್ಗಳ ವ್ಯಾಪ್ತಿಗೆ ಬರುವ ಎಲ್ಲಾ ನಾಯಕರು ಸಂತೋಷ್ ಅವರ ಮುಂದೆ ಅಧಿಕಾರಕ್ಕಾಗಿ ಕೈಚಾಚುವಂತೆ ಆಗಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಮತ್ತೊಂದೆಡೆ ಬಿಜೆಪಿಯ ಕೆಲ ನಾಯಕರ ದುಸ್ಥಿತಿಗೆ ಅವರೇ ಕಾರಣ ಎಂದು ವಿರೋಧ ಪಕ್ಷದ ನಾಯಕರು ಕೂಡ ಆರೋಪ ಮಾಡಿದ್ದಾರೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10, 2023ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಇನ್ನು ಸಂತೋಷ್ ಅವರಂತಹ ವ್ಯಕ್ತಿಗಳು ರಾಷ್ಟ್ರೀಯ ಪಕ್ಷ ಬಿಜೆಪಿ ಮೇಲೆ ಇಷ್ಟೊಂದು ಪ್ರಭಾವ ಬೀರಲು ಸಾಧ್ಯವಾದರೆ, ಪಕ್ಷದಲ್ಲಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಮಾಸ್ ಲೀಡರ್ ಎಂದು ಕರೆಸಿಕೊಳ್ಳುವವರ ಪಾತ್ರವೇನು? ಎನ್ನುವ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿವೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಂತಹ ಸೂಪರ್ ಸೀನಿಯರ್ಗಳ ರಾಜಕೀಯ ಜೀವನವನ್ನು ಸಂತೋಷ್ ಅವರು ಹಾಳು ಮಾಡಬಹುದೇ ಅಥವಾ ಮಾರ್ಪಡಿಸಬಹುದೇ? ಎನ್ನುವ ಪ್ರಶ್ನೆಗಳು ಎದ್ದಿವೆ. ಅಲ್ಲದೆ ಕಾಂಗ್ರೆಸ್ನ ಮುಂದಿನ ಮುಖ್ಯಮಂತ್ರಿ, ಮಾಸ್ ಲೀಡರ್ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರು ವರುಣಾದಲ್ಲಿ ತಮ್ಮ ಪರ ಪ್ರಚಾರ ಮಾಡಲು ಕುಟುಂಬದ ಸದಸ್ಯರನ್ನು ಕರೆತಂದಿದ್ದು, ಇದು ಎಲ್ಲೆಡೆ ಸುದ್ದಿ ಆಗುತ್ತಿದೆ.
ಅಲ್ಲದೆ, ಸಿದ್ದರಾಮಯ್ಯ ಎರಡು ಸ್ಥಾನಗಳಿಂದ ಸ್ಪರ್ಧಿಸಲು ಬಯಸಿದ್ದೇಕೆ? ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಮತ್ತು ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ವಾರಗಟ್ಟಲೆ ಪಕ್ಷದ ಟಿಕೆಟ್ಗಾಗಿ ಮನೆಯಲ್ಲಿ ಬಂಡಾಯ ಎಬ್ಬಿಸಲು ಸಾಧ್ಯವಾಗದಿದ್ದರೆ, ಅವರು ರಾಜ್ಯದ ಮತದಾರರ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದೇ? ಅಲ್ಲದೆ ರಾಜ್ಯವನ್ನು ಆಳಿದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಜನನಾಯಕರನ್ನು ಹೊಂದಿದ್ದೀರಾ? ಎನ್ನುವ ಪ್ರಶ್ನೆಗಳು ಜನರಲ್ಲಿ ಮೂಡಿವೆ.
ಎಲ್ಲ ಪಕ್ಷಗಳ ಅರಾಜಕತೆಯ ಹಿಂದೆ ನಾಯಕತ್ವದ ಕೊರತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಬೀದರ್ನಿಂದ ಬೆಂಗಳೂರಿನವರೆಗೆ ಮತದಾರರ ಮೇಲೆ ಪ್ರಭಾವ ಬೀರುವ ಒಬ್ಬ ನಾಯಕನೂ ಕರ್ನಾಟಕದಲ್ಲಿ ಇಲ್ಲ. ಕೆಲ ನಾಯಕರು ಮಾತ್ರ ದೂರದ ಊರುಗಳವರೆಗೂ ಉತ್ತಮವಾದ ಸಂಪರ್ಕ ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ತಾವು ಇರುವ ಕ್ಷೇತ್ರವನ್ನು ಬಿಟ್ಟು ಕದಲುವುದೂ ಇಲ್ಲ.

ಹೀಗೆ ತಮ್ಮ ಸಮುದಾಯದ ಮೇಲೆ ಸ್ವಲ್ಪ ಹಿಡಿತ ಹೊಂದಿರುವ ಪ್ರಮುಖ ಜಾತಿ ನಾಯಕರನ್ನು ಮಾತ್ರ ರಾಜ್ಯದಲ್ಲಿ ಕಾಣಬಹುದಾಗಿದೆ. ಸಿದ್ದರಾಮಯ್ಯನವರ ವಿಚಾರದಲ್ಲಿ ಅವರನ್ನು ಕೇವಲ ಕುರುಬ ನಾಯಕ ಎಂದು ಬಿಂಬಿಸಲು ಸಾಧ್ಯವಿಲ್ಲ. ಅವರು ಇತರೆ ಹಿಂದುಳಿದ ವರ್ಗಗಳ ಪರವಾಗಿ ನಿಂತು (ಒಬಿಸಿ) ಅವರ ಮುಖವೂ ಆಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪ್ರಬಲ ಲಿಂಗಾಯತ ಸಮುದಾಯದಿಂದ ಬಲ ಪಡೆದಿದ್ದಾರೆ.
ಹಾಗೆಯೆ ಬಿ.ಎಸ್.ವೈ ಮಲೆನಾಡು ಮತ್ತು ಉತ್ತರ ಕರ್ನಾಟಕದ ಭಾಗಗಳ ಮೇಲೆ ಪ್ರಭಾವವನ್ನು ಕೂಡ ಹೊಂದಿದ್ದಾರೆ. ಗಣನೀಯ ಪ್ರಮಾಣದ ಲಿಂಗಾಯತ ಜನಸಂಖ್ಯೆ ಇರುವುದರಿಂದ ಅವರು ಅಲ್ಲಿ ಹೆಚ್ಚು ಪ್ರಾಬಲ್ಯವನ್ನು ಹೊಂದಿದ್ದಾರೆ ಎನ್ನಲಾಗಿದೆ. ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಒಕ್ಕಲಿಗ ಬೆಲ್ಟ್ನ ಮತದಾರರನ್ನು ತಲುಪಲು ಇನ್ನಿಲ್ಲದ ವ್ಯರ್ಥ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಒಮ್ಮೆ ದೇಶದ ಪ್ರಧಾನಿಯಾಗಿದ್ದರೂ ಪಕ್ಷದ ನೆಲೆಯನ್ನು ವಿಸ್ತರಿಸಲು ಯಾವುದೇ ಪ್ರಯತ್ನ ಮಾಡಿಲ್ಲ.
2017ರ ಏಪ್ರಿಲ್ನಲ್ಲಿ ಉತ್ತರ ಕರ್ನಾಟಕಕ್ಕೆ ಪಕ್ಷದ ವಿಭಾಗವನ್ನು ವಿಸ್ತರಿಸಲು ಕುಮಾರಸ್ವಾಮಿ ಅವರು ನಿರ್ಧರಿಸಿದ್ದರು. ಆದ್ದರಿಂದ ಹುಬ್ಬಳ್ಳಿ-ಧಾರವಾಡ ನಡುವೆ ವಿಸ್ತಾರವಾದ ಬಂಗಲೆಯನ್ನು ಬಾಡಿಗೆಗೆ ಪಡೆದಿದ್ದರು. ಸಾಂದರ್ಭಿಕವಾಗಿ, ಅವರು ಅಲ್ಲಿಯೇ ಉಳಿದರು. ಆದರೆ ಪಕ್ಷವನ್ನು ಎಂದಿಗೂ ಉತ್ತೇಜಿಸುವ ಕೆಲಸವನ್ನು ಮಾಡಲಿಲ್ಲ, ಅಲ್ಲಿಯೇ ಬೀಡುಬಿಟ್ಟರು. ಕಾಂಗ್ರೆಸ್ನ ಮತ್ತೊಬ್ಬ ಮುಖ್ಯಮಂತ್ರಿ ಅಭ್ಯರ್ಥಿ ಡಿ.ಕೆ.ಶಿವಕುಮಾರ್ 2018ರಲ್ಲಿ ಸಚಿವರಾಗಿ ಬೆಳಗಾವಿ ಜಿಲ್ಲೆಯ ಮೂಲಕ ಲಿಂಗಾಯತ ಬೆಲ್ಟ್ನಲ್ಲಿ ಕಾಲಿಡಲು ಪ್ರಯತ್ನಿಸಿದರು.
ಸ್ಥಳೀಯ ಬ್ಯಾಂಕ್ ಚುನಾವಣೆಯಲ್ಲಿ ಅವರು ತಮ್ಮ ಪಕ್ಷದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿರುವುದು ಕಂಡುಬಂದಿದೆ. ಬೆಳಗಾವಿಯ ಹಲವು ತಾಲೂಕುಗಳಲ್ಲಿ ರಾಜಕೀಯದ ಮೇಲೆ ಹಿಡಿತ ಸಾಧಿಸಿರುವ ಜಾರಕಿಹೊಳಿ ಸಹೋದರರು, ಶಿವಕುಮಾರ್ ಅವರನ್ನು ಬೆಳಗಾವಿ ರಾಜಕೀಯದಿಂದ ದೂರವಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಹಿರಂಗವಾಗಿ ಕೇಳಿಕೊಂಡಿದ್ದರು. ಇದನ್ನು ಗಮನಿಸಿದರೆ ಇಲ್ಲಿ ಕುಟುಂಬ ರಾಜಕರಣದ ಒಗ್ಗಟ್ಟು ಇದೆ ಎಂದು ಹೇಳಲಾಗುತ್ತಿದೆ.
ಹಾಗೆಯೆ ಸಚಿವರಾಗಿದ್ದ ಆರ್.ಅಶೋಕ್ ಅವರನ್ನು ಪಕ್ಷದ ಒಕ್ಕಲಿಗ ಮುಖ ಎಂದು ಬಿಂಬಿಸಲು ಬಿಜೆಪಿ ಯತ್ನಿಸಿತು. ಚುನಾವಣಾ ವರ್ಷದಲ್ಲಿ ಪಕ್ಷದ ಭವಿಷ್ಯವನ್ನು ನೋಡಿಕೊಳ್ಳುವ ಪ್ರಯತ್ನದಲ್ಲಿ ಅವರನ್ನು ಮಂಡ್ಯ ಜಿಲ್ಲೆಯ ಒಕ್ಕಲಿಗ ಬೆಲ್ಟ್ಗೆ ವಹಿಸಲಾಯಿತು. ಅಲ್ಲದೆ ಒಕ್ಕಲಿಗರೂ ಆದ ಸಚಿವ ಕೆ.ಗೋಪಾಲಯ್ಯ ಅವರ ಬದಲಿಯಾಗಿದ್ದರು. ಜನವರಿ 2023ರಲ್ಲಿ, ಸ್ಥಳೀಯ ಪಕ್ಷದ ಕಾರ್ಯಕರ್ತರು ಈ ಬದಲಾವಣೆಯನ್ನು ಪ್ರಶಂಸಿಸದ ಕಾರಣ 'ಗೋ ಬ್ಯಾಕ್ ಅಶೋಕ್' ಅಭಿಯಾನವನ್ನು ನಡೆಸಿದರು.
ಜನತಾ ಪರಿವಾರದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಪಿಜಿಆರ್ ಸಿಂಧಿಯಾ, ಇಂದಿನ ಪ್ರಮುಖ ನಾಯಕರು ರಾಜ್ಯದ ವಿವಿಧ ಪ್ರದೇಶಗಳ ಮೇಲೆ ಯಾವುದೇ ಪ್ರಭಾವವನ್ನು ಬೆಳೆಸಿಕೊಂಡಿಲ್ಲ ಎಂದು ಹೇಳುತ್ತಾರೆ. ದಿವಂಗತ ಮುಖ್ಯಮಂತ್ರಿಗಳಾದ ಡಿ. ದೇವರಾಜ್ ಅರಸ್ ಮತ್ತು ವೀರೇಂದ್ರ ಪಾಟೀಲ್ ಇಬ್ಬರು ನಾಯಕರನ್ನು ಕರ್ನಾಟಕ ಕಂಡಿದೆ. 1980ರ ದಶಕದಲ್ಲಿ ಮತದಾರರು ರಾಮಕೃಷ್ಣ ಹೆಗಡೆಯವರನ್ನು ತಮ್ಮ ನಾಯಕನನ್ನಾಗಿ ನೋಡುತ್ತಿದ್ದರು. ಮತದಾನದ ಜನಸಂಖ್ಯೆಯ ಮೇಲೆ ಉತ್ತಮ ಹಿಡಿತ ಹೊಂದಿದ್ದರು.
ಅವರ ತಂಡದಲ್ಲಿ ಎಂ.ಪಿ.ಪ್ರಕಾಶ್, ರಮೇಶ್ ಜಿಗಜಿಣಗಿ, ಆರ್.ವಿ.ದೇಶಪಾಂಡೆ, ಜೀವರಾಜ್ ಆಳ್ವ, ಮತ್ತು ಬಿ.ಸೋಮಶೇಖರ್ ಸೇರಿದಂತೆ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸಿದರು. ಆಗ ಅವರೆಲ್ಲ ಟೀಮ್ ಕೆಲಸವನ್ನು ನಂಬಿದ್ದರು. ಆದರೆ ಈಗ ಪ್ರತಿಯೊಬ್ಬ ನಾಯಕರು ಕೂಡ ತಮ್ಮ ಸಮುದಾಯಕ್ಕೆ ಅಥವಾ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದ್ದಾರೆ. ಈಗ ಕಿರಿಯರನ್ನು ಬೆಳೆಸುವ ನಾಯಕರಿಲ್ಲ.
ಇನ್ನೂ ಒಂದು ಹಂತದವರೆಗೆ ಸಿದ್ದರಾಮಯ್ಯ ಮತ್ತು ಎಚ್.ಡಿ.ದೇವೇಗೌಡರು ತಮ್ಮ ಜಾತಿ ಮೀರಿ ಮತದಾರರ ಮೇಲೆ ಪ್ರಭಾವ ಬೀರಿದ್ದರು. ಆದ್ದರಿಂದ ಅವರು ಈಗ ಕನಿಷ್ಠ 7 ಅಥವಾ 8 ಜಿಲ್ಲೆಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಜಗದೀಶ್ ಶೆಟ್ಟರ್ ಅವರು ರಾಜೀನಾಮೆ ನೀಡುವಾಗ, ತಮ್ಮ ನಿರ್ಗಮನದಿಂದಾಗಿ ಬಿಜೆಪಿ 20-25 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಘೋಷಿಸಿದ್ದರು.
ಆದರೆ ಸಿಂಧಿಯಾ ಪ್ರಕಾರ, ಅವರು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯ ಭವಿಷ್ಯವನ್ನು ಹಾಳುಮಾಡಬಹುದು. ಕಾಂಗ್ರೆಸ್ನಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಪ್ರಶ್ನೆಯಾಗಿದೆ ಎಂದಿದ್ದಾರೆ. ನಂತರ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿ, ಪ್ರತಿ ಪಕ್ಷದಲ್ಲಿಯೂ ಒಂದಿಬ್ಬರು ನಾಯಕರು ಮಾಸ್ ಲೀಡರ್ ಎಂದು ಬಿಂಬಿತರಾಗಿದ್ದಾರೆ. ಅವರು ಹೊಂದಿರುವ ಸ್ಥಾನಗಳಿಂದಾಗಿ ಅಥವಾ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಲು ನಾಯಕರಾಗಿದ್ದಾರೆ ಎಂದರು.
ಇಂದಿನ ಹೋರಾಟ ಕೇವಲ ಪಟ್ಟಕ್ಕಾಗಿ
ದೇವರಾಜ್ ಅರಸ್, ನಿಜಲಿಂಗಪ್ಪ ಮತ್ತು ಹೆಗಡೆ ನಿಜವಾದ ಅರ್ಥದಲ್ಲಿ ನಾಯಕರಾಗಿದ್ದರು. ಈಗ ನಮ್ಮಲ್ಲಿ ನೆಹರು, ವಾಜಪೇಯಿ, ಅಥವಾ ನರಸಿಂಹರಾವ್ ಅವರಂತಹ ರಾಜಕಾರಣಿಗಳು ಇದ್ದಾರೆಯೇ? ಎನ್ನುವ ಪ್ರಶ್ನೆ ಕೂಡ ಕಾಡುತ್ತಿದೆ. ಮತ್ತೊಂದೆಡೆ ಇಂದಿನ ಹೋರಾಟವನ್ನು ಕೇವಲ ಪಟ್ಟಕ್ಕಾಗಿ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಉತ್ತರ ಕರ್ನಾಟಕದವರೇ ಆದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಅವರು ಹಲವು ಸಚಿವರ ಜೊತೆ ಕೆಲಸ ಮಾಡಿದ್ದರು. ಅವರ ದೃಷ್ಟಿಯಲ್ಲಿ ವಿಶಾಲ ದೃಷ್ಟಿ ಇರುವ ಜನ ನಾಯಕರೇ ಇಲ್ಲ. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ಅರಸ್, ಹೆಗಡೆ, ವೀರೇಂದ್ರ ಪಾಟೀಲ್ ಅವರಂತಹ ಎತ್ತರದ ನಾಯಕರನ್ನು ನಾನು ನೋಡಿದ್ದೇನೆ. ಸ್ವಲ್ಪ ಮಟ್ಟಿಗೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರನ್ನು ಮಾಸ್ ಲೀಡರ್ ಎಂದು ಕರೆಯಬಹುದು ಎಂದರು.
ಎಸ್.ಬಂಗಾರಪ್ಪ ಅವರ ಪ್ರಭಾವವು ಈಡಿಗ ಸಮುದಾಯದ ಮೇಲೆ ಇದ್ದು, ಇವರ ವರ್ಚಸ್ಸು ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ದೇವೇಗೌಡರು ಮತ್ತು ಅವರ ಮಗ ನುಸುಳಲು ಸಾಧ್ಯವಾಗಿಲ್ಲ. ವೀರೇಂದ್ರ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ 224 ವಿಧಾನಸಭಾ ಸ್ಥಾನಗಳಲ್ಲಿ 178 ಸ್ಥಾನಗಳನ್ನು ಗಳಿಸಬಹುದಾಗಿತ್ತು. ಆದರೆ ಈಗಿನ ಯಾವ ನಾಯಕರಿಗೂ ಆ ರೀತಿಯ ವರ್ಚಸ್ಸು ಇಲ್ಲ. ಯಡಿಯೂರಪ್ಪ ಅವರ ಪಕ್ಷದ ಬ್ಯಾನರ್, ಕೆಜೆಪಿ ಅಡಿಯಲ್ಲಿ, 2013ರಲ್ಲಿ ಕೇವಲ ಆರು ವಿಧಾನಸಭಾ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.
ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ 2013ರ ಚುನಾವಣೆಯನ್ನು ಎದುರಿಸಿ, ಕೇವಲ 40 ಸ್ಥಾನಗಳನ್ನು ಗೆದ್ದಿತು. ಹಾಗೆಯೆ ಲಿಂಗಾಯತರು ರಾಜ್ಯಾದ್ಯಂತ ಹರಡಿದ್ದಾರೆ. ಮತ್ತು ಅವರ ನಿಷ್ಠೆ ಬಿಜೆಪಿಗೆ ಸೀಮಿತವಾಗಿಲ್ಲ. ಮೂರು ದಶಕಗಳ ಹಿಂದೆ ವೀರೇಂದ್ರ ಪಾಟೀಲ್ ಅವರನ್ನು ವಜಾಗೊಳಿಸಿದ ಸಮಯದಿಂದ ಕಾಂಗ್ರೆಸ್ ಲಿಂಗಾಯತರ ವಿಶ್ವಾಸವನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಈಗ, ಅದರ ಬದಿಯಲ್ಲಿ ಲಿಂಗಾಯತರು, ಶೆಟ್ಟರ್ ಮತ್ತು ಸವದಿಗಳಿರುವುದರಿಂದ ಕಾಂಗ್ರೆಸ್ನವರು ಸಂಭ್ರಮದಲ್ಲಿದೆ.
ಬಿಜೆಪಿ ಇನ್ಮುಂದೆ ಲಿಂಗಾಯತ ಪರ ಪಕ್ಷವಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಬೆಳವಣಿಗೆಗಳಿಗೆ ತಿರುಗೇಟು ನೀಡಲು ಪ್ರಯತ್ನಿಸುತ್ತಿದೆ. ಏಕೆಂದರೆ ಪರಾಕ್ರಮಿ ಸಂತೋಷ್ ಅವರು ಬ್ರಾಹ್ಮಣ ಮುಖ್ಯಮಂತ್ರಿಯನ್ನು ನೇಮಿಸಲು ಉತ್ಸುಕರಾಗಿದ್ದಾರೆ.
ಬಿ.ಎಲ್.ಸಂತೋಷ್ ಹಿನ್ನೆಲೆ ಏನು?
ಆರ್ಎಸ್ಎಸ್ ನಿಯಮಗಳ ಪ್ರಕಾರ ಸಂತೋಷ್ ಅವರು ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವಂತಿಲ್ಲ. ಅವರ ಕಾರ್ಯಶೈಲಿಗೆ ಮೆಚ್ಚುಗೆ ಮತ್ತು ಅಸಮ್ಮತಿ ಎರಡೂ ಇದೆ. ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಟಿಕೆಟ್ ಅಂತಿಮಗೊಳಿಸುವಲ್ಲಿ ಸಂತೋಷ್ ಅವರು ನಮ್ಮ ಪಾತ್ರವಿಲ್ಲ ಎಂದು ಹೇಳಿದ್ದಾರೆ.
56 ವರ್ಷದ ಬಿ.ಎಲ್.ಸಂತೋಷ್ ಇಂಜಿನಿಯರಿಂಗ್ ಪದವೀಧರರಾದ್ದಾರೆ. ಅವರು ಉಡುಪಿ ಮೂಲದವರಾಗಿದ್ದು, ಅವಿವಾಹಿತರು ಹೌದು. ಅಲ್ಲದೆ ಶಿವಮೊಗ್ಗದಲ್ಲಿ ಪೂರ್ಣಾವಧಿ ಪ್ರಚಾರಕರಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ್ದೆ. 2013ರಲ್ಲಿ ಪಕ್ಷವು ಕೇವಲ 40 ಸ್ಥಾನಗಳನ್ನು ಗೆದ್ದಾಗ, ಕರ್ನಾಟಕದಲ್ಲಿ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಸಂತೋಷ್ ಶ್ರಮಿಸಿದರು ಎಂದರು
ಚುನಾವಣಾ ಸಮಿತಿಯ ನಿರ್ಧಾರಗಳನ್ನು ಒಪ್ಪದ ಕಾರಣ ರಾಜೀನಾಮೆ ನೀಡುವುದು ಜಗದೀಶ್ ಶೆಟ್ಟರ್ ಮತ್ತು ಸವದಿ ಅವರ ವೈಯಕ್ತಿಕ ನಿರ್ಧಾರವಾಗಿತ್ತು ಎಂದರು.
ಸಂತೋಷ್ ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದಿದ್ದಾರೆ. ಕಳೆದ ಮೂರು ದಶಕಗಳಿಂದ ಆರ್ಎಸ್ಎಸ್ ಪ್ರಚಾರಕರಾಗಿದ್ದಾರೆ. ಅವರು ಆರು ಭಾರತೀಯ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. 2019ರಲ್ಲಿ, ಭಾರತದ ಪ್ರಭಾವಿ ರಾಜಕೀಯ ನಾಯಕರ ಇಂಡಿಯನ್ ಎಕ್ಸ್ಪ್ರೆಸ್ ಶ್ರೇಯಾಂಕದಲ್ಲಿ 16ನೇ ಶ್ರೇಯಾಂಕವನ್ನು ಪಡೆದವರಾಗಿದ್ದಾರೆ.
ವಿರೋಧ ಪಕ್ಷಗಳು ಮತ್ತು ಬಿಜೆಪಿಯ ಹಲವು ನಾಯಕರು ಸಂತೋಷ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಆತಂಕದಲ್ಲಿದ್ದಾರೆ. ಮತ್ತೊಂದೆಡೆ ಅವರು ಆರ್ಎಸ್ಎಸ್ನವರಾಗಿದ್ದು, ರಾಜಕೀಯವಾಗಿ ಸಕ್ರಿಯರಾಗುವ ಇಚ್ಛೆ ಇಲ್ಲ ಎಂಬುದು ಬಿಜೆಪಿಯ ವಾದವಾಗಿದೆ.












Click it and Unblock the Notifications